Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಅಕ್ರಮ ಮಣ್ಣು, ಮರಳು ಗಣಿಗಾರಿಕೆಯಿಂದ ನದಿ ಮೂಲ ನಾಶ : ಡಿಎಸ್‌ಎಸ್‌ ಆತಂಕ
ತಾಜಾ ಸುದ್ದಿ

ಅಕ್ರಮ ಮಣ್ಣು, ಮರಳು ಗಣಿಗಾರಿಕೆಯಿಂದ ನದಿ ಮೂಲ ನಾಶ : ಡಿಎಸ್‌ಎಸ್‌ ಆತಂಕ

Dinamaana Kannada News
Last updated: December 29, 2024 4:55 pm
Dinamaana Kannada News
Share
Harihara
Harihara
SHARE

ಹರಿಹರ (Harihara) : ಅಕ್ರಮ ಮಣ್ಣು ಹಾಗೂ ಮರಳು ಗಣಿಗಾರಿಕೆಯಿಂದಾಗಿ ಒಂದೆರಡು ವರ್ಷಗಳಲ್ಲಿ ನದಿಯೇ ಇಲ್ಲದಂತಾಗಲಿದೆ. ಆದ್ದರಿಂದ ತಾಲ್ಲೂಕಿನ ಜನತೆ ತಮ್ಮ ಮಕ್ಕಳಿಗೆ ಈಗಲೇ ನದಿ ದಡ ಹಾಗೂ ನದಿಯ ಅಂತಿಮ ವೀಕ್ಷಣೆ ಮಾಡಿಸಿಕೊಂಡು ಬರಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮನವಿ ಮಾಡಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಹುಟ್ಟಿ ಬೆಳೆದ ಮಕ್ಕಳು ನದಿ ಇದ್ದರೂ ನದಿ ಮತ್ತು ನದಿ ದಡ ಹೇಗಿರುತ್ತದೆ ಎಂದು ಕೇಳುವಂತಾಗಬಾರದು, ಈಗಾಗಲೇ ಬಹುತೇಕ ಗ್ರಾಮಗಳ ಜನತೆಗೆ ನದಿ ದಡಕ್ಕೆ ಹೋಗದ ದುಸ್ಥಿತಿ ಇದೆ, ಉಳಿದ ಗ್ರಾಮಗಳಲ್ಲೂ ಈ ಸ್ಥಿತಿ ಒಂದೆರಡು ವರ್ಷಗಳಲ್ಲಿ ಬರಲಿದೆ. ಹೀಗಾಗಿ ಮಕ್ಕಳಿಗೆ ರಜಾ ದಿನದಂದು ತಪ್ಪದೆ ನದಿ ವೀಕ್ಷಣೆಗೆ ಕರೆದುಕೊಂಡು ಹೋಗಿ ಬರಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

ಪ್ರಕೃತಿ ಸಾವಿರಾರು ವರ್ಷಗಳ ಪ್ರಕ್ರಿಯೆ ನಂತರ ನದಿ ದಡದಲ್ಲಿ ಮೆದು ಮಣ್ಣನ್ನು ಸೃಜಿಸಿರುತ್ತದೆ. ಈ ಮೆದು ಮಣ್ಣು ಇರುವ ಪಟ್ಟಾ ಜಮೀನು, ಸರ್ಕಾರದ ನದಿ ಖರಾಬು ಜಮೀನುಗಳ ಮೆದು ಮಣ್ಣನ್ನು ಇತ್ತೀಚಿನ ವರ್ಷಗಳಲ್ಲಿ ಅವ್ಯಾಹತವಾಗಿ ಸಾಗಿಸಲಾಗುತ್ತಿದೆ.

ಪರಿಣಾಮವಾಗಿ ನದಿ ದಡದ ಸಾವಿರಾರು ಎಕರೆ ಜಮೀನುಗಳಲ್ಲಿ ಈಗಾಗಲೆ 10 ರಿಂದ 20 ಅಡಿವರೆಗೆ ಕೊರೆದು ಮಣ್ಣು ಸಾಗಿಸಲಾಗಿದೆ. ಈ ಜಮೀನುಗಳಲ್ಲಿದ್ದ ಅಸಂಖ್ಯಾತ ಮರ,ಗಿಡಗಳ ಮಾರಣಹೋಮ ಮಾಡಲಾಗಿದೆ. ತಾಲ್ಲೂಕಿನ ನದಿ ದಡದ ರಸ್ತೆ, ರುದ್ರಭೂಮಿಗಳು ಮಾಯವಾಗುತ್ತಾ ಭೌಗೋಳಿಕ ರಚನೆ ಅಸ್ತವ್ಯಸ್ತವಾಗಿದೆ.

ಇನ್ನು ಮರಳು ಗಣಿಗಾರಿಕೆಯ ಹೆಸರಲ್ಲಿ ನದಿಯ ಒಡಲನ್ನು ಬಗೆಯಲಾಗಿದೆ. ಜಲಚರ ಪ್ರಾಣಿಗಳು, ಅವುಗಳನ್ನು ಆಶ್ರಯಿಸಿದ ಪಕ್ಷಿಗಳು ಅವಸಾನದ ಅಂಚಿಗೆ ತಲುಪಿವೆ. ನದಿಯಲ್ಲಿ 10 ರಿಂದ 20 ಅಡಿಗಳ ಆಳದವರೆಗೆ ಗುಂಡಿಗಳು ಸೃಷ್ಟಿಯಾಗಿವೆ. ನದಿಯಲ್ಲಿ ದನಕರುಗಳಿಗೆ ಮೈ ತೊಳೆಸಲು, ನದಿ ದಡದ ಜನರು ಮೈ ತೊಳೆಯಲು, ಬಟ್ಟೆ ತೊಳೆಯಲು, ಸಂಕ್ರಾಂತಿ ಹಾಗೂ ಇತರೆ ಹಬ್ಬ, ಹರಿದಿನಗಳಂದು ನದಿಗೆ ಕಾಲಿಡದಂತಾಗಿದೆ.

ಗುಂಡಿಗಳಿರುವುದು ತಿಳಿಯದೆ ನದಿಗೆ ಈಜಾಡಲು ತೆರಳಿದ 30ಕ್ಕೂ ಹೆಚ್ಚು ಜನರು, 70ಕ್ಕೂ ಹೆಚ್ಚು ದನಕರುಗಳು ನೀರು ಪಾಲಾಗಿದ್ದಾರೆ. ಈ ಪ್ರಕರಣಗಳಲ್ಲಿ ಕೆಲವು ಮಾತ್ರ ದಾಖಲಾಗಿದ್ದರೆ ಉಳಿದವನ್ನು ಮುಚ್ಚಿ ಹಾಕಲಾಗಿದೆ ಎಂದು ಅವರು ಆರೋಪಿಸಿದರು.

ಕೋಟಿಗಟ್ಟಲೆ ಖರ್ಚು ಮಾಡಿ ಚುನಾವಣೆ ನಡೆಸುವ ಹಲವು ರಾಜಕಾರಣಿಗಳು, ಹತ್ತಾರು ಲಕ್ಷ ಹಣ ಖರ್ಚು ಮಾಡಿ ವರ್ಗಾವಣೆ ಮಾಡಿಸಿಕೊಂಡು ಇಲ್ಲಿಗೆ ಬರುವ ಸಂಬಂಧಿತ ನಾಲ್ಕೈದು ಇಲಾಖೆಗಳ ಅಧಿಕಾರಿಗಳು ತಾವು ಹೂಡಿದ ಬಂಡವಾಳದ ಹಲವು ಪಟ್ಟು ವಾಪಸ್ ಪಡೆಯುವ ಮೂಲವಾಗಿ ಅಕ್ರಮ ಮಣ್ಣು ಮತ್ತು ಮರಳು ಗಣಿಗಾರಿಕೆಯನ್ನು ಆಶ್ರಯಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Read also  : DAVANAGERE | ಸಂಸದರ ಆಸರೆ : ಮಕ್ಕಳಿಗೆ ಸಂಸತ್ ವೀಕ್ಷಣೆ ಭಾಗ್ಯ

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere DAVANAGERE | ಸಂಸದರ ಆಸರೆ : ಮಕ್ಕಳಿಗೆ ಸಂಸತ್ ವೀಕ್ಷಣೆ ಭಾಗ್ಯ
Next Article political anyalalis Political Analysis | ಸಂಪುಟ ಸರ್ಜರಿಗೆ ಸಿದ್ದು ರೆಡಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಭದ್ರಾ ಭರ್ತಿಗೆ ಕೆಲವೇ ಅಡಿ ಬಾಕಿ : ನದಿಯಲ್ಲಿ ನೀರಿನ ಏರಿಕೆ ಸಂಭವ, ಜನರು ಎಚ್ಚರಿಕೆಯಿಂದಿರಲು ಸೂಚನೆ

ದಾವಣಗೆರೆ.ಜು.28 :   ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ಸ್ಗಿಂತಲೂ ಅಧಿಕ ನೀರು ಹರಿಯುತ್ತಿದ್ದು ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು…

By Dinamaana Kannada News

ಜಿಲ್ಲೆಗೆ ಉಪಲೋಕಾಯುಕ್ತರ ಭೇಟಿ: ಸಾರ್ವಜನಿಕರಿಂದ ನೇರ ದೂರು ಅರ್ಜಿ ಸ್ವೀಕಾರ

ದಾವಣಗೆರೆ ಏಪ್ರಿಲ್ 15  (Davanagere): ನ್ಯಾಮಮೂರ್ತಿ ಹಾಗೂ ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಏ.22 ರಿಂದ 26 ರವರೆಗೆ ಐದು ದಿನಗಳ…

By Dinamaana Kannada News

DAVANAGERE NEWS :ಸಿಬ್ಬಂದಿ ನೇಮಕಾತಿ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ ಆ.07 (DAVANAGERE ):  ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಸ್ಟೆನೋಗ್ರಾಫರ್ ಗ್ರೇಡ್ ”ಸಿ” ಮತ್ತು ಸ್ಟೆನೋಗ್ರಾಫರ್ ಗ್ರೇಡ್…

By Dinamaana Kannada News

You Might Also Like

davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?