ದಾವಣಗೆರೆ (Davanagere): ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಅಷ್ಟೊಂದು ಶ್ರೀಮಂತ ಭಾಷೆ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಸಾಹಿತಿ ಆರ್ ಜಿ ಹಳ್ಳಿ ನಾಗರಾಜ್ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ Davanagere ಹಾಗೂ ಘಟಿಕೋತ್ಸವ ಪದವಿ ಪ್ರಧಾನ ಸಮಾರಂಭದಲ್ಲಿ ಧ್ವಜ ವಂದನೆ ಮಾಡಿ ಮಾತನಾಡಿದರು.
ಶ್ರೀಮಂತ ಭಾಷೆ ಕನ್ನಡ ಇರುವಾಗ ಸಂಸ್ಕೃತ ಭಾಷೆ ಯಾಕೆ ಬೇಕು, ಕನ್ನಡ ಕಲಿಯಲು ಮಾತನಾಡಲು ಬಲು ಸರಳ, ಹಿಂದಿ ಭಾಷೆ ಅದು ರಾಷ್ಟ್ರ ಭಾಷೆ ಅಲ್ಲ. ಭಾರತದಲ್ಲಿ ಹೆಚ್ಚು ಮಾತನಾಡುವ ಭಾಷೆ ಎಲ್ಲಾ ಭಾಷೆಗಳು ಕೂಡ ರಾಷ್ಟ್ರೀಯ ಭಾಷೆಗಳೇ. ತಮಿಳು ಭಾಷೆಗೆ ಸರಿ ಸಮಾನವಾದ ಭಾಷೆ ನಮ್ಮ ಕನ್ನಡ ಭಾಷೆ. ನಮಗೂ ಕೂಡ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಇದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.
ದಾವಣಗೆರೆಯಲ್ಲಿ ಸರಿಸುಮಾರು 17 ನೇ ಶತಮಾನದಲ್ಲಿ ಇಲ್ಲಿ ಬೆಳೆದ ಇಲ್ಲೆ ಸುತ್ತ ಮುತ್ತ ಇದ್ದಂತಹ ಮಹಾಲಿಂಗರಂಗ ಕವಿಗಳನ್ನು ಸ್ಮರಿಸಿದ ಅವರು, ಇಂತಹವರು ನಮ್ಮೂರಿನವರು ಎಂದು ಹೇಳೋಕೆ ತುಂಬಾ ಸಂತೋಷ. ಅವರು ಹೆಚ್ಚಾಗಿ ವೃತ್ತಿರಂಗಭೂಮಿಗೆ ತಮ್ಮ ಸೇವೆಯನ್ನು ಮಾಡಿದರು ಎಂದು ಸ್ಮರಿಸಿದರು.
ಕವಿ ಗೋವಿಂದ ಪೈ ಮೂಲತಃ ಕೇರಳದವರಾದ್ರೂ ಕೂಡ ಕನ್ನಡದಲ್ಲಿ ಕಥೆ ಕವನಗಳನ್ನು ರಚಿಸಿ ಕನ್ನಡದ ರಾಷ್ಟ್ರಕವಿಯಾದರು. ಇಷ್ಟೊಂದು ಸುಂದರ ಸರಳ ಭಾಷೆ ಕನ್ನಡ ಅದುವೇ ಮಾತೃ ಭಾಷೆ. ನಾವು ಎಷ್ಟೆ ವಿದ್ಯಾವಂತರೂ ದೊಡ್ಡ ಹುದ್ದೆಯಲ್ಲಿದ್ದರು ಕೂಡ ಕನ್ನಡವನ್ನು ಮರೆಯಬಾರದಯ, ಇದು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು ನೀವು ಹೆಚ್ಚಾಗಿ ಕನ್ನಡ ಮಾತನಾಡಿ, ಇತರ ಭಾಷಿಕರನ್ನು ಗೌರವಿಸಿ ಕನ್ನಡ ಕಲಿಸಲು ಕಲಿಯಲು ಪ್ರೇರೇಪಿಸಿ ಎಂದು ತಿಳಿಸಿದರು.
ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ,, ವಿದ್ಯಾರ್ಥಿಗಳು ತಮ್ಮ ಗುರಿಯನ್ನು ನಿಶ್ಚಯಿಸಿಕೊಂಡು, ಅದಕ್ಕೆ ಅನುಗುಣವಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆ ಜೊತೆಗೆ ಕೌಶಲ್ಯಧಾರಿತ ಶಿಕ್ಷಣ ಮುಖ್ಯ ಎಂದರು.
ವೇದಿಕೆಯಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಷಹನಾಜ್ ಬಿ., ಕಾರ್ಯದರ್ಶಿ ಮುಸ್ತಫಾ, ನಿರ್ದೇಶಕರಾದ ಸದ್ದಾಂ ಹುಸೇನ್, ಆರ್ ಜಿ ಕರಿಬಸಪ್ಪ, ಜ್ಯೋತಿ, ವಿದ್ಯಾವತಿ ಮತ್ತಿತರರಿದ್ದರು.