Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಮಳೆಗಾಲದಲ್ಲಿ ಕಾಡುವ ಉಸಿರಾಟದ ಕಾಯಿಲೆಗಳು 
ಆರೋಗ್ಯ

ಮಳೆಗಾಲದಲ್ಲಿ ಕಾಡುವ ಉಸಿರಾಟದ ಕಾಯಿಲೆಗಳು 

Dinamaana Kannada News
Last updated: May 25, 2024 10:37 am
Dinamaana Kannada News
Share
davanagere
ಮಳೆಗಾಲದಲ್ಲಿ ಕಾಡುವ ಉಸಿರಾಟದ ಕಾಯಿಲೆಗಳು ಕುರಿತು ಲೇಖನ
SHARE

Kannada News | Dinamaana.com | 25-05-2024

ಮಳೆಗಾಲ ಶುರು ಆದಂತೆ ಹಲವು ಶ್ವಾಸಕೋಶದ ಕಾಯಿಲೆಗಳು ವಿಜೃಂಭಿಸಲು ಪ್ರಾರಂಭಿಸುತ್ತವೆ. ಇದರಲ್ಲಿ ಮುಖ್ಯವಾದದ್ದು ಅಂದರೆ ಅಸ್ತಮಾ ಹಾಗೂ ಅಲರ್ಜಿ ನೆಗಡಿ ಮತ್ತು ಕೆಮ್ಮು.

ನಾವು ಹಲವಾರು ಜನರ ಬಾಯಿಯಲ್ಲಿ ಕೇಳುತ್ತೇವೆ, ಬೇಸಿಗೆ ಕಾಲದಲ್ಲಿ ಸಂಪೂರ್ಣ ಆರೋಗ್ಯವಾಗಿರುವ ನನಗೆ ಮಳೆಗಾಲ ಶುರು ಆಯಿತೆಂದರೆ ಸಾಕು ಕೆಮ್ಮು, ನೆಗಡಿ, ಉಬ್ಬಸ ಕಾಡಿಸಲು ಆರಂಭಿಸುತ್ತವೆ.

ಇದಕ್ಕೆ ಮುಖ್ಯ ಕಾರಣ ಧಿಡೀರ್ ಎಂದು ಸುಡು ಸುಡು ಬೇಸಿಗೆ ಕಾಲದಲ್ಲಿ ಇರುವಂತಹ ವಾತಾವರಣ ತಕ್ಷಣ ಮಳೆ ಶುರು ಆಗಿ ತಂಪಾಗುವುದು. ಜೊತೆಗೆ ಮೋಡ ಕವಿದ ವಾತಾವರಣ ಕೂಡ ನಮ್ಮೊಳಗಿನ ಅಸ್ತಮಾ ಅಲರ್ಜಿಯನ್ನು ಬಡಿದೆಬ್ಬಿಸುತ್ತದೆ. ಹಾಗೂ ಮಳೆನೀರಲ್ಲಿ ಅಪ್ಪಿ ತಪ್ಪಿ ನೆನೆಯುವುದು (ದೇಹ ಹಾಗೂ ಮುಖ್ಯವಾಗಿ ತಲೆ) ಅಸ್ತಮಾ ಅಲರ್ಜಿಯನ್ನು ಉದ್ರೇಕಿಸುತ್ತದೆ.

Read also : ವಿಶ್ವ ಅಸ್ತಮಾ ದಿನಾಚರಣೆ: ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ

ಇಂತಹ ರೋಗಿಗಳಿಗೆ ವಯಸ್ಸು ಹೆಚ್ಚಾದಂತೆ ಮಳೆಗಾಲದಲ್ಲಿ ಮಾತ್ರ ಕಂಡು ಬರುವ ಅಸ್ತಮಾ ಅಲರ್ಜಿ ನಿಧಾನವಾಗಿ ಚಳಿಗಾಲ ಹಾಗೂ ಹಲವು ವರ್ಷಗಳ ನಂತರ ಬೇಸಿಗೆ ಕಾಲದಲ್ಲಿ ಕೂಡ ಕಾಣಿಸಿಕೊಳ್ಳುವ ಸಂಭವ ಇರುತ್ತದೆ.

ಕಾಯಿಲೆ ಲಕ್ಷಣಗಳು

  • ಉಸಿರಾಟದ ತೊಂದರೆ, ಉಬ್ಬಸ, ದಮ್ಮು, ಏದುಸಿರು, ಎದೆಯಲ್ಲಿ ಉಸಿರು ಸಿಕ್ಕಿಕೊಂಡ ಅನುಭವ, ಎದೆಯ ಮೇಲೆ ಏನೋ ಭಾರವಾದ ವಸ್ತು ಇಟ್ಟಂತ ಅನುಭವ.
  • ನಮಗೆ ಹಾಗೂ ಅಕ್ಕಪಕ್ಕದವರಿಗೂ ಉಸಿರಾಡಿದಾಗ ಕೇಳಿ ಬರುವ ಸಿಳ್ಳೆ ತರಹ ಸುಯ್ ಸುಯ್ ಶಬ್ದ
  • ನಿಯಂತ್ರಣಕ್ಕೆ ಬಾರದ ಕೆಮ್ಮು, ಉಸಿರಾಡಲು ಕಷ್ಟ ಪಡಿಸುವ ಕೆಮ್ಮು, ಕೆಮ್ಮಿ ಕೆಮ್ಮಿ ಹೊಟ್ಟೆ ನೋವು ಬರುವುದು
  • ಮೂಗು ಕಟ್ಟಿ ಉಸಿರಾಡಲು ಕಷ್ಟ ಆಗುವುದು(ಅದರಲ್ಲೂ ರಾತ್ರಿ ಮಲಗುವಾಗ), ಮೂಗಿನಿಂದ ನೀರು ನೀರಂತೆ ಹರಿಯುವುದು ಮತ್ತು ಸಿಂಬಳ ಸೋರುವುದು/ ಕಟ್ಟುವುದು
  • ತಲೆ ಭಾರ, ಕಣ್ಣು ಉರಿ ಕೂಡ ಕಂಡು ಬರಬಹುದು

ಮುನ್ನೆಚ್ಚರಿಕೆ

  • ಯಾವಾಗಲೂ ಉಣ್ಣೆಯ ಬಟ್ಟೆ ಧರಿಸಿ ಬೆಚ್ಚಗೆ ಇರುವುದು
  • ಹೊರಗಡೆ ಅನಗತ್ಯವಾಗಿ ಅಡ್ಡಾಡುವುದು ಕಡಿಮೆ ಮಾಡಬೇಕು.
  • ಮಳೆಯಲ್ಲಿ ನೆನೆಯುವುದು ನಿಷಿದ್ಧ
  • ಕೈ ಕಾಲು ತೊಳೆಯುವಂತಹ ಸಣ್ಣ ಪುಟ್ಟ ವಿಷಯಕ್ಕೂ ಬಿಸಿ ನೀರು ಬಳಸಿ
  • ಫಿಲ್ಟರ್ ಅಥವಾ ಕಾದು ಅರಿಸಿದ ನೀರು ಸೇವಿಸಿ
  • ಫ್ರಿಜ್ ನಲ್ಲಿ ಇರುವ ತಣ್ಣನೆ ಪದಾರ್ಥ ನೇರವಾಗಿ ತೆಗೆದು ತಿನ್ನುವುದು, ತಂಪಾದ ಪಾನೀಯ, ಐಸ್ ಕ್ರೀಂ ವರ್ಜ್ಯ

7) ಬೇರೆ ಊರಿಗೆ ಪ್ರಯಾಣ ಮಾಡುವ ಅನಿವಾರ್ಯತೆ ಬಂದರೆ ನಿಮ್ಮ ಮನೆಯ ನೀರು ತೆಗೆದುಕೊಂಡು ಹೋಗಬೇಕು. ಊರಿಂದ ಊರಿಗೆ ಕುಡಿಯುವ ನೀರಿನ ಬದಲಾವಣೆ ಕಾಯಿಲೆ ಉದ್ರೇಕಿಸುವುದು

ಪರಿಹಾರ

  • ಸಣ್ಣ ಪುಟ್ಟ ಕೆಮ್ಮು ನೆಗಡಿ ಕೂಡ ಅಲಕ್ಷಿಸದೆ ನಿಮ್ಮ ವೈದ್ಯರ ಭೇಟಿ ಮಾಡಿ
  • ಸ್ವಂತ ಔಷಧಿ ಮಾಡಿಕೊಳ್ಳುವ ಪದ್ಧತಿ ಹಾನಿಕರ
  • ನೀವು ಈಗಾಗಲೇ ಹಲವು ವರ್ಷಗಳಿಂದ ಅಸ್ತಮಾ, ಅಲರ್ಜಿ ಇರುವಂತಹ ರೋಗಿ ಆಗಿದ್ದರೆ ನಿಮಗೆ ನಿತ್ಯ ಉಪಯೋಗಿಸಲು ಔಷಧಿ ಹೇಳಿದ್ದರೆ ಅದನ್ನು ತಪ್ಪದೆ ಮುಂದುವರೆಸಿ
  • ನೀವು ಈಗಾಗಲೇ ಇನ್ಹೇಲರ್ ಔಷಧಿ ಸೇವಿಸುತ್ತಾ ಇದ್ದರೆ ತಪ್ಪದೆ ಮುಂದುವರೆಸಿ
  • ನಿಮಗೆ ಹೊಸದಾಗಿ ಕಾಯಿಲೆಯು ಅವಶ್ಯಕತೆಗೆ ಅನುಗುಣವಾಗಿ ವೈದ್ಯರು ಇನ್ಹೇಲರ್ ಬರೆದರೆ ಅದನ್ನು ಉಪಯೋಗಿಸಲು ಹಿಂಜರಿಕೆ ಅನುಮಾನ ಬೇಡ, ಏಕೆಂದರೆ ಇನ್ಹೇಲರ್ ಅತ್ಯಂತ ಸುರಕ್ಷಿತ ಔಷಧಿ ಆಗಿದ್ದು ಕಾಯಿಲೆ ಎಲ್ಲಿದೆಯೋ (ಶ್ವಾಸಕೋಶ) ಅಲ್ಲಿಗೇ ನೇರವಾಗಿ ಔಷಧಿ ತಲುಪಿಸುತ್ತದೆ.
  • ಹೇಗೆ ಕಣ್ಣಿನ ತೊಂದರೆಗೆ ಕಣ್ಣಿನ ಡ್ರಾಪ್ಸ್, ಕಿವಿಗೆ ಕಿವಿ ಡ್ರಾಪ್ಸ್, ಮೊಡವೆಗೆ ಮುಲಾಮು ನೇರ ಕಾಯಿಲೆ ಸ್ಥಳದಲ್ಲಿ ಕೆಲಸ ಮಾಡುತ್ತವೆಯೋ ಹಾಗೆಯೇ ಇನ್ಹೇಲರ್ ಕೂಡ. ಹಾಗೂ ಇದರಿಂದ ತಕ್ಷಣ ಉಪಶಮನ ಹಾಗೂ ಅಡ್ಡ ಪರಿಣಾಮಗಳು ಇರುವುದಿಲ್ಲ.
  • ಮೂಗಿನ ಸಮಸ್ಯೆಗೆ ಸ್ಪ್ರೇ ಅಥವಾ ಡ್ರಾಪ್ಸ್ ವೈದ್ಯರು ಬರೆದು ಕೊಟ್ಟರೆ ಉಪಯೋಗಿಸಿ
  • ಹಲವು ಬಾರಿ ನೆಬುಲೈಸರ್ ಮತ್ತು ಚುಚ್ಚುಮದ್ದು ವೈದ್ಯರು ನೀಡಬೇಕಾಗುತ್ತದೆ
  • ಬೆಳಗಿನ ಜಾವ 2 ಗಂಟೆಯಿಂದ 7 ಗಂಟೆ ತೀವ್ರ ಉಸಿರಾಟದ ತೊಂದರೆ ಬರುವ ಸಮಯ ಆಗಿದ್ದು, ಪರಿಸ್ಥಿತಿ ಕೈ ಮೀರಿದರೆ ತಕ್ಷಣ ಸಮೀಪದ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ತೆರಳಬೇಕು.

ಕಾಯಿಲೆಯು ರೋಗ ಲಕ್ಷಣಗಳ ಪರಿಚಯ, ಮುನ್ನೆಚ್ಚರಿಕೆ ಹಾಗೂ ಸಮಯಕ್ಕೆ ಸರಿಯಾದ ಚಿಕಿತ್ಸೆಯಿಂದ ಅಸ್ತಮಾ ಅಲರ್ಜಿ ಮಳೆಗಾಲದಲ್ಲಿ ಹತೋಟಿಗೆ ತರಲು ಸಾಧ್ಯವಿದೆ

ಡಾ.ಎನ್. ಹೆಚ್.ಕೃಷ್ಣ,

ಉಸಿರಾಟದ ಹಾಗೂ ಶ್ವಾಸಕೋಶದ

ಕಾಯಿಲೆಗಳ ಸಲಹಾ ವೈದ್ಯರು,

ದಾವಣಗೆರೆ

drkrishna_nh@yahoo.com

 

TAGGED:dinamaana.comLatest Kannada NewsLung diseases.ಕನ್ನಡ ಸುದ್ದಿದಿನಮಾನ.ಕಾಂಶ್ವಾಸಕೋಶದ ಕಾಯಿಲೆಗಳು.
Share This Article
Twitter Email Copy Link Print
Previous Article sanduru ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು
Next Article Davangere Police ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು : ಕಲ್ಲು ತೂರಾಟ, 7 ಪೊಲೀಸ್ ವಾಹನ ಜಖಂ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere Gruahalakshmi plan : ಗೃಹಲಕ್ಷ್ಮಿಗೆ ಇಕೆವೈಸಿ, ಸ್ಮಾರ್ಟ್ ಕಾರ್ಡ್ ಸುಳ್ಳು ವದಂತಿಗೆ ಕಿವಿಗೊಡಬೇಡಿ

ದಾವಣಗೆರೆ.ಆ 20 (davanagere) :  ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತುಗಳು ಜಮೆಯಾಗಲು ಸ್ವಲ್ಪ ತಡವಾಗಿದ್ದು…

By Dinamaana Kannada News

ಲಿಂಗನಮಕ್ಕಿ ಡ್ಯಾಂ : ಶೇ 50 ರಷ್ಟು ಭರ್ತಿ

ಶಿವಮೊಗ್ಗ, ಜು. 19 :   ಪಶ್ಚಿಮಘಟ್ಟ ವ್ಯಾಪ್ತಿಯ ಹೊಸನಗರ ತಾಲೂಕಿನಲ್ಲಿ ಮಳೆ ಆರ್ಭಟಿಸುತ್ತಿದೆ. ಇದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ…

By Dinamaana Kannada News

ನನಗೆ ಸಿಕ್ಕ ಈ ಚಿರಸ್ಮರಣೀಯ ಸನ್ಮಾನವನ್ನು 7 ಕೋಟಿ ಕನ್ನಡಿಗರಿಗೆ ಅರ್ಪಿಸುತ್ತೇನೆ: ಸಿ.ಎಂ ಸಿದ್ದರಾಮಯ್ಯ 

ಬಸವ ಕಲ್ಯಾಣ ಮಾ 7: ಸಮಸ್ತ ಕನ್ನಡಿಗರು, ಸಮಸ್ತ ಭಾರತೀಯರ ಅಭಿಮಾನದ ಸಂಕೇತವಾಗಿ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕಙ್ನಾಗಿ ಘೋಷಿಸಿದೆವು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?