Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 61: ಸಂತಾಪದ ಹನಿಗಳು…
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 61: ಸಂತಾಪದ ಹನಿಗಳು…

Dinamaana Kannada News
Last updated: June 21, 2024 3:38 am
Dinamaana Kannada News
Share
sanduru stories 61
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 21-06-2024

ಮುಚ್ಚಿದ ಶಾಲೆಗಳ ಮೌನ ಎದೆ ಕಲಕುತ್ತದೆ (Sanduru Stories)

ಆರು ದಶಕಗಳಿಗೂ ಹೆಚ್ಚು ಕಾಲ ಲಕ್ಷಾಂತರ ಎದೆಗಳಿಗೆ ಅಕ್ಷರಗಳನುಣಿಸಿದ ಮುಚ್ಚಿದ ಶಾಲೆಗಳ ಮೌನ ಎದೆ ಕಲಕುತ್ತದೆ. ಸಂಸ್ಥೆಯ ಮಾಲೀಕರಿಗೆ ಎಜ್ಯುಕೇಶನ್ ಸೊಸೈಟಿಯಲ್ಲಿ ಲಾಭವೇನೂ ಇಲ್ಲವೆನಿಸಿತಂತೆ. ಅದಕ್ಕೆ ಮುಚ್ಚಿದರು ಎಂದು ಅಲ್ಲಿದ್ದ ಹುಡುಗನೊಬ್ಬ ಹೇಳಿದ.

ಮಾತುಗಳು ಮೌನಕ್ಕೆ ತಿರುಗುವುದೆಂದರೆ….ಹೀಗೆ…. ಆ ಬೃಹತ್ತಾದ ಯಂತ್ರಗಳು ಕೆಡವುತ್ತಿರುವ ಮನೆಗಳು ತಮ್ಮವೇ ಎಂದು ತಿಳಿದಿದ್ದರೂ…ಅದು ಕೆಡವುತ್ತಿರುವ ರೀತಿ , ಶಕ್ತಿ , ಸಾಮರ್ಥ್ಯಗಳನ್ನು ಮೂಗಿನ ಮೇಲೆ ಬೆರಳಿಟ್ಟು ಕೊಂಡು ನಿಂತು ನೋಡುವ ಜನರಿಗೆ ಅದರ ಪರಿವೆಯೂ ಇಲ್ಲ ಎಂದು ಹೇಳುವುದಾದರೂ ಹೇಗೆ?

ತೂಗುವ ತಕ್ಕಡಿಯೇತಕೆ ಮತ್ತೆ ಮತ್ತೆ ಮೋಸ ಮಾಡುತ್ತಿದೆ (Sanduru Stories)

ಉದ್ಯೋಗಖಾತ್ರಿಯ ಕೂಲಿ ಕೇಳಿದ್ದಕ್ಕೆ ಲಾಠಿಚಾರ್ಜು ಮಾಡಿ ಹೊತ್ತೊಯ್ದ ಪೊಲೀಸರ ವ್ಯಾನಿನ ಚಕ್ರಗಳ ಗುರುತು ಕಂಡು ಸಾಲಿಯಿಂದ ಬಂದ ಮಕ್ಕಳು “ಅಯ್…ಅಲ್ನೋಡಲ್ಲಿ!”ಎಂದು ಸಂಭ್ರಮಿಸಿ ಒಳಗೋಡುತ್ತವೆ.  ಬೈಗು ಹೊತ್ತಾದರೂ ಬರದ ಅಪ್ಪ ಅವ್ವನ ನೆನೆದು, ಸೊಂಡೂರಿನ ಬೀದಿ ಬೀದಿಯಲ್ಲಿ ಹುಡುಕುತ್ತಿರುವುದು ಕಣ್ಮುಂದೆ ಬರುತ್ತಿದೆ. ತೂಗುವ ತಕ್ಕಡಿಯೇತಕೆ ಮತ್ತೆ ಮತ್ತೆ ಮೋಸ ಮಾಡುತ್ತಿದೆ?

ಕಣ್ಣು ಕೋರೈಸುವ ಬೆಳಕಿನ ಮನುಷ್ಯನಿರ್ಮಿತ ಪಟ್ಟಣಗಳು. ಸನಿಹದಲ್ಲಿಯೇ ಅಸ್ತಿತ್ವ ಕಳೆದುಕೊಂಡು ಬುಡ್ಡೀದೀಪದಂತಹ ಬೆಳಕಿನಲ್ಲಿ ನರಳುವ ಹಳ್ಳಿಗಳು. ತಮ್ಮದೇ ಹೊಲಗಳ ಮೇಲೆ ಧಗಧಗಿಸುವ ಫರ್ನೇಸುಗಳು, ಬಂಗಲೆಗಳು.,ವಿಮಾನ ನಿಲ್ದಾಣ… ಅಮೃತ ಶಿಲೆಯ ಮಾತನಾಡದ ಮುಗ್ಧ ಬಾಲಕರಂತಿರುವ ದೇವರುಗಳು! “ಪ್ಯಾಟ್ರಿಗುಳೂ ಆದ್ರೆ…ಎಲ್ರಿಗೂ ಕೆಲ್ಸ ಸಿಕ್ತತಪೋ” ಎಂದ  ಅಪ್ಪನೂ ಇಲ್ಲ. ಆತನ ಮಾತೂ ಇಲ್ಲ.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 52 : ಪಾಪ ಅವರು ಹಸಿದಿದ್ದರು…

ಕಾಲಚಕ್ರ ಉರುಳುತಿದೆ (Sanduru Stories)

ದೇವರಗಂಟೆ ಮೊಳಗಿದರೆ ಏಳುತ್ತಿದ್ದ ಮುಲ್ಲಾ ಈಗಿಲ್ಲ. ಮುಲ್ಲಾ ಸಾಬನ  ಕೂಗಿಗೆ ಎದ್ದು ಕೈ ಮುಗಿಯುವ ಜನಾನು ಇಲ್ಲ.  ಕ್ರಿಸ್ಮಸ್ ಹಬ್ಬದ ವಿಚಿತ್ರವಾದ ಸಿಹಿತಿನಿಸಿಗಾಗಿ ಕಾದು ಕುಳಿತ ಹುಡುಗರೂ ಇಲ್ಲ.

ದೀಪಾವಳಿ-ರಮಜಾನು-ಗಣೇಶ ನಿಗೂ ಮುಂಚೆ ಪೊಲೀಸರು ಆಗಮನವಾಗುತ್ತಿದೆ. ಯಾರದೊ ರಕ್ತ ಹಣೆಗೆ ತಿಲಕವಾಗಿದ್ದಾದರೂ ಹೇಗೆ? ಗೋಲಿ ಆಡುವ ಹುಡುಗರ ಚೆಡ್ಡಿ ಜೇಬುಗಳಿಗೆ ಗುಂಡುಗಳ ತುಂಬಿದ್ದಾದರೂ ಯಾರು? ಪ್ರಶ್ನೆಗಳನ್ನೆ ಮುಖದಲ್ಲಿ ಹೊತ್ತು ನಿಂತಿರುವ,ಕಣ್ಣು ತುಂಬಿದ ನೀರಿನಲ್ಲಿ  ಮನುಷ್ಯರು ಕಾಣಲಿಕ್ಕಿಲ್ಲ.  ಆದರೆ…ಸಂತಾಪಕ್ಕಾದರೂ ಒಂದೆರೆಡು ಹನಿಗಳನ್ನಾದರೂ ಸುರಿಸಿ , ಋಣ ಸಂದಾಯ ಮಾಡಿ.

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article BJP Davanagere ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
Next Article Davanagere ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಅಧಿಕಾರಿಗಳು ಮಾತು ಕೇಳ ಬೇಕು ಎಂದರೆ ಹೋರಾಟಗಳು ಅಗತ್ಯ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್

ದಾವಣಗೆರೆ (Davanagere): ಒಗ್ಗಟ್ಟಿನಿಂದ ಸಾಧಿಸಲಾದ್ದನ್ನು ಸಾಧಿಸಬಹದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್   ತಿಳಿಸಿದರು. ಹಳೇ ಕುಂದವಾಡ ಗ್ರಾಮದಲ್ಲಿನ…

By Dinamaana Kannada News

ವಿಶ್ವ ಅಸ್ತಮಾ ದಿನಾಚರಣೆ : ಸತತ ಚಿಕಿತ್ಸೆಯಿಂದ ಅಸ್ತಮಾ ಕಾಯಿಲೆ ಹತೋಟಿಗೆ

ತೀವ್ರ ಅಸ್ತಮಾ ಎಂದರೇನು? ಅಸ್ತಮಾ ಕಾಯಿಲೆಯು ಸಾಕಷ್ಟು ಜನರನ್ನು ಭಾದಿಸಿದರೂ ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಹತೋಟಿಗೆ ಬರುತ್ತದೆ. ಆದರೆ,…

By Dinamaana Kannada News

Davanagere | 2ನೇ ರಾಷ್ಟ್ರೀಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ದಾವಣಗೆರೆ (Davanagere): ವಿಧಾನಸಭೆಯ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಸಂವಾದ 25 ಜೆ ಬಿ ಎಂ 2ನೇ ರಾಷ್ಟ್ರೀಯ ಸಮ್ಮೇಳನದ ಪೋಸ್ಟರ್…

By Dinamaana Kannada News

You Might Also Like

davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?