Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-18 ಸುಪ್ರೀಮ್ ಕೋರ್ಟು ನೇಮಿಸಿದ ಸಾಗರಧಾರಾ ಸಮಿತಿ ವರದಿ
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-18 ಸುಪ್ರೀಮ್ ಕೋರ್ಟು ನೇಮಿಸಿದ ಸಾಗರಧಾರಾ ಸಮಿತಿ ವರದಿ

Dinamaana Kannada News
Last updated: May 9, 2024 4:25 am
Dinamaana Kannada News
Share
DAVANAGERE
ಸಂಡೂರಿನ ಕಥನಗಳು
SHARE

ಯಾವಾಗ ಗಣಿಗಾರಿಕೆಯು ಎಗ್ಗಿಲ್ಲದೆ ಸಾಗಿತೋ ಅಲ್ಲಲ್ಲಿ ಕೆಲ ಪ್ರಜ್ಞಾವಂತ ಹುಡುಗರೂ ಎಚ್ಚತ್ತುಕೊಂಡರು. ಆದರೆ, ಈ ಪ್ರಜ್ಞೆಗೆ ಸಾಕಷ್ಟು ಬಲ ಇರಲಿಲ್ಲ. ಹಳ್ಳಿಯೊಂದರಲ್ಲಿ ಹುಡುಗರು ಸಭೆಯೊಂದರಲ್ಲಿ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ. ಅಲ್ಲಿಂದ ಶುರುವಾದ ಸಣ್ಣಕಿಡಿಯೊಂದು ಆಗಬಹುದಾದ ಬಹುದೊಡ್ಡ ಅನಾಹುತಗಳನ್ನು ತಪ್ಪಿಸಿದ್ದಲ್ಲದೆ, ದೇಶದ ಅತ್ಯುನ್ನತ ನ್ಯಾಯಾಲಯದವರೆಗೂ ಸಮಸ್ಯೆಯನ್ನು ಹೊತ್ತೊಯ್ಯಲು ಸಾಧ್ಯವಾಯಿತು.

ಕಣ್ಣಮುಂದೆ ಹಸಿವಿತ್ತು

ಜನರಿಗೆ ಈ ಯಾವ ಪ್ರಕ್ರಿಯೆಗಳ ಬಗ್ಗೆಯೂ ಆಸಕ್ತಿಯಿರಲಿಲ್ಲ.ಕಣ್ಣಮುಂದೆ ಹಸಿವಿತ್ತು, ಮಕ್ಕಳಿದ್ದರು ಅವರಿಗಾಗಿ ಅವರು ಗಣಿಗಳಲ್ಲಿ ದುಡಿಯುವುದು ಅನಿವಾರ್ಯವಾಗಿತ್ತು. ಯಾವಾಗ ಕೆಲ ಗಣಿಧಣಿಗಳ ಹಫ್ತಾ ವಸೂಲಿಗಳಿಂದ ಅವರಲ್ಲಿಯೇ ಕ್ಷೋಭೆ ಆರಂಭವಾಯಿತೋ ಒಂದೊಂದಾಗಿ ವಿಷಯಗಳು ಹೊರ ಬರತೊಡಗಿದವು.

ಗಣಿ ಕಂಪೆನಿಗಳಿಗೆ ಕಿರಿಕಿರಿ

ರಾಜಕಾರಣಿಯೂ ಆಗಿ, ಇನ್ನೇನು ಮುಖ್ಯಮಂತ್ರಿ ಕೂಡ ಆಗಿಬಿಡಬಹುದಾದ ಲೆವೆಲ್ಲಿಗೆ ಹೋಗಿದ್ದ ಗಣಿಧಣಿಯೊಬ್ಬನ ಅತಿಯಾದ ವೈಭವ, ಆಧುನಿಕ ಶ್ರೀಕೃಷ್ಣದೇವರಾಯನೇ ಆಗುವ ಹಂಬಲವು, ತಲೆಮಾರುಗಳಿಂದ ಗಣಿಗಾರಿಕೆಯನ್ನು ನಡೆಸುತ್ತಲೇ ಬಂದ ದಾಲ್ಮಿಯಾ, ಬಲ್ಡೋಟ ಮತ್ತು ಎಮ್.ಎಸ್.ಪಿ.ಎಲ್ ಗಳಂತಹ ಗಣಿ ಕಂಪೆನಿಗಳಿಗೆ ಇದರಿಂದ ಕಿರಿಕಿರಿಯಾಗಿರಬೇಕು. ಇದು ನಂತರದ ದಿನಗಳಲ್ಲಿ ರಾಜಕೀಯ ತಿರುವು ಪಡೆದುಕೊಂಡಿದ್ದೂ ಅಲ್ಲದೆ, ಕರ್ನಾಟಕ ರಾಜ್ಯದ ಅಂದಿನ ಆಡಳಿತ ವಿರೋಧಿ ಅಲೆಯಾಗಿ ಮಾರ್ಪಟ್ಟು ಒಂದಿಡೀ ವ್ಯವಸ್ಥೆಯನ್ನೇ ಬದಲಿಸಿಬಿಟ್ಟಿತು. ಅಷ್ಟೇ ಅಲ್ಲದೆ ಹಿರೇಮಠರು ಮತ್ತವರ ಸಹ ಹೋರಾಟಗಾರರಿಂದಾಗಿ ಸುಪ್ರೀಮ್ ಕೋರ್ಟಿನಲ್ಲಿನ ಹಸಿರು ಪೀಠಕ್ಕೊಂದು ಖದರ್ ಕೂಡ ಬಂದಿತು. ಅದರ ಅಧ್ಯಯನಗಳ ಫಲಶ್ರುತಿಯಿಂದಾಗಿ ಸ್ವಲ್ಪಮಟ್ಟಿಗಾದರೂ ಜನ ಉಸಿರಾಡುವಂತಾದರು.

ವರ್ಷಕ್ಕೆ ಕನಿಷ್ಠ ನಾಲ್ಕು ಸಾವಿರ ಕೋಟಿ ರೂಪಾಯಿಗಳಷ್ಟು ಲಾಭ ಮಾಡಿಕೊಳ್ಳುವ ಸಂಡೂರಿನ ಖಾಸಗಿ ಗಣಿ ಕಂಪೆನಿಗಳು ತಮ್ಮ ಚಟುವಟಿಕೆಗಳಿಂದ ಉಂಟಾದ ಪರಿಸರ,ಕೃಷಿ,ಆರೋಗ್ಯ ಸಮಸ್ಯೆಗಳಿಂದಾಗಿ ಬಡಜನರ ಬದುಕನ್ನೆ ಆಹುತಿ ತೆಗೆದುಕೊಂಡಿವೇ ಎಂದು ಹೈದರಾಬಾದಿನ ಸಾಗರಧಾರಾ ತಜ್ಞರು ಸಮಿತಿ ವರದಿ ನೀಡಿದೆ.

ಸಮಿತಿಯ ವರದಿ ಪ್ರಕಾರ

ಸೊಂಡೂರು ತಾಲ್ಲೂಕಿನ ವಾಯುಮಾಲಿನ್ಯ , ಸ್ಥಳೀಯ ಕೃಷಿ ಉತ್ಪಾದನೆ ಮತ್ತು ಹೈನುಗಾರಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಮಾವಿನ ಮರದ ಫಲ ಧಾರಣೆ 500 ಹಣ್ಣುಗಳಿಂದ 150ಕ್ಕೆ ಇಳಿದಿದೆ. ಧೂಳು ಮೆತ್ತಿದ ಹುಲ್ಲು ಮೇಯ್ದು ಜಾನುವಾರುಗಳಿಂದ ಹಾಲಿನ ಉತ್ಪಾದನೆಯೂ ಸಹ ಶೇ.25ರಷ್ಟು ಕುಸಿತವಾಗಿದೆ. ಶೇ.20 ರಷ್ಟು ಮಕ್ಕಳಲ್ಲಿ ಉಬ್ಬಸ ವ್ಯಾಧಿ ಕಂಡು ಬಂದಿದೆ. ಕಬ್ಬಿಣದ ಅದಿರಿನ ಧೂಳು ಕ್ಯಾನ್ಸರ್ ಕಾಯಿಲೆ ಸಂಭವವನ್ನು ಹೆಚ್ಚಿಸುತ್ತದೆ. ಗಣಿಗಾರಿಕೆಯಿಂದ ಬಿಡುಗಡೆಯಾದ ಇಂಗಾಲದ ಆಕ್ಸೈಡ್ ಮತ್ತು ಇಂಗಾಲ ಆಮ್ಲವನ್ನು ಹೀರಿಕೊಳ್ಳುವ ಹಸಿರು ಬೆಳಸಬೇಕಿತ್ತು.ಇದಕ್ಕಾಗಿ ಆಯಾ ವರ್ಷದಲ್ಲಿ ಕಂಪೆನಿಗಳು 120 ಕೋಟಿ ರೂ.ಖರ್ಚು ಮಾಡಬೇಕಿತ್ತು.ಆದರೆ ಯಾವ ಕಂಪೆನಿಗಳು ತಲೆ ಕೆಡಿಸಿಕೊಂಡಿಲ್ಲ ಎಂದು ಸಹ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿ.ಶ್ರೀನಿವಾಸ

TAGGED:dinamaana.comLatest Kannada NewsSanduru sotriesಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article DAVANAGERE ಶಾಸಕ ಶಾಮನೂರು ಶಿವಶಂಕರಪ್ಪ ಅವರಿಂದ ಧಾನ್ಯಗಳ ಪರಿಶೀಲನೆ
Next Article davanagere ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಕರ್ನಾಟಕದಲ್ಲಿ ಅಡಿಕೆ ಮಂಡಳಿ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ.ಮಾ.12 (Davanagere);  ಅಡಿಕೆ ಬೆಳೆಗಾರರ ದೀರ್ಘಕಾಲಿಕ ಹಿತಕ್ಕಾಗಿ ಬೆಲೆ ಸ್ಥಿರತೆ, ಸಂಶೋಧನೆ, ವಿಸ್ತರಣೆ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸಲು ಬಿಹಾರದಲ್ಲಿರುವ…

By Dinamaana Kannada News

Davanagere news | ರೈತರನ್ನು ಒಕ್ಕಲೆಬ್ಬಿಸದಂತೆ ಶಾಸಕ ಕೆ.ಎಸ್.ಬಸವಂತಪ್ಪ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಮನವಿ

ದಾವಣಗೆರೆ (Davanagere): ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಸುಮಾರು 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು, ಜಮೀನು ಉಳುಮೆ…

By Dinamaana Kannada News

ಲೋಕಾ ಬಲೆಗೆ ಮಹಾನಗರ ಪಾಲಿಕೆ ನೌಕರರು

ದಾವಣಗೆರೆ :  ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕಾರ ಮಾಡುತ್ತಿದ್ದ ಇಬ್ಬರು ಪಾಲಿಕೆ ನೌಕರರು  ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಾನಗರ ಪಾಲಿಕೆಯ…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?