Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಲಾಭಾಂಶದ ಆಸೆ ತೋರಿಸಿ ಮೋಸ ಮಾಡಿದ ಆರೋಪಿ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ
ತಾಜಾ ಸುದ್ದಿ

ಲಾಭಾಂಶದ ಆಸೆ ತೋರಿಸಿ ಮೋಸ ಮಾಡಿದ ಆರೋಪಿ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ

Dinamaana Kannada News
Last updated: August 22, 2025 4:15 pm
Dinamaana Kannada News
Share
Court
SHARE
ದಾವಣಗೆರೆ.ಆ.22: ನಷ್ಟದ ಕಾರಣದಿಂದ ಮುಚ್ಚಿರುವ ಕಂಪನಿಯ ಹೆಸರು ಬಳಸಿ ಲಾಭಾಂಶದ ಆಸೆ ತೋರಿಸಿ ಹಣ ತೊಡಗಿಸಿಕೊಂಡು ಮೋಸ ಮಾಡಿದ ಆರೋಪಿ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 70 ಸಾವಿರ ರೂ ದಂಡ ವಿಧಿಸಿ 3ನೇ ಎಸಿಜೆ  ಮತ್ತು ಜೆಎಂಎಫ್‌ಸಿ ತೀರ್ಪು ನೀಡಿದೆ. ಶ್ರೀ ಸಾಯಿ ಚೌಡೇಶ್ವರಿ ಟ್ರೇರ‍್ಸ್ ಮಾಲೀಕ ಮಾಲತೇಶ್ ಹಾಗೂ ಉಷಾ ಶಿಕ್ಷೆಗೆ ಗುರಿಯಾದ ಆರೋಪಿಗಳು.
ಪ್ರಕರಣದ ವಿವರ : ನಗರದ ಕೆಬಿ ಬಡಾವಣೆಯ ಷಣ್ಮುಖಪ್ಪ ಸೊಕ್ಕಿ ಇವರನ್ನು ಪರಿಚಯ ಮಾಡಿಕೊಂಡ ಮಾಲತೇಶ್ ಮತ್ತು ಉಷಾ ದಂಪತಿ ನಮ್ಮ ಸಂಸ್ಥೆಯು ಹಿಂದೂಸ್ಥಾನ್ ಯುನಿ ಲೀವರ್ ಲಿ ಬಾಂಬೆ ಕಂಪನಿಯೊಂದಿಗೆ ವ್ಯವಹಾರ ಒಡಂಬಡಿಕೆ ಮಾಡಿಕೊಂಡಿದ್ದು, ಸಂಸ್ಥೆಯ ಮೂಲಕ ನೀವು ಹಣ ತೊಡಗಿಸಿದಲ್ಲಿ 4% ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ ಹಣ ತೊಡಗಿಸಲು ಪುಸಲಾಯಿಸಿದ್ದರು.
ಈ ದಂಪತಿಯ ಮಾತು ನಂಬಿದ ಷಣ್ಮುಖಪ್ಪ ಸೊಕ್ಕಿ ಅವರು 28/02/2017 ರಂದು 1 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿ 100 ರೂ ಸ್ಟಾಂಪ್ ಪೇಪರ್‌ನಲ್ಲಿ ಕರಾರು ಪತ್ರವನ್ನು ಸಂಸ್ಥೆಯ ಹೆಸರಿನಡಿ ಬರೆದುಕೊಟ್ಟಿದ್ದರು. ಒಡಂಬಡಿಕೆಯಲ್ಲಿ ಮ್ಯಾನೇಜರ್ ಚೌವ್ಹಾಣ್ ಎಂಬುವವರ ಸಹಿ ಹಾಗೂ ಕಂಪನಿಯ ಶೀಲು ಇರುತ್ತದೆ. ಈ ಹೂಡಿಕೆ ಲಾಭಾಂಶವನ್ನು ನಾನೇ ತರಿಸಿಕೊಡುತ್ತೇನೆಂದು ಮಾಲತೇಶ್ ನಂಬಿಸಿದ್ದರು.  ಹಣ  ಕೇಳಿದರೆ ಇಂದು, ನಾಳೆ ಎಂದು ಮುಂದೂಡುತ್ತಾ ಹಣವನ್ನು ನೀಡಿರುವುದಿಲ್ಲ.
ಈ ಬಗ್ಗೆ ಅನುಮಾನಗೊಂಡು ಸಂಸ್ಥೆಯ ಬಗ್ಗೆ ವಿಚಾರಿಸಿದಾಗ ಈ ಕಂಪನಿಯು 31/01/2015 ರಂದೇ ನಷ್ಟದಿಂದ ಮುಚ್ಚಿದೆ ಎಂದು ತಿಳಿದು ಬಂದಿದೆ. ಆರೋಪಿತರು ಬಹುರಾಷ್ಟ್ರೀಯ ಕಂಪನಿಯ ಹೆಸರು ಮತ್ತು ಲೋಗೋವನ್ನು ಉಪಯೋಗಿಸಿಕೊಂಡು ಹಣ ತೊಡಗಿಸುವಂತೆ ಪುಸಲಾಯಿಸಿ ಆಕರ್ಷಕ ಲಾಭಾಂಶಗಳನ್ನು ಕೊಡಿಸುತ್ತೇವೆಂದು ಭರವಸೆ ಕೊಟ್ಟು ವಂಚನೆ ಮಾಡಿರುವ ಕುರಿತು ಷಣ್ಮುಖಪ್ಪ ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಕೆಟಿಜೆ ನಗರದ ಠಾಣಾ ಪಿಎಸ್‌ಐ ಪ್ರಭು ಡಿ ಕೆಳಗಿನಮನಿ ತನಿಖೆ ಕೈಗೊಂಡು ಆರೋಪಿತರಾದ ಮಾಲತೇಶ್ ಮತ್ತು ಪತ್ನಿ ಉಷಾ ಅವರುಗಳು 4% ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ 1 ಲಕ್ಷ ರೂಪಾಯಿ ತೊಡಗಿಸಿಕೊಂಡು ಹಣ ಹೂಡಿಕೆ ಕರಾರು ಪತ್ರವನ್ನು ಸೃಷ್ಟಿಸಿ ಅದರಲ್ಲಿ ಹಿಂದೂಸ್ಥಾನ್ ಯುನಿ ಲಿಮಿಟೆಡ್ ಮ್ಯಾನೇಜರ್ ಚೌವ್ಹಾಣ್ ಎಂದು ಸುಳ್ಳು ವ್ಯಕ್ತಿಯನ್ನು ಸೃಷ್ಟಿಸಿರುವುದು ಹಾಗೂ ಯಾವುದೇ ಲಾಭಾಂಶ ನೀಡದೆ ಪಿರ್ಯಾದಿಗೆ ವಂಚನೆ ಮಾಡಿರುವುದು ಹಾಗೂ ಕೃತ್ಯಕ್ಕೆ ಬಳಸಿದ ಲ್ಯಾಪ್‌ಟಾಪ್‌ನ್ನು ಅನಾಮಧೇಯ ವ್ಯಕ್ತಿಗೆ ಮಾರಾಟಮಾಡಿ ಸಾಕ್ಷಿನಾಶ ಮಾಡಿರುವುದು ದೃಢಪಟ್ಟ ಮೇರೆಗೆ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
Read also : ಬಾಲ್ಯವಿವಾಹ ಮುಕ್ತ ಜಿಲ್ಲೆಗೆ ಶ್ರಮಿಸಲು ನ್ಯಾ.ಮಹಾವೀರ ಮ.ಕರಣ್ಣವರ್ ಕರೆ
ವಿಚಾರಣೆ ನಡೆಸಿದ  3ನೇ ಎಸಿಜೆ ಮತ್ತು  ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ  ಅಚಪ್ಪ ದೊಡ್ಡಬಸವರಾಜ್ ಅವರು ಆರೋಪ ಸಾಬೀತಾಗಿದ್ದರಿಂದ ಮಾಲತೇಶ್ ಮತ್ತು ಉಷಾ ಇಬ್ಬರಿಗೂ ತಲಾ 1 ವರ್ಷ ಶಿಕ್ಷೆ 70 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಪರ‍್ಯಾದಿಯವರ ಪರವಾಗಿ ಸರ್ಕಾರಿ ವಕೀಲ ಚಿತ್ರಶೇಖರಪ್ಪ ವಾದ ಮಂಡಿಸಿದ್ದರು.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಬಾಲ್ಯವಿವಾಹ ಮುಕ್ತ ಜಿಲ್ಲೆಗೆ ಶ್ರಮಿಸಲು ನ್ಯಾ.ಮಹಾವೀರ ಮ.ಕರಣ್ಣವರ್ ಕರೆ
Next Article Davanagere ಶ್ರೀ ವೀರಭದ್ರೇಶ್ವರ ಸ್ವಾಮಿಯ ರುದ್ರಾಭಿಷೇಕ ಪ್ರಸಾದ ಕಾರ್ಯಕ್ರಮ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Electrical variation | ಡಿ.14 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

ದಾವಣಗೆರೆ ಡಿ.13  (Davanagere):   ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ ಯರಗುಂಟ ವಿತರಣಾ ಕೇಂದ್ರದಿಂದ ಹೊರುಡುವ ಎಫ್-6 ಶಿವಾಲಿ, ಎಫ್-7…

By Dinamaana Kannada News

ಕ್ರಾಂತಿಕಾರಿ ರಥಯಾತ್ರೆಗೆ ಅಡ್ಡಿ ಖಂಡಿಸಿ ಪ್ರತಿಭಟನೆ

ದಾವಣಗೆರೆ (Davanagere) : ಪ.ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊAಡು ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಕ್ರಾಂತಿಕಾರಿ ರಥಯಾತ್ರೆಗೆ…

By Dinamaana Kannada News

HARIHARA : ಗುತ್ತೂರು ಗ್ರಾಮಕ್ಕೆ ಶಾಶ್ವತ ರುದ್ರಭೂಮಿ ಕಲ್ಪಿಸಿ : ಪ್ರತಿಭಟನೆ

ಹರಿಹರ ಅ 1  (Davangere district )  :  ದಲಿತರಿಗೆ ಸ್ಮಶಾನ  (ಸುಡುಗಾಡು,ಶ್ಮಶಾನ )  ಇಲ್ಲದ ಗ್ರಾಮವೆಂದೇ ಖ್ಯಾತಿಪಡೆದಿರುವ ತಾಲೂಕಿನ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಹರಿಹರ: ನಿಯಮಬಾಹಿರ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಮನವಿ

By Dinamaana Kannada News
Davanagere
ತಾಜಾ ಸುದ್ದಿ

ಮೆಕ್ಕೆಜೋಳದ ಬೆಲೆ ಕುಸಿತ :ಕ್ರಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?