Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಶೋಷಿತರಿಗೆ “ಜಾತಿಗಣತಿ” ಜಾರಿಯಾಗಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ
ತಾಜಾ ಸುದ್ದಿ

ಶೋಷಿತರಿಗೆ “ಜಾತಿಗಣತಿ” ಜಾರಿಯಾಗಬೇಕು: ಜಿ. ಬಿ. ವಿನಯ್ ಕುಮಾರ್ ಅಭಿಮತ

Dinamaana Kannada News
Last updated: April 18, 2025 12:17 pm
Dinamaana Kannada News
Share
G. B. Vinay Kumar
G. B. Vinay Kumar
SHARE

ದಾವಣಗೆರೆ (Davanagere): ಕರ್ನಾಟಕದಲ್ಲಿ ಬಹುಮುಖ್ಯವಾಗಿ ಚರ್ಚಿತವಾಗುತ್ತಿರುವುದು ಜಾತಿಗಣತಿ ವಿಚಾರ. ಇದು ಜಾತಿಗಣತಿ ಅಲ್ಲ. ಎಲ್ಲಾ ಜಾತಿ, ಧರ್ಮದವರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದ್ರೆ, ಪರ- ವಿರೋಧ ಚರ್ಚೆ ಆಗುತ್ತಿದೆ. ಆದ್ರೆ ಬೇಡಿಕೆ ಇಡಬೇಕಾಗಿರುವುದು ಶೋಷಿತರೇ ಹೊರತು ಬಲಾಢ್ಯರಲ್ಲ. ಆದ್ದರಿಂದ ಜಾತಿಗಣತಿ ವರದಿ ಜಾರಿಗೆ ನಾವೆಲ್ಲರೂ ಸೇರಿ ಸಂಘಟಿತರಾಗಿ ಹೋರಾಡೋಣ, ಹಕ್ಕು ಪಡೆಯೋಣ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದ್ದಾರೆ.

ಲಿಂಗಾಯತರು, ಒಕ್ಕಲಿಗರನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗುತ್ತದೆಯಾ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕೆಲವು ಸಂಘಟನೆಗಳು, ಮುಖಂಡರು ಅವರದ್ದೇ ಆದ ಧಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ. ವಿರೋಧಿಸಿದ್ದಾರೆ, ಖಂಡಿಸಿದ್ದಾರೆ. ಆದ್ರೆ, ಈ ಹೇಳಿಕೆ ಸರಿಯಲ್ಲ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತಿಗಣತಿ ಜಾರಿಗೆ ಸಿದ್ದರಾಮಯ್ಯರು ಮಾಡುತ್ತಿರುವ ಕೆಲಸ ಶ್ಲಾಘನೀಯ. ಇದು ಅನುಷ್ಠಾನ ಆಗಬೇಕು. ಬಹುಮತ ಇರದಿದ್ದರೆ ಅಸಮಾನತೆ ಇದ್ದೇ ಇರುತ್ತದೆ. ಕೆಳಗಿರುವವರನ್ನು ಬೆಳೆಸುವ ಕೆಲಸ ಆಗುತ್ತಿಲ್ಲ. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಕ್ಕಿದ್ದರೆ ನಾನು ಸಂಸದನಾಗುತ್ತಿದ್ದೆ. ನನ್ನ ಪರವಾದ ಅಲೆಯೂ ಇತ್ತು. ಎರಡೂ ಪಕ್ಷಗಳ ಮುಖಂಡರು ಈಗಲೂ ಹೇಳುತ್ತಾರೆ. ಅವಕಾಶ ತಪ್ಪಿ ಹೋಯಿತು. ಯಾರನ್ನೂ ದೂಷಿಸುತ್ತಿಲ್ಲ. ಹೋರಾಟ ಮಾಡುತ್ತಿದ್ದೇನೆ. ಮೌನವಾಗಿದ್ದುಕೊಂಡು ಭರವಸೆ ನಂಬಿ ಕೈಗೊಂಬೆಯಾಗಿ ವರ್ತನೆ ಮಾಡಬಾರದು. ಜಾತಿಗಣತಿ ನಂಬರ್ ಆಗಿರುತ್ತದೆ ಅಷ್ಟೇ. ನಮ್ಮೊಳಗೆ ರಾಜಕೀಯ ಪ್ರಜ್ಞೆ ಮುಖ್ಯ. ಸ್ವಾಭಿಮಾನ ಬೆಳೆಸಿಕೊಳ್ಳಬೇಕು, ಇಲ್ಲದಿದ್ದರೆ ಅಸಮಾನತೆ ಮುಂದುವರಿಯುತ್ತದೆ. ಬೆಳೆದು ನಿಂತವರು, ಬಲಾಢ್ಯರು ಎಷ್ಟು ಕೊಟ್ಟರೂ ಕಡಿಮೆ ಅಂತಾರೆ. ಹಾಗಾಗಿ ನಾವೆಲ್ಲರೂ ಹೋರಾಟ ಮಾಡೋಣ. ಪ್ರಜಾಸತ್ತಾತ್ಮಕವಾಗಿ ಪ್ರಜಾಪ್ರಭುತ್ವದಲ್ಲಿ ಸಂಘಟಿತರಾಗಿ ಪಡೆದುಕೊಳ್ಳೋಣ ಎಂದು ಹೇಳಿದ್ದಾರೆ.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಹಿನ್ನೆಲೆ ಇಲ್ಲದ, ಹಿಂದುಳಿದ ವರ್ಗಕ್ಕೆ ಸೇರಿದ್ದ ನಾನು ಕಣಕ್ಕಿಳಿದು ಹೋರಾಟ ಮಾಡಿದೆ. ವಿದ್ಯಾವಂತರು ರಾಜಕಾರಣಕ್ಕೆ ಬರಬೇಕೆಂಬ ಒತ್ತಾಸೆಯಂತೆ ಬಂದೆ. ಅಭಿವೃದ್ಧಿ ಪರವಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ಸಂಸತ್ ಗೆ ಹೋಗಿ ಹೋರಾಟ ಮಾಡಬೇಕು. ಜನರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಬೇಕು ಎಂಬ ಕನಸು ಕಂಡಿದ್ದೆ. ಆದ್ರೆ, ಹಾಗೆ ಆಗಲಿಲ್ಲ. ಕುಟುಂಬ ರಾಜಕಾರಣವು ಪಾಳೇಗಾರಿಕೆ ಸಂಸ್ಕೃತಿ ಹುಟ್ಟುಹಾಕಿದೆ. ಇದರ ವಿರುದ್ಧ ಹೋರಾಟ ಮಾಡುವ ಮನೋಭಾವ ಇಟ್ಟುಕೊಂಡೆ. ನನ್ನ ಪರವಾದ ಒಲವು ಇದ್ದ ಕಾರಣಕ್ಕೆ ಶಾಮನೂರು ಕುಟುಂಬದವರು ಸಿಎಂ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಎರಡು ದಿನ ನಾಲ್ಕು ಕಡೆ ರ್ಯಾಲಿ ನಡೆಸಿದರು. ನನ್ನ ವಿರುದ್ಧ ಪ್ರಚಾರ ಮಾಡಿದರು. ನನಗೆ ಹಾಕುವ ಒಂದೊಂದು ಮತವೂ ಬಿಜೆಪಿಗೆ ಹೋಗುತ್ತದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದರೆ ನನಗೆ ಚಲಾಯಿಸಿದಂತೆ. ವಿನಯ್ ಗೆ ಹಾಕಬೇಡಿ ಎಂದು ಸಿದ್ದರಾಮಯ್ಯರು ಹೇಳುವಂತೆ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Read also : ಪಂಚಮಸಾಲಿ ಸಮಾಜದ ಪ್ರತ್ಯೇಕ ಸಭೆಗಳು ರದ್ದು : ಮಾಜಿ ಶಾಸಕ ಎಚ್.ಎಸ್.ಶಿವಶಂಕರ್

ಇಷ್ಟು ವರ್ಷ ರಾಜಕಾರಣದಲ್ಲಿ ಶಾಮನೂರು ಶಿವಶಂಕರಪ್ಪರು ಗೆಲ್ಲಲು ಕಾರಣವೇ ಅಹಿಂದ ಮತಗಳು. ಜಾತಿ ರಾಜಕಾರಣಕ್ಕೆ ಬಂದರೆ ಅವರು ಮೊರೆ ಹೋಗಿದ್ದು ಹಿಂದುಳಿದ ವರ್ಗದ ನಾಯಕನಿಗೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 85 ರಷ್ಟಿದೆ. ಮತ ಹಾಕಿದ್ದರಿಂದ ಆಗರ್ಭ ಶ್ರೀಮಂತರಾಗಿರುವುದು. ಆದ್ರೆ ಅವರ ಶ್ರೀಮಂತಿಕೆಯಿಂದ ಜನರಿಗೆ ಒಳ್ಳೆಯದಾಗಿಲ್ಲ. ಆ ಕ್ಷೇತ್ರಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ಆರ್ಥಿಕ, ಶೈಕ್ಷಣಿಕವಾಗಿ ಮುಂದುವರಿದ ಸಮುದಾಯಗಳಿಗೆ ಶಿಕ್ಷಣ ಸಿಕ್ಕಿರುತ್ತದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಭ್ರಾತೃತ್ವ ಪ್ರತಿಪಾದನೆ ಮಾಡಿದರು. ಶೋಷಣೆ, ಅಸ್ಪೃಶ್ಯತೆ ವಿರುದ್ದ ಹೋರಾಡಿದರು. ಸಹೋದರರಂತೆ ಎಲ್ಲಾ ವರ್ಗದವರನ್ನು ಕಾಣಬೇಕು. ರಾಜಕೀಯವಾಗಿ ಮುನ್ನೆಲೆಗೆ ತರಬೇಕೆಂಬ ಅಂಬೇಡ್ಕರ್ ಕನಸು ಈಡೇರಲೇ ಇಲ್ಲ. ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿ ಮೇಲ್ವರ್ಗದವರು ನಿಂತಿದ್ದಾರೆ. ನಮ್ಮ ಸಂಖ್ಯೆ ಕಡಿಮೆ ತೋರಿಸಿದ್ದಾರೆ. ಸಮುದಾಯದ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಬೇಡಿಕೆ ಇಡುತ್ತಾರೆ. ಪ್ರಬಲ ವರ್ಗದವರು ಬೇಡಿಕೆ ಇಡುತ್ತಿದ್ದಾರೆಯೇ ವಿನಾಃ ಶೋಷಿತರಲ್ಲ ಎಂದು  ಪ್ರತಿಪಾದಿಸಿದ್ದಾರೆ.

ವ್ಯಾಪಾರೋದ್ಯಮಿಗಳು ಸೃಷ್ಟಿ ಮಾಡಿರುವ ಆಸ್ತಿ ಕಾಪಾಡಿಕೊಳ್ಳಲು ಅಧಿಕಾರ ಬೇಕು. ಹತ್ತು ಪಟ್ಟು ಬೆಳೆಯಬೇಕು ಎಂಬ ಗುರಿ ಹೊಂದಿದ್ದಾರೆ. ಅಧಿಕಾರದಲ್ಲಿದ್ದವರು ಎಲ್ಲಾ ಅವಕಾಶಗಳನ್ನು ಕ್ರೋಢೀಕರಿಸಿಕೊಂಡು ಅಧಿಕಾರ ಹಂಚಿ ಹೋಗುತ್ತದೆ ಎಂದುಕೊಂಡು ನಮಗೆ ಅನ್ಯಾಯ ಆಗುತ್ತದೆ ಎಂದು ಪದೇ ಪದೇ ಪ್ರತಿಪಾದಿಸುತ್ತಾರೆ. ಇದು ಕರ್ನಾಟಕದಲ್ಲಿ ಆಗುತ್ತಿದೆ. 120 ರಿಂದ 130 ಶಾಸಕರು ಎರಡು ವರ್ಗದವರಿಗೆ ಸೇರಿದವರು. ಸಮಸಮಾಜ ಕಟ್ಟಬೇಕು, ಅಧಿಕಾರ ವಿಕೇಂದ್ರೀಕರಣ ಆಗಬೇಕು ಎಂಬುದು ಜಾರಿಯಾಗುತ್ತಲೇ ಇಲ್ಲ. ನಾವೇನೂ ಅವರ ಸ್ವಂತ ಆಸ್ತಿಯಿಂದ ಏನೂ ಕೇಳುತ್ತಿಲ್ಲ. ಕಾನೂನು ಬದ್ಧವಾಗಿ, ಸಂವಿಧಾನಬದ್ಧವಾಗಿ, ಪ್ರಜಾಪ್ರಭುತ್ವದಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಜಾತಿಗಣತಿ ವರದಿ ಜಾರಿ ಕೇಳಲಾಗುತ್ತಿದೆ ಎಂದು ಜಿ. ಬಿ. ವಿನಯ್ ಕುಮಾರ್ ಅವರು ತಿಳಿಸಿದ್ದಾರೆ.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Panchamasali Society ಪಂಚಮಸಾಲಿ ಸಮಾಜದ ಪ್ರತ್ಯೇಕ ಸಭೆಗಳು ರದ್ದು : ಮಾಜಿ ಶಾಸಕ ಎಚ್.ಎಸ್.ಶಿವಶಂಕರ್
Next Article Davanagere Davanagere| ಬೈಕ್ ವೀಲಿಂಗ್ : 05 ಬೈಕ್‍ ವಶಕ್ಕೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ನ. 6 ರಂದು ದಾವಣಗೆರೆಯಲ್ಲಿ ವಿದ್ಯುತ್ ವ್ಯತ್ಯಯ

ದಾವಣಗೆರೆ ನ.4  (Davanagere ) :  ದಾವಣಗೆರೆ ಮತ್ತು ಯರಗುಂಟೆ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನವಂಬರ್…

By Dinamaana Kannada News

ಲವಲವಿಕೆಯಿಂದ ವ್ಯಾಪಾರದ ವಹಿವಾಟು ಗಮನಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ (Davanagere) : ವೈದ್ಯರ ಆರೈಕೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು…

By Dinamaana Kannada News

JOB NEWS : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಆ.02  (Davangere district )   :  ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 5…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?