Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ದಿನಮಾನದ ಹೆಮ್ಮೆ : ಪ್ರೀತಿಯಿಂದ ಬಾಚಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ 
Blog

ದಿನಮಾನದ ಹೆಮ್ಮೆ : ಪ್ರೀತಿಯಿಂದ ಬಾಚಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ 

Dinamaana Kannada News
Last updated: June 30, 2024 3:34 am
Dinamaana Kannada News
Share
Kannada literature
Kannada literature
SHARE

Kannada News |Dinamaanada Hemme   | Dinamaana.com | 30-06-2024

ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರಜಾವಾಣಿಗೆ ಅಗ್ರಸ್ಥಾನವಿದೆ.ಇದರ ವಾಚಕರ ವಾಣಿ ವಿಭಾಗದ ಒಂದೊಂದು ಪತ್ರವೂ ಸಹ ಚಿಂತನಾರ್ಹ ಸಂಗತಿಗಳಿಂದ ಕೂಡಿರುತ್ತವೆ. ಹಾಗೆ ವಾಚಕರ ವಾಣಿಯ ಪತ್ರಗಳ ಓದಿನಿಂದ ಹುರಕಡ್ಲಿ ಶಿವಕುಮಾರರು ನನಗೆ ಪರಿಚಯವಾದರು.

ಸಮಕಾಲೀನ ವಿಷಯಗಳ ಪತ್ರಗಳಿಂದಲೇ ಪ್ರಸಿದ್ಧಿ…

ಹಾಗೆ ಕರ್ನಾಟಕಕ್ಕೂ ಇವರು ಬರೆದ ಸಮಕಾಲೀನ ವಿಷಯಗಳ ಪತ್ರಗಳಿಂದಲೇ ಪ್ರಸಿದ್ಧಿಗೆ ಬಂದಿರುವರೆಂದು ನನ್ನ ನಂಬಿಕೆ.  ಕಳೆದ ಐದು ದಶಕಗಳಿಂದ ಕನ್ನಡ ಸಾಹಿತ್ಯಲೋಕವನ್ನು, ರಾಜಕೀಯವನ್ನೂ, ರೈತರ ಬದುಕನ್ನು ಸಮಚಿತ್ತದಿಂದ ನೋಡಿಕೊಂಡು ಬದುಕುತ್ತಿರುವ ಶಿವಕುಮಾರರು ಅಪ್ಪಟ ಭಾರತೀಯ ಪರಂಪರೆಯೊಂದರ ಪಳೆಯುಳಿಕೆಯಂತೆಯೂ ಕಾಣಿಸುತ್ತಾರೆ.

ಅದೊಂದು ದಿನ,ಯಾವುದೋ ಸಾಹಿತ್ಯಿಕ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಆಗಮಿಸುವಂತೆ ಕರೆ ಮಾಡಿದೆ.ಅತ್ತಲಿಂದ,  “ಹಲೋ…ಯಾರು?” “ನಮಸ್ಕಾರ ಸರ್, ನಾನು ದಾವಣಗೆರೆಯಿಂದ ಶ್ರೀನಿವಾಸ, ತಮ್ಮನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಬೇಕಾಗಿತ್ತು…..” ವಿವರಗಳನ್ನು ಹೇಳುವ ಮುಂಚೆಯೇ ತುಂಡರಿಸಿ, “ಅಲ್ಲಾ…ನನಗೆ, ಮೆಕ್ಕೆಜೋಳ ಹೊಕ್ಕಾದಿದೆ ,ಇಲ್ಲಾಂದ್ರೆ ಹಾಳಾಗುತ್ತದೆ ಎಂದರು.

ಮತ್ತೆ ಅವರೇ ಮಾತನಾಡಿದರು.ಕಾರ್ಯಕ್ರಮಕ್ಕಿಂತಲೂ ರೈತನ ಕಾಯಕವೇ ಕೈಲಾಸ ಎಂಬುದನ್ನೂ ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಹೋದರು.

ಹೊಸ ವಿಚಾರಗಳಿಗೆ ಮನದ ಕಿಟಕಿ ಬಾಗಿಲು ತೆರೆದವರು 

ಸದಾ ಸಾಮಾಜಿಕ ಎಚ್ಚರದಿಂದ ಸಾಹಿತ್ಯಿಕ ವಾಗ್ವಾದಗಳಲ್ಲಿ ಭಾಗವಹಿಸುತ್ತ, ಕೆಲವೊಮ್ಮೆ ಸಭೆಯ ಹಿಂದಿನ ಸೀಟಿನಲ್ಲಿ ಅನಾಮಿಕರಂತೆ ಕೇಳಿಸಿಕೊಳ್ಳುವ ಬಾಚಿಗೊಂಡನಹಳ್ಳಿ ಹುರಕಡ್ಲಿ ಶಿವಕುಮಾರ ಎಂದರೆ, ಅದು ಜಾನಪದವಿರಲಿ, ವಿಜ್ಞಾನದ ವಿಸ್ಮಯಗಳಿರಲಿ, ಕಾವ್ಯವೇ ಆಗಿರಲಿ ಎಲ್ಲಾ ಬಗೆಯ ಹೊಸ ವಿಚಾರಗಳಿಗೆ ತಮ್ಮ ಮನದ ಕಿಟಕಿ ಬಾಗಿಲು ತೆರೆದವರು.

ತೇಜಸ್ವಿ , ಲಂಕೇಶರನ್ನು ನೆನಪಿಸುವ ಹುರಕಡ್ಲಿ ಶಿವಕುಮಾರ್

ಯಾರಾದರೂ ತಮ್ಮದನ್ನು ತಾವೇ ಗೀಚಿಕೊಂಡಿದ್ದರೆ? ಅವರೂರು ಗೀಚಿಗೊಂಡನಹಳ್ಳಿ ಎಂದಾಗುತ್ತದೆ! ಮತ್ತೆ ಯಾರಾದರೂ ದೋಚಿಕೊಂಡಿದ್ದರೆ? ಅವರೂರು ದೋಚಿಗೊಂಡನಹಳ್ಳಿ ಎಂದಾಗುತ್ತದೆ ! ಅದೇ ಪ್ರೀತಿಯಿಂದ ಬಾಚಿಕೊಂಡರೆ ಬಾಚಿಗೊಂಡನಹಳ್ಳಿ ಎಂದಾಗುತ್ತದೆ! …..ಆಧುನಿಕತೆಯ ಸೋಂಕು ತಗುಲಿಯೂ ತಮ್ಮನ್ನು ತಾವು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಎಷ್ಟೋ ಊರು, ಕೇರಿಗಳ, ಜನರ ಪ್ರತಿನಿಧಿಯಂತೆ ಕಾಣುವ ಹುರಕಡ್ಲಿ ಶಿವಕುಮಾರ್ ಒಮ್ಮೊಮ್ಮೆ ಪೂರ್ಣಚಂದ್ರ ತೇಜಸ್ವಿಯನ್ನು, ಮಗದೊಮ್ಮೆ ಲಂಕೇಶರನ್ನು ನೆನಪಿಸುತ್ತಾರೆ.

ನಾವು ಹೀಗೇ ಮರವಾಗಬೇಕು!  …

ಸ್ವತಃ ಕವಿಯಾಗಿರುವ ಶಿವಕುಮಾರರಿಗೆ, ಆಕ್ರಮಣಕಾರಿಯಾಗಿ ಆಡಳಿತಶಾಹಿ, ಬಳಸಿ ಎಸೆಯುವ ಆಸೆಬುರುಕ ಅರಮನೆ ನಾಗರಿಕತೆಗಳು, ಮರ, ಗಿಡ, ಹಕ್ಕಿ, ಹೊಲ, ಗದ್ದೆ, ಎತ್ತು, ಆಕಳು…ಎಲ್ಲರೊಂದಿಗೆ ಮಾತನಾಡುತ್ತಾ ಬದುಕುವ ಆಶಯವನ್ನು ಕವಿತೆಯ ಮೂಲಕ ವ್ಯಕ್ತಪಡಿಸುತ್ತಾರೆ.

ಮಣ್ಣುಗೂಡಿಸಿಬಿಟ್ಟ ಹಳ್ಳಿಗಾಡಿನ ಸಮುದಾಯಗಳ ನಡುವಿನ ನಿರಂತರ ಬದುಕು, ಆಕ್ರಮಣವೇ ಗೊತ್ತಿಲ್ಲದ ಹಳ್ಳಿಗರ ಮಂಡಲ ಮಧ್ಯದೊಳಗೆ ಕುಳಿತು ಮರೆತುಹೋದ ಮನುಷ್ಯ ಮೌಲ್ಯಗಳ ಬಗ್ಗೆ ತಪ್ಪಿತಸ್ಥ ಭಾವನೆಯಿಂದ ಬರೆಯಬಲ್ಲ ಛಾತಿಯಿದ್ದವರು.ಆದರೆ ಇವೆಲ್ಲವನ್ನೂ ಮೀರಿ, ತಣ್ಣಗೆ…

ನಾವು ಹೀಗೇ ಮರವಾಗಬೇಕು!  ಈ ಹಾದಿ ಬೀದಿಯ ಉದ್ದಕ್ಕೂ ನೆರಳುಹಾಸಿ ನಗೆ ಹೂವ ಸೂಸಿ ಪರಿಮಳಿಸಬೇಕು! ನಿಂತಲ್ಲಿ ನಿಲ್ಲದೆ ಲಾಭಾಕಾಂಕ್ಷೆಯಿಂದ ಚಲಿಸಿ ಅವರಿವರಿಗೆ ಅಸಹ್ಯವಾಗುವುದಕ್ಕಿಂತ ಹೀಗೇ ಸ್ವಸ್ಥ ನಿಂತ ಮರವಾಗಬೇಕು ! ಎಂದು ಆಶಿಸುತ್ತಾರೆ.

ಕವಿ, ತನ್ನೂರಿನ ನೆನಪುಗಳನ್ನು ಮೊಗೆ ಮೊಗೆದು ತುಂಬಿಕೊಂಡು ಜೀವನದಲ್ಲಿ ಅರ್ಥ ಕಾಣುತ್ತಾರೆ.ಆದರೆ ನೆನಪುಗಳೇ ಹುಟ್ಟಲಾರದ ಹೊಸ ಜಗತ್ತಿನ ಮಕ್ಕಳ ಬದುಕಿನ ಕುರಿತು ನೆನೆದರೆ ಭಯವಾಗುತ್ತದೆ.

ಬಹುತೇಕ ಕನ್ನಡದ ಬರಹಗಾರರಿಗೆ ಎರಡು ಲೋಕಗಳ ಅನುಭವವಿರುತ್ತದೆ. ಒಂದು ತನ್ನ ಬಾಲ್ಯದ ಹಳ್ಳಿಯ ಲೋಕ, ಮತ್ತೊಂದು ಆನಂತರದ  ನಗರದ ಅನುಭವ ಲೋಕ. ಇದು ಗಾಂಧಿ, ಅಂಬೇಡ್ಕರ್, ಲೋಹಿಯಾ, ಕುವೆಂಪು,…ಎಲ್ಲರಿಗೂ ದಕ್ಕಿದ ಲೋಕಗಳೆ. ಆದರೆ ತೇಜಸ್ವಿಯವರದು ರಿವರ್ಸ್ ಪ್ರಾಸೆಸ್!.

ಹುರಕಡ್ಲಿ ಶಿವಕುಮಾರರು ಹಳ್ಳಿ ಬಿಟ್ಟು ಕದಲಿಲ್ಲ. ಹಾಗಂತ ಅನುಭವ ಲೋಕ ವಿಸ್ತಾರಗೊಂಡಿಲ್ಲ ಅಂತಲ್ಲ.ಇರುವ ತಮ್ಮ ಬಂಡಿಜಾಡುಗಳಂತಹ ಕಿರುದಾರಿಗಳ ಮೂಲಕವೇ ಬದುಕಿನ ಚಿಕ್ಕ ಲಯಗಳನ್ನು ಸಮರ್ಥವಾಗಿ ಲೋಕವನ್ನು ನೋಡಿದವರು.

ಸಾಹಿತ್ಯಿಕ ಆತ್ಮ,ತಮ್ಮ ದೇಹದ ಆತ್ಮ ಎರಡೂ ಒಂದೇ…

ಲೇಖಕ ಸುಳ್ಳನ್ನು ಬಿಡಿಸಿ ಹೇಳದಿದ್ದರೆ ಅವನ ನರಮಂಡಲಕ್ಕೆ ಲಕ್ವ ಹೊಡೆದೀತು.ಭಾರತದ ಕೋಮುವಾದೀಕರಣ,ಜಾಗತೀಕರಣಗಳೆಂಬ ಜಂಜಡ,ಗೋಳು ಗಳಿಗೆ,ಕುರೂಪಗಳ ನರಮಂಡಲ ಇರುವ ಸಾಹಿತ್ಯಕ್ಕೆ ಆತ್ಮ ಕೂಡ ಇರಲಾರದು.ಆದರೆ ಹುರಕಡ್ಲಿಯವರಿಗೆ ಸಾಹಿತ್ಯಿಕ ಆತ್ಮ,ತಮ್ಮ ದೇಹದ ಆತ್ಮ ಎರಡೂ ಒಂದೇ ಆಗಿ ಕಂಡಿವೆ.ಕಾವ್ಯವೆಂದರೆ ಕೇವಲ ಶಬ್ದಗಳ ಚಮತ್ಕಾರ ಮಾತ್ರವಲ್ಲ. ಜೀವನ, ಸಮಾಜಗಳ ಹೆಣಿಗೆಯನ್ನಾಗಿ ಬದುಕಿನ ಸರಳ ರೂಪಕಗಳ ಮೂಲಕ ಹುರಕಡ್ಲಿಯವರು ಕಟ್ಟಿಕೊಡುತ್ತಾರೆ.

ಅಲ್ಲಾ ನಮ್ಮ ದೇವರಿಗೆ ಚಳಿಯಾಗ್ತದೆ. ಅಂತಾ ನಾನೇ ಮಸೀದಿ ಕಟ್ಟಿಸಿದ್ದೆ ಎಂದು ಅಳುತ್ತಿದ್ದ ಮಹ್ಮದ್ ಸಾಬು,  ರಾಮ ರಾಮಾ ನಮ್ಮ ದೇವರಿಗೆ ಸೆಕೆಯಾಗ್ತದೆ ಅಂತಾ ನಾನೇ ಕಿಂಡಿ ಕೊರೆದೆ ಎಂದು ನಗುತ್ತಿದ್ದ ಅಧ್ವಾನ್ ಬಾಬು,  ಕಿಂಡಿ ಕೊರೆವಾಗ ಮಸೀದಿ ಕುಸಿದು ದೇಶವೆಲ್ಲಾ ರಾಮಾರಕ್ತವಾಯ್ತು. ದೇವರಿಗೇ ಸೆಕೆ! ಚಳಿ! ಉಬ್ಬಸ! ಛೇ.. ಪುಂಡಾಟ ಮಾಡ್ತೀರಾ ಮುಠ್ಠಾಳರ? ಅಂತಾ ನಾನು ಉಗಿದೆ.

ಅವರು ನಾಸ್ತಿಕ! ನಾಸ್ತಿಕ! ಅಂತ ಉಗ್ಗಡಿಸುವ ಭರದಲ್ಲಿ ಢಿಕ್ಕಿ ಹೊಡೆದು ಹಣೆ ಹೊಡೆದುಕೊಂಡು ಏದುಸಿರು ಬಿಡತೊಡಗಿದರು. ಮತ್ತೆ ನಾನೇ ಗಾಳಿ ಬೀಸಿ ನೀರು ಕುಡಿಸ ‘ಈಗ ಬಾಯಾರಿಕೆ,ಸೆಕೆ ನಿಮಗೋ? ನಿಮ್ಮ ದೇವರಿಗೋ ?’ಎಂದೆ. ಉತ್ತರಕ್ಕಾಗಿ ಇಬ್ಬರೂ ಪೇಚಾಡಿ ಪೇಚಾಡ ನಾಸ್ತಿಕ! ನಾಸ್ತಿಕ! ಅಂತಾ ಬಡಬಡಿಸಿದರು.

 (ಕಾವ್ಯೋತ್ತರ)

ಹುರಕಡ್ಲಿ, ಮೇಟಿ, ಮತ್ತು ವಟ್ಟಮ್ಮನಹಳ್ಳಿಯ ಪಂಪಣ್ಣ ನಂತಹ  ಬರೆಹಗಾರರನ್ನು ಭಾರತೀಯ ಲೇಖಕ ವರ್ಗ ಇನ್ನೂ ಒಳಗೆ ಬಿಟ್ಟುಕೊಂಡಂತಿಲ್ಲ.ಇದೆಲ್ಲವನ್ನು ನೋಡುತ್ತಿದ್ದರೆ ಚಿಂತಕ ಶಿವವಿಶ್ವನಾಥನ್ -“ದೆಹಲಿಗೆ ಮೀಜೋರಾಮ್ ನ ಬಿದಿರು ಅರ್ಥವಾಗುವುದಿಲ್ಲವಾದ್ದರಿಂದ ಮೀಜೋರಾಮ್ ಕೂಡ ಅರ್ಥವಾಗುವುದಿಲ್ಲ. ಹೀಗಾಗಿ,ಮೀಜೋರಾಮ್ ದೆಹಲಿಯಿಂದ,ಭಾರತದಿಂದ ದೂರವಾಗುತ್ತಾ ಹೋಗುತ್ತದೆ. ತತ್ಪರಿಣಾಮವಾಗಿ ಭಾರತ ಕೂಡ ತುಂಡಾಗುತ್ತಾ ಹೋಗುತ್ತದೆ.”ಎಂದು ಹೇಳಿದ್ದ ಈ ಮಾತು ಬಸರಕೋಡು, ಹಂಪಾಪಟ್ಣ,  ವಟ್ಟಮ್ಮನಹಳ್ಳಿ, ಬಾಚಿಗೊಂಡನಹಳ್ಳಿ ಊರುಗಳಿಗೂ, ಆ ಊರಿನಲ್ಲಿ ವಾಸಿಸುವ ಮನುಷ್ಯರಿಗೂ  ಅನ್ವಯಿಸುವಂತೆ ತೋರುತ್ತಿರುವುದು ಅತಿಶಯೋಕ್ತಿಯೇನಲ್ಲ.

              ಬಿ.ಶ್ರೀನಿವಾಸ

TAGGED:Davangere Newsdinamaana.comDinamaanada HemmeKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂದಿನಮಾನದ ಹೆಮ್ಮೆ
Share This Article
Twitter Email Copy Link Print
Previous Article Davanagere ಅನಾಮಧ್ಯೇಯ ಕರೆ : 3.57 ಲಕ್ಷ ರೂ ವಂಚನೆ
Next Article haveri ಪತ್ರಕರ್ತರಿಲ್ಲದೇ ಸಮಾಜ ಮುನ್ನಡೆಸುವುದು ಕಷ್ಟ : ಸಚಿವ ಶಿವಾನಂದ ಪಾಟೀಲ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನಾಮಪತ್ರ ಸಲ್ಲಿಕೆ

ದಾವಣಗೆರೆ:   ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಾಂಕೇತಿಕವಾಗಿ ದ್ವಿಪ್ರತಿ ಸಲ್ಲಿಸಿದರು. ಜಿಲ್ಲಾಧಿಕಾರಿ…

By Dinamaana Kannada News

JOB NEWS | ಡಿ.7ರಂದು ವಾಕ್ ಇನ್ ಇಂಟವ್ರ್ಯೂ

ದಾವಣಗೆರೆ  (Davanagere): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ ದಾವಣಗೆರೆ ವತಿಯಿಂದ ಡಿಸೆಂಬರ್ : 07-12-2024 ಶನಿವಾರ…

By Dinamaana Kannada News

ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಪ್ರಧಾನಿಯವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು : ಆಲೂರು ನಿಂಗರಾಜ್

ದಾವಣಗೆರೆ (Davanagere) : ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಆಯಿತು ಎಂಬುದು ಸರಿಯಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?