ದಾವಣಗೆರೆ (Davanagere) ; ನಗರದ ಬೂದಾಳ ರಸ್ತೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ “ಭೀಮಾ ಕೋರೆಗಾಂವ್” ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯ ಸತೀಶ್ ಅರವಿಂದ್, ಇತಿಹಾಸದ ಪುಟಗಳಲ್ಲಿ ಶೋಷಿತ ಸಮುದಾಯದ ಹೋರಾಟವು ಅಡಗಿ ಹೋಗಿವೆ. ಅದರಲ್ಲಿ 1818ರಲ್ಲಿ ಮಹಾರ್ ಸೈನಿಕರಿಗೂ ಮತ್ತು ಮಹಾರಾಷ್ಟ್ರದ ಪೇಶ್ವೆಗಳ ನಡುವೆ ನಡೆದ ಭೀಮಾ ಕೋರೆಗಾಂವ್ ಯುದ್ದವು ಪ್ರಮುಖವಾಗಿದೆ. ಜಾತಿ ಶೋಷಣೆ ಮತ್ತು ಗುಲಾಮಗಿರಿಯ ವಿರುದ್ಧ ಎರಡನೇ ಭಾಜಿರಾವ್ ನ 28000 ಪೇಶ್ವೆ ಸೈನಿಕರನ್ನು 500 ಸ್ವಾಭಿಮಾನಿಗಳಾದ ಮಹಾರ್ ಸೈನಿಕರು ಹಗಲು ರಾತ್ರಿ ಯುದ್ದಮಾಡಿ ವಿಜಯಶಾಲಿಯಾಗಿರುವುದು ಅವಿಸ್ಮರಣೀಯ ಎಂದರು.
ಪುಣೆಯ ಭೀಮಾ ನದಿಯ ದಡದಲ್ಲಿ ನಡೆದ ಯುದ್ಧದ ನೆನಪಿಗಾಗಿ ವಿಜಯ ಸ್ಥಂಭವನ್ನು ನಿರ್ಮಾಣ ಮಾಡಿರುವ ಬಗ್ಗೆ ಭಾರತದಲ್ಲಿ ಎಲ್ಲೂ ಅದರ ಕುರುಹು ಇರಲಿಲ್ಲ, ಅಂಬೇಡ್ಕರ್ ರವರು ಲಂಡನ್ ನಲ್ಲಿ ಓದುತ್ತಿದ್ದಾಗ ಕೆಲವೊಂದು ದಾಖಲಾತಿಗಳಲ್ಲಿ ಕೋರೆಗಾಂವ್ ನ ಕುರುಹು ಕುರಿತು ಮಾಹಿತಿ ಲಭ್ಯವಾಗುತ್ತದೆ. 1927 ರಲ್ಲಿ ಅಂಬೇಡ್ಕರ್ ರವರು ವಿಜಯ ಸ್ಥಂಭಕ್ಕೆ ಭೇಟಿ ನೀಡುತ್ತಾರೆ. ಅಲ್ಲಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ದೇಶದ್ಯಾಂತ ಪಸರಿಸುತ್ತದೆ. ಆ ವಿಜಯವನ್ನು ನೆನೆಯಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬಿ ಹೇಳಿದರು.
ಆದಿಲ್ ಖಾನ್ ,ಪವಿತ್ರ , ಯಲ್ಲಪ್ಪ, ಆಂಜಿನಪ್ಪ, ರವೀಂದ್ರ, ಸುರೇಶ್, ಅಶ್ಫಾಕ್, ಹನುಮಂತಪ್ಪ ಕರೂರು, ಹನುಮಂತಪ್ಪ, ಯಮಾನೂರಿ, ಬಸವರಾಜ್ ಹಾಗೂ ದಾವಣಗೆರೆಯ ಎಲ್ಲಾ ದಲಿತ, ದಮನಿತರು. ಅಂಬೇಡ್ಕರ್ ಅಭಿಮಾನಿಗಳು ಮತ್ತು ಪ್ರಗತಿಪರರು ಭಾಗಿಯಾಗಿದ್ದರು.