Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 48 :  ಆತನೀಗ ಅಳುತ್ತಿಲ್ಲ
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 48 :  ಆತನೀಗ ಅಳುತ್ತಿಲ್ಲ

Dinamaana Kannada News
Last updated: June 8, 2024 1:33 am
Dinamaana Kannada News
Share
sanduu
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 08-06-2024

ಮಸಣದಲ್ಲಿ ಅಳಬಾರದಂತೆ (Sanduru Stories)

ಸಂಡೂರು

ಕಣಿವೆಹಳ್ಳಿ

ಹೊಸಳ್ಳಿ

ಕಲ್ಲಳ್ಳಿ…

ಊರು ಕೇರಿಗಳು,ಗಣಿಧಣಿಗಳ ಸಮೇತ  ಸೆರೆಗೆ ತಳ್ಳಲ್ಪಟ್ಟ ಆರೋಪಿಗಳ ಹಾಗೆ ಮ್ಲಾನತೆಗೆ ಶರಣಾಗಿಬಿಟ್ಟಿವೆ.ಮೊದಲಿನಂತೆ ಹಬ್ಬಗಳಿಲ್ಲ. ಜಾತ್ರೆಗಳಿಲ್ಲ. ದಿನಕ್ಕೊಬ್ಬರು ದಮ್ಮು ರೋಗವೋ , ಪಾರ್ಶ್ವರೋಗಕೋ ಬಲಿಯಾದರೂ ಕೇಳುವವರಿಲ್ಲ. ಮಸಣದಲ್ಲಿ ಅಳಬಾರದಂತೆ …ಮುದುಕ ನಗುತ್ತಲೇ ವಿಷಯಗಳನ್ನು ಹೇಳುತ್ತಿದ್ದ.

ಹೋದವಾರ ಸ್ವಾದ್ರಮಾವ ತೀರಿಕೊಂಡ, ಹೋಗಾಕಲಿಲ್ಲ, ಮೊನ್ನೆ ಮೊನ್ನೆ ಹರೇದ ಹುಡುಗ ಏನಾಗಿತ್ತೋ ಏನೋ…ಸತ್ತೋದ. ಏನು ಮಾಡೋಕಾಗುತ್ತೆ ಎಂಬಂತೆ ನಿರ್ಭಾವುಕನಾಗಿ ಒಂದೇ ಸಮನೆ ಮಾತಾಡುತ್ತಿದ್ದ.

‘ಗಲ್ಲಿಗೇರಿಸಿ ಕೊಲ್ತಾರಂತಲ್ಲ ಅದು ಭಾಳ ಬೇಸಿ (Sanduru Stories)

‘ಗಲ್ಲಿಗೇರಿಸಿ ಕೊಲ್ತಾರಂತಲ್ಲ ಅದು ಭಾಳ ಬೇಸಿ…ಇದು ಐತಲ್ಲ ಸಾಯಂಗಿಲ್ಲ ಬದುಕಂಗಿಲ್ಲ.. ಜೀವನ ಕಷ್ಟ ಐತರಿ ಸಾಹೇಬರೆ’ ಆಕಾಶ ನೋಡುತ್ತಲೇ ಮಾತಾಡುತ್ತಿದ್ದ. ರಾತ್ರಿಕಿ ಮಾತಾಡ್ಯನ..ಮುಂಜಾಲಿಗೆ ಅಲೆ ಇಲ್ಲ…ಸತ್ನೊಪೋ…ಅಂದರೂ ಅಳೋರು ಯಾರೂ ಇಲ್ಲ.

ಸಾವು…ಎದೆ ಕಲಕುತ್ತಿತ್ತು. ಈಗ ಇಲ್ಲ(Sanduru Stories)

ಅವಾಗ ಒಂದು ಕಾಲದಾಗ ಹೊಲದಾಗಿಂದನೇ ಎದಿ ಬಡಕೊಂಡು ಹೋಗಾರನ ನೋಡುತ್ತಿದ್ವಿ. ಅದೂ ಸಂಬಂಧಿಕರಿರಲಿ, ಅಲ್ಲದಿರಲಿ..ಮನುಷ್ಯನೊಬ್ಬನ ಸಾವು…ಎದೆ ಕಲಕುತ್ತಿತ್ತು. ಈಗ ಏನಿಲ್ಲ ಹಾ..ಹೌದಾ ಸರಿ! ಎನ್ನುವಂತೆ ಇದ್ದುಬಿಡುತಾರೆ ಎಂದ.  ಬಂಡ್ರಿ ಹತ್ತಿರ ಕಾಟ್ನಿಕಂಬ ಎಂಬ ಪುಟ್ಟ ಗ್ರಾಮವಿದೆ. ಅಲ್ಲಿಂದ ಹೆಣ್ಣುಗಳನ್ನು ಸೊಂಡೂರಿನ ವರನಿಗೆ ಕೊಟ್ಟಾನೆಂದ್ರೆ ಬಹು ಮರ್ಯಾದೆ ಇರುತ್ತಿತ್ತು.

ಈಗ್ಗೆ ಇಪ್ಪತ್ತು ವರುಷಗಳ ಹಿಂದೆ ಗಣಿಧಣಿಗಳ ಹಾರಾಟವೂ ಈಗಿನಂತಿರಲಿಲ್ಲ. “ಯೇ ಸಂಣಪೋ..ಮಗಳ್ನ ಎಲ್ಲೀಗ್ ಕೊಟ್ಟ್ಯಪೋ…?” ತೂರಿಬಂದ ಪ್ರಶ್ನೆಗೆ “ಸೊಂಡ್ರಿಗೆ ಕೊಟ್ಟಿನವ್ವಾ.. ಅಳಿಯ ಮೇನ್ಸಿಗೋಗ್ತಾನೆ ಬೇಸದಾರ” ಅವನದೇನು ಚಿಂತಿಲ್ಲ ಎಂಬಂತೆ ತೃಪ್ತಿಯ ನಗೆ ಹೊತ್ತಿದ್ದವನಿಗೀಗ ಎಪ್ಪತ್ತರ ವಯಸ್ಸು. ಕಾಲ ಬದಲಾಗಿದೆ. ಲಾರಿ ,ಟಿಪ್ಪರುಗಳ ಚಕ್ರಗಳು  ಸ್ತಬ್ಧವಾಗಿವೆ.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-21  ಹರಿಶಂಕರ !

ಟೀಬಿಗೆ ಸತ್ತ ಗಂಡನ ನೆನೆದು ಅಳುತ್ತಿದ್ದಾಳೆ (Sanduru Stories)

ಅದೇ ಹೊಸಳ್ಳಿ, ಕಣವೇಹಳ್ಳಿಗಳ ಸತ್ತೋದ ಗುಡ್ಡಗಳ  ನಡುವಿನಿಂದ ರಣರಣ ಬಿಸಲಿನಲ್ಲಿ ಆತ ನಡೆದುಕೊಂಡು ಬರುತ್ತಿದ್ದಾನೆ. ಆತನ ಹಿಂದೆ ಮಗಳಿದ್ದಾಳೆ. ಆಕೆಯ ಕೈ ಹಿಡಿದು ನಡೆವ ಪುಟ್ಟ ಹುಡುಗಿ ಟೀಬಿಗೆ ಸತ್ತ ಗಂಡನ ನೆನೆದು ಅಳುತ್ತಿದ್ದಾಳೆ.

ಆಕೆಯ ಪುಟ್ಟ ಮಗಳು ಅವ್ವನ ಹೊರಹಾಕಿದ ಅಪ್ಪನ ಮನೆಯವರ ನೆನೆದು ಅಳುತ್ತಿದ್ದಾಳೆ. ಗತಿಯಿಲ್ಲದೆ ತವರು ಮನೆಗೆ ಬಂದೆನೆಂದು ತಿಳಿದು ನೋಡುವ ಊರು ಜನಗಳ ನೆನೆದು ಅವಳ ಕಪಾಳಗಳಿಂದಲೂ ನೀರು ಸುರಿಯುತ್ತಿದೆ. ಊರಿಗೆ ಊರೇ ಟೀಬಿ ಬಡಿದಿರುವಾಗ ,ಬದುಕಲು ಅಸಾಧ್ಯವೆಂದು ತಿಳಿದೂ ಮತ್ತೇಕೆ ಅಳುವುದೆಂದು ಆತ ಅಳುತ್ತಿಲ್ಲ.

             ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article DaVAHAGERE ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಕೃಷಿ ಅಧಿಕಾರಿಗಳಿಗೆ ಸೂಚನೆ
Next Article davanagere ಲಾರಿ ಕಳ್ಳತನ : ಆರೋಪಿ ಸೆರೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಕೊಂಡಜ್ಜಿ ಕೆರೆಯಲ್ಲಿ  ಜಲ ಸಾಹಸ ಕ್ರೀಡೆ : ಡಿಸಿ, ಸಿಇಓ ಭಾಗಿ

ದಾವಣಗೆರೆ (Davanagere): ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ಜಲಸಾಹಸ…

By Dinamaana Kannada News

Harihara protest : ವ್ಯವಸ್ಥಿತ ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಧರಣಿ

ಹರಿಹರ:  ಪ್ರತಿ ಮಳೆಗಾಲದಲ್ಲಿ ಹಿನ್ನೀರು ನುಗ್ಗಿ ಮನೆಗಳು ಜಲಾವೃತವಾಗುವ ಇಲ್ಲಿನ ಗಂಗಾನಗರದ ವಾಸಿಗಳಿಗೆ ವ್ಯವಸ್ಥಿತ ವಸತಿ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ…

By Dinamaana Kannada News

Political analysis | ಅಮಿತ್ ಷಾ ಪರೀಕ್ಷೆಯಲ್ಲಿ ವಿಜಯೇಂದ್ರ ಪಾಸಾದರು

ಕಳೆದ ಗುರುವಾರ ಬಿಜೆಪಿ ನಾಯಕರಾದ ಯತ್ನಾಳ್,ರಮೇಶ್ ಜಾರಕಿಹೊಳಿ ಮತ್ತಿತರರು ರಹಸ್ಯ ಸಭೆ  ನಡೆಸಿದ್ದಾರೆ. ವಿಧಾನಸಬೆಯ ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?