Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-17 ಅಂತರಂಗ ಕಳೆದುಕೊಂಡ ನತದೃಷ್ಟ ಊರಿನಲ್ಲಿ…

Dinamaana Kannada News
Last updated: May 8, 2024 3:57 am
Dinamaana Kannada News
Share
sanduru mining
ಸಂಡೂರು ಮೈನಿಂಗ್
SHARE

 

ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ನಡೆದಿದ್ದು  ಸೊಂಡೂರಿನಲ್ಲಿ

ಭಾರತದ ನಗರಗಳ ಪೈಕಿ ಕೊಲ್ಕತ್ತ ಸಿಟಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬ್ಯಾಂಕ್ ವ್ಯವಹಾರ ನಡೆದಿದ್ದು ಕೂಡ ಇದೇ ಸೊಂಡೂರಿನಲ್ಲಿ.   ಗಣಿಗಾರಿಕೆಯು ಉತ್ತುಂಗದಲ್ಲಿ ಇದ್ದಂತಹ ಸಂದರ್ಭದಲ್ಲಿ ಐನೂರು ಕೋಟಿಯಿಂದ ಸಾವಿರ ಕೋಟಿ ರೂಪಾಯಿ ಮೊತ್ತದ ಸುಮಾರು ಐದಾರು ನೂರು  ಸೌಕಾರುಗಳು  ಹೊಸ ಪೇಟೆಯಲ್ಲಿ  ಮತ್ತು  ಸೊಂಡೂರುಗಳೆಂಬ ಎರಡು ಊರುಗಳಲ್ಲಿ ಇದ್ದರು.

ಟೀಬಿ ಬಡಕಂಡ  ಊರುಗಳಿಗೆ ಮಗಳ್ನ ಕೊಡಾಕ ಹೊಂಟೀಯಲ್ಲ

ಒಂದು ಕಾಲಕ್ಕೆ,ಸೊಂಡೂರು, ಸುಬ್ರಯನಹಳ್ಳಿ,ನವಲೂಟಿ, ಸುಶೀಲಾನಗರ,ತಾರಾನಗರ, ಕೃಷ್ಣಾನಗರ , ಭುಜಂಗನಗರ, ಯಶವಂತ ನಗರ,ವೆಂಕಟಗಿರಿ ನಗರ,  ದೇವಗಿರಿ, ನರಸಾಪುರ (ಎನ್.ಎಮ್.ಡಿ.ಸಿ.)ಗಳಂತಹ ಊರುಗಳ ಗಂಡುಗಳಿಗೆ ಹೆಣ್ಣು ಕೊಡಲು ನಾ ಮುಂದು,ತಾ ಮುಂದು ಎನ್ನುವಂತಿತ್ತು. ಆದರೆ ಗಣಿ ಹಾವಳಿಯಿಂದಾಗಿ ಪರಿಸ್ಥಿತಿ ಹೇಗಾಗಿತ್ತೆಂದರೆ…ಅಲ್ಲಿನ ಊರುಗಳಿಗೆ  ಹೆಣ್ಣು ಕೊಡಲು ಖಾಯಂ ಮಾಡಿಕೊಂಡು ಹೋದರೆ, “ಅಲ್ಲಪಾ….ನಿನಿಗೆ ಮಗಳೇನ್ ವಜಿಯಾಗಿದ್ಲೇನ್ ? ಬ್ಯಾರೆ ಊರಾಗ ಗಂಡುಗಳಿಗೇನು ಬರ ಐತಾ..? ಹೋಗಿ ,ಹೋಗಿ ,ಆ ಟೀಬಿ ಬಡಕಂಡ  ಊರುಗಳಿಗೆ ಮಗಳ್ನ ಕೊಡಾಕ ಹೊಂಟೀಯಲ್ಲ, ನಿನಗೆ ಭಾರ ಆಗ್ತಾಳಂದ್ರೆ ನನಿಗಿ ಬುಡು…ನಾನ್ ಹುಡುಕ್ತೀನಿ” ಎಂದು ಗಲಾಟೆ ಮಾಡುವ ಜನರಿದ್ದರು.

ಹಳ್ಳಿಗಳ ರೋದನ ಯಾರಿಗೂ ಕೇಳಿಸುವುದಿಲ್ಲ

ಇಲ್ಲಿನ ಮಣ್ಣು ಹೊನ್ನಾಗಿಯೂ,ಮಾಯೆಯಾಗಿಯೂ ,ಮೋಹವಾಗಿಯೂ ಜನರನ್ನು ಕಾಡಿದ್ದು ಸುಳ್ಳಲ್ಲ. ಬದುಕು ‘ನಾರ್ಮಲ್’ ಎನ್ನುವ ಸ್ಥಿತಿಗೆ ಬಂದಿಲ್ಲವಾದರೂ, ಸೊಂಡೂರಿನ ಹೊರ ಮೈ, ಸುರಿದ ಹೊಸ ಮಳೆಯಿಂದಾಗಿ ಮತ್ತೆ ಮದುವಣಗಿತ್ತಿಯಂತೆ ಮೈದುಂಬಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತಿದೆ. ಇನ್ನೊಂದು ತಿಂಗಳು ಕಳೆದರೆ ವಿದ್ಯಾರ್ಥಿಗಳನ್ನು ಕರೆದುಕೊಂಡು ‘ಟೂರ್’ ಗೆಂದು ಬರುವ ಮೇಷ್ಟ್ರುಗಳು ಹಚ್ಚಹಸಿರಿನ ಸೊಂಡೂರು,ಕುಮಾರಸ್ವಾಮಿ ಬೆಟ್ಟಗಳನ್ನು, ನಾರಿಹಳ್ಳದ  ಮೋಹಕತೆಯನ್ನು, ಘೋರ್ಪಡೆ ಯವರ ಅರಮನೆಯ ಗಾಢ ಮೌನವನ್ನು ತೋರಿಸುತ್ತಾರೆ. ಅಂಗಿಯ ಒಳಗಿನ ಬನಿಯನ್ನಿನ ತೂತುಗಳಂತಿರುವ ಉಸಿರಾಡಲೂ ಕಷ್ಟ ಪಡುವ ಹಳ್ಳಿಗಳ ರೋದನ ಯಾರಿಗೂ ಕೇಳಿಸುವುದಿಲ್ಲ ಮತ್ತು ಕಾಣಿಸುವುದೂ ಇಲ್ಲ.

ಲೇಖನಿಯೇನಾದರೂ ಸಿಕ್ಕಿದ್ದರೆ ……

ಯಾರನ್ನೋ ಹುಡುಕುತ್ತ ವಿಳಾಸವಿಲ್ಲದ ಊರುಗಳ ಸುತ್ತುವ ಆ ಹುಡುಗಿಯ ಕೈಗೆ ,  ಕಾಮತರ ಹೋಟೆಲಿನ  ಸಾಲಿಬಿಟ್ಟ ಆ ಹುಡುಗನಿಗೆ,   ಸೊಂಡೂರು ಬಸ್ ಸ್ಟ್ಯಾಂಡಿನಲ್ಲಿ ಕಕ್ಕಸು ತೊಳೆಯುವ ಆ ಹತ್ತರ ಪೋರನಿಗೆ…   ಯಾರದೋ ಮನೆಯಲ್ಲಿ ಮುಸುರೆ ತಿಕ್ಕುವ ಆ ಪೋರಿಯ ಎಳೆಗೈಗಳಿಗೆ,   ಸುಕ್ಕುಗಾಣದಿರಲೆಂದು ಪೌಡರ್ ಬಳಿದುಕೊಂಡು ಆ ಬೀದಿಯಲಿ  ನಿಂತ ಅವಳ ಕೈಗೆ…  ಲೇಖನಿಯೇನಾದರೂ ಸಿಕ್ಕು …ಅವರೆಲ್ಲರೂ ಬರೆಯತೊಡಗಿದ್ದರೆ…  ಸೊಂಡೂರು ಪ್ರದೇಶಕ್ಕೆ,ಜನರಿಗೆ  ಆದ ಅನ್ಯಾಯವನ್ನು ಜಗತ್ತಿಗೆ ಸಾರುತ್ತಿದ್ದವು. ಆದರೆ, ಓಡಲಾಗದೆ ಬಸವಳಿದು ಸಿಕ್ಕಿಹಾಕಿಕೊಂಡು ಕಳ್ಳನಂತೆ ಊರು ಮಾತ್ರ ಬೆತ್ತಲೆಯಾಗಿ ನಿಂತುಕೊಂಡಿದೆ!.

ಎಲ್ಲೋ ದುಡಕೊಂಡು ವಾಪಸ್ ಬರ್ತೀನಿ ಎಂದು ಹೋದ ಮಗನ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತ ತಾಯಿ.ಗೋಡೆಯ ಮೇಲಿನ ಪಟ ಸೇರಿರುವ ತಂದೆ. ಒಂದು ಊರಿನ ಅಂತರಂಗವೆ ಸೋತುಹೋದಾಗ ಏನು ತಾನೆ ಮಾಡಲು ಸಾಧ್ಯ?

             ಬಿ.ಶ್ರೀನಿವಾಸ.

 

TAGGED:dinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article sanduru - stories ಸೊಂಡೂರಿನ ಕಗ್ಗತ್ತಲೆಯ ಕಥನಗಳು-16 ಅವನನ್ನು ಹುಚ್ಚನೆಂದು ನಾನಂತೂ ಕರೆಯಲಾರೆ
Next Article DAVANAGERE ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಧಾನ್ಯಗಳ ಪರಿಶೀಲನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು -9 ನಿಜ…, ಮಕ್ಕಳ ಮುಂದೆ ಅಪ್ಪ ಅಳಬಾರದು

ಮಕ್ಕಳ ಮುಂದೆ ಅಪ್ಪ ಅಳಬಾರದು ಅಪ್ಪನ ಕಣ್ಮುಂದೆ ಮಕ್ಕಳು ಸಾಯಬಾರದು ಪ್ರಭುಗಳ ಮುಂದೆ ಪ್ರಜೆಗಳು ನರಳಬಾರದು. ಕೈಯ್ಯ ಕಸುಬುಗಳನ್ನು ಕಿತ್ತುಕೊಂಡು…

By Dinamaana Kannada News

Davanagere | ಹರಿಹರದಲ್ಲಿ ನೂತನವಾಗಿ ದೂಡಾ ಕಚೇರಿ ನಿರ್ಮಾಣ : ದಿನೇಶ್ ಕೆ ಶೆಟ್ಟಿ ಸ್ಥಳ ಪರಿಶೀಲನೆ

ದಾವಣಗೆರೆ (Davanagere) : ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ದಿನೇಶ್ ಕೆ ಶೆಟ್ಟಿ ಹಾಗೂ ಆಯುಕ್ತ  ಹುಲ್ಮನೆ ತಿಮ್ಮಣ್ಣ ಮತ್ತು…

By Dinamaana Kannada News

ಒಂದು ಪದವೀಧರ ಕ್ಷೇತ್ರ, ಮತದಾರರ ನೊಂದಣಿಗೆ ಮೇ 6 ಕೊನೆ ದಿನ   

ದಾವಣಗೆರೆ.ಮೇ.2  :  ಚುನಾವಣಾ ಆಯೋಗವು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು ದಾವಣಗೆರೆ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಆಗ್ನೇಯ…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?