Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಗ್ಯಾರೆಂಟಿ ಯೋಜನೆಗಳಿಂದ ಜನತೆಗೆ ನೆಮ್ಮದಿ : ಸಿಎಂ ಸಿದ್ದರಾಮಯ್ಯ 
ತಾಜಾ ಸುದ್ದಿ

ಗ್ಯಾರೆಂಟಿ ಯೋಜನೆಗಳಿಂದ ಜನತೆಗೆ ನೆಮ್ಮದಿ : ಸಿಎಂ ಸಿದ್ದರಾಮಯ್ಯ 

Dinamaana Kannada News
Last updated: May 5, 2024 5:40 pm
Dinamaana Kannada News
Share
Siddaramaiah
ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು.
SHARE

ದಾವಣಗೆರೆ:    ಈ ಬಾರಿ ದಾವಣಗೆರೆಯಲ್ಲಿ ಕಾಂಗ್ರೆಸ್ ವಿಜಯಮಾಲೆ ದರಿಸುವುದು ಖಚಿತ, ವಿನಯ್ ಕುಮಾರ್ ಗೆ ಓಟ್ ಹಾಕಿದ್ರೆ ಬಿಜೆಪಿಗೆ ಹಾಕಿದ ಹಾಗೆ, ನಿಮಗೆ ಸಿದ್ದರಾಮಯ್ಯ ಬೇಕಾ ವಿನಯ್ ಕುಮಾರ್ ಬೇಕಾ ನಿರ್ಧಾರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಹೊನ್ನಾಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದರು. ನಮ್ಮ ಕುರುಬ ಸಮಾಜಕ್ಕೆ ಬಿಜೆಪಿಯರು ಎಲ್ಲಿಯು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ನಾವು ಎರಡು ಕಡೆ ಟಿಕೆಟ್ ಕೊಟ್ಟಿದ್ದೇವೆ. ಕಳೆದ ಆರು ತಿಂಗಳಿನಿಂದ ಪಕ್ಷಕ್ಕೆ ಬಂದ ವಿನಯ್ ಕುಮಾರ್ ಗೆ ಬೇಡಯ್ಯ ನಿನಗಿನ್ನು ಭವಿಷ್ಯ ಇದೆ ಎಂದಿದ್ದೆ, ಆಯಿತು ಎಂದು ಒಪ್ಪಿಕೊಂಡು ಹೋದ ಗಿರಾಕಿ ಉಲ್ಟಾ ಆಗಿ ಬಿಡೋದಾ ಎಂದು ಕಿಡಿಕಾರಿದರು.

ನಮ್ಮ ಗ್ಯಾರೆಂಟಿ ಯೋಜನೆಗಳಿಂದ ಜನತೆ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಶಕ್ತಿಯೋಜನೆಯಿಂದ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗಡೆ ಅವರೆ ಪತ್ರ ಬರೆದು ನಿಮ್ಮ ಹೆಸರಿನಲ್ಲಿ ಪೂಜೆ ಮಾಡಿಸುತ್ತಿದ್ದೇವೆ ಎಂದಿದ್ದಾರೆ.

ದಾವಣಗೆರೆ ಸಂಸದರಾಗಿರುವ ಸಿದ್ದೇಶ್ವರ ಅವರು ಕೇಂದ್ರದ ಸಚಿವಾಲಯದಲ್ಲಿ ಮಾತಾಡಿ ದಾವಣಗೆರೆಗೆ ಅನುದಾನ ತಂದಿಲ್ಲ. ಇನ್ನು ಅವರ ಪತ್ನಿ ಮಾತಾಡ್ತಾರಾ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಅವರು ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ ಬೆಲೆ ಏರಿಕೆಯಾಗಿವೆ ಅನೇಕ ಸಮಸ್ಯೆಗಳಿಂದ ಜನತೆ ತತ್ತರಿಸಿ ಹೋಗಿದ್ದು ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ.

ಈ ಬಾರಿ ಬಿಜೆಪಿ ಗೆಲ್ಲಲ್ಲ, ವಿನಯ್ ಕುಮಾರ್ ಗೆಲ್ಲಲ್ಲ, ಒಂದೇ ಜಾತಿಯನ್ನಿಟ್ಟುಕೊಂಡು ಗೆದ್ದವರಿಲ್ಲ. ವಿನಯ್ ಕುಮಾರ್ ಗೆ ಓಟ್ ಹಾಕಿದರೆ ಅದು ಬಿಜೆಪಿಗೆ ಹಾಕಿದ ಹಾಗೆ. ನಾನು ಸಿಎಂ ಆಗಿ ಮುಂದುವರೆಯಬೇಕು ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿ ಕಳೆದ ಬಾರಿ ಶಾಂತನಗೌಡ ಅವರಿಗೆ ಲೀಡ್ ಕೊಟ್ಟು ಗೆಲ್ಲಿಸಿದ ಹಾಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಬೇಕು ಎಂದರು.

ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರು ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಏನೇನು ಮಾಡಬೇಕು ಅಂದುಕೊಂಡಿದ್ದೇವೊ ಅವೆಲ್ಲವು ಮಾಡಿದ್ದೇವೆ. ಐದು ಯೋಜನೆಗಳು ಉಪಯೋಗವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯರು  ಕಾರಣ ಎಂದ ಅವರು ದಾವಣಗೆರೆ ತಾಲ್ಲೂಕಿನಲ್ಲೆ ಗೃಹಲಕ್ಷ್ಮಿ ಉಪಯೋಗವಾಗಿದ್ದು ಜಿಲ್ಲೆಯಲ್ಲಿ 4.10 ಮಹಿಳೆಯರು  ಇದರ ಉಪಯೋಗ ಪಡೆದುಕೊಂಡಿದ್ದಾರೆ. ಪ್ರಸ್ತು ಲೋಕಸಭಾ ಸದಸ್ಯರು ಏನು ಮಾಡಿಲ್ಲ ರಸ್ತೆಗಳ ಅಭಿವೃದ್ದಿಯಾಗಿಲ್ಲ,  ಶಿವಮೊಗ್ಗ, ಹರಿಹರ ರೈಲುಮಾರ್ಗದ ಮಾರ್ಗ ನೆನೆಗುದಿಗೆ ಬಿದ್ದಿದೆ

ಹಿಂದೆ ತರಳುಬಾಳು ಹುಣ್ಣಿಮೆಯಲ್ಲಿ ಇದೇ ಹೊನ್ನಾಳಿಯಲ್ಲಿ 57 ಕೆರೆಗಳಿಗೆ ಅನುಮತಿ ನೀಡಲಾಗಿತ್ತು. ಈಗ ಕಾರ್ಯರೂಪದಲ್ಲಿದ್ದು ಮೂರು ತಿಂಗಳಲ್ಲಿ ಕಾರ್ಯರೂಪ ಆಗಲಿದೆ.  ನಿಮ್ಮೆಲ್ಲರ ಆಶಿರ್ವಾದ ಕಾಂಗ್ರೆಸ್ ಪಕ್ಷಕ್ಕೆ ಅತ್ಯಗತ್ಯವಿದ್ದು ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ನೀಡುವಂತೆ ಕೋರಿದರು.

ತರಿಕೆರೆಯ ಶಾಸಕ ಶ್ರೀನಿವಾಸ್, ಈಶ್ವರ್ ನಾಯಕ್, ಶಾಂತನಗೌಡ, ಬಸವಂತಪ್ಪ, ಮಂಜಪ್ಪ, ಆರ್.ಶಂಕರ್, ಶಿವಯೋಗಿ, ಮಂಜಣ್ಣ, ನೈರುತ್ಯ ಅಭ್ಯರ್ಥಿ ಆಯುನೂರು ಮಂಜುಜಾಥ್, ಸಿದ್ದಪ್ಪ, ವಿಶ್ವನಾಥ್, ಗಂಗಪ್ಪ, ಮಾ.ಜಿ.ಆರ್.ನಾಗಪ್ಪ, ಚಂದ್ರಶೇಖರ್, ಗದಿಗೇಶ್ ಉಮಾಪತಿ ಇತರರು ಇದ್ದರು.

 

TAGGED:dinamaana.comFive schemes are useful.Latest Kannada Newsಐದು ಯೋಜನೆಗಳು ಉಪಯೋಗವಾಗಿದೆ.ಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article Voting ಮೇ 7 ರಂದು ಮತದಾನ ಮಾಡಿ ಸೆಲ್ಫಿ ಕಳುಹಿಸಿ ವಿಶೇಷ ಬಹುಮಾನ ತಮ್ಮದಾಗಿಸಿ
Next Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-15 ಬದಲಾದ ರಾಜಕಾರಣದ ವರಸೆಗಳು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ಅಗ್ನಿ ವೀರ್ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಜ.21 (Davanagere ): ಭಾರತೀಯ ವಾಯುಪಡೆಯು ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ…

By Dinamaana Kannada News

ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ 

ದಾವಣಗೆರೆ  :  ಸಂಚಾರ ನಿಯಮಗಳ ಉಲ್ಲಂಘನೆ ಮಾಡುವವರ ವಿರುದ್ಧ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ ಶನಿವಾರ ನಡೆಯಿತು. ದಕ್ಷಿಣ ಸಂಚಾರ…

By Dinamaana Kannada News

Davanagere | 22 ಕೆರೆಗಳ ಏತನೀರಾವರಿ ಯೋಜನೆ ವ್ಯಾಪ್ತಿಗೆ ಆಲೂರು-ಮೆಳ್ಳೆಕಟ್ಟೆ ಕೆರೆ ಸೇರಿಸಲು ಒತ್ತಾಯ

ದಾವಣಗೆರೆ  (Davanagere) :  22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮೆಳ್ಳೆಕಟ್ಟೆ ಮತ್ತು…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?