ದಾವಣಗೆರೆ (Davanagere): ಕೇಂದ್ರ ಸರ್ಕಾರ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆವಿರೋಧಿಸಿ ತಂಜೀಮುಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್ ವತಿಯಿಂದ ಮೇ.9 ರಂದು ನಗರದ ಮಾಗನಹಳ್ಳಿ ರಸ್ತೆಯ ಮಂಡಕ್ಕಿ ಭಟ್ಟಿ ಲೇಔಟ್ ನ ಮೀಲಾದ್ ಮೈದಾನದಲ್ಲಿ ಹಮ್ಮಿಕೊಂಡಿರುವ ವಕ್ಫ್ ಉಳಿಸಿ-ಸಂವಿಧಾನ ಉಳಿಸಿ ಬೃಹತ್ ಸಮಾವೇಶದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಸಮಾವೇಶಕ್ಕೆ ಮುಸ್ಲಿಂ ಧಾರ್ಮಿಕ ಗುರುಗಳು ಹಾಗೂ ಪ್ರಗತಿಪರ ಚಿಂತಕರು ಜಾತ್ಯಾತೀಕತೆಯಲ್ಲಿ ವಿಶ್ವಾಸ ಇಡುವ ರಾಜಕೀಯ ಪಕ್ಷದ ಗಣ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸುತ್ತಾರೆ ಎಂದು ತಂಜಿಮ್ ಸಂಸ್ಥೆಯ ಅಧ್ಯಕ್ಷ ದಾದು ಸೇಠ್ ಹೇಳಿಕೆ ನೀಡಿದ್ದಾರೆ.
ಪೋಸ್ಟರ್ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಕಾರ್ಯದರ್ಶಿ ಮಹಮ್ಮದ್ ಜಬೀವುಲ್ಲಾ, ಷಂಶುದ್ದೀನ್ ರಸ್ತೆ, ಸಾಬೀರ ಅಲಿ ಖಾನ್, ಇಮ್ರಾನ್ ರಜಾ, ಖಾದರ್ ಬಾಷ ರಸ್ತೆ, ಶೌಕತ್ ಅಲಿ ವಕೀಲರು, ಖಲೀಲ್ ಖಾನ್ ವಕೀಲರು, ಅನಿಸ್ ಪಾಷ ವಕೀಲರು, ಸಯ್ಯದ್ ರಫೀಕ್, ದಾದಾಪೀರ್, ಕೆ. ಇಸ್ಮಾಯಿಲ್ ಸಾಬ್, ಜಬೀವುಲ್ಲಾ (ಟೈಲ್), ವೈ. ಜಬೀವುಲ್ಲಾ, ನೂರ್ ಅಹಮದ್, ಟಿ. ಅನ್ಸರ್, ಸಾಜಿಲ್, ಮಹಮ್ಮದ್ ಶೋಯೇಬ್ ಅಲಿ, ಮಸೂದ್ ಅಹ್ಮದ್ ಜಿ ಹೆಜ್, ನಿಜಾಮ್, ಇಬ್ರಾಹಿಮ್, ಆದೀಲ್, ರಹಮತ್, ವಾಜಿದ್, ಇಸ್ಮಾಯಿಲ್ ಜಬಿಉಲ್ಲಾ ಇನ್ನಿತರರು ಉಪಸ್ಥಿತರಿದ್ದರು.