Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಬಾರದ ವಾರ್ಡನ್ ವಿರುದ್ಧ ಶಾಸಕ ಬಸವಂತಪ್ಪ ಗರಂ
ತಾಜಾ ಸುದ್ದಿ

Davanagere | ಬಾರದ ವಾರ್ಡನ್ ವಿರುದ್ಧ ಶಾಸಕ ಬಸವಂತಪ್ಪ ಗರಂ

Dinamaana Kannada News
Last updated: October 26, 2024 12:53 pm
Dinamaana Kannada News
Share
Mayakonda MLA KS Basavantappa
Mayakonda MLA KS Basavantappa
SHARE

ದಾವಣಗೆರೆ (Davanagere):  ವಿದ್ಯಾರ್ಥಿ ನಿಲಯಗಳಲ್ಲಿ ಇಲ್ಲದ ಸ್ವಚ್ಛತೆ, ಮೆನು ಪ್ರಕಾರ ನೀಡದ ಗುಣಮಟ್ಟದ ಆಹಾರ, ಸ್ಟಾಕ್ ಬುಕ್ ಕೊಡದ ವಾರ್ಡನ್‌ಗಳು, ಬಾರದ ವಾರ್ಡನ್‌ಗಳು. ಈ ಎಲ್ಲಾ ಅವ್ಯವಸ್ಥೆ ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಗರಂ ಆದರು.

 

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಬಸವಾಪಟ್ಟಣ ಗ್ರಾಮದ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಮಕ್ಕಳ ಸಂಖ್ಯೆ, ಶಿಕ್ಷಣ, ಆಹಾರ, ಸ್ವಚ್ಛತೆ, ದಾಸ್ತಾನು ಪುಸ್ತಕ, ಕಂಪ್ಯೂಟರ್ ಪರಿಶೀಲನೆ, ಹಾಜರಾತಿ, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದರು.

 

ಈ ವೇಳೆ 99  ಬಾಲಕಿಯರಲ್ಲಿ 20 ಬಾಲಕಿಯರು ಮಾತ್ರ ಹಾಜರಿದ್ದರು. ಉಳಿದ ಬಾಲಕಿಯರು ಎಲ್ಲಿ?. 99 ಜನಕ್ಕೆ ಆಗುವಷ್ಟು ಆಹಾರ ಸಾಮಗ್ರಿ ನೀಡಲಾಗುತ್ತದೆ. ಸ್ಟಾಕ್ ಬುಕ್ ಕೇಳಿದರೆ ಇಲ್ಲ. ವಾರ್ಡನ್ ತಿಂಗಳಲ್ಲಿ ಎರಡು ದಿನ ಮಾತ್ರ ಕೆಲಸಕ್ಕೆ ಬರುತ್ತಾರೆ. ಆಹಾರ ಸಾಮಗ್ರಿ ಬೇಕಾದರೆ ಬಸ್‌ಗೆ ಹಾಕಿ ಕಳುಹಿಸುತ್ತಾರೆ. ಇದನ್ನು ಪ್ರಶ್ನಿಸಿದರೆ ನಮಗೆ ನೋಟಿಸ್ ಕೊಡುತ್ತಾರೆ ಎಂದು ವಿದ್ಯಾರ್ಥಿಗಳು ಶಾಸಕರ ಬಳಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು.

 

ನಮ್ಮ ಕಣ್ಣೆದುರಿಗೆ ಎರಡು ಚೀಲ ಗೋದಿ, ಎರಡು ಚೀಲ ಜೋಳ ಮಾರಾಟ ಮಾಡಿ, ಸರ್ಕಾರದ ಹಣ ದೋಚುತ್ತಿದ್ದಾರೆ. ಈ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರೇ ಶಾಸಕರನ್ನು ಆಗ್ರಹಿಸಿದರು.

 

Read also | Davanagere | ಕರಾಟೆ ಸ್ಪರ್ಧೆ : ನಿಧಿ ಬೇತೂರ್, ಸಮರ್ಥ್ ಬೇತೂರ್‌ಗೆ ಚಿನ್ನದ ಪದಕಗಳು

 

ಇದೇ ರೀತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಎಸ್ಟಿ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ಸೇರಿದಂತೆ ಭೇಟಿ ನೀಡಿದ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಸಮಸ್ಯೆಗಳ ಆಗರವೇ ಇದೆ. ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿ ಸ್ಟಾಕ್ ಬುಕ್ ಇಲ್ಲ. ಮಕ್ಕಳ ಕಡಿಮೆ ಸಂಖ್ಯೆ ಇದ್ದರೂ ವಿದ್ಯಾರ್ಥಿ ನಿಲಯದಲ್ಲಿರುವ ಒಟ್ಟು ಸಂಖ್ಯೆ ತೋರಿಸಿ ಹಣ ಗುಳುಂ ಮಾಡುವುದು, ಮೆನು ಪ್ರಕಾರ ಸರಿಯಾದ ಸಮಯಕ್ಕೆ ಊಟ ಕೊಡುತ್ತಿಲ್ಲ. ಒಂದು ರೀತಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ವಾರ್ಡನ್‌ಗಳ ವಿರುದ್ಧ ಗರಂ ಆದರು.

 

ವಿದ್ಯಾರ್ಥಿ ನಿಲಯಗಳಿಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ವಾರ್ಡನ್‌ಗಳು ಮಕ್ಕಳಿಗೆ ಮೆನು ಪ್ರಕಾರ ಸರಿಯಾದ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ವಾರ್ಡನ್‌ಗಳು ವಿದ್ಯಾರ್ಥಿ ನಿಲಯಕ್ಕೆ ಬರುವುದಿಲ್ಲ. ಅಡುಗೆ ಸಿಬ್ಬಂದಿಗಳೇ ನಿರ್ವಹಣೆ ಮಾಡುತ್ತಾರೆ ಎಂಬ ದೂರುಗಳು ಭೇಟಿ ನೀಡಿದ ಎಲ್ಲಾ ನಿಲಯದ ಮಕ್ಕಳು ದೂರಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥ ವಾರ್ಡನ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಶಾಸಕ ಬಸವಂತಪ್ಪ ತಿಳಿಸಿದರು.

 

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಜೊತೆಗೆ ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು.  ತಂದೆ-ತಾಯಿ ಬಿಟ್ಟು ದೂರದ ಊರುಗಳಿಂದ ವಿದ್ಯಾರ್ಥಿ ನಿಲಯಗಳಿಗೆ ಬರುತ್ತಾರೆ. ನೀವು ನಿಮ್ಮ ಮಕ್ಕಳ ಪೋಷಣೆ ಮಾಡುವಂತೆ ವಸತಿ ನಿಲಯದ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕು ಇದೇ ಸಂದರ್ಭದಲ್ಲಿ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

 

ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು,ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere | ಕರಾಟೆ ಸ್ಪರ್ಧೆ : ನಿಧಿ ಬೇತೂರ್, ಸಮರ್ಥ್ ಬೇತೂರ್‌ಗೆ ಚಿನ್ನದ ಪದಕಗಳು
Next Article Davangere Davanagere | ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು : ಮಹಾವೀರ ಕರೆಣ್ಣವರ್‌

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ವಕ್ಫ್ ಮಸೂದೆ ಹಿಂಪಡೆಯಿರಿ : ಎಸ್‍ಡಿಪಿಐ ಒತ್ತಾಯ

ದಾವಣಗೆರೆ  (Davanagere) :  ವಕ್ಪ್ ತಿದ್ದುಪಡಿ ಮಸೂದೆ -2024 ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ…

By Dinamaana Kannada News

Davangere | ಅಹಿಂದ ವರ್ಗದ ಏಳಿಗೆ ಸಹಿಸದ ಬಿಜೆಪಿ : ವಿನಾಯಕ ಬಿ. ಎನ್.

ದಾವಣಗೆರೆ (Davangere District) : ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಸಂವಿಧಾನವನ್ನು ಹತ್ಯೆ ಮಾಡಲು ಹೊರಟಿದ್ದಾರೆ …

By Dinamaana Kannada News

DAVANAGERE | ಜಿಲ್ಲಾ ಕನಕ ನೌಕರರ ಬಳಗದ ಜಿಲ್ಲಾಧ್ಯಕ್ಷರಾಗಿ ಶಿವಾನಂದ ದಳವಾಯಿ  

ದಾವಣಗೆರೆ (Davanagere) : ಆರೋಗ್ಯ ಇಲಾಖೆಯ ಜಿಲ್ಲಾ ಔಷಧಿ ಉಗ್ರಾಣದಲ್ಲಿ ಫಾರ್ಮಸಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ  ಶಿವಾನಂದ ದಳವಾಯಿ ಅವರನ್ನು…

By Dinamaana Kannada News

You Might Also Like

Davanagere
Blog

ಬಾಲಕಾರ್ಮಿಕ ಪದ್ದತಿ ವಿರುದ್ದ ಅರಿವು ಮೂಡಿಸಲು ಜಾಥಾ ಆಂದೋಲನಕ್ಕೆ ಚಾಲನೆ

By Dinamaana Kannada News
Davanagere
Blog

Harihar | ನೀರಿನ ಪೂರೈಕೆಯಲ್ಲಿ ವ್ಯತ್ಯಯ

By Dinamaana Kannada News
Davanagere
Blog

Davanagere | ನಗರ ಸಚ್ಚತೆಗೆ ಸಹಕರಿಸಿ, ಉಲ್ಲಂಘನೆಯಾದಲ್ಲಿ ದಂಡ ಪಾವತಿಸಿ : ಡಿಸಿ

By Dinamaana Kannada News
Davanagere
Blog

ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?