Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ರಾಜಕೀಯ > Political analysis | ವಿಜಯೇಂದ್ರ ಸುತ್ತ ಆವರಿಸುತ್ತಿದೆ ಪದ್ಮವ್ಯೂಹ
ರಾಜಕೀಯ

Political analysis | ವಿಜಯೇಂದ್ರ ಸುತ್ತ ಆವರಿಸುತ್ತಿದೆ ಪದ್ಮವ್ಯೂಹ

Dinamaana Kannada News
Last updated: October 7, 2024 3:52 am
Dinamaana Kannada News
Share
DAVANAGERE
DAVANAGERE
SHARE

Kannada News | Dinamaana.com | 07-09-2024

ಮೊನ್ನೆ ದೆಹಲಿಗೆ ಹೋದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸಿದ್ಧರಾಮಯ್ಯ ನಾಯಕತ್ವದ ಅನಿವಾರ್ಯತೆಯ ಬಗ್ಗೆ ಅವರು ಪ್ರಸ್ತಾಪಿಸಿದರಂತೆ.

‘ಸಾರ್, ಮೂಡಾ ಪ್ರಕರಣದ ಬಲೆಯಲ್ಲಿ ಮುಖ್ಯಮಂತ್ರಿಗಳನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ವಿಪಕ್ಷಗಳು ಇಂತಹ ಕೆಲಸ ಮಾಡುವುದರಲ್ಲಿ ಅಚ್ಚರಿಯೇನೂ ಇಲ್ಲ.ಯಾಕೆಂದರೆ ದಕ್ಷಿಣ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಗಿರುವ ಅಡ್ಡಿ ಎಂದರೆ  ಸಿದ್ಧರಾಮಯ್ಯ ಅವರು ಮಾತ್ರ’ಅಂತ ಜಾರಕಿಹೊಳಿ ವಿವರಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು : ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ  ಸಹಜವಾಗಿಯೇ ಸರ್ಕಾರ ಅಲುಗಾಡುತ್ತದೆ. ಕೆಲವೇ  ಕಾಲದಲ್ಲಿ ಉರುಳುತ್ತದೆ ಅಂತ ಬಿಜೆಪಿ ವರಿಷ್ಟರು ಯೋಚಿಸುತ್ತಿದ್ದಾರೆ.ಹೀಗಾಗಿ ಯಾವ ಕಾರಣಕ್ಕೂ ಸಿದ್ದರಾಮಯ್ಯ ಕೆಳಗಿಳಿಯದಂತೆ ಹೈಕಮಾಂಡ್ ನೋಡಿಕೊಳ್ಳಬೇಕು. ಆ ದೃಷ್ಟಿಯಿಂದ ಕಾಂಗ್ರೆಸ್ ವರಿಷ್ಟರು ಸಿದ್ದರಾಮಯ್ಯ ಅವರ ಜತೆ ಗಟ್ಟಿಯಾಗಿ ನಿಂತಿರುವುದೇನೋ ನಿಜ. ಆದರೆ , ಸಮಸ್ಯೆ ಎಂದರೆ ಪಕ್ಷ ಸಿದ್ದರಾಮಯ್ಯ ಅವರ ಜತೆ ಭದ್ರವಾಗಿ ನಿಂತಿದ್ದರೂ ನಮ್ಮ ಪಕ್ಷದ ಕೆಲ ನಾಯಕರು ಮಾತ್ರ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಅಷ್ಟೇ ಅಲ್ಲ,ಇನ್ನೊಂದು ತಿಂಗಳಲ್ಲಿ ಚಿತ್ರ ಬದಲಾಗಿ ಸಿದ್ದರಾಮಯ್ಯ ಅವರು ಕೆಳಗಿಳಿಯುತ್ತಾರೆ ಅಂತ ಮೆಸೇಜು ಪಾಸ್ ಮಾಡುತ್ತಿದ್ದಾರೆ.

ಇವತ್ತು ಲೋಕಾಯುಕ್ತ ತನಿಖೆ ಸಿದ್ದರಾಮಯ್ಯ ಅವರ ಕೈ ಕಟ್ಟಿ ಹಾಕದಿರಬಹುದು. ಆದರೆ ಕೇಂದ್ರ ಸರ್ಕಾರದ ಜಾರಿ ನಿರ್ದೇಶನಾಲಯ. ಎಂಟ್ರಿ ಆಗಿರುವುದರಿಂದ ಸಿದ್ದರಾಮಯ್ಯ ಅವರು ಸಂಕಷ್ಟಕ್ಕೆ ಸಿಲುಕಬಹುದು. ಇಲ್ಲವೇ ಮೂಡಾ ಪ್ರಕರಣವನ್ನು ಲೋಕಾಯುಕ್ತದ ಬದಲು ಸಿಬಿಐ ತನಿಖೆಗೆ ಒಪ್ಪಿಸಲು ನ್ಯಾಯಾಲಯ ನಿರ್ಧರಿಸಿದರೂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕುತ್ತಾರೆ.ಹೀಗಾಗಿ ಇನ್ನೊಂದು ತಿಂಗಳಲ್ಲಿ ಪರ್ಯಾಯ ನಾಯಕತ್ವ ಅನಿವಾರ್ಯವಾಗಬಹುದು.

ಅಂತಹ ಸಂದರ್ಭದಲ್ಲಿ ತಾವು ಸಿಎಂ ಆಗುವುದು ಸುಲಭ ಅಂತ ಈ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಇವತ್ತು ನಮ್ಮ ಮನವಿ ಎಂದರೆ ಕೊನೆಯ ಕ್ಷಣದವರೆಗೂ ಪಕ್ಷ ಸಿದ್ಧರಾಮಯ್ಯ ಅವರ ಜತೆ ನಿಲ್ಲಬೇಕು.ಯಾಕೆಂದರೆ ಅವರನ್ನು ಹೊರತುಪಡಿಸಿ ಬೇರೊಬ್ಬರನ್ನು ತಂದು ಕೂರಿಸಲು ಹೈಕಮಾಂಡ್ ಒಲವು ತೋರಿಸಿದರೆ ಕರ್ನಾಟಕದ ರಾಜಕೀಯ ಚಿತ್ರವೇ ಬದಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಹಿಂದ ವರ್ಗಗಳು ಕಾಂಗ್ರೆಸ್ ವಿರುದ್ದ ತಿರುಗಿ ಬೀಳುತ್ತವೆ. ಹಾಗೇನಾದರೂ ಆದರೆ ಸರ್ಕಾರ ಉಳಿಯುವುದಿರಲಿ, ಭವಿಷ್ಯದಲ್ಲಿ ಪಕ್ಷ ಮರಳಿ ಅಧಿಕಾರ ಹಿಡಿಯುವುದು ಕಷ್ಟವಾಗಬಹುದು.

ನಿಜ ಹೇಳಬೇಕೆಂದರೆ ರಾಜ್ಯ ಕಾಂಗ್ರೆಸ್ ನ ಬಹುತೇಕ ಶಾಸಕರು ಸಿದ್ಧರಾಮಯ್ಯ ಮತ್ತು ನಿಮ್ಮ ನಾಯಕತ್ವವನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ.ಉಳಿದಂತೆ ಯಾರ ನಾಯಕತ್ವವನ್ನು ಅವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿಲ್ಲ. ಒಂದು ವೇಳೆ ಶಾಸಕರ ಈ ಭಾವನೆಗೆ ವ್ಯತಿರಿಕ್ತ ಬೆಳವಣಿಗೆ ನಡೆದರೆ ಅವರು ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬಹುದು. ಹೀಗಾಗಿ ಈ ವಿಷಯದಲ್ಲಿ ವರಿಷ್ಟರ ನಡೆ ಪಕ್ಕಾ ಆಗಿರಬೇಕು ಸಾರ್ ಅಂತ ಜಾರಕಿಹೊಳಿ ಅವರು ಖರ್ಗೆಯವರಿಗೆ ವಿವರಿಸಿದ್ದಾರೆ.

ಹೀಗೆ ಜಾರಕಿಹೊಳಿ ಅವರಾಡಿದ ಮಾತುಗಳನ್ನು ಕೇಳಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು:’ನೋ,ನೋ,ಸಿದ್ಧರಾಮಯ್ಯ ಅವರ ವಿಷಯದಲ್ಲಿ ಪಕ್ಷ ಬೇರೆ ಯೋಚನೆ ಮಾಡಲು ಸಾಧ್ಯವೇ ಇಲ್ಲ.ಇನ್ ಫ್ಯಾಕ್ಟ್, ರಾಹುಲ್ ಗಾಂಧಿಯವರು ಎಷ್ಟು ಸ್ಪಷ್ಟವಾಗಿದ್ದಾರೆಂದರೆ ನಾಯಕತ್ವ ಬದಲಾವಣೆಯ ಮಾತೇ ಇಲ್ಲ ಎಂದಿದ್ದಾರೆ. ಹೀಗಾಗಿ ನೋಡೋಣ. ಮುಂದಿನ ದಿನಗಳಲ್ಲಿ ಬಿಜೆಪಿ ವರಿಷ್ಟರು ಏನು ಆಟ ಆಡುತ್ತಾರೋ? ಅದನ್ನು ಎದುರಿಸಲು ಸಿದ್ದವಿರೋಣ’ ಎಂದಿದ್ದಾರೆ.

ಜನತಾ ನ್ಯಾಯಾಲಯಕ್ಕೆ ಸಿದ್ದು ಎಂಟ್ರಿ (Political analysis) 

ಇನ್ನು ತಮ್ಮ ವಿರುದ್ಧ ಲೋಕಾಯುಕ್ತ ತನಿಖೆ ಆರಂಭಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತಾ ನ್ಯಾಯಾಲಯಕ್ಕೆ ಎಂಟ್ರಿ ಆಗಿದ್ದಾರೆ.ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೊಟ್ಟ ಸಲಹೆಯೇ ಇದಕ್ಕೆ ಕಾರಣ. ಅಂದ ಹಾಗೆ ಅವತ್ತು ಸಿದ್ದರಾಮಯ್ಯ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು: ಸಿದ್ರಾಮಯ್ಯಾಜೀ.ಇವತ್ತಿನ ಬೆಳವಣಿಗೆಯಿಂದ ನೀವು ಅಪ್ ಸೆಟ್ ಆಗುವ ಅಗತ್ಯವಿಲ್ಲ.

ಬದಲಿಗೆ ನೇರವಾಗಿ ರಾಜ್ಯ ಪ್ರವಾಸ ಆರಂಭಿಸಿ. ನಿಮ್ಮನ್ನು ಕೆಳಗಿಳಿಸಲು ಬಿಜೆಪಿ ಮಿತ್ರಕೂಟ ನಡೆಸುತ್ತಿರುವ ಷಡ್ಯಂತ್ರದ ಬಗ್ಗೆ ಜನರಿಗೆ ವಿವರಿಸುತ್ತಾ ಹೋಗಿ. ಜನರಿಗೆ ಈ ಸತ್ಯವನ್ನು ಹೇಳುತ್ತಾ ಹೋದರೆ ಬಿಜೆಪಿ‌ ಮಿತ್ರಕೂಟದ ಆಟ ತುಂಬ ದಿನ ನಡೆಯುವುದಿಲ್ಲ ಅಂತ ರಾಹುಲ್ ಗಾಂಧಿ ಅವರಾಡಿದ ಮಾತು ಸಿದ್ದರಾಮಯ್ಯ ಅವರಿಗೆ ಸರಿ ಎನ್ನಿಸಿದೆ.

ಹೀಗಾಗಿ ಮೈಸೂರು ದಸರೆಯ ಉದ್ಘಾಟನೆ ಮುಗಿಯುತ್ತಿದ್ದಂತೆಯೇ ಜನತಾ ನ್ಯಾಯಾಲಯಕ್ಕೆ ಎಂಟ್ರಿ ಕೊಟ್ಟಿರುವ ಸಿದ್ದರಾಮಯ್ಯ ಕೊಪ್ಪಳ,ಮಾನ್ವಿ ಸೇರಿದಂತೆ ಒಂದು ಕಡೆಯಿಂದ ಪ್ರವಾಸ ಶುರು ಮಾಡಿ ಹವಾ ಎಬ್ಬಿಸಿದ್ದಾರೆ.

ನನ್ನ ಪತ್ನಿಯನ್ನು ಈ ಪ್ರಕರಣದಲ್ಲಿ ಎಳೆ ತಂದಿದ್ದು ನ್ಯಾಯವಾ?ಎಂಬುದೂ ಸೇರಿದಂತೆ ಅವರಾಡುತ್ತಿರುವ ಮಾತು ಅಹಿಂದ ಸೈನ್ಯವನ್ನು ಕನ್ ಸಾಲಿಡೇಟ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ಹೀಗೆ ಒಂದು ಕಡೆಯಿಂದ ಸಿದ್ದು ಜನತಾ ನ್ಯಾಯಾಲಯಕ್ಕೆ ದಾಂಗುಡಿ ಇಟ್ಟಿದ್ದರೆ, ಮತ್ತೊಂದು ಕಡೆಯಿಂದ ಸತೀಶ್ ಜಾರಕಿಹೊಳಿ ಸೇರಿದಂತೆ ಅವರ ಆಪ್ತರು ಪರ್ಯಾಯ ನಾಯಕತ್ವದ ಸೌಂಡೆದ್ದರೆ ಹುಷಾರ್ ಎಂಬ ಮೆಸೇಜು ರವಾನಿಸುತ್ತಿದ್ದಾರೆ.

ಸುರ್ಜೇವಾಲ ಮಾತ್ರ ಆಡಿದ ಮಾತು? (Political analysis) 

ಅಂದ ಹಾಗೆ ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಆರಂಭವಾಯಿತಲ್ಲ? ಇದಾದ ನಂತರ ಅತ್ಯಾಪ್ತ ಸಚಿವರೊಬ್ಬರು ಸಿದ್ದರಾಮಯ್ಯ ಅವರ ಜತೆ ಒನ್ ಟು ಒನ್ ಚರ್ಚೆ ಮಾಡಿದರಂತೆ. ‘ಸಾರ್,ಈಗಲಾದರೂ ನೀವು ಸ್ಪಷ್ಟವಾಗಿ ಹೇಳಿ.ಅಧಿಕಾರ ಹಂಚಿಕೆಯ ವಿಷಯದಲ್ಲಿ ಹೈಕಮಾಂಡ್ ಲೆವೆಲ್ಲಿನಲ್ಲಿ ಏನಾದರೂ ಒಪ್ಪಂದವಾಗಿದೆಯೇ?ಆಗಿದ್ದರೆ ಅದನ್ನು ನೇರವಾಗಿ ಹೇಳಿಬಿಡಿ.

ಆಗ ನಾವು ಮುಂದಿನ ತೀರ್ಮಾನ ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ಅಂತ ಈ ಸಚಿವರು ಕೇಳಿದಾಗ ಯೇ,ಅಂತಹ ಒಪ್ಪಂದವೇನೂ ಆಗಿಲ್ಲ. ಆದರೆ ಈ ಸಂಬಂಧ ಒಂದು ಸಲ ಸುರ್ಜೇವಾಲಾ ಅವರು ನನ್ನೆದುರು ಪ್ರಸ್ತಾಪಿಸಿದ್ದಾರೆ. ಆದರೆ ಈ ಬಗ್ಗೆ ನಾನೇನೂ ಹೇಳಿಲ್ಲ ಅಂದರಂತೆ ಸಿದ್ಧರಾಮಯ್ಯ. ಆಗ ಮರುಪ್ರಶ್ವಿಸಿದ ಈ ಸಚಿವರು,ಒಂದು ವೇಳೆ ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಹೈಕಮಾಂಡ್ ವರಿಷ್ಟರು ನಿಮ್ಮ ಬಳಿ ರಾಜೀನಾಮೆ ಕೇಳಿದರೆ ಏನು ಮಾಡುತ್ತೀರಿ? ಅಂತ ಕೇಳಿದ್ದಾರೆ.

ಅದಕ್ಕುತ್ತರಿಸಿದ ಸಿದ್ಧರಾಮಯ್ಯ: ಒಂದು ವೇಳೆ ವರಿಷ್ಟರು ಈ ಬಗ್ಗೆ  ಕೇಳಿದರೆ ನನ್ನ ಆಪ್ತ ಸಚಿವರು,ಶಾಸಕರ ಜತೆ ಮಾತನಾಡಿ ತೀರ್ಮಾನಿಸುವುದಾಗಿ ಹೇಳಿ ಬರುತ್ತೇನೆ.ಆದರೆ ನನಗನ್ನಿಸುವ ಪ್ರಕಾರ ವರಿಷ್ಟರು ಈಗಂತೂ ರಾಜೀನಾಮೆ ಕೇಳುವ ಮೂಡ್ ನಲ್ಲಿಲ್ಲ ಎಂದಿದ್ದಾರೆ.

ಬಿಜೆಪಿಯಲ್ಲಿ ಹೊಸ  ಆಟ ಶುರು (Political analysis) 

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳಿಂದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಿರಿಕಿರಿ ಮಾಡಿಕೊಂಡಿದ್ದಾರಂತೆ. ಕಾರಣ? ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಯತ್ನಾಳ್,ಸಿ.ಟಿ.ರವಿ,ಅರವಿಂದ ಲಿಂಬಾವಳಿ ಸೇರಿದಂತೆ ಹಲವರು ತಿರುಗಿ ಬಿದ್ದಿದ್ದಾರಲ್ಲ? ಇವರನ್ನು ಸಮಾಧಾನಿಸಿ, ವಿಜಯೇಂದ್ರ ಅವರಿಗೆ ವಸ್ತುಸ್ಥಿತಿ ವಿವರಿಸಲು ಆರೆಸ್ಸೆಸ್ ನಾಯಕರು ಇತ್ತೀಚೆಗೆ ಸದಾಶಿವನಗರದಲ್ಲಿ ಸಭೆ ನಡೆಸಿ ಬಿಳಿ ಬಾವುಟ ಹಾರಿಸಿದ್ದರು. ಆದರೆ,  ಆರೆಸ್ಸೆಸ್ ನಾಯಕರು ಬಿಳಿ ಬಾವುಟ ಹಾರಿಸಿದರೂ ಕ್ಯಾರೆ ಎನ್ನದ ವಿಜಯೇಂದ್ರ ವಿರೋಧಿಗಳು ಉಲ್ಟಾ ಮಾತನಾಡಲು ಶುರುವಿಟ್ಟುಕೊಂಡರು.

ಆದರೆ, ಯಾವಾಗ ಇವರ ವರಾತ ಶುರುವಾಯಿತೋ? ಆಗ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ನಿವಾಸದಲ್ಲಿ ಒಂದು ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಿದ್ದವರು ತಮ್ಮನ್ನು ಪಕ್ಷ ನಿಷ್ಟರು ಅಂತ ಕರೆದುಕೊಂಡು ವಿಜಯೇಂದ್ರ ಪರ ನಿಂತಿದ್ದಲ್ಲದೆ ಯತ್ನಾಳ್ ಮತ್ತಿತರ ನಾಯಕರನ್ನು ಭಿನ್ನಮತೀಯರು ಅಂತ ಪ್ರೊಜೆಕ್ಟ್ ಮಾಡಿದರು. ಯಾವಾಗ ಈ ಬೆಳವಣಿಗೆ ನಡೆಯಿತೋ?ಇದಾದ ನಂತರ ಸಂತೋಷ್ ಅವರಿಗೆ ಕಿರಿಕಿರಿಯಾಗಿದೆ.

ಅಂದ ಹಾಗೆ ಪಕ್ಷದಲ್ಲಿ ಎರಡು ಗುಂಪುಗಳಿರುವುದು ಸಹಜ.ಹಿಂದೆ ಪಕ್ಷದಲ್ಲಿ ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಗುಂಪುಗಳು ಇರಲಿಲ್ಲವೇ?ಅದೇ ರೀತಿ ಈಗಲೂ ವಿಜಯೇಂದ್ರ ಪರವಾದ ಮತ್ತು ವಿರುದ್ಧವಾದ ಗುಂಪು ಇರುವುದು ಸಹಜ. ಆದರೆ ವಿಜಯೇಂದ್ರ ವಿರೋಧಿ  ಗುಂಪಿಗೆ ಭಿನ್ನಮತೀಯ ಗುಂಪು ಅಂತ ಹಣೆಪಟ್ಟಿ ಕಟ್ಟಿದರೆ ಹೇಗೆ? ಎಂಬುದು ಸಂತೋಷ್ ಆತಂಕ.  ಪರಿಣಾಮ? ಅವರು ವಿಜಯೇಂದ್ರ ವಿರೋಧಿಗಳಿಗೆ ಸಿಗ್ನಲ್ಲು ನೀಡಿ: ಸಧ್ಯಕ್ಕೆ ಹೆಚ್ಚು ಮಾತನಾಡಬೇಡಿ.ಆರೆಸ್ಸೆಸ್ ನಾಯಕರು ಸಂಧಾನಸಭೆ ನಡೆಸಿದ ನಂತರವೂ ನೀವು ಅಪಸ್ವರ ಎತ್ತಿದರೆ ನಿಮಗೆ ಭಿನ್ನಮತೀಯರು ಅಂತ ಹಣೆಪಟ್ಟಿ ಹಚ್ಚಲಾಗುತ್ತದೆ.ಅದು ಒಳ್ಳೆಯದಲ್ಲ ಅಂತ ಎಚ್ಚರಿಸಿದ್ದಾರೆ.

ಯಾವಾಗ ಸಂತೋಷ್ ಈ ಮಾತು ಹೇಳಿದರೋ? ಇದಾದ ನಂತರ ವಿಜಯೇಂದ್ರ ವಿರೋಧಿ ಪಡೆ ಹೆಚ್ಚು ಮಾತನಾಡುತ್ತಿಲ್ಲ. ಆದರೆ ಬಿಜೆಪಿ ಮೂಲಗಳ ಪ್ರಕಾರ,ಈ ವಿರೋಧಿ ಗುಂಪು ಪಕ್ಷದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ಮುಂದಾಗಿದೆ. ಅರ್ಥಾತ್, ಪಕ್ಷದಲ್ಲಿ ಮೂಲೆಗುಂಪಾಗಿರುವವರನ್ನು ಪುನ: ಗುರುತಿಸಿ ಸಕ್ರಿಯರನ್ನಾಗಿಸುವ ಪ್ರಯತ್ನಕ್ಕೆ ಕೈ ಹಾಕಿದೆ.ಅದರ ಪ್ರಕಾರ , ಯತ್ನಾಳ್ ಉತ್ತರ ಕರ್ನಾಟಕ ಭಾಗದಲ್ಲಿ, ರಮೇಶ್ ಜಾಕಿಹೊಳಿ ಮುಂಬೈ-ಕರ್ನಾಟಕ ಭಾಗದಲ್ಲಿ ಶಾಸಕ ಹರೀಶ್ ಮತ್ತು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮಧ್ಯ ಕರ್ನಾಟಕದಲ್ಲಿ, ಅರವಿಂದ ಲಿಂಬಾವಳಿ ಅವರು ಏಕಕಾಲಕ್ಕೆ ಹಳೆ ಮೈಸೂರು ಮತ್ತು ಉತ್ತರ ಕರ್ನಾಟಕದಲ್ಲಿ ಈ ಕೆಲಸಕ್ಕೆ ಕೈ ಹಾಕಿದ್ದಾರೆ.ಈ ಪೈಕಿ ಲಿಂಬಾವಳಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು.ಅವರಿಗಿರುವ ಹಳೆ‌ ಲಿಂಕುಗಳೂ ಜಾಸ್ತಿ.

ಹೀಗಾಗಿ ಎಲ್ಲರೂ ಸೇರಿ ವಿಜಯೇಂದ್ರ ವಿರೋಧಿ  ಪಡೆಯನ್ನು ಬಲಿಷ್ಟಗೊಳಿಸಲು ಕಸರತ್ತು ಆರಂಭಿಸಿದ್ದಾರೆ. ಅಂದ ಹಾಗೆ ಪಕ್ಷ ರಾಜಕಾರಣದಲ್ಲಿ ಪರ್ಯಾಯ ಶಕ್ತಿ ಕೇಂದ್ರವನ್ನು ಆ್ಯಕ್ಟೀವ್ ಆಗಿಡುವ ಪ್ರಯತ್ನ ಎಲ್ಲ ಪಕ್ಷಗಳ ಹೈಕಮಾಂಡ್ ಗಳಿಂದ ನಡೆಯುತ್ತದೆ.ಕಾರಣ? ತಾವು ಯಾರಿಗೆ ಹೊಣೆಗಾರಿಕೆ ವಹಿಸಿದ್ದೇವೋ? ಅವರು  ಸರ್ವಾಧಿಕಾರಿಗಳಾಗಬಾರದಲ್ಲ?ಹೀಗಾಗಿ ಅವರಿಗೆ ಕೌಂಟರ್ ಅಂತಿರುವುದು ಸೂಕ್ತ ಅಂತ ಹೈಕಮಾಂಡ್ ಬಯಸುತ್ತದೆ.  ಹಾಗಂತ ವಿಜಯೇಂದ್ರ ವಿರೋಧಿ ಗುಂಪಿನಲ್ಲಿ ಕೇವಲ ನಾಯಕರು ಮಾತ್ರ ಕಂಡರೆ ಹೇಗೆ?ಅಲ್ಲೂ ಕಾರ್ಯಕರ್ತರ ದಂಡಿರಬೇಕಲ್ಲ? ಹಾಗಂತಲೇ ಹೈಕಮಾಂಡ್ ಇಂಗಿತವನ್ನರಿತ ವಿಜಯೇಂದ್ರ ವಿರೋಧಿ ಕ್ಯಾಂಪು ಮೆಲ್ಲಗೆ ರಾಜ್ಯ ಪ್ರವಾಸ ಆರಂಭಿಸಿದೆ.

ಲಾಸ್ಟ್ ಸಿಪ್ (Political analysis) 

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮೊನ್ನೆ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ರಾಧಾಮೋಹನದಾಸ್ ಅಗರ್ವಾಲ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ ಅಗರ್ವಾಲ್ ಅವರು: ಕುಮಾರ್ ಸೋಮೀಜಿ. ಚನ್ನಪಟ್ಟಣದ ಇಶ್ಯೂ ಎಲ್ಲಿಗೆ ಬಂತು? ಅಂತ ಕೇಳಿದ್ದಾರೆ. ಆದರೆ,  ಈ ಬಗ್ಗೆ ಹೆಚ್ಚು ಉತ್ಸಾಹ ತೋರಿಸದ ಕುಮಾರಸ್ವಾಮಿ, ಚುನಾವಣೆಗೆ ಇನ್ನೂ ಟೈಮಿದೆ.  ಹೀಗಾಗಿ ಆ ಬಗ್ಗೆ ಮುಂದೆ ಯೋಚಿಸಿದರಾಯ್ತು ಸಾರ್ ಎಂದರಂತೆ.

Read also : Political analysis | ಸಿದ್ಧು ಗೂಢಚಾರರ ರಹಸ್ಯ ಸಂದೇಶ

ಅವರಾಡಿದ ಮಾತನ್ನು ಕೇಳಿದ ಅಗರ್ವಾಲ್: ಅರೇ ಇದರ ಬಗ್ಗೆ ಮುಂದೇನು ಯೋಚಿಸುವುದು? ಅದು ನಿಮ್ನ ಕ್ಷೇತ್ರ. ಅಲ್ಲಿಂದ ಯಾರು ಸ್ಪರ್ಧಿಸಬೇಕು ಅಂತ ನೀವು ನಿರ್ಧರಿಸಬೇಕು. ಹೀಗಾಗಿ ಆದಷ್ಟು ಬೇಗ ಯಾರು ಕ್ಯಾಂಡಿಡೇಟ್ ಆಗಬೇಕು ಅಂತ ನಿರ್ಧರಿಸಿ. ಯಾವಾಗ ನೀವು ಕರೆಯುತ್ತೀರೋ ಆಗ ನಾವು ಪ್ರಚಾರಕ್ಕೆ ಬರುತ್ತೇವೆ ಎಂದಿದ್ದಾರೆ. ಯಾವಾಗ ಅಗರ್ವಾಲ್ ಇಷ್ಟು ಸ್ಪಷ್ಟವಾಗಿ ಹೇಳಿದರೋ? ಇದಾದ ನಂತರ ಇಶ್ಯೂ ಸೆಟ್ಲ್ ಮಾಡಲು ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸ ಶುರು ಮಾಡಿದ್ದಾರೆ. ಅರ್ಥಾತ್, ಚನ್ನಪಟ್ಟಣದ ಕ್ಷೇತ್ರದಿಂದ ಮಿತ್ರಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ಕಣಕ್ಕಿಳಿಯುವುದು ಮತ್ತಷ್ಟು ಖಚಿತವಾಗಿದೆ.

ಆರ್.ಟಿ.ವಿಠ್ಠಲಮೂರ್ತಿ

TAGGED:Dinamana.comLatest Kannada NewsPolitical Analysisಕನ್ನಡ ಸುದ್ದಿದಿನಮಾನ.ಕಾಂರಾಜಕೀಯ ವಿಶ್ಲೇಷಣೆ
Share This Article
Twitter Email Copy Link Print
Previous Article RPF davanagere Davanagere | ಚಲಿಸುವ ರೈಲಿಗೆ ಸಿಲುಕುತ್ತಿದ್ದ ಯುವಕನ ಪ್ರಾಣ ಉಳಿಸಿದ ಆರ್‌ಪಿಎಫ್ ಮುಖ್ಯ ಪೇದೆ!
Next Article Davanagere Davanagere | ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Harapanahalli | ಪಟ್ಟಣದ ಗ್ರಂಥಾಲಯ ಹಾಗೂ ಗ್ರಾಮೀಣ ರಸ್ತೆಗಳ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ 

ಹರಪನಹಳ್ಳಿ :   ವಿದ್ಯಾಸಿರಿ ನಾಡಿನ ವಿದ್ಯಾರ್ಥಿಗಳ ಹಾಗೂ ಓದುಗರ ಹಲವು ವರ್ಷದ ಬೇಡಿಕೆ ಈಡೇರಿಸುವ ಸಮಯ ಸಮೀಪಿಸಿದಂತಾಗಿದೆ ಅದರಂತೆ ಕೆಲವೆ…

By Dinamaana Kannada News

ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯ

ಹರಿಹರ:  ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಪುನರ್ಬಲನ ತರಗತಿಗಳನ್ನು ಮೇ 15ರ ಬದಲು ಮೇ 29 ರಿಂದ ಆರಂಭಿಸುವಂತೆ ಒತ್ತಾಯಿಸಿ…

By Dinamaana Kannada News

Harihar | ಸಂವಿಧಾನಕ್ಕೆ ಅಗೌರವ ಸೂಚಿಸಿರುವ ಉಡುಪಿ ಪೇಜಾವರ ವಿರುದ್ದ ಕ್ರಮಕ್ಕೆ ಒತ್ತಾಯ

ಹರಿಹರ (Harihar) : ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ಎಂದು ಹೇಳಿಕೆ ನೀಡುವ ಮೂಲಕ ಈಗಿರುವ ಶ್ರೇಷ್ಠ ಸಂವಿಧಾನಕ್ಕೆ ಅಗೌರವ…

By Dinamaana Kannada News

You Might Also Like

davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?