ದಾವಣಗೆರೆ: ರಾಜ್ಯ ಸರಕಾರ ನಂದಿನ ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಿಂದ ಗಾಂಧಿ ವೃತ್ತ ಹಳೆ ಪಿಬಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ನಂದಿನ ಹಾಲಿನ ದರ ಏರಿಕೆ ಖಂಡಿಸಿ ಘೋಷಣೆಗಳನ್ನು ಕೂಗುತ್ತಾತೆರಳಿದ ಪ್ರತಿಭಟನಾಕಾರರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ರಾಜ್ಯದಲ್ಲಿ ಹಾಲಿನ ಉತ್ಪಾದನೆ ನಿತ್ಯವೂ 1ಕೋಟಿ ಲೀಟರ್ ಸನಿಹದಲ್ಲಿದೆಯೆಂಬ ಕಾರಣಕ್ಕಾಗಿ ಹಾಲಿನ ದರ ಹೆಚ್ಚಿಸಿದ್ದು ಹಾಸ್ಯಾಸ್ಪದ ಸಂಗತಿ. ಯಾವುದೇ ಉತ್ಪನ್ನಗಳ ಅಭಾವ ತಲೆದೋರಿದಾಗ ಬೆಲೆ ಏರಿಕೆ ಸಾಮಾನ್ಯ. ಆದರೆ, ಉತ್ಪನ್ನ ಅಧಿಕವಾಗಿದ್ದಾಗಲೂ ಅದರ ದರ ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರದ ಹುಚ್ಚುತನದ ಪರಮಾವಧಿಯಾಗಿದೆ ಎಂದರು.
ಮಕ್ಕಳಿಂದ ವಯೋವೃದ್ಧರವರೆಗೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿ ಬೇಕಾಗಿದೆ. ಹಾಲು ಹಾಲು ಪೆÇೀಷಕಾಂಶಯುಕ್ತ ಆಗರವಾದ ಹಾಲು ಅಮೃತದ ಸಮಾನ. ಆದರೆ, ರಾಜ್ಯ ಸರ್ಕಾರ ಹಾಲಿನ ವಿಚಾರದಲ್ಲಿ ಹುಚ್ಚು ಹುಚ್ಚಾಗಿ ನಿರ್ವಹಣೆ ಮಾಡುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಾಗಿದ್ದರಿಂದ 1 ಲೀಟರ್ ಪ್ಯಾಕೆಟ್ನಲ್ಲಿ 100 ಎಂಎಲ್ ಹೆಚ್ಚಿಸಿ, ಹಳೆ ದರಕ್ಕೆ ಮಾರಾಟ ಮಾಡಿದ್ದರೆ ಅದನ್ನು ಕ್ಷೀರಭಾಗ್ಯವೆಂದು ಜನ ಪರ ನಿರ್ಧಾರ ಎನ್ನಬಹುದಿತ್ತು. ಆದರೆ, ಹಾಲಿನ ಬೆಲೆ ಹೆಚ್ಚಿಸಿ, ಸರ್ಕಾರ ಜನರಿಗೆ ಹಾಲಿನ ಬರೆ ಹಾಕಿದೆ ಎಂದು ಅವರು ದೂರಿದರು.
ಹರಿಹರ ಶಾಸಕ ಬಿ.ಪಿ.ಹರೀಶ ಮಾತನಾಡಿ, ಹಾಲಿನ ದರ ಏರಿಕೆ ಹಿಂಪಡೆದು, 1 ಲೀಟರ್ ಪಾಕೆಟ್ನಲ್ಲಿ 100 ಎಂಎಲ್ ಹೆಚ್ಚಿಸಿ, ಹಳೆ ದರಕ್ಕೆ ಮಾರಾಟ ಮಾಡಬೇಕು. ರಾಜ್ಯದ 15 ಹಾಲು ಒಕ್ಕೂಟದಲ್ಲಿ 798691 ಹಾಲು ಉತ್ಪಾದಕ ರೈತರಿದ್ದಾರೆ. ಆಗಸ್ಟ್ 2023ರಿಂದ ಮಾರ್ಚ್ 2024ರವರೆಗೆ 8 ತಿಂಗಳ 1083 ಕೋಟಿ ರು. ಪೆÇ್ರೀತ್ಸಾಹಧನ ಬಾಕಿ ಇದೆ. ಆದರೆ, ಏಪ್ರಿಲ್ 2024ನೇ ತಿಂಗಳ 109 ಕೋಟಿ ಬಿಡುಗಡೆ ಮಾಡಿದ ಸರ್ಕಾರ ಉಳಿದ ಹಣವನ್ನೂ ತಕ್ಷಣ ನೀಡಲಿ. ಹೀಗೆ ಪೆÇ್ರೀತ್ಸಾಹಧನ ಉಳಿಸಿಕೊಂಡರೆ, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆಂಬ ಅರಿವು ಆಳುವವರಿಗೆ ಇಲ್ಲವೇ ಎಂದು ಪ್ರಶ್ನಿಸಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ ಮಾತನಾಡಿ, ಉತ್ತಮ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಇದೆ. ರೈತರು ಜಮೀನು ಉಳುಮೆ ಮಾಡಿಕೊಂಡು ಬಿತ್ತನೆಗೆ ಹನಿಯಾದಾಗ ಬಿತ್ತನೆ ಬೀಜಗಳ ದರ ಹೆಚ್ಚಿಸಿ, ರೈತರ ಗಾಯದ ಮೇಲೆ ಬರೆ ಎಳೆದಿದೆ. ಯಾಂತ್ರೀಕೃತ ಕೃಷಿಗೆ ಪೆÇ್ರೀತ್ಸಾಹಿಸಲು ರೈತ ಶಕ್ತಿ ಯೋಜನೆಯನ್ನಬಿಜೆಪಿ ಜಾರಿಗೊಳಿಸಿತ್ತು. ಅದನ್ನು ಸಿದ್ದರಾಮಯ್ಯ ಸರ್ಕಾರ ಸ್ಥಗಿತಗೊಳಿಸಿದೆ. ಅμÉ್ಟೀ ಅಲ್ಲ, ಪೆಟ್ರೋಲ್, ಡೀಸೆಲೆ ಬೆಲೆ ಏರಿಸಿ, ಯಾಂತ್ರೀಕೃತ ಕೃಷಿ ಮಾಡುವುದನ್ನೇ ದುಬಾರಿ ಮಾಡಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ನೀರಾವರಿ ಪಂಪ್ ಸೆಟ್ಗಳಿಗೆ ವಿದ್ಯುತ್ ಸಂಪರ್ಕಕ್ಕೆ ತಗುಲುವ ವೆಚ್ಚವನ್ನು ರೈತರೇ ಭರಿಸುವಂತೆ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಇದು ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಪಂಪ್ ಸೆಟ್ಗಳಿಗೆ ಬಿಜೆಪಿ ಸರ್ಕಾರವಿದ್ದಾಗ ಕೇವಲ 25 ಸಾವಿರ ರು.ನಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದ್ದು. ಕಾಂಗ್ರೆಸ್ ಆಳ್ವಿಕೆಯಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ರೈತರು 3-4 ಲಕ್ಷ ರು. ಖರ್ಚುಮಾಡಬೇಕಾಗಿದೆ. ಇದು ರೈತ ವಿರೋಧಿ ಧೋರಣೆ. ಇನ್ನಾದರೂ ರೈತರ ಹಿತ, ಬಡವರು, ಜನ ಸಾಮಾನ್ಯರ ಹಿತ ಕಾಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾದ್ಯಕ್ಷ ಎನ್.ರಾಜಶೇಖರ ನಾಗಪ್ಪ, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಯಶವಂತರಾವ್ ಜಾಧ್, ಧನಂಜಯ ಕಡ್ಲೇಬಾಳು, ಐರಣಿ ಅಣ್ಣೇಶ, ಶಿವನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ಪಿ.ಸಿ.ಶ್ರೀನಿವಾಸ ಭಟ್, ಸಂಗನಗೌಡ, ಜಿ.ಎಸ್.ಶ್ಯಾಮ ಮಾಯಕೊಂಡ, ಕಲ್ಲೇಶ, ಬಾತಿ ಶಿವಕುಮಾರ, ಅಣಜಿ ಗುಡ್ಡೇಶ, ಅತಿಥ್ ಅಂಬರಕರ್, ರಮೇಶ ನಾಯ್ಕ, ಶಂಕರಗೌಡ ಬಿರಾದಾರ, ಕಬ್ಬೂರು ಶಿವಕುಮಾರ, ಡಾ.ನಸೀರ ಅಹಮ್ಮದ, ಮಳಲ್ಕೆರೆ ಸದಾನಂದ, ಅಣಬೇರು ಶಿವಪ್ರಕಾಶ, ಕರಿಲಕ್ಕೇನಹಳ್ಳಿ ಓಂಕಾರಪ್ಪ ಇತರರು ಇದ್ದರು.