ಹೊನ್ನಾಳ್ಳಿ (Davanagere):ಬಸ್ ನಿಲ್ದಾಣದಿಂದ ಕಾಣೆಯಾಗಿದ್ದ ಮಗುವನ್ನು ಪತ್ತೆ ಹಚ್ಚಿ ಪೋಷಕರ ಮಡಿಲಿಗೆ ಸೇರಿಸುವಲ್ಲಿ 112 ಹೊಯ್ಸಳ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಏ.24 ರಂದು ಹೊನ್ನಾಳಿ ಟೌನ್ನ ಬಸ್ ಸ್ಟ್ಯಾಂಡ್ನಲ್ಲಿ ಮಲೇಬೆನ್ನೂರು ವಾಸಿ ಸವಿತಾ ಗಂಡ ರಮೇಶ್ ತಮ್ಮ ತವರೂರುಗೆ ತೆರೆಳಲು ಬಸ್ ಸ್ಟ್ಯಾಂಡ್ಗೆ ಬಂದು ನಿಂತಿದ್ದ ವೇಳೆ
ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದ ವೇಳೆ 5 ವರ್ಷದ ಮಗಳು ಕಾಣದೇ ಇರುವುದರಿಂದ ಗಾಬರಿಗೊಂಡು 112 ಗೆ ಕರೆ ಮಾಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ 112 ಹೊಯ್ಸಳ ಅಧಿಕಾರಿಗಳು ಬಸ್ ಸ್ಟ್ಯಾಂಡ್ ಸುತ್ತಮುತ್ತ ಹುಡುಕಾಡಿ ಕಾಣದೇ ಇದ್ದಾಗ ಕೂಡಲೇ ಬಸ್ ಸ್ಟ್ಯಾಂಡ್ನಿಂದ ಬೇರೆ ಬೇರೆ ಕಡೆಗೆ ತೆರಳಿದ ಬಸ್ಗಳ ಮಾಹಿತಿ ಪಡೆದು ವಿಚಾರಣೆ ಮಾಡಿದಾಗ ಹಿರೇಕೆರೂರು ಕಡೆಗೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಬಳಿ ಮಾಸೂರು ಗ್ರಾಮದ ಬಳಿ ಹೋಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕರನ್ನು ವಿಚಾರಿಸಿದಾಗ ಮಗುವು ಇರುವುದು ತಿಳಿದು ಬಂದಿದೆ.
ಕೂಡಲೇ ಮಗುವಿನ ಪೋಷಕರನ್ನು ವಾಹನದಲ್ಲಿ ಮಗುವಿದ್ದ ಸ್ಥಳಕ್ಕೆ ಕಳುಹಿಸಿದ್ದು ಪೋಷಕರುತಮ್ಮ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಬಸ್ಸಿನಲ್ಲಿ ಹೋಗಿದ್ದ ಮಗು ಪೋಷಕರು ಮಡಿಲು ಸೇರಿದೆ.
Read also : ನಾಲ್ಕು ಕಳ್ಳತನ ಪ್ರಕರಣ : 5.85 ಲಕ್ಷ ರೂ ಬಂಗಾರದ ಅಭರಣ ವಶಕ್ಕೆ
ಹೊನ್ನಾಳಿ ಟೌನ್ ಬಸ್ ಸ್ಟ್ಯಾಂಡ್ನಲ್ಲಿ ಆಕಸ್ಮಿಕವಾಗಿ ಬೇರೆ ಬಸ್ ಹತ್ತಿಕೊಂಡು ಹೋಗಿದ್ದ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ 112 ಹೊಯ್ಸಳ ಕರ್ತವ್ಯ ಅಧಿಕಾರಿಗಳಾದ ಹೆಡ್ ಕಾನ್ಸ್ಟೇಬಲ್ ಹರೀಶ್ ಹಾಗೂ 112 ಹೊಯ್ಸಳ ಚಾಲಕರಾದ ಲೋಕೇಶ್ವರಪ್ಪ ರವರನ್ನು ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.