Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere news | ನಮ್ಮ ಸೈನಿಕರಿಗೆ ಗೌರವ ಕೊಡಬೇಕು : ಎಚ್.ಬಸವರಾಜಪ್ಪ
ತಾಜಾ ಸುದ್ದಿ

Davangere news | ನಮ್ಮ ಸೈನಿಕರಿಗೆ ಗೌರವ ಕೊಡಬೇಕು : ಎಚ್.ಬಸವರಾಜಪ್ಪ

Dinamaana Kannada News
Last updated: August 16, 2024 9:13 am
Dinamaana Kannada News
Share
DAVANAGERE
DAVANAGERE
SHARE

ದಾವಣಗೆರೆ (Davangere) : ನಮ್ಮ ದೇಶದ ಗಡಿ ಭದ್ರವಾಗಿರುವುದರಿಂದ ದೇಶದ ಒಳಗಡೆ ಇರುವ ನಾವೆಲ್ಲರೂ ಇಲ್ಲಿ ಶಾಂತವಾಗಿ ನೆಮ್ಮದಿಯುತ ಜೀವನ ಸಾಗಿಸುತ್ತದ್ದೇವೆ ಎಂದು ನಿವೃತ್ತ ಯೋಧರು ಮತ್ತು ನಿವೃತ್ತ  ಪೋಲಿಸ್ ಅಧಿಕಾರಿ ಎಚ್.ಬಸವರಾಜಪ್ಪ ಹೇಳಿದರು.

ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಶಾಲೆಯಲ್ಲಿ 78  ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈಗಿನ ಯುವಕರು ಸಿನಿಮಾ ನಟರನ್ನು ಹೀರೊಗಳೆಂದು ಅವರನ್ನು ಅನುಸರಿಸುತ್ತಾರೆ.  ಅವರು ರೀಲ್ ಹೀರೊಗಳು.  ನಿಜವಾದ ರಿಯಲ್ ಹೀರೊಗಳೆಂದರೆ ನಮ್ಮ ಸೈನಿಕರು.  ನಮ್ಮ ಸೈನಿಕರಿಗೆ ಗೌರವವನ್ನು ಕೊಡಬೇಕು.

ಸೈನ್ಯದಲ್ಲಿ ಹನ್ನೆರಡು ತಿಂಗಳು ತರಬೇತಿ ಕೊಟ್ಟು ಸೈನ್ಯಕ್ಕೆ ಕಳುಹಿಸುತ್ತಾರೆ.  ಅಲ್ಲಿ ಗಡಿಗಳಲ್ಲಿ ಹೋರಾಡಿ ಪ್ರಾಣವನ್ನು ಕೊಡಬೇಕಾಗಿ ಬಂದರೂ ಸಿದ್ದರಾಗಿರಬೇಕಾಗುತ್ತದೆ, ಬುಲೆಟ್ ಫ್ರೂಫ್ ಮತ್ತು ಹೆಲ್ಮೆಟ್ ಗಳಿಂದ ನಮ್ಮ ಜೀವ ಉಳಿದಿದೆ ಎಂದು ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ ದಿನಗಳನ್ನು ನೆನಪಿಸಿಕೊಂಡು ತಮ್ಮ ಅನುಭವ ಹಂಚಿಕೊಂಡರು.

ಕೇವಲ ಡಾಕ್ಟರ್, ಇಂಜಿನಿಯರ್‌ಗಳಾಗದೆ ಮಕ್ಕಳು ಸೇನೆಯಲ್ಲಿ ಸೇರಿ ದೇಶ ಕಾಪಾಡುವ ಗುರಿಯನ್ನು ಹೊಂದಬೇಕು. ನಮ್ಮ ದೇಶದ ಮಿಲಿಟರಿ ಪಡೆ ಪ್ರಪಂಚದಲ್ಲೇ ನಂಬರ್ 1  ಆಗಿದೆ ಎಂದು ಹೆಮ್ಮೆಯಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ  ಬೆಳೆಸಿಕೊಳ್ಳಬೇಕೆಂದು ಮಾತನಾಡಿದರು.

ಶಾಲಾ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಡೀ ದೇಶವೇ ಬಹಳ ಸಡಗರ ಸಂಭ್ರಮದಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ.  ನಮ್ಮ ದೇಶ ಸ್ವಾತಂತ್ರ ಪಡೆಯಲು ಅನೇಕ ಮಹನೀಯರು ಪ್ರಾಣಾರ್ಪಣೆ ಮಾಡಿದ್ದಾರೆ.  ಭಾರತವನ್ನು ವಿಶ್ವ ಗುರು ಎಂದು ಹೇಳಲಾಗುತ್ತದೆ.  ವಿಶ್ವಗುರುವಾಗಬೇಕಾದರೆ ಭಾರತದ ಸ್ವಾತಂತ್ರ್ಯ ವೀರರ ತ್ಯಾಗ, ಬಲಿದಾನ ಎಂತಹುದು ಎಂಬುದು ತಿಳಿಯುತ್ತದೆ ಎಂದರು.

Read also : Davanagere Crime News | ಗಾಂಜಾ ಮಾರಾಟ: ಆರೋಪಿ ಬಂಧನ 

ಇಂದಿನ ಯುವ ಪೀಳಿಗೆಯಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿರುವುದು ವಿಶಾದನೀಯ.  ನಮ್ಮ ದೇಶವನ್ನು ೨೦೦ ವರ್ಷಗಳ ಕಾಲ ಬ್ರಿಟಿಷರು ಕೊಳ್ಳೆ ಹೊಡೆದಿದ್ದರೂ ಕೂಡ ನಮ್ಮ ದೇಶ ಸಂಪದ್ಭರಿತವಾಗಿದೆ.  ನಮ್ಮ ದೇಶದ ಭದ್ರತೆಯನ್ನು ಸಂಸ್ಕೃತಿಯನ್ನು ಏಕತೆಯನ್ನು ನಾವು ಕಾಪಾಡಿಕೊಳ್ಳಬೇಕು.  ಸ್ವಾತಂತ್ರ್ಯದ ಜವಾಬ್ದಾರಿಯನ್ನು ನಾವು ತಿಳಿಯಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಶಾಲೆಯ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣ ಧರಿಸಿ ಹಾಗೂ  ಹಿರಿಯ ಪ್ರಾಥಮಿಕ & ಪ್ರೌಢ ಶಾಲಾ ವಿದ್ಯಾರ್ಥಿಗಳು ದೇಶಪ್ರೇಮ ಬಿಂಬಿಸುವ ದೇಶಭಕ್ತಿಗೀತೆಗಳು ಮತ್ತು ರಾಷ್ಟ್ರ ಪ್ರೇಮಭರಿತ ನೃತ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಜಿ.ಎಸ್. ಶಶಿರೇಖಾ, ಸಬೀಹಾ ಬಾನು, ಎಸ್.ಕವಿತಾ, ಎಸ್.ಬಿ.ಅರುಣಾ ಹಾಜರಿದ್ದರು.

TAGGED:Davangeredinamaana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere Crime News | ಗಾಂಜಾ ಮಾರಾಟ: ಆರೋಪಿ ಬಂಧನ 
Next Article DAVANAGERE Davanagere Dinamaana : ದೈವಗಳೇ ದೈವೋದ್ಯಮಿಗಳ ಕಪಿಮುಷ್ಟಿಯಿಂದ ಹೊರಬನ್ನಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ರಂಗಾಯಣದಿಂದ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ, ಸೆ. 10, 2025: ಕರ್ನಾಟಕ ಸರ್ಕಾರದಿಂದ ಸ್ಥಾಪಿತವಾದ ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣವು ತನ್ನ ರಂಗಚಟುವಟಿಕೆಗಳನ್ನು ತೀವ್ರಗೊಳಿಸಲು 12…

By Dinamaana Kannada News

ರಾಜೀವ್ ಗಾಂಧಿ ಯುನಿರ್ವಸಿಟಿ ಮತ್ತು ವಿ.ಟಿ.ಯು ನಲ್ಲಿ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ವಂಚನೆ : ಆರೋಪಿ ಸೆರೆ

ದಾವಣಗೆರೆ (Davanagere): ರಾಜೀವ್ ಗಾಂಧಿ ಯುನಿರ್ವಸಿಟಿ ಮತ್ತು ವಿ.ಟಿ.ಯು ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ 2,78,720/-ರೂ ಹಣ…

By Dinamaana Kannada News

ಒಂದೇ ವರ್ಷದಲ್ಲಿ ಚಿನ್ನದ ಬೆಲೆ 25 ಸಾವಿರ ಹೆಚ್ಚಳ!

ಒಂದೇ ವರ್ಷದಲ್ಲಿ ಚಿನ್ನದ ಬೆಲೆ 25 ಸಾವಿರ ಹೆಚ್ಚಾಗಿದೆ. ಕಳೆದ ವರ್ಷ ಜುಲೈ 17 ರಂದು 24 ಕ್ಯಾರೆಟ್ ಚಿನ್ನದ…

By Dinamaana Kannada News

You Might Also Like

Davanagere crime news
ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಆರೋಪಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ

By Dinamaana Kannada News
Power outage
ತಾಜಾ ಸುದ್ದಿ

ನಗರದ ವಿವಿಧ ಪ್ರದೇಶಗಳಲ್ಲಿ ಜ.24 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಉಚಿತ ಆರೋಗ್ಯ ತಪಾಸಣಾ ಶಿಬಿರ

By Dinamaana Kannada News
Davanagere
ತಾಜಾ ಸುದ್ದಿ

ಗಣಿತದ ಮೂಲಕ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸಿಕೊಳ್ಳಿ:ನ್ಯಾ.ಮಹಾವೀರ ಎಂ.ಕರೇಣ್ಣವರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?