ದಾವಣಗೆರೆ, ಏ. 20 (Davanagere): ತಾಲ್ಲೂಕಿನ ಕೋಡಿಹಳ್ಳಿ ಹಾಗೂ ಹರಿಹರ ತಾಲೂಕಿನ ದೇವರ ಬೆಳಕೆರೆ ಡ್ಯಾಮ್ ನಿಂದ ಕಡ್ಲೆಗುಂದಿ ಸಲಗನಹಳ್ಳಿ ಬನ್ನಿಕೋಡು, ಬೆಳ್ಳೂಡಿ, ಶಿವನಹಳ್ಳಿ, ಹನಗವಾಡಿ, ಹರಿಹರ, ಅಮರಾವತಿ, ಗುತ್ತೂರು, ಗಂಗನರಸಿ ಗ್ರಾಮಗಳಿಗೆ ನೀರು ಹರಿಸಲಾಗಿತ್ತು. ಆದರೆ, 10 ರಿಂದ 12 ವರ್ಷಗಳ ಕಾಲ ಜಂಗಲ್ ಶಿಲ್ಟ್ ಹಾಗೂ ಗೇಟ್ಗಳು ದುರಸ್ಥಿ ಇರುವುದರಿಂದ ಕೊನೆ ಭಾಗದ ರೈತರಿಗೆ ಚಾನಲ್ ಮುಖಾಂತರ ನೀರು ಹರಿಸಲಾಗಿದ್ದರೂ ಕೂಡ ಇದುವರೆಗೂ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಬಂದಿರುವುದಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನೀರಾವರಿ ಇಲಾಖೆಗೆ ಸಾಕಷ್ಟು ಬಾರಿ ಅರ್ಜಿ ಮುಖಾಂತರ ಸಮಸ್ಯೆ ಹೇಳಿಕೊಂಡರೂ ಕೂಡ ಯಾವುದೇ ಪ್ರತಿಫಲ ಸಿಕ್ಕಿಲ್ಲ. ಮೊನ್ನೆ ಮಾರ್ಚ್ 5 ರಂದು ಪತ್ರಿಕೆ ಮುಖಾಂತರ ಹರಿಹರ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರು ಸಹ ಭರವಸೆ ಹೇಳಿ ನಿರ್ಲಕ್ಷ ಮಾಡಿದ್ದಾರೆ. ಮಾರ್ಚ್ 24 ರಿಂದ ಎರಡು ದಿನಗಳ ಕಾಲ ಆಹೋ ರಾತ್ರಿ ಧರಣಿ ಸತ್ಯಾಗ್ರಹ ಕುಳಿತರೂ ಸಹ ಅಧಿಕಾರಿಗಳು ನಂಬಿಕೆಯ ಭರವಸೆ ಕೊಟ್ಟು ರೈತರಿಗೆ ದ್ರೋಹ ಮಾಡಿದ್ದಾರೆ.
Read also : Crime news | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ
ಇಂತಹ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ದಾವಣಗೆರೆ ತಾಲ್ಲೂಕು ಅಧ್ಯಕ್ಷ ಮಂಡಲೂರು ವಿಶ್ವನಾಥ್ ಇವರು ಮತ್ತೆ ಧರಣಿ ಸತ್ಯಾಗ್ರಹ ಹಾಗೂ ನೀರಾವರಿ ಇಲಾಖೆಗೆ ಬೀಗ ಜಡಿದು ರಸ್ತೆ ತಡೆಯನ್ನು ಮಾಡುವ ಮೂಲಕ ಏ.21 ರಂದು 12 ಗಂಟೆಗೆ ಕರ್ನಾಟಕ ನೀರಾವರಿ ಇಲಾಖೆ ಮಲೆಬೆನ್ನೂರಿನಲ್ಲಿ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.
ಹರಿಹರ ತಾಲ್ಲೂಕಿನ ಸುತ್ತ ಮುತ್ತಲಿನ ಹಳ್ಳಿಯ ಎಲ್ಲಾ ರೈತರು ಭಾಗವಹಿಸಿ ನಮ್ಮ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದ್ದಾರೆ.