ಹರಿಹರ (Harihara): ಹರಿಹರದ ವಿವಿಧ ಬಗೆಯ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ 5,85,000/-ರೂ ಬೆಲೆ ಬಂಗಾರದ ಆಭರಣಗಳು ಹಾಗೂ 09 ಮೊಬೈಲ್ ಪೋನ್ಗಳು, 3 ಕುರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಲ್ಲಿನ ಆರೋಪಿತರ ಹಾಗೂ ಸ್ವತ್ತ ಪತ್ತೆಗಾಗಿ ಎಎಸ್ಪಿ ವಿಜಯಕುಮಾರ ಎಂ ಸಂತೋಷ್ , ಜಿ ಮಂಜುನಾಥ ಹಾಗೂ ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಹರಿಹರ ಠಾಣೆಯ ಪೊಲೀಸ್ ನಿರೀಕ್ಷಕ ದೇವಾನಂದ ರವರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ತಂಡವು ವಿವಿಧ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಹರಿಹರ ನಗರ ಠಾಣೆಯ ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿತರುಗಳನ್ನು ಪತ್ತೆ ಹಚ್ಚಿ ಬೇರೆ ಬೇರೆ ದಿನಗಳಲ್ಲಿ ಬಂಧಿಸಿದ್ದು, ಆರೋಪಿತರಿಂದ ಕಳ್ಳತನ ಮಾಡಿದ್ದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮೇ 15 2024 ರಂದು ಲೋಹಿತ ಪಾಟೀಲ್.ಎನ್.ಜಿ ಪ್ಲಿಪ್ಕಾರ್ಟ್ ಗೋಡಾನ್ನಿಂದ ಮೊಬೈಲ್ ಗಳು ಕಳ್ಳತನವಾದ ಬಗ್ಗೆ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಪವನ್ ಜೆ, (30) ದಸ್ತಗಿರಿ ಮಾಡಿದ್ದು, ಆರೋಪಿತನಿಂದ 1,66,000/-ರೂ ಬೆಲೆಯ 09 ವಿವೋ ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 31 ರಂದು ಮಹಲಿಂಗಪ್ಪ ಬಡಾವಣೆಯ ರೇಷ್ಮಾಬಾನು ತಮ್ಮ ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸೀಗೆಭಾವಿ ಆರೋಪಿ ದಾದಾಪೀರ್ ದಸ್ತಗಿರಿ ಮಾಡಿ 2,18,000/-ರೂ ಬೆಲೆಯ ಬಂಗಾರದ ಆಭರಣ ಜಪ್ತುಪಡಿಸಿಕೊಂಡಿದ್ದಾರೆ.
Read also : ಅಕ್ರಮ ಕ್ರಷರ್ಗಳಿಗೆ ಕಡಿವಾಣ ಹಾಕಲು ನ್ಯಾ. ಬಿ.ವೀರಪ್ಪ ಸೂಚನೆ
ಏ 9ರಂದು 03 ಕುರಿಗಳನ್ನು ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಳ್ಳತನ ಮಾಡಿಕೊಂಡು ಬಂದಿದ್ದ ಶಿವಮೊಗ್ಗದ ನಾಲ್ವರನ್ನು ಪೊಲೀಸರು ಬಂದಿದ್ದಾರೆ.
ಮನು.ಆರ್, ಜಗನ್ನಾಥ.ಎಸ್, ಅಬ್ರಾರ್, ಸುಹೇಲ್ ಖಾನ್ ಬಂಧಿತರು. ದಸ್ತಗಿರಿ ಮಾಡಿ 60,000/-ರೂ ಬೆಲೆಯ 03 ಕುರಿಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಣಿ ಡಿಕ್ಸನ್ ಎನ್ನುವವರು ಏ.17 ರಂದು ಹರಿಹರ ನಗರ ಠಾಣೆಗೆ ಹಾಜರಾಗಿ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಹರಿಹರ ಪೊಲೀಸರು ಆರೋಪಿ ಜಾನ್ಸನ್.ಸಿ.ಜೆ, ಬಂಧಿಸಿ 1,01000/-ರೂ ಬೆಲೆಯ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಬಗೆಯ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ 5,85,000/-ರೂ ಬೆಲೆಯ ಬಂಗಾರದ ಆಭರಣಗಳು ಹಾಗೂ 09 ಮೊಬೈಲ್ ಪೋನ್ಗಳು, 3 ಕುರಿಗಳನ್ನು ವಶಪಡಿಸಿಕೊಂಡಿದ್ದು, ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಅಧಿಕಾರಿ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.
ಹರಿಹರ ನಗರ ಠಾಣೆ ಪಿಐ ಎಸ್.ದೇವಾನಂದ ನೇತೃತ್ವದಲ್ಲಿ ಪಿ.ಎಸ್.ಐಗಳಾದ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ, ಹನುಮಂತ.ಎಸ್.ಗೋಪನಾಳ, ರವಿನಾಯ್ಕ್, ಸಿದ್ದರಾಜು, ರವಿ.ಕೆ, ರಂಗನಾಥ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾದವ್, ಶಿವಕುಮಾರ, ರಮೇಶ ತಂಡದಲ್ಲಿದ್ದರು.