ದಾವಣಗೆರೆ : ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಸರಳವಾಗಿ ಅಚರಿಸಲಾಯಿತು.
ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಬದುಕಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕವಾಗಿ ಸಮಾನತೆ ಬರಬೇಕು ಅನ್ನುವುದನ್ನು ಅವರ ಪ್ರತಿಯೊಂದು ಬರಹಗಳಲ್ಲಿ ಕಾಣಬಹುದಾಗಿದೆ ಎಂದರು.
ದೀನದಲಿತರಿಗೆ ಶಕ್ತಿಯಾಗಿ ಅವರ ಪ್ರಗತಿಗೆ ಸದಾ ಕಾಲ ದುಡಿದಿದ್ದಾರೆ. ಶಿಕ್ಷಣದಿಂದ ಮಾತ್ರ ಸಾಧನೆ ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ. ಕಷ್ಟದಲ್ಲೆ ಬದುಕನ್ನು ಸಾಗಿಸಿದ ಅಂಬೇಡ್ಕರ್ ಅವರು ತನ್ನ ಕಷ್ಟ ಬೇರೆಯವರಿಗೆ ಬರಬಾರದು ಎಂದು ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ. ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಅವರ ಅದರ್ಶ ನಮಗೆ ಸದಾ ದಾರಿ ದೀಪವಾಗಿದೆ ಎಂದು ಹೇಳಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಆರ್.ಎಸ್. ತಿಪ್ಪೇಸ್ವಾಮಿ, ಹರಿಹರ ನಗರವಾಣಿ ಸಂಪಾದಕ ಕುಣೆಬೆಳೆಕೆರೆ ಸುರೇಶ್, ವಾರ್ತಾಭಾರತಿ ಜಿಲ್ಲಾ ವರದಿಗಾರ ಹೆಚ್.ಎನ್. ಪ್ರಕಾಶ್, ಪಬ್ಲಿಕ್ ಟಿ.ವಿ. ವರದಿಗಾರ ಪುನೀತ್ ಆಪ್ತಿ, ಕ್ಯಾಮರಾ ಮ್ಯಾನ್ ರಮೇಶ್, ಈ ಟಿ.ವಿ. ಭಾರತ್ ವರದಿಗಾರ ನೂರ್, ಪತ್ರಕರ್ತ ನಿಂಗರಾಜ್, ಭಾಸ್ಕರ್ ಮತ್ತಿತರರಿದ್ದರು.