Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಯೋಗ ಗುರು ಡಾ|| ರಾಘವೇಂದ್ರ ಗುರೂಜಿಯವರಿಗೆ ಜೀವಮಾನ ಸಾಧನೆಗಾಗಿ ‘ಪಿನಾಕಲ್’ ರಾಷ್ಟ್ರೀಯ ಪುರಸ್ಕಾರ
ತಾಜಾ ಸುದ್ದಿ

ಯೋಗ ಗುರು ಡಾ|| ರಾಘವೇಂದ್ರ ಗುರೂಜಿಯವರಿಗೆ ಜೀವಮಾನ ಸಾಧನೆಗಾಗಿ ‘ಪಿನಾಕಲ್’ ರಾಷ್ಟ್ರೀಯ ಪುರಸ್ಕಾರ

Dinamaana Kannada News
Last updated: April 21, 2025 11:53 am
Dinamaana Kannada News
Share
Davanagere
Davanagere
SHARE

ನವದೆಹಲಿ/ದಾವಣಗೆರೆ (Davanagere) :  ನವದೆಹಲಿಯ ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ. ನೀತಿ ಆಯೋಗದ ಸಚಿವಾಲಯ, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯಗಳಿಂದ ಮಾನ್ಯತೆ ಪಡೆದ ‘ಲೆಜೆಂಡರಿ ಪೀಸ್ ಅವಾರ್ಡ್ ಕೌನ್ಸಿಲ್’ ವತಿಯಿಂದ ಪ್ರತಿವರ್ಷವೂ ಜೀವಮಾನ ಸಾಧನೆಗಾಗಿ ಕೊಡ ಮಾಡುವ ಅತ್ಯುನ್ನತ ರಾಷ್ಟ್ರೀಯ ಪುರಸ್ಕಾರವಾದ ‘ಪಿನಾಕಲ್ ಅವಾರ್ಡ್-2025’ರ ಸಾಲಿನ ಗೌರವ ಪುರಸ್ಕಾರವನ್ನು ಆದರ್ಶ ಯೋಗ ಪ್ರತಿಷ್ಠಾನ (ರಿ), ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಮ್ಯಾನೇಜಿಂಗ್ ಟ್ರಸ್ಟಿ ಯೋಗಗುರು, ಯೋಗ ತಜ್ಞ ಡಾ|| ಯೋಗಾಚಾರ್ಯ ಶ್ರೀ ರಾಘವೇಂದ್ರ ಗುರೂಜಿಯವರಿಗೆ ಪ್ರದಾನ ಮಾಡಲಾಗಿದೆ.

ನವದೆಹಲಿಯ ಸಂಸತ್ ಮಾರ್ಗದಲ್ಲಿರುವ ಕಾನ್ಸ್ಟಿಟ್ಯೂಷನ್ ಆಫ್ ಇಂಡಿಯಾದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡೈನಾಮಿಕ್ ಎಕ್ಸಲೆನ್ಸ್ ಪದವಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರೀಯ ಲಾಂಛನ, ಬಂಗಾರದ ಲೇಪನವಿರುವ ಪದಕ, ಪರಿಷತ್‍ನ ಖಾಯಂ ಸದಸ್ಯತ್ವ, ಗುರುತಿನ ಚೀಟಿಯನ್ನು ನೀಡಿ ಶಾಲು ಹೊದಿಸಿ ಗೌರವಿಸಿ, ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಉಪಾಧ್ಯಕ್ಷರಾದ ಶ್ರೀಮತಿ ಅಂಜನ ಪನ್ವಾರ್, ಪಟೇಲ್ ಲೋಕ್ ಸಾಂಸ್ಕøತಿಕ ಸಂಸ್ಥಾನ ನವದೆಹಲಿಯ   ಬ್ರಹ್ಮಪಾಲ್ ನಗರ್, ಪೂರ್ವಾಂಚಲ ಮೋರ್ಚಾದ ರಾಜ್ಯಾಧ್ಯಕ್ಷ  ಸಂತೋಷ್ ಓಜಾ, ಪರಿಷತ್‍ನ ಮುಖ್ಯಸ್ಥರಾದ ತರ್‍ವಿಂದರ್ ಸಿಂಗ್ ಮತ್ತು ಸೋನಿಯಾವಾಲಿಯಾ ಮತ್ತಿತರ ಗಣ್ಯ ಮಾನ್ಯರ ಉಪಸ್ಥಿತಿಯಲ್ಲಿ ಡಾ|| ರಾಘವೇಂದ್ರ ಗುರೂಜಜಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ|| ರಾಘವೇಂದ್ರ ಗುರೂಜಿಯವರು ಕಳೆದ ಸುಮಾರು 47 ವರ್ಷಗಳಿಂದ ಯೋಗ ಕ್ಷೇತ್ರದಲ್ಲಿ ಸಾಧನೆ ಮತ್ತು ಸೇವೆಯನ್ನು ನಾಡಿನ ಹೊರಗೂ, ಒಳಗೂ 1250 ಕ್ಕೂ ಹೆಚ್ಚು ಉಚಿತ ಯೋಗ ಶಿಬಿರಗಳನ್ನು ಆಯೋಜಿಸಿ 2536 ಕ್ಕೂ ಹೆಚ್ಚು ಜನರಿಗೆ ಯೋಗ ಚಿಕಿತ್ಸೆಯ ಮೂಲಕ ಔಷಧಿ ರಹಿತ ಚಿಕಿತ್ಸೆ ನೀಡಿರುತ್ತಾರೆ.  ಸಾವಿರಾರು ಯೋಗ ಲೇಖನಗಳನ್ನು ಬರೆದು, ಹಲವು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿ, ಹಲವು ಯೋಗ ಕೃತಿಗಳನ್ನು ರಚಿಸಿ ಪ್ರಕಟಿಸಿರುತ್ತಾರೆ.

ಅಲ್ಲದೇ ಯೋಗ ಡಿ.ವಿ.ಡಿ., ಸಿ.ಡಿ., ಕ್ಯಾಸೆಟ್‍ಗಳನ್ನು ಬಿಡುಗಡೆಗೊಳಿಸಿರುತ್ತಾರೆ. ಇವರು ಮಂಡಿಸಿದ ಮಹಾಪ್ರಬಂಧಕ್ಕಾಗಿ ಪಿ.ಹೆಚ್.ಡಿ. ಡಾಕ್ಟರೇಟ್ ಪದವಿಯೊಂದಿಗೆ ಬಂಗಾರದ ಪದಕವು ಲಭಿಸಿರುತ್ತದೆ.

ಯು.ಎಸ್.ಎ.ಯ ಎಫ್.ಡಬ್ಲ್ಯೂ.ಎಸ್.ಐ.ಎಂ. ಫೆಲೋಶಿಪ್, ರಾಷ್ಟ್ರೀಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಪುರಸ್ಕಾರ, ಪತಂಜಲಿ ಪುರಸ್ಕಾರ, ಬಸವಜ್ಯೋತಿ, ಯೋಗ ಚೇತನ, ಯೋಗರತ್ನ, ಕರ್ನಾಟಕ ಯೋಗ ಶಿಕ್ಷಣ ರತ್ನ, ಯೋಗ ಪ್ರಭಾಕರ, ಯೋಗಾಚಾರ್ಯ ಶ್ರೀ ಹೀಗೆ ಹತ್ತು ಹಲವು ಬಿರುದು, ಪ್ರಶಸ್ತಿ-ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ|| ರಾಘವೇಂದ್ರ ಗುರೂಜಿಯವರು ಪ್ರಸ್ತುತ ದಾವಣಗೆರೆಯ ದೇವರಾಜ ಅರಸು ಲೇಔಟ್ ‘ಸಿ’ ಬ್ಲಾಕ್‍ನಲ್ಲಿ ನಿತ್ಯವೂ ಜನಸಾಮಾನ್ಯರಿಗೆ ಆರೋಗ್ಯಕ್ಕಾಗಿ, ಯೋಗ ತರಗತಿ, ತರಬೇತಿ ಮತ್ತು ಎಲ್ಲಾ ದೀರ್ಘತರವಾದ ಖಾಯಿಲೆಗಳಿಗೆ ಔಷಧಿ ರಹಿತ ಯೋಗ ಚಿಕಿತ್ಸೆಯನ್ನು ಕಳೆದ ಹಲವಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Read also : Political analysis | ಇತಿಹಾಸ ಮರೆಯದ ಕೌತುಕದ ಕ್ಷಣಗಳು..

ಗುರೂಜಿಯವರ ಉನ್ನತ ಸಾಧನೆ ಮತ್ತು ಸೇವೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ತಮ್ಮ ಮೂಲ ಗುರುಗಳಾದ ಮಲ್ಲಾಡಿಹಳ್ಳಿಯ ಪರಮ ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮೀಜಿಯವರಿಗೆ ಶ್ರದ್ಧೆಯಿಂದ ಸಮರ್ಪಿಸಲಾಗಿದೆ ಎಂದು ತಮ್ಮ ಸಂತೋಷವನ್ನು ಈ ಮೂಲಕ ಹಂಚಿಕೊಂಡಿರುತ್ತಾರೆ.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Political analysis Political analysis | ಇತಿಹಾಸ ಮರೆಯದ ಕೌತುಕದ ಕ್ಷಣಗಳು..
Next Article Davanagere ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ  ತರಬೇತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಕರ್ನಾಟಕದಲ್ಲಿ ಅಡಿಕೆ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ.ಮಾ.12 (Davanagere);  ಅಡಿಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದಲ್ಲಿರುವ…

By Dinamaana Kannada News

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ: ವೈದ್ಯರು ಇಲ್ಲದ್ದನ್ನು ಕಂಡು ಶಾಸಕ ಬಸವಂತಪ್ಪ ಗರಂ

ದಾವಣಗೆರೆ:  ಆರೋಗ್ಯ ಹದಗೆಟ್ಟರೆ ರೋಗಿಗಳು ಆರೋಗ್ಯ ಕೇಂದ್ರಗಳತ್ತ ದೌಡಾಯಿಸುವುದು ಸಾಮಾನ್ಯ. ಆದರೆ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿ ಇರದಿದ್ದರೆ ಆಸ್ಪತ್ರೆಗೆ…

By Dinamaana Kannada News

ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಮತ್ತಿತರೆ ಬೆಳವಣಿಗೆಗಳು

ಕೆ.ಪಿ.ಸಿ.ಸಿ. ಕಚೇರಿ ಮತ್ತು ಕೆ.ಕೆ.ಕಚೇರಿ ಅರ್ಥಾತ್ ಕೇಶವಕೃಪ ಇವೆರಡರ ಪ್ರವೇಶ ಮತ್ತು ಇವೆರಡರ ನಡುವಿನ ಫರಕುಗಳ ಕುರಿತಾದ ವಿಚಾರವಂತ ಮನಸುಗಳ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?