Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?

Dinamaana Kannada News
Last updated: June 3, 2024 3:23 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 03-06-2024

ಮುದುಕರು ಈಗೀಗ  ಮೌನ…(Sanduru Stories)

ಮುದುಕರು ಈಗೀಗ ಯಾರೊಂದಿಗೂ ಮಾತನಾಡದೆಯೂ ದಿನ ಕಳೆಯುತ್ತಾರೆ. ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಮಾಡಲಾಗದವರು, ಕೈಲಾಗದ ವ್ಯಕ್ತಿಗಳು ಎಂದು ಸಮಾಜವೇ ನಿರ್ಧರಿಸಿರುವಾಗ ಮಾತಾಡುವುದು ಆದರೂ ಹೇಗೆ? ಅರೆ, ಭೂಮಿಯನ್ನು ಕರೆಯುವಾಗ,ಭೂಮಿಯ ಗರ್ಭ ಸೀಳುವಾಗ ಸುಮ್ಮನಿದ್ದವರು ಈಗ ಮಾತಾಡಿಯಾದರೂ ಏನು ಪ್ರಯೋಜನ ಎಂಬ ಭಾವ.

ಅಂದವಾದ ಶವಪೆಟ್ಟಿಗೆ ತಯಾರಿಸಿ (Sanduru Stories)

ಅಂದವಾದ ಶವಪೆಟ್ಟಿಗೆ ತಯಾರಿಸಿ, ಎಲ್ಲಾ ಮರದ ಕೆಲಸ ಮುಗಿಸಿದ ನಂತರ ಒಂದು ಕ್ಷಣ ಸಂತೋಷದಿಂದ ಶವ ಪೆಟ್ಟಿಗೆಯನ್ನು ಸವರಿದ ಬಡಗಿ ಅದೇ ಶವಪೆಟ್ಟಿಗೆಯಲ್ಲಿ ಜೀವದ ಗೆಳೆಯನನ್ನು ಹೊತ್ತು ನಡೆಯುವಾಗ ಅನುಭವಿಸಿದ ಸ್ಥಿತಿ ಸೊಂಡೂರಿನ ಜನರದ್ದು.

ಹೆಂಡತಿ ಉಪವಾಸ ಬಿದ್ದು ಹೊಲ ಮಾರುವುದು ಬೇಡವೆಂದರೂ,ತಾಯಾಣೆ,ಮಕ್ಕಳಾಣೇ ಹೊಲ ಮಾರುವುದಿಲ್ಲವೆಂದು ಆಣೆಪ್ರಮಾಣ ಮಾಡಿಸಿಕೊಂಡರೂ ಕೇಳದೆ ಬೆಳೆವ ಹೊಲ ಮಾರಿ ತಪ್ಪು ಮಾಡಿದೆ ಎಂಬ ಭಾವದಲ್ಲಿರುವ ಒಂದು ಕಾಲದ ಎಷ್ಟೊಂದು ಹೊಲದೊಡೆಯರನ್ನು ಕಂಡೆವು!

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

ಒಂದು ಕಾಲದ ಹೊಲದೊಡೆಯ

ಮಾಲೀಕನ ಮನೆಯ ಗುಲಾಬಿ ತೋಟಕೆ ನೀರು ಹನಿಸುತ

ಭಿಕ್ಷೆ ಬೇಡುತ

ತನ್ನವರ ಸಮಾಧಿ ಹುಡುಕುತ್ತಾ ನಿಂತ

ಎಷ್ಟೊಂದು ಹೊಲದೊಡೆಯರನ್ನು ಕಂಡೆ!

ಮಕ್ಕಳಅಕಾಲಿಕ ಮರಣ (Sanduru Stories)

ಗಣಿಗಾರಿಕೆಯ ವಿಪರೀತ ದಿಂದಾಗಿ ಕಳೆದುಕೊಂಡ ಬದುಕನ್ನು ಕೆಲ ದಿನಗಳ ಕಾಲ ಡಬ್ಬಿ ಅಂಗಡಿಯಲ್ಲಿ ಗುಟ್ಕಾ ಚೀಟಿ,ಎಲೆ ಅಡಿಕೆ,  ನಿಂಬೆಹುಳಿ ಪೆಪ್ಪರಮಿಂಟು,ಬೀಡಿ ಸಿಗರೇಟು ಗಳಂತಹವುಗಳನ್ನು ಮಾರಿಯೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕುಟುಂಬಗಳ ಮಕ್ಕಳು ಅಕಾಲಿಕ ಮರಣದಿಂದಾಗಿ ಎಲ್ಲಿಗೆ ಹೋದರೆಂದು ಹೇಳಲು ಊರಲ್ಲಿ ಉಳಿದ ಶಾಪಗ್ರಸ್ಥರಂತೆ ತೋರುವ ಜನ ತಯಾರಿಲ್ಲ.

ಸಾವಿಗೆ ಎಷ್ಟೂಂತ ದುಃಖಿಸುವುದು?

ಅತ್ತೂ ಅತ್ತೂ ಮನುಷ್ಯ ಏನಾಗಬೇಡ?

ಯಾರದ್ದೋ ಹೆಣ

ಹೊತ್ತು ನಡೆದಿದ್ದಾರೆ ಊರವರೆಲ್ಲ ಸೇರಿ

ಹತ್ತಿರ ಹೋಗಿ ನೋಡಿದೆ

ಊರಿನದ್ದೇ ಹೆಣ!

ಯಾರೂ ಕಂಗಳಲ್ಲೂ ನೀರಿಲ್ಲ

ಪರದೇಸಿಗಳಾದ ಭೀತಿಯಿದೆ.

            ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davangere ಪೋನ್‌ ಪೇ ಮೂಲಕ ಲಂಚ ಸ್ವೀಕಾರ ಆರೋಪ : ಪೊಲೀಸ್‌ ಹನುಮಂತಪ್ಪ ವಶಕ್ಕೆ
Next Article davanagere ತನ್ಮಯ್. ಕೆ. ಕಾಶಿಗೆ “ಹ್ಯಾಂಡ್ಸಮ್ ಹಂಕ್”  ಪ್ರಶಸ್ತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಲಾನ್ ಟೆನಿಸ್: ಈಶ್ವರಮ್ಮ ಶಾಲಾ ಮಕ್ಕಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ದಾವಣಗೆರೆ (Davanagere)  : ಕಲ್ಬುರ್ಗಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ೧೭ ವರ್ಷದೊಳಗಿನ ಬಾಲಕರ ಲಾನ್ ಟೆನಿಸ್…

By Dinamaana Kannada News

ಸಿ.ಪಿ.ಸತೀಶ ಕುಮಾರ್‌ ಅವರಿಗೆ ಮಾತೃ ವಿಯೋಗ

ದಾವಣಗೆರೆ: ನಗರದ ಗಣೇಶ್ ಪೇಟೆಯ ಪಿಂಜಾರಗಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಹಿಂಬಾಗದ ನಿವಾಸಿ ಸಿ.ಎನ್.ಪ್ರಸನ್ನ ಕುಮಾರ್ ರವರ ಧರ್ಮಪತ್ನಿ ಸಿ.ಪಿ.ಸುಶೀಲಮ್ಮ ಅವರು  13ರ ಶನಿವಾರ ರಾತ್ರಿ…

By Dinamaana Kannada News

ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ : ದಾವಣಗೆರೆ ಮುಸ್ಲಿಂ ಒಕ್ಕೂಟ

ದಾವಣಗೆರೆ (Davanagere): ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟದಿಂದ ನಗರದ ನೂರಾನಿ ಶಾದಿಮಹಲ್‌ನಲ್ಲಿ ಖಂಡನಾ…

By Dinamaana Kannada News

You Might Also Like

Davanagere police
ತಾಜಾ ಸುದ್ದಿ

Davanagere | ಸ್ವಯಂ ಪ್ರೇರಿತ ರಕ್ತದಾನ ಶಿಬಿರ : ಡಾ. ಬಿ ಆರ್ ರವಿಕಾಂತೇಗೌಡ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳ ಕುರಿತು ಪ್ರಧಾನಿಯವರ ನಿರ್ಧಾರಗಳನ್ನು ಎಲ್ಲರೂ ಬೆಂಬಲಿಸಬೇಕು : ಆಲೂರು ನಿಂಗರಾಜ್

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ : ಮೇ.26 ಕೊನೆಯ ದಿನ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಸಮೀಕ್ಷೆಯಲ್ಲಿ ತಾಂತ್ರಿಕ ತೊಡಕು: ಸಮೀಕ್ಷೆ ವಿಸ್ತರಣೆಗೆ ಶಾಸಕ ಕೆ.ಎಸ್.ಬಸವಂತಪ್ಪ ಮನವಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?