Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು -9 ನಿಜ…, ಮಕ್ಕಳ ಮುಂದೆ ಅಪ್ಪ ಅಳಬಾರದು
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು -9 ನಿಜ…, ಮಕ್ಕಳ ಮುಂದೆ ಅಪ್ಪ ಅಳಬಾರದು

Dinamaana Kannada News
Last updated: April 30, 2024 4:46 am
Dinamaana Kannada News
Share
Sanduru stories 9
ಸೊಂಡೂರಿನ ಕಗ್ಗತ್ತಲೆಯ ಕಥನಗಳು -9
SHARE

ಮಕ್ಕಳ ಮುಂದೆ

ಅಪ್ಪ ಅಳಬಾರದು

ಅಪ್ಪನ ಕಣ್ಮುಂದೆ

ಮಕ್ಕಳು ಸಾಯಬಾರದು

ಪ್ರಭುಗಳ ಮುಂದೆ

ಪ್ರಜೆಗಳು ನರಳಬಾರದು.

ಕೈಯ್ಯ ಕಸುಬುಗಳನ್ನು ಕಿತ್ತುಕೊಂಡು ಬರಿಗೈದಾಸರನ್ನಾಗಿಸಿ ಬೀದಿಗೆ ಬಿಟ್ಟ ಗಣಿಗಳಿಗೆ , ಧಣಿಗಳಿಗೆ ಕರುಳೆಂಬುದಿಲ್ಲ. ಜನರ ಬದುಕಿನ ಯಾವ ದಾರಿಗಳೂ ಸುಗಮವಾಗಿಲ್ಲ. ಕಳೇಬರಗಳ ಮುಂದೆ ಕುಂತವರ  ಮೌನಕ್ಕೆ,ಕಣ್ಣೀರಿಗೆ ಕಾರಣಗಳನ್ನು ಕೇಳಬಾರದಂತೆ.  ಇಷ್ಟುದಿನ ಮಣ್ಣಿನ ಮೇಲೆಯೇ ಓಡಾಡುತ್ತಿದ್ದ ರೈತನ ಪಾದಗಳು, ಇದೀಗ ಆತನ ಎದೆಯ ಮೇಲೆ ಅದೇ ಮಣ್ಣಿನ ಮೃದು ಪಾದಗಳಿವೆ.

ಗುಡ್ಡಗಳಲ್ಲಿ ಯಾರೋ ಗೀರಿದಂತೆ ತೋರುತ್ತಿದ್ದ ಲಾರಿ  ದಾರಿಗಳು. ಮಿಣುಕು ಹುಳುವಿನ ಬೆಳಕಿನಂತೆ ತೋರುವ ದೂರದ ಲಾರಿಯ ಲೈಟುಗಳು ಮಿನುಗುವಾಗ ಸುತ್ತಲಿನ ಹಳ್ಳಿಯ ಮುದುಕರು ಆ ಲಾರಿ ಓಡಿಸುವವನು ತಮ್ಮ ಮಗ, ಮೊಮ್ಮಗನೇ ಇರಬೇಕೆಂದು ತರ್ಕಿಸುತ್ತ ಗಂಭೀರವಾಗಿ ಬೀಡಿಯ ಹೊಗೆಯನ್ನು ಬಿಡುತ್ತಿದ್ದರು.

ಮಣ್ಣು ಕಲ್ಲು,ಧೂಳಿಗೂ ರೊಕ್ಕದ ಮತ್ತೇರಿದಾಗ ಸೊಂಡೂರಿನ ಬೀದಿಗಳಲ್ಲಿ ಎತ್ತು,  ಆಕಳು, ಹೊಲ ಗದ್ದೆ, ಬೆಳೆಗಳೆನ್ನುವ ಪದಗಳೆಲ್ಲ ಯಾವುದೋ ಟಿಪ್ಪರುಗಳ ಮಣ್ಣಿನ ಜೊತೆ ಸೇರಿ ಮಾಯವಾಗಿ ಹೋದವು.

ಸುರಿಯುತ್ತಲೇ ಇದೆ ಮತ್ತೆ ಮಳೆ.  ಮಳೆಯ ನೀರು ಇಳೆಗೆ ಸೇರುವ ಮುನ್ನವೇ ಮಗಳಿಗೆ ಈ ಬಾರಿಯ ಸುಗ್ಗಿಗೆ ಹೊಸ ಸೀರೆ ಕೊಡಿಸುವ ಕನಸು ಕಾಣುವ ರೈತ , ತನ್ನ ನಡುಗುವ ಕೈಕಾಲುಗಳ ಕಂಡು ಮತ್ತಷ್ಟು ನಿಸ್ತೇಜಿತನಂತೆ ಕಾಣುವನು. ಇಂಥಾ ಅದೆಷ್ಟೋ  ಚಿತ್ರಗಳು ಊರಿನ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ.

ಒಂದು ಕಾಲದಲ್ಲಿ ಈ ಗಣಿಗಾರಿಕೆಯ ಮಾಮೂಲಿ ಮೇಸ್ತ್ರಿಗಳೂ ಲಕ್ಷ ಲಕ್ಷ ದುಡ್ಡು ಎಣಿಸುತ್ತಿದ್ದರು. ಆಗೆಲ್ಲ ರಾತ್ರಿ ಹೊತ್ತು ಪಕ್ಕದ ಕೂಡ್ಲಿಗಿಗೆ ಬಂದು ನಾಟಕ ಕಲಾವಿದೆಯರ ಮನೆಗಳಲ್ಲಿ ರಾತ್ರಿ ಕಳೆಯುತ್ತಿದ್ದರು. ಕೆಲವು ಮಧ್ಯಮ ವರ್ಗದ ಹೆಣ್ಣು ಮಕ್ಕಳು ದೇವದಾಸಿ ಪದ್ದತಿಯ ಹೆಸರಿನಲ್ಲಿ ದೇಹಮಾರಿ ಬದುಕುವ ಮತ್ತು ಹೀಗೆ ಬರುವ ಗಂಡಸರ ಆತಿಥ್ಯಕ್ಕೆ ಊರು ಹೆಸರಾಗಿತ್ತು. ಈ ಊರಿನಲ್ಲಿ ಎಷ್ಟೋ ಕುಟುಂಬಗಳ ಹಸಿವನ್ನು ನೀಗಿಸುವವರೆಲ್ಲ ಬಹುತೇಕರು ಹೆಣ್ಮಕ್ಕಳೇ ಆಗಿದ್ದರು.

ಹೊಸಪೇಟೆ, ಸೊಂಡೂರುಗಳಿಂದ ಗಣಿಧಣಿಗಳು, ಮೇಸ್ತ್ರಿಗಳು, ಕೆಲವೊಮ್ಮೆ ಕೆಲವು ಕೂಲಿಕಾರರೂ ಅವರವರ ಶಕ್ತ್ಯಾನುಸಾರ ಬಂದು ಹೋಗುತ್ತಿದ್ದರು. ಅಕ್ರಮ ಗಣಿಗಾರಿಕೆ ಬಯಲಿಗೆ ಬಂದು, ನಿಂತು ಹೋದಾಗಲೂ ಇವರ ಹೊಟ್ಟೆಗಳಿಗೆ ತಂಗಲು ಬಟ್ಟೆಯೆ ಗತಿಯಾಯಿತು. ಬೇರೆ ಯಾವುದೇ ಉದ್ಯೋಗಗಳೇ  ಇಲ್ಲದ ಊರಿನಲ್ಲಿ ಇಂಥವರೆಲ್ಲ ಕಂಗಾಲಾದರು.

ಒಂದು ಬದಿಯಲಿ

ಅಪ್ಪನ ಹುಡುಕುತ್ತಾ ನಿಂತ ಹುಡುಗ

ಇನ್ನೊಂದು ಬದಿಗೆ

ಗಿರಾಕಿ ಹುಡುಕುತ್ತಾ ನಿಂತ ಅವ್ವ!

ಇಂಥಾ ಚಿತ್ರಗಳು ನಮ್ಮ ಕಣ್ಣಿಗೆ ಕಾಣಿಸುವ ಸರ್ವೇಸಾಮಾನ್ಯವಾಗಿ  ಚಿತ್ರಗಳಾಗಿ  ಹೋದವು.

ಬಿ.ಶ್ರೀನಿವಾಸ

TAGGED:dinamaana.comKannada Newssanduru mining.ಕನ್ನಡ ನ್ಯೂಸ್‌ದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davangere ಚೆಕ್ ಬೌನ್ಸ್ ಪ್ರಕರಣ: ಶಿಕ್ಷಕಿಗೆ ಕಾರಗೃಹ ಶಿಕ್ಷೆ
Next Article SUCI davanagere ಜನರ ಹಸಿವಿನ ಕೂಗು ಪ್ರಧಾನಿ ಮೋದಿಗೆ ಕೇಳಿಸದೆ?  ಕೆ ಉಮಾ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

ಹಳೇಬಾತಿ ದರ್ಗಾಕ್ಕೆ ಭೇಟಿ ನೀಡಿ ಸಚಿವರಿಂದ ಪೂಜೆ ಸಲ್ಲಿಕೆ

ದಾವಣಗೆರೆ: ದಾವಣಗೆರೆಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ (SS Mallikarjun) ಅವರು ಹಳೆಬಾತಿ ಗ್ರಾಮದಲ್ಲಿರುವ ಹಜರತ್ ಜಮಾನ್ ಶಾವಲಿ ದರ್ಗಾಕ್ಕೆ…

By Dinamaana Kannada News

Davanagere news | ಒಳಮೀಸಲು ಜಾರಿಗೊಳಿಸಲು ಮಾದಿಗ ಸಮುದಾಯದ ಮುಖಂಡರಿಂದ ಮನವಿ

ದಾವಣಗೆರೆ (Davanagere ):  ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿಗೆ ತುರ್ತು ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಮಾದಿಗ ಸಮುದಾಯದ…

By Dinamaana Kannada News

ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡಿಗೆ ಪ್ರಾತಃಸ್ಮರಣೀಯರು : ಕೆ.ರಾಘವೇಂದ್ರ ನಾಯರಿ

ದಾವಣಗೆರೆ : ಕನ್ನಡ  ನಾಡಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕೆಆರ್‌ಎಸ್ ಅಣೆಕಟ್ಟು, ವಾಣಿ ವಿಲಾಸ ಸಾಗರ, ಶಿವನಸಮುದ್ರ ಜಲ ವಿದ್ಯುತ್…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?