Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-24 …….. ಧ್ಯಾನ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-24 …….. ಧ್ಯಾನ

Dinamaana Kannada News
Last updated: May 15, 2024 4:49 am
Dinamaana Kannada News
Share
Sanduru sotries
ಸಂಡೂರಿನ ಕಥನಗಳು
SHARE

ಧ್ಯಾನ……..ಇಂತಹದೊಂದು ವಿಷಮ ಸಾಮಾಜಿಕ ವ್ಯವಸ್ಥೆಗೆ ನಾವು ಬಾಧ್ಯಸ್ಥರಲ್ಲವೆಂದು ದೂರದ ಊರುಗಳಲ್ಲಿ, ನಾವು  ಏನೂ ಆಗಿಯೇ ಇಲ್ಲವೆಂದು ತಣ್ಣಗೆ ನಮ್ಮ ನಮ್ಮ ಪಡಿಪಾಟಲುಗಳಲ್ಲಿ ಮುಳುಗಿ ಹೋಗಿರುತ್ತೇವೆ.

ಕೆಲವೊಂದು ಘಟನೆಗಳು ಕಣ್ಣಿಗೆ ಕಾಣದೆ ಹೋಗಿಬಿಡುತ್ತವೆ.ಮಧ್ಯಮ ವರ್ಗದ ಬಹುಪಾಲು ಮತ್ತು ಕೆಳಮಧ್ಯಮ ವರ್ಗಗಳ ಕುಟುಂಬಗಳಿಗೆ ಟೀವಿಯಲ್ಲಿ ತೋರಿಸುವ ಜಗತ್ತೇ ಸತ್ಯವಾಗಿಬಿಡುತ್ತದೆ. ಈ ಹೊತ್ತು ಕೂಡ ಟೀವಿ ಸೀರಿಯಲ್ಲುಗಳಲ್ಲಿ ಬಡತನದ ಬೇಗೆಯಲ್ಲಿ ಬೇಯುತ್ತಿರುವ  ಒಂದೇ ಒಂದು ಕುಟುಂಬದ ಕುರಿತು ವರದಿಗಳಿರುವುದಿಲ್ಲ. ಧಾರವಾಹಿಗಳು ನಿರ್ಮಾಣವಾಗುತ್ತಿಲ್ಲ. ಅಂದರೆ ಕಣ್ಣಿಗೆ ಕಾಣದ ಅನೇಕ ಸಂಕಟಗಳು ನಮ್ಮೊಡನಿದ್ದೂ ಪ್ರಜ್ಞಾವಂತ ಜನ ಬದುಕುವುದಿದೆಯಲ್ಲ, ಅದು ಅತ್ಯಂತ ಅಪಾಯಕಾರಿಯಾದುದು  ಸೊಂಡೂರು ಸುತ್ತಲಿನ ಹಳ್ಳಿಗಳಲ್ಲಿ ನರಮೇಧಗಳು ನಡೆದಿಲ್ಲ. ರಕ್ತ ಹರಿದಿಲ್ಲ ಎನ್ನುವುದೂ ನಿಜವೆ.  ಭಯೋತ್ಪಾದನೆಯಂತಹ ಸಮಸ್ಯೆಯೂ ಇಲ್ಲಿಲ್ಲ.  ಕರ್ನಾಟಕದ ಕಾಶ್ಮೀರ ವೆಂದು ಬಿಂಬಿತವಾಗಿದ್ದ ಈ ಸುಂದರಪುರದ ಗರ್ಭಗಳಲ್ಲಿ ಅದೆಷ್ಟು ತಲ್ಲಣಗಳು ಅಡಗಿವೆ ಎಂಬುದಕ್ಕೆ ಈ ಕೆಳಗಿನ ಘಟನೆಯೆ ಸಾಕ್ಷಿ.

ಯಶವಂತನಗರ…!

ಹೀಗೆ ಹೇಳಿದರೆ ಜನ ,ಓ…ಕಣಿವೆ ಹಳ್ಳಿ ಎಂದು ಉಧ್ಘರಿಸುತ್ತಾರೆ.  ಊರಿನ ಹೆಸರುಗಳಿಗೆ ಘೋರ್ಪಡೆ ಮಹಾರಾಜರು ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನು ಒಂದೊಂದು ಹಳ್ಳಿಗೆ ಹೆಸರಿಟ್ಟರು.  ಭುಜಂಗ ರಾವ್ ಘೋರ್ಪಡೆ ಹೆಸರಿನ ಭುಜಂಗ ನಗರವನ್ನು ಜನ ಇಂದಿಗೂ ಕರೆಯೋದು ಮಾತ್ರ ಹೊಸಳ್ಳಿ ಅಂತಲೇ.ಅಂತದೇ ಪ್ರಕೃತಿಯ ಬೆಟ್ಟಗಳ ತಪ್ಪಲಲ್ಲಿರುವ ಕಣಿವೆಹಳ್ಳಿಗೆ ಯಶವಂತರಾವ್ ಘೋರ್ಪಡೆ ರಾಜರ ನೆನಪಿಗೆ, ಯಶವಂತನಗರ ಅಂತ ಹೆಸರಿಟ್ಟರೂ ಜನ “ಕಣಿವೆಳ್ಳಿಗೆ ಎಲ್ಡು ತಿಕೇಟು ಕೊಡಪ…”ಅಂತಲೇ ಕೇಳೋದು.ಆ ಮಟ್ಟಿಗೆ ಜನ ತಮ್ಮ ಪ್ರತಿರೋಧ ದಾಖಲಿಸುತ್ತಿದ್ದರು.

ಧ್ಯಾನ ಮಾಡೋಕೆ  ಆಗಲಿಲ್ಲ ನೋಡ್ರೀ…

ಈ ಪುಟ್ಟ ಊರಿನ ಪ್ರವೇಶದ್ವಾರದಲ್ಲಿಯೇ ಆತ ನಮಗೆ ಎದುರಾದ.” ಇಷ್ಟು ದಿನ, ಯುದ್ಧಭೂಮಿಯಲ್ಲಿ ಇದ್ವಿರಪ, ಹೀಗಾಗಿ ಏನೂ ಮಾಡಲಾಗಲಿಲ್ಲ”ಎಂದ. ಇದ್ದಕ್ಕಿದ್ದಂತೆ ಎದುರಾದ ಈ ಕುರುಚಲು ಗಡ್ಡದವನು ನೀಟಾಗಿಯೇ ಇದ್ದ. ಪ್ಯಾಂಟು ಅಂಗಿಯ ಇಸ್ತ್ರಿ ಕೂಡ ಸರಿಯಾಗಿಯೆ ಇತ್ತು. ಕ್ರಾಪು ತೆಗೆದ ಅವನ ಕೂದಲೂ ಸಹ ಅವನ ಬಾಚುವಿಕೆಯ ಶಿಸ್ತನ್ನು  ಸಾರಿ ಹೇಳುತ್ತಿತ್ತು. ” ಮೈನಿಂಗ್ ಕೆಲಸದ ಧಾವಂತದೊಳಗೆ ಧ್ಯಾನ ಮಾಡೋಕೆ  ಆಗಲಿಲ್ಲ ನೋಡ್ರೀ…” ನಕ್ಕು ಮುಂದುವರೆಸಿದ.

ನಾನು ಮತ್ತು ನನ್ನ ಗೆಳೆಯ ನಾರಾಯಣ, ಆತ ಏನು ಹೇಳುತ್ತಿದ್ದಾನೆ ಎಂಬುದನ್ನು ಅರಿಯಲು ಸ್ವಲ್ಪ ಹೊತ್ತು ಬೇಕಾಯಿತು. ನಾವು ಅವನನ್ನೆ ನೋಡುತ್ತಿದ್ದೆವು. ನಾನು ಆತನನ್ನೊಮ್ಮೆ ಗೆಳೆಯ ನಾರಾಯಣನ ಮುಖವನ್ನೊಮ್ಮೆ ನೋಡಿದೆ. ಗೆಳೆಯ ನಾರಾಯಣ ನನ್ನೊಟ್ಟಿಗೆ ಎರಡು ದಶಕಗಳ ಹಿಂದೆ ಕಾಲೇಜಿನಲ್ಲಿ ಕೆಲಸ ಮಾಡಿದವರು.ಇದೇ ಸೊಂಡೂರಿನ ಪರಿಸರದಲ್ಲಿಯೆ ಹುಟ್ಟಿ ಬೆಳೆದವರು.

ಕಾಳಗದೊಳಗೆ ಧ್ಯಾನಕ್ಕೆ ಸಮಯವೆಲ್ಲಿರುತ್ತದೆ ಅಲ್ಲವೇ..?”

“ಇರಲಿ…ಇರಲಿ…ನಡೆಯಪ್ಪಾ..”ಎಂದು ಸಮಾಧಾನದಿಂದ ಸಾಗಹಾಕಲು ನೋಡಿದ. ಆದರೆ,  ಆ ಯುವಕ ಏನೋ ಹೇಳಬೇಕೆಂದುಕೊಂಡೋ, ಏನೋ ತನ್ನ ಮಾತನ್ನು ಕೇಳದೆ, ಮುಂದಕ್ಕೆ ಹೆಜ್ಜೆಯಿಡಕೂಡದು ಎಂಬಂತೆ ಮಾತು ಮುಂದುವರೆಸಿದ. “ಕಾಳಗದೊಳಗೆ ಧ್ಯಾನಕ್ಕೆ ಸಮಯವೆಲ್ಲಿರುತ್ತದೆ ಅಲ್ಲವೇ..?” ನಮ್ಮನ್ನೆ ಕೇಳಿದ. ಸಾಹಿತ್ಯದ ಗೀಳಿನ ಆ ಯುವಕ ಹೀಗೆ ಮಾತಾಡುತ್ತಿರಬಹುದು ಎಂದು ನಾವು ಭಾವಿಸಿದೆವು.

ಇಲ್ಲಿ…..ಖುಷಿ ಚಿಕ್ಕಮಕ್ಕಳ ಹಾಕಿದವನೆ ಸಿಸ್ತಾಗಿ ಕಣ್ಣುಮುಚ್ಚಿ ಧ್ಯಾನಕ್ಕೆ ಕುಂತುಬಿಟ್ಟ! ಅಷ್ಟೊತ್ತಿಗೆ ಊರಿನ ಕೆಲ ಜನರು ಬಂದರು. ಆತ ಕೂಡ ಒಬ್ಬ ಗಣಿ ಮೇಸ್ತ್ರಿಯಾಗಿದ್ದನೆಂದು, ಆಗ ಭಾರಿ ಭಾರಿ ದುಡಿದನೆಂದೂ,” ಅಗೋ…ಅಲ್ಲಿ ಕಾಣ್ತೈತಲ್ಲ ಸರ್ , ಅದೇ ಆತನ ಮನೆ ” ಎಂದು  ತೋರಿಸಿದರು.

ಗಣಿಗಾರಿಕೆ ಬಂದ್ ಆದಾಗಿನಿಂದಲೂ ಹೀಗೆ ಸ್ವಲ್ಪ ಮೈಂಡು ಲೂಜು ಆಗಿದೆ…..ಯಾರಿಗೂ ತೊಂದರೆ ಕೊಡುವ ಮನುಷ್ಯ ಅಲ್ಲವೆಂದೂ ಸರ್ಟಿಫಿಕೇಟ್ ಕೂಡ ಕೊಟ್ಟರು. ಅಗೋಚರ ಹಿಂಸೆ ಎಂದರೆ  ಇದೆ ..ಅಲ್ಲವಾ…?

           ಬಿ.ಶ್ರೀನಿವಾಸ

 

TAGGED:dinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article MLA Basavantappa ಗಾಳಿ, ಮಳೆಗೆ ಧರೆಗುರುಳಿದ ಅಡಿಕೆ ಮರಗಳು: ಶಾಸಕ ಕೆ.ಎಸ್.ಬಸವಂತಪ್ಪರಿಂದ ಪರಿಶೀಲನೆ
Next Article Municipal Corporation Davangere ಶೀಘ್ರವೇ ಸಮಸ್ಯೆಗೆ ಪರಿಹಾರ : ಪಾಲಿಕೆ ಆಯುಕ್ತರಾದ ರೇಣುಕಾ ಭರವಸೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಆರ್.ರವಿಗೆ ‘ಎಂ.ನಾಗೇಂದ್ರರಾವ್’ ಪ್ರಶಸ್ತಿ

ದಾವಣಗೆರೆ:  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿವರ್ಷ ಕೊಡ ಮಾಡುವ ಕೆಯುಡಬ್ಲ್ಯೂಯುಜೆ ದತ್ತಿನಿಧಿ ಪ್ರಶಸ್ತಿಗಳನ್ನು ಗುರುವಾರ ಘೋಷಣೆ ಮಾಡಿದ್ದು, ದಾವಣಗೆರೆ…

By Dinamaana Kannada News

ಬೆಳಗಾವಿ ಅಧಿವೇಶನದಲ್ಲಿ ಮಾದಿಗ  ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಶಾಸಕರಿಗೆ ಮನವಿ   

ಹರಿಹರ ಡಿ 16  (Davanagere) :  ಮಾದಿಗ ಮೀಸಲಾತಿ ಹೋರಾಟ ಸಮಿತಿ   ವತಿಯಿಂದ  ಸುಪ್ರಿಂ ಕೋರ್ಟಿನ  ಆದೇಶದಂತೆ   ಒಳ ಮೀಸಲಾತಿ…

By Dinamaana Kannada News

Davanagere news | ಕಿತ್ತೂರಿನಲ್ಲಿ ನಡೆದ ಮೊದಲ ಕಾಳಗವೇ ಸ್ವಾತಂತ್ರ‍್ಯ ಸಂಗ್ರಾಮದ ಮುನ್ನುಡಿ ; ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಅ.23 (Davanagere); ಸ್ವಾತಂತ್ರ‍್ಯ ಸಂಗ್ರಾಮದ ಕಿಚ್ಚು ಕಿತ್ತೂರಿನಲ್ಲಿ 1824ರಲ್ಲಿ ಆರಂಭವಾಗಿದ್ದು ಇದು ಸ್ವಾತಂತ್ರ‍್ಯ ಸಂಗ್ರಾಮದ ಮೊದಲ  ಕಾಳಗ ವಾಗಿತ್ತು…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?