ಹರಿಹರ (harihara) : ಬೆಳ್ಳೂಡಿ-ರಾಮತೀರ್ಥ ಗ್ರಾಮಗಳ ಮಧ್ಯ ಹರಿದಿರುವ (ಶಾಂತಿ ಸಾಗರ) ಸೂಳೆ ಕೆರೆ ಹಳ್ಳಕ್ಕೆ ಕಟ್ಟಿರುವ ಸೇತುವೆಯ ಗೋಡೆ ಮಳೆಯ ನೀರಿನ ರಭಸಕ್ಕೆ ಸಂಪೂರ್ಣ ಹಾಳಾಗಿ 4 ವರ್ಷ ಗತಿಸಿದ್ದು, 4 ವರ್ಷಗಳಿಂದ ಬೆಳ್ಳೂಡಿ-ರಾಮತೀರ್ಥ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಈ ಎರಡು ಗ್ರಾಮಗಳ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ರೈತರು, ಕೂಲಿ ಕಾರ್ಮಿಕರು, ಶಾಲಾ-ಕಾಲೇಜಿಗೆ, ಕೆಲಸಕ್ಕೆ ತೆರಳುವ ನೌಕರರು ನಿತ್ಯ ನೂರಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಜನ ಪ್ರತಿನಿಧಿಗಳ ಹಾಗೂ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳ ಇಚ್ಚಾಸಕ್ತಿಯ ಕೊರತೆಯೇ ಮೂಲ ಕಾರಣವೆನ್ನುತ್ತಾರೆ ಬೆಳ್ಳೂಡಿ-ರಾಮತೀರ್ಥ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸಾರ್ವಜನಿಕರು, ರೈತರು.
ಅವೈಜ್ಞಾನಿಕ ನಿರ್ಮಾಣವೆ ಸೇತುವೆ ಹಾಳಾಗಲು ಕಾರಣ : ಕಳೆದ 4 ವರ್ಷಗಳ ಹಿಂದೆ ಸುರಿದ ಬಾರಿ ಮಳೆಯ ರಭಸಕ್ಕೆ, ಸೂಳೆ ಕೆರೆಯ ಹಾಗೂ ಹಳ್ಳದ.
ಅಕ್ಕ-ಪಕ್ಕದ ಜಮೀನುಗಳಲ್ಲಿನ ಅಪಾರ ಪ್ರಮಾಣದ ನೀರು, ನೀರಿನ ಜೋತೆಯಲ್ಲಿ ತೇಲಿ ಬಂದ ಗಿಡ-ಗಂಟೆಗಳೆಲ್ಲಾ ಬೆಳ್ಳೂಡಿ-ರಾಮತೀರ್ಥ ಮಧ್ಯದ ಸೇತುವೆ ಹಾಳಾಗಲು ಕಾರಣವಾಗಿದೆ.
ಆವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿದ್ದರಿಂದ ಸೇತುವೆಯ ಕೆಳಗೆ ನೀರಿನಲ್ಲಿ ತೇಲಿ ಬಂದ ಗಿಡ-ಗಂಟೆಗಳು ಸಿಕ್ಕು ನೀರು ಸರಾಗವಾಗಿ ಹರಿದು ಹೋಗದಂತೆ ತಡೆಹಿಡಿದಿದ್ದರಿಂದ, ಅಪಾರ ಪ್ರಮಾಣದ ನೀರಿನ ರಭಸಕ್ಕೆ ಸೇತುವೆಯ ಪೂರ್ವ ಭಾಗದ ತಡೆಗೋಡೆ ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಅಂದಿನಿಂದ ಇಂದಿನವರೆಗೂ ಬೆಳ್ಳೂಡಿ-ರಾಮತೀರ್ಥ, ನಾಗೇನಹಳ್ಳಿ, ಹೊಸಳ್ಳಿ, ಬಿಳಸನೂರು, ಭಾನುವಳ್ಳಿ, ಲಕ್ಕಶೆಟ್ಟಿಹಳ್ಳಿ, ಹೊಳೆಸಿರಿಗೆರೆ, ಕಾಮಲಾಪುರ, ಹನಗವಾಡಿ, ಬನ್ನಿಕೋಡು, ಬ್ಯಾಲದಹಳ್ಳಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ರಾಮತೀರ್ಥಕ್ಕೆ 15 ಕಿ.ಮಿ ದೂರವಾಗಿದೆ ತಾಲೂಕು ಕೇಂದ್ರ ಹರಿಹರ : ಬೆಳ್ಳೂಡಿ-ರಾಮತೀರ್ಥ ಮಧ್ಯದಲ್ಲಿ ಸೇತುವೆ ಮಾರ್ಗವಾಗಿ ಹರಿಹರ ನಗರದಿಂದ ತೆರಳಿದರೆ 8 ಕಿ.ಮಿ ದೂರವಾಗಿದ್ದ ಗ್ರಾಮ, ಸೇತುವೆ ಹಾಳಾಗಿರುವ ಕಾರಣ ಹರಿಹರ ನಗರದಿಂದ ರಾಮತೀರ್ಥ ಗ್ರಾಮಕ್ಕೆ ತೆರಳಲು ಗ್ರಾಮಸ್ಥರು ವಿದ್ಯಾರ್ಥಿಗಳು, ರೋಗಿಗಳು, ರೈತರು, ಕೂಲಿ ಕಾರ್ಮಿಕರು ಕುಮಾರಪಟ್ಟಣ, ಹರಗನಹಳ್ಳಿ, ನಾಗೇನಹಳ್ಳಿ ಮಾರ್ಗವಾಗಿ 15 ಕಿ.ಮಿ ಸುತ್ತುವರೆದು ತಮ್ಮ ಗ್ರಾಮವನ್ನು ತಲುಪುವ ದುಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ನರಕಯಾತನೆಯನ್ನು ಅನುಭವಿಸುವ ರೈತ ಗೋಳು ಕೇಳುವವರಾರು : ದಕ್ಷಿಣದಿಂದ-ಉತ್ತರಾಭಿಮುಖವಾಗಿ ಬೆಳ್ಳೂಡಿ-ರಾಮತೀರ್ಥ ಈ ಎರಡು ಗ್ರಾಮಗಳ ಮಧ್ಯದಲ್ಲಿ ಸೂಳೆ ಕೆರೆ ಹಳ್ಳವು ಹರಿದಿದ್ದು, ಪೂರ್ವ-ಪಶ್ಚಿಮಾಭಿಮುಖ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಸಂಪೂರ್ಣ ಅವೈಜ್ಞಾನಿಕ ವಾಗಿರುವುದರಿಂದ ಅಪಾರ ಪ್ರಮಾಣದಲ್ಲಿ ಮಳೆಯ ನೀರು ಒಟ್ಟಾಗಿ ಸಂಗ್ರಹಗೊಂಡು ಸೇತುವೆಯ ಮಾರ್ಗದಲ್ಲಿ ಹರಿದುಹೋಗಲು ಸಾಧ್ಯವಾಗದೆ, ಸೇತುವೆಯ ಪೂರ್ವ ಭಾಗದ ತಡೆಗೋಡೆಯ ಮೇಲೆ ಹರಿದು, ರೈತರ ಜಮೀನುಗಳಿಗೆ ನುಗ್ಗಿ, ಸೇತುವೆಯ ಪೂರ್ವ ಭಾಗದ ರಸ್ತೆ ಮತ್ತು ಸೇತುವೆಯ ಕೆಲ ಭಾಗವು ಮುರಿದು ಬಿದ್ದುದ್ದರಿಂದ ಕಳೆದ 4 ಕಡಿತಗೊಂಡಿದೆ. ವರ್ಷಗಳಿಂದ ಬೆಳ್ಳೂಡಿ-ರಾಮತೀರ್ಥ ಸಂಪರ್ಕ
ಎರಡು ಗ್ರಾಮಗಳ ಮಧ್ಯದ ಸಂಪರ್ಕ ಸೇತುವೆ ಮುರಿದು ಬಿದ್ದ ಕಾರಣ, ಬೆಳ್ಳೂಡಿಯಲ್ಲಿರುವ ತಮ್ಮ ಜಮೀನುಗಳಿಗೆ ತೆರಳಲು ರಾಮತೀರ್ಥ ರೈತರು. ರಾಮತೀಥದಲ್ಲಿರುವ ತಮ್ಮ ಜಮೀನುಗಳಿಗೆ ತೆರಳಲು ಬೆಳ್ಳೂಡಿ ರೈತರು ನಿತ್ಯ ತಮ್ಮ ತೋಟ, ಗದ್ದೆಗಳಿಗೆ ತೆರಳಲು ಹಗಲಿರುಳೆನ್ನದೆ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.
ಹೊಲ ಗದ್ದೆಗಳಲ್ಲಿ ಬೆಳೆದ ಬೆಳೆಯನ್ನು ಒಕ್ಕಲು ಮಾಡಲು, ತೋಟದಲ್ಲಿನ ಎಳೆದೆಲೆ, ಹಣ್ಣು ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸಲು. ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗಲು, ಶಾಲಾ ಮಕ್ಕಳು ಶಾಲೆಗೆ ತೆರಳಲು ನಿತ್ಯ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ.
ಹೀಗಂತಾರೆ ರೈತ ಮಹಿಳೆ : ರೈತ ದೇಶದ ಬೆನ್ನೆಲುಬು, ಅನ್ನದಾತ ಎನ್ನುತ್ತಿರುವ ಸರ್ಕಾರ ರೈತರು, ಸಾರ್ವಜನಿಕರು, ಕೂಲಿ ಕಾರ್ಮಿಕರು ನಂಬಿರುವ ಈ ಸೇತುವೆಯನ್ನು ನಿರ್ಮಿಸಲು ಹಾಗೂ ಸೇತುವೆಯ ಹಾಳಾಗಿರುವ ಸಂಪರ್ಕ ರಸ್ತೆಯನ್ನು ಸರಿಪಡಿಸಲು ಏಕೆ ? ಹಿಂದೆಟು ಹಾಕುತ್ತಿದ್ದಾರೆ.
ಇದನ್ನೆಲ್ಲಾ ಗಮನಿಸಲಾಗಿ ಸರ್ಕಾರ ರೈತರ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಎದ್ದು ಕಾಣುತ್ತಿದೆ ಎನ್ನುತ್ತಾರೆ. ನಿತ್ಯ ರಾಮತೀರ್ಥದಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ತೆರಳುವ ಬೆಳ್ಳೂಡಿ ಗ್ರಾಮದ ಹೆಚ್.ಎನ್ಆಶಾ, ಹೆಚ್ ನಿಂಗಪ್ಪ, ಹರೀಶ.