Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?
Blog

ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

Dinamaana Kannada News
Last updated: May 24, 2024 3:55 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

Kannada News | Dinamaana.com | 24-05-2024

ಇಲ್ಲಿನ ಗಣಿ ಬಾಧಿತ ಪ್ರದೇಶಗಳ ಬಹುತೇಕ ಊರುಗಳೆಲ್ಲ ಹಳ್ಳಿಗಾಡಿನ ಊರುಗಳೆ ಆಗಿವೆ.ಇಲ್ಲಿನ ಜನರಿಗೆ ಭೂಮಿ ಎನ್ನುವುದು ಕೇವಲ ನೆಲವಲ್ಲ.ಅದು ಅವರ ಸ್ವ ಜಗತ್ತಿನ ಲೋಕ, ಅವರಿಗದು ಸ್ಮೃತಿ . ಈ ನೆಲದ ಮೇಲೆ ಅವರ ಮನೆಗಳಿವೆ. ಹೊಲಗಳಿದ್ದವು, ಗಿಡ, ಮರ, ಹೂ ಬಳ್ಳಿಗಳು ಇದ್ದವು.

ಇಲ್ಲಿನ ದಾರಿಗಳು ಅವರಿಗೆ ಚೆನ್ನಾಗಿಯೇ ಗೊತ್ತು. ಹಿರೇರ ಕಥೆ-ವ್ಯಥೆಗಳೂ ಕೂಡ ಈ ನೆಲದೊಂದಿಗೆ ಬೆಸೆದುಕೊಂಡಿವೆ. ಇಲ್ಲಿರುವ ದೇವರುಗಳಾದ ಗಂಡಿ ನರಸಿಂಹ, ಕುಮಾರಸ್ವಾಮಿ, ಗಾಳೆಮ್ಮ, ಮಾರೆಮ್ಮರಿಗೂ ಇವರ ಪರಿಚಯವಿದೆ.

ಮೌನವಾಗಿ ರೋದಿಸಿದರೆ ಸಂತೈಸುವವರಾದರೂ

ಇವಾವುಗಳೂ ಇಲ್ಲದೆ ಬದುಕುವುದು ಎಂದರೆ ದಿಕ್ಕುತಪ್ಪಿ ಬೇರೆಯವರ ಆಸರೆಗೆ ಹಂಗಿಗೆ ಬೀಳುವುದು ಎಂದರ್ಥವಲ್ಲವೆ? ಇವೆಲ್ಲವೂ ಕೂಡ ಸಾವಿನಷ್ಟೇ ದುಃಖ ತರಿಸಬಲ್ಲ ಸಂಗತಿಗಳು.ಅದಕ್ಕಾಗಿಯೋ ಏನೋ ಮುದುಕರು ಈಗೀಗ ಏನೂ ಮಾತನಾಡುವುದಿಲ್ಲ.ಮೌನವಾಗಿರುತ್ತಾರೆ. ಮೌನವಾಗಿ ರೋದಿಸಿದರೆ ಸಂತೈಸುವವರಾದರೂ ಯಾರಿದ್ದಾರೆ?

ದುಡ್ಡು ನೀರಿಗಿಂತಲೂ ತುಸು ವೇಗವಾಗಿ ಖರ್ಚಾಯಿತು

ಗಣಿಗಾರಿಕೆಯ ಉತ್ತುಂಗದ ದಿನಗಳಲ್ಲಿ ಇಲ್ಲಿ ದುಡ್ಡು ಎನ್ನುವುದು ಬಳ್ಳಾರಿ, ಹೊಸಪೇಟೆ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ನೀರಿಗಿಂತಲೂ ತುಸು ವೇಗವಾಗಿ ಖರ್ಚಾಯಿತು. ಗಣಿ ಪ್ರದೇಶಗಳ ಲೋಲುಪತೆಗೆ ರಾಜಧಾನಿಯಂತಿರುವ ಹೊಸಪೇಟೆ ಎಂಬ ನಗರವಂತೂ ತನ್ನ ಸ್ವಂತಿಕೆಯನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆಗೆ ಕೊರಗುತ್ತಿರುವ ಶ್ರೀಮಂತ ಮನೆಯ ಸೊಸೆಯಂತೆ ನಿತ್ಯವೂ  ನರಳುತ್ತಿರುವ ಹಾಗೆ ಕಾಣಿಸುತ್ತಿದೆ.

ಇಲ್ಲಿ ಒಂದಲ್ಲ ಎರಡಲ್ಲ…ಕಳೆದ ಎರಡು ದಶಕಗಳಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಕೈಗಾರಿಕೆಗಳು ಪ್ರತಿಷ್ಟಾಪಿಸಲ್ಪಟ್ಟಿವೆ. ಕಂಪೆನಿಗಳ ಹೆಸರು ನೋಡಬೇಕೆಂದರೆ ರಸ್ತೆಬದಿಯಲ್ಲಿ ಇಲ್ಲವೇ ರಸ್ತೆ ವಿಭಜಕಗಳ ಮಧ್ಯೆ ನೆಟ್ಟ ಗಿಡಗಳಿಗಿಂತಲೂ ದೊಡ್ಡದಾಗಿ ಬರೆದ ಹೆಸರುಗಳಿವೆ.ಮನೆಯ ಗೋಡೆಗಳ ಮೇಲೂ ಸಹ ಜಾಹೀರಾತು. ಧರಿಸಿದ ಅಂಗಿ,ಟೀ ಷರಟುಗಳ ಮೇಲೂ ಸಹ ಅವರದೇ ಚಿತ್ರ.

ಹಸಿವು ಆತ್ಮಗೌರವವನ್ನು ಕೂಡ ಕೊಂದು ಹಾಕುತ್ತಿದೆ

ಹಳ್ಳಿಗಳಲ್ಲಿ ತಾಂಡವವಾಡುತ್ತಿರುವ ಹಸಿವು ಮನುಷ್ಯನನ್ನು ಮಾತ್ರ ಕೊಲ್ಲುವುದಿಲ್ಲ.ಆತ್ಮಗೌರವವನ್ನು ಕೂಡ ಕೊಂದು ಹಾಕುತ್ತಿದೆ. ತಮ್ಮದೇ ನೆಲದಲ್ಲಿ, ತಮ್ಮದೇ ಭೂಮಿಯಲ್ಲಿ ಅನಾದಿಕಾಲದಿಂದಲೂ ಕೆಲಸ ಮಾಡುತ್ತಿರುವವರು,ಈ ನೆಲದಲ್ಲಿ ವಾಸ ಮಾಡುವವರು ಆಕ್ರಮಣಕಾರರಂತೆ ಕಾಣಿಸುತ್ತಿದ್ದಾರೆ.

ತಮ್ಮದೇ ಊರಿನ ಪರಿಸರದಲ್ಲಿ ಅನಾಮಿಕರಂತೆ ಜೀವನ

ಇದೊಂದು ಕೇವಲ ಸ್ಥಾನಪಲ್ಲಟವಾಗಿರದೆ ಜನರ ಬದುಕಿನ ಅಸ್ತಿತ್ವ ಪಲ್ಲಟದ ಬ್ರಹತ್ ಪ್ರಶ್ನೆಯಾಗಿ ಉಳಿದುಬಿಟ್ಟಿದೆ.ತಮ್ಮದೇ ಊರುಗಳಲ್ಲಿ ತಾವೇ ಆರಿಸಿ ಕಳುಹಿಸಿದ ಪ್ರಭುತ್ವವನ್ನು ಕೇಳಲಿಕ್ಕಾಗದೆ,ಕಂಪೆನಿಗಳು ನಿರ್ಮಿಸಿದ ಬಸ್ ಸ್ಟ್ಯಾಂಡುಗಳಲ್ಲಿ ಭಿಕಾರಿಗಳಂತೆ ಕಾಯುತ್ತ ನಿಂತಿರುವ ಜನ. ತಮ್ಮದೇ ಊರಿನ ಪರಿಸರದಲ್ಲಿ ಅನಾಮಿಕರಂತೆ ಸಂಬಂಧವಿಲ್ಲದವರ ಹಾಗೆ ಬದುಕುವುದು ಎಂದರೆ ಅದೊಂದು ಸವಾಲೇ ಸರಿ.

Read Also:ಸೊಂಡೂರಿನ ಕಗ್ಗತ್ತಲೆಯ ಕಥನಗಳು-27 ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ…..

ಹಸಿವಿನ ಅನುಭವ,ಕೇವಲ ಶರೀರಕ್ಕೆ ಸಂಬಂಧಿಸಿದ್ದರೆ ನಷ್ಟವೆಂದು ಮೌನಕ್ಕೆ ಶರಣಾಗಬಹುದಿತ್ತು.ಜನರನ್ನು ಗಣಿ ಕಂಪೆನಿಗಳ ಋಣದಲ್ಲಿ ಇರುವಂತೆ ಸೃಷ್ಟಿಸಲಾಗಿದೆ.ಜನರಲ್ಲಿ ಪರಕೀಯತೆಯ, ಪರದೇಸಿತನದ ಭಾವದ ಜೊತೆಗೆ ತೀವ್ರ ಹತಾಶೆ ಮತ್ತು ಅವಮಾನಗಳಿಂದ ಜನರು ಸತತವಾಗಿ ಸೋತು ಹೋಗಿದ್ದಾರೆ.

ಎಡ ಪಕ್ಷದ ಕಾರ್ಯಾಲಯದ ಧ್ವಜಕಟ್ಟೆಯೂ  ಗಣಿ ಕಂಪೆನಿಯೊಂದರ ಫಲಶ್ರುತಿ

ಇಷ್ಟೆಲ್ಲವುಗಳ ನಡುವೆ ರೈತರು,ಕಾರ್ಮಿಕ ಹೋರಾಟಗಳೇನೂ ಇಲ್ಲವೆ ?ಎಂಬ ಯೋಚನೆ ಬರಬಹುದು. ಇಲ್ಲವೆಂದೇನಿಲ್ಲ,ಆಗಾಗ ಕೂಗುಗಳು ಸರ್ಕಲ್ಲುಗಳಿಂದ ಡಿ.ಸಿ. ಆಫೀಸಿನ ತನಕ ಮೆಮೆರೊಂಡಮ್  ಕೊಡಲು ಸೀಮಿತವಾಗಿರುವ ಹಾಗೆ ತೋರುತ್ತಿದೆ. ಜೀವಮಾನದುದ್ದಕ್ಕೂ ಬಂಡವಾಳ ಶಾಹಿಗಳನ್ನು ವಿರೋಧಿಸಿಕೊಂಡು ಬಂದ ಎಡಪಕ್ಷವೊಂದರ ಕಾರ್ಯಾಲಯದ ಧ್ವಜಕಟ್ಟೆಯೂ ಸಹ ಗಣಿ ಕಂಪೆನಿಯೊಂದರ ಫಲಶ್ರುತಿಯಾಗಿರುವುದು ಪರಿಸ್ಥಿತಿಯ ವ್ಯಂಗ್ಯವಲ್ಲದೆ ಮತ್ತೇನು ?

ಇಂತಹ ಗಣಿ ಧೂಳಿನ ಮಧ್ಯೆ ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕೃಷಿಯಲ್ಲಿ, ತಮ್ಮನ್ನು ತೊಡಗಿಸಿಕೊಂಡ ಜನರು, ಗಣಿಗಾರಿಕೆಯೆಂಬ ಆಕ್ರಮಣಕಾರರ, ಪ್ರಭುತ್ವದ  ಕಣ್ಣಿಗೆ, ಒಂದು ರೀತಿಯಲ್ಲಿ ಮೊಂಡರ ತರಹ ಕಾಣಿಸುತ್ತಾರೆ. ವಯಸ್ಸಾದ ಮುದುಕರನ್ನು  ಯಾರಾದರೂ ಮಾತನಾಡಿಸಿದರೆನ್ನಿ,ಅವರು ಸುಮ್ಮನೆ ನೋಡುತ್ತಾರೆ.

ಊರು ನಮ್ಮದಲ್ಲವೋ….ನಾವೇ ಈ ಊರಿನವರಲ್ಲವೋ ಎಂಬ ಅಂತರ್ಮುಖಿತನವನ್ನು ಮತ್ತು ಇಲ್ಲಿನ ಮೂಲನಿವಾಸಿಗಳ ಅಂತರಂಗದ ನೋವು ಆಲಿಸುವವರಾದರೂ ಯಾರು?

  •            ಬಿ.ಶ್ರೀನಿವಾಸ
TAGGED:dinamaana.comLatest Kannada NewsSanduru sotriesಕನ್ನಡ ಸುದ್ದಿದಿನಮಾನ.ಕಾಂಸಂಡೂರಿನ ಕಥನಗಳು.
Share This Article
Twitter Email Copy Link Print
Previous Article Pure Silk Sarees: ಇಂದಿನಿಂದ ರೇಷ್ಮೆ ಸೀರೆಗಳ‌ ಪ್ರದರ್ಶನ ಮತ್ತು ಮಾರಾಟ ಮೇಳ‌‌ ಆರಂಭ
Next Article silka india davanagere ಅಭಿವೃದ್ಧಿ ಸಂಸ್ಥೆಯ ಸಿಲ್ಕ್ ಇಂಡಿಯಾ-2024 :  ರೇಷ್ಮೆ ಸೀರೆಗಳ ಬೃಹತ್‌ ಪ್ರದರ್ಶನ ಮತ್ತು ಮಾರಾಟಕ್ಕೆ   ಚಾಲನೆ 

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Crime news | ಕಲ್ಲಿನಿಂದ ಜಜ್ಜಿ ಯುವಕನ ಕೊಲೆ

ದಾವಣಗೆರೆ (Davanagere): ನಗರದ ಪಿ.ಬಿ.ರಸ್ತೆ ಬದಿಯಲ್ಲಿ ತಿಂಡಿ ಹೋಟೆಲ್ ನಡೆಸುತ್ತಿದ್ದ ಮಣಿಕಂಠ (34)ನನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಾಸಲು…

By Dinamaana Kannada News

ಶುದ್ದ ಆಹಾರ ಸೇವೆನೆಯಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ

ದಾವಣಗೆರೆ :  ಸಾತ್ವಿಕ ಶುದ್ಧ ಆಹಾರ ಪದಾರ್ಥಗಳ ಸೇವನೆಯಿಂದ ದೇಹದ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ ಎಂದು…

By Dinamaana Kannada News

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…….

Kannada News | Sanduru Stories | Dinamaana.com | 05-06-2024 ಅಗಾಧ ಮೌನ (Sanduru Stories) ಯುದ್ಧ ಮುಗಿದ ನಂತರ…

By Dinamaana Kannada News

You Might Also Like

davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?