ಹರಿಹರ (Harihara) : ಹರಿಹರ ನಗರಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಸಾರ್ವಜನಿಕರಿಗೆ ವಂಚನೆ ಪೌರಾಯುಕ್ತ ಹಾಗೂ ಕಂದಾಯ ನಿರೀಕ್ಷಕರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏ.7ರಂದು ಹರಿಹರ ನಗರಸಭೆ ಕಛೇರಿಗೆ ಲೋಕಾಯುಕ್ತ ಪೊಲೀಸ್ ರು ಸಿಬ್ಬಂಧಿಯೊಂದಿಗೆ ಭೇಟಿ ಪರಿಶೀಲನೆ ನಡೆಸಿದ ವೇಳೆ ನಗರಸಭೆ ಅಧಿಕಾರಿಗಳು ಏ.1 ರಿಂದ 7 ರವರೆಗೆ ಅನಧಿಕೃತವಾಗಿ ವೈಯಕ್ತಿಕ ಲಾಭ ಪಡೆಯುವ ಉದ್ದೇಶದಿಂದ ಅನಧಿಕೃತ ಖಾಸಗಿ ವ್ಯಕ್ತಿಗಳಾದ ಮೌನೇಶ್, ಮಹ್ಮದ್ ಹಫೀಜ್ ವುಲ್ಲಾ ಮತ್ತು ಹನುಮಂತಪ್ಪ ತುಂಬಿಗೆರೆ ಇವರಿಗೆ ಸರ್ಕಾರಿ ಕಛೇರಿ ಆವರಣದಲ್ಲಿ ಅನಧಿಕೃತವಾಗಿ ಸರ್ಕಾರಿ ನೌಕರರಂತೆ ಕೆಲಸ ಮಾಡಲು ಅನುವು ಮಾಡಿಕೊಟ್ಟು, ಅನಧಿಕೃತವಾಗಿ ಸಾರ್ವಜನಿಕರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಒಂದು ಅರ್ಜಿಗೆ 30-40 ರೂಪಾಯಿ ಹಣವನ್ನು ಸಂಗ್ರಹಿಸಲು ಅವಕಾಶ ಮಾಡಿಕೊಟ್ಟು ಸಾರ್ವಜನಿಕರಿಗೆ ವಂಚಿಸಿರುವುದು ಕಂಡು ಬಂದಿದೆ.
ಹರಿಹರ ನಗರಸಭೆ ಅಧಿಕಾರಿಗಳಾದ ಸುಬ್ರಮಣ್ಯಶೆಟ್ಟಿ, ಪೌರಾಯುಕ್ತರು, ನಿರಂಜನಿ ಕಛೇರಿಯ ಮ್ಯಾನೇಜರ್/ಪ್ರಭಾರ ಕಂದಾಯ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಾದ ಚಿತ್ರ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ರಮೇಶ್ ರವರ ವಿರುದ್ಧ ಹಾಗೂ ಸರ್ಕಾರಿ ನೌಕರರ ಸೋಗಿನಲ್ಲಿ ಕೆಲಸ ಮಾಡುತ್ತಿರುವ ಈಗ್ಗೆ ಒಂದು ವಾರದಿಂದ ಬಳಕೆ ಮಾಡಿದ್ದು ಮೌನೇಶ್ ರವರ Bank Of MaHaraSHtra ಖಾತೆ ನಂ:-60249334579 01-01-2025 ರಿಂದ 07-04-2025 ರವರೆಗೆ 1,63,266/- ರೂ ಗಳು ಜಮಾ ಆಗಿದ್ದು ಹಾಗೂ ಮಹಮದ್ ಹಫೀಜ್ ವುಲ್ಲಾ, ಈತನ ಹೆಸರಿನಲಿ ಹರಿಹರದಲ್ಲಿ ಅಕೌಂಟ್ ಇಲ್ಲದೇ ಇದ್ದುದರಿಂದ ಸಹೋದರನಾದ ಮಹಮದ್ ತೌಸಿಫುವಲ್ಲಾ ಹರಿಹರದ SBI ಖಾತೆ ನಂ:- 41192379728 ರಲ್ಲಿ ವ್ಯವಹರಿಸುತ್ತಿದ್ದರಿಂದ ಖಾತೆಗೆ 89,400/- ಗಳು ಜಮಾ ಆಗಿದೆ.
Read also : Harihara | ಅಧ್ಯಕ್ಷರಾಗಿ ಬಿ. ದಯಾನಂದ್ , ಉಪಾಧ್ಯಕ್ಷರಾಗಿ ಹನುಮಂತಪ್ಪ ಪಿ.ಎನ್
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕಿ ಕಲಾವತಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಹೆಚ್. ಗುರುಬಸವರಾಜ ಮತ್ತು ಪ್ರಭು ಸೂರಿನ್, ಸರಳ.ಪಿ ಹಾಗೂ ಸಿಬ್ಬಂದಿಗಳೊಂದಿಗೆ ಹರಿಹರ ನಗರ ಸಭೆ ಕಛೇರಿಯ ಶೋಧನಾ ಕಾರ್ಯ ನಡೆಸಿದರು. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ