ದಾವಣಗೆರೆ (Davanagere): ಕರ್ನಾಟಕ ಸರ್ಕಾರದ ಬೆಂಗಳೂರು ಕಂದಾಯ ಆಡಳಿತವಿಭಾಗಮಟ್ಟದ ಸಂಪುಟಸಭೆ (ಕ್ಯಾಬಿನೆಟ್ ಮೀಟಿಂಗ್) ದಾವಣಗೆರೆಯಲ್ಲಿ ನಡೆಸಲಿ ಎಂದು ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಈಗಾಗಲೇ ಘೋಷಿಸಿರುವಂತೆ ರಾಜ್ಯದ ನಾಲ್ಕು ಕಂದಾಯ ಆಡಳಿತ ವಿಭಾಗಳಲ್ಲಿ ಸಂಪುಟಸಭೆ (ಕ್ಯಾಬಿನೆಟ್ ಮೀಟಿಂಗ್) ನಡೆಸಲು ತಿರ್ಮಾನಿಸಿದ್ದು, ಅದರಂತೆ ಕಲಬುರ್ಗಿ ಕಂದಾಯ ಆಡಳಿತ ವಿಭಾಗದ ಕಲಬುರ್ಗಿಯಲ್ಲಿ ಮತ್ತು ಮೈಸೂರು ಕಂದಾಯ ಆಡಳಿತ ವಿಭಾಗದ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ (ಕ್ಯಾಬಿನೆಟ್ ಮೀಟಿಂಗ್) ನಡೆಸಿದ್ದು ವಿವಿಧ ಇಲಾಖೆಗಳ ಕೋಟ್ಯಂತರ ರೂಪಾಯಿಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.
ಬೆಳಗಾವಿ ಕಂದಾಯ ಆಡಳಿತ ವಿಭಾಗಮಟ್ಟದ ಸಂಪುಟಸಭೆ (ಕ್ಯಾಬಿನೇಟ್ ಮೀಟಿಂಗ್) ವಿಜಾಪುರದಲ್ಲಿ ಹಾಗೂ ಬೆಂಗಳೂರು ಕಂದಾಯ ಆಡಳಿತ ವಿಭಾಗಮಟ್ಟದ ಸಂಪುಟಸಭೆ (ಕ್ಯಾಬಿನೆಟ್ ಮೀಟಿಂಗ್) ನಂದಿಬೆಟ್ಟದಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಕಂದಾಯ ಆಡಳಿತ ವಿಭಾಗಮಟ್ಟದ ಸಂಪುಟಸಭೆ (ಕ್ಯಾಬಿನೆಟ್ ಮೀಟಿಂಗ್)ನ್ನು ನಂದಿ ಬೆಟ್ಟದಲ್ಲಿ ನಡೆಸುವುದಕಿಂತ ದಾವಣಗೆರೆಯಲ್ಲಿ ನಡೆಸಬೇಕು ಈ ಭಾಗದ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಗಳ ಅಭಿವೃದ್ದಿಗೆ ಹೊಸ ಯೋಜನೆಗಳು ಘೋಷಣೆ ಜೊತೆಗೆ ಕುಂಟುತ್ತ ಸಾಗುವ ಕಾಮಗಾರಿಗಳಿಗೆ ಹಣ ದೊರೆಯುವುದಲ್ಲದೆ ಆಡಳಿತ ಯಂತ್ರಕ್ಕೆ ವೇಗ ಸಿಗುವುದು.
ನಂದಿ ಬೆಟ್ಟದಿಂದ ಬೆಂಗಳೂರು ಬಹಳ ದೂರವೆನಿಲ್ಲ ಪ್ರತಿಬಾರಿಯು ರಾಜಧಾನಿ ಬೆಂಗಳೂರಿನಲ್ಲಿ ಸಭೆ ನಡೆಯತ್ತಿರುತ್ತದೆ ಹಾಗಾಗಿ ಬೆಂಗಳೂರು ಕಂದಾಯ ಆಡಳಿತ ವಿಭಾಗಮಟ್ಟದ ಸಂಪುಟ ಸಭೆ (ಕ್ಯಾಬಿನೆಟ್ ಮೀಟಿಂಗ್) ದಾವಣಗೆರೆಯಲ್ಲಿ ನಡೆಯಬೇಕು ಅದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ಮಧು ಬಂಗಾರಪ್ಪ ಹಾಗೂ ಡಿ. , ಸುಧಾಕರ ಜಿಲ್ಲೆಗಳ ಶಾಸಕರು ಜೊತೆಗೂಡಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು. ಈಗಾಗಲೇ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ವಿನಂತಿಸಲಾಗಿದೆ.
ಪ್ರತಿ ಚುನಾವಣೆಗಳಲ್ಲಿ ದಾವಣಗೆರೆಯಿಂದ ಎಲ್ಲಾ ರಾಜಕೀಯ ಪಕ್ಷದವರು ಸಭೆ ಸಮಾರಂಭಗಳಿಗೆ ಚಾಲನೆ ಕೊಡುವುದು ನಡೆದು ಬಂದಿರುವುದನ್ನು ಸಹ ಮುಖ್ಯಮಂತ್ರಿಗಳಿಗೆ ಗಮನಕ್ಕೆ ತಂದು ಮಧ್ಯಕರ್ನಾಟಕದ ವಿಶೇಷತೆ ತಿಳಿಸಲಿ ಎಂದು ಮನವಿ ಮಾಡಿದ್ದಾರೆ.