Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 53 :  ಹಸಿವನ್ನೇಕೆ ಬಂಧಿಸದೆ ಬಿಟ್ಟು ಹೋದರು..?
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 53 :  ಹಸಿವನ್ನೇಕೆ ಬಂಧಿಸದೆ ಬಿಟ್ಟು ಹೋದರು..?

Dinamaana Kannada News
Last updated: June 13, 2024 3:31 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 13-06-2024

ಜನರೇಟರು ಸದ್ದಿಗೆ ರಾತ್ರಿಯೆಲ್ಲ ನಿದ್ದೆಯಿಲ್ಲ (Sanduru Stories)

ಒಂದು ಮಳೆಗಾಲದ ಮುಂಜಾವು. ಬೆಳಕಿನ್ನೂ ಸರಿಯಾಗಿ ಹರಿದಿರಲಿಲ್ಲ. ಬೆಟ್ಟದ ತುದಿಗಳಲ್ಲಿನ ಜನರೇಟರು ಸದ್ದಿಗೆ ರಾತ್ರಿಯೆಲ್ಲ ನಿದ್ದೆ ಕೂಡ ಬಂದಿರಲಿಲ್ಲ.

ತುತ್ತ ತುದಿಯಲ್ಲಿ ಗಣಿಗಾರಿಕೆ ಮಾಡುವುದಕ್ಕೆ ಹಗಲು ರಾತ್ರಿಗಳ ಭೇದವೆಂಬುದು ಇರುವುದಿಲ್ಲ. ಅಲ್ಲಿರುವ ಲಾರಿಗಳ ಕಂಟೇನರುಗಳಿಗೇ ಏರ್ ಕಂಡೀಷನರ್ ಕೂಡಿಸಲಾಗಿರುತ್ತದೆ. ವಿದ್ಯುತ್ತಿಗಾಗಿ ರಕ್ಕಸ ಗಾತ್ರದ ಜನರೇಟರುಗಳು ನೋವಿನಿಂದ ಚೀರುತ್ತಿರುವ ಹಾಗೆ ತೋರುತ್ತವೆ.

ಇಂಥದ್ದೇ ಒಂದು ಬೆಳಗಾ ಮುಂಜಾನೆ, ಪೊಲೀಸರು ಧಣಿಗಳನ್ನು ಹಿಡ್ಕೊಂಡು ಹೋದರಂತೆ, ನೀವಿನ್ನು ಕೆಲಸಕ್ಕೆ ಬರಬಾರದಂತೆ ಎಂದು ಹೇಳಿದ ದಿನದಿಂದ ಅವರು ಹೀಗೆ ಮನೆಯಲ್ಲಿ ಕುಳಿತಿದ್ದಾರೆ.

ಊರ ತುಂಬಾ ಈಗ ಮೌನದ್ದೇ ಮಾತು (Sanduru Stories)

ಎಲ್ಲವೂ ಮುಗಿದಿದ್ದರೂ, ಮಸಣದ ಗುದ್ದಿನ ಮೇಲೆ ನಿಂತು ಯಾರಾದರೂ ತಿಥಿ ಸಮಾರಾಧನೆಯ ದಿನಾಂಕವನ್ನು ಹೇಳುವರೇನೋ ಎಂಬ ನಿರೀಕ್ಷೆಯಲ್ಲಿ ಕಾಯುತ್ತ ಕುಳಿತವರ ಹಾಗೆ. ಊರ ತುಂಬಾ ಈಗ ಮೌನದ್ದೇ ಮಾತು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-15 ಬದಲಾದ ರಾಜಕಾರಣದ ವರಸೆಗಳು

ಹಸಿವಿನ ಹದ್ದು ಹಾರಾಡುತಿದೆ.. (Sanduru Stories)

ಇಷ್ಟು ದಿನ ಕೂಗಿದರೂ ಕೇಳಿಸಿಕೊಳ್ಳದಂತೆ ಟೇಮಿಲ್ಲವೋ ಎಂದು ಕೈಯಾಡಿಸುತ್ತ ತಿರುಗಿ ನೋಡದೆ ಹೋದ ಲಾರಿಗಳು, ಟಿಪ್ಪರುಗಳು, ಬೇವಿನ ಮರಗಳ ಸಾಲುಗಳ ಕೆಳಗೆ ಸಾಲಾಗಿ ಮೈಮುರಿಯುತ್ತ , ನರಳುತ್ತ ಕಾಲು ಮುರಿದುಕೊಂಡು ಬಿದ್ದುಕೊಂಡಿವೆ. ಗಣಿಯ ಸದ್ದು ಅಡಗಿದರೇನಾಯ್ತು.. ಹಸಿವಿನ ಹದ್ದು ಹಾರಾಡುತಿದೆ.

ಎಲ್ಲಿಗೋ ಹೊರಟು ನಿಂತಿದ್ದಾರೆ .. (Sanduru Stories)

ಸಂಡೂರಿನ ಅದೇ ಹಳೆಯ ಬಸ್ ಸ್ಟ್ಯಾಂಡಿನಲ್ಲಿ ನೂರು ,  ಐನೂರು, ಸಾವಿರದ ನೋಟುಗಳನ್ನು ಎಣಿಸಿದ ಜನರು ಹಳೆಯ ಚಾದರು, ಪಾತ್ರೆ , ಈಚಲು ಚಾಪೆಗಳೊಂದಿಗೆ ಎಲ್ಲಿಗೋ ಹೊರಟು ನಿಂತಿದ್ದಾರೆ.

ಸಿಂಬಳ ಸುರಿಸುವ ಕೂಸುಗಳ ಮೂಗು ಒರೆಸುವುದ ಮರೆತ ಅವ್ವಂದಿರು, ಬೋಳಾದ ಗುಡ್ಡ ಅದರ ಕೆಳಗಿನ ಒಂದು ಕಾಲದ ಹೊಲಗಳೆಡೆಗೆ ನೋಡಿ ನಿಟ್ಟುಸಿರುಗೈಯ್ಯುತ್ತಿದ್ದಾರೆ.

ಸಾಲಿ ಬಿಟ್ಟು ಲೋಡು ಮಾಡುವುದನ್ನು ಕಲಿತ ಹುಡುಗರಿಗೆ ಅಕ್ಷರಗಳು ಮರೆತು ಹೋಗಿವೆಯಾದರೂ ಬರುವ ಬಳ್ಳಾರಿ-ಧರ್ಮಸ್ಥಳದ ಬಸ್ಸಿನಲ್ಲಿ ಎಲ್ಲೆಲ್ಲಿ ಹೇಗೆ ಸೀಟು ಹಿಡಿಯಬೇಕೆಂಬುದರ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.

ಈಗ ಬರೀ ನೆನಪು ಮಾತ್ರ (Sanduru Stories)

ಗಣಿಧಣಿಗಳ ಹಣವನ್ನು ಗೋಣಿಚೀಲದಲ್ಲಿ ತುಂಬುತ್ತಿದ್ದ ಸುದ್ದಿ ಎಲ್ಲವೂ ಈಗ ಬರೀ ನೆನಪು ಮಾತ್ರ. ಹೌದು, ಗಣಿಕಳ್ಳರನ್ನು ಹೊತ್ತೊಯ್ದ ಪೊಲೀಸ್ ಜೀಪುಗಳು , ಹುಡುಗರ ತಲೆಯಲ್ಲಿ ನೂರೆಂಟು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಗಣಿ ಕಳ್ಳರನ್ನು ಬಂಧಿಸಿದರು ನಿಜ. ಆದರೆ… ಜನರ ಹಸಿವನ್ನೇಕೆ ಬಂಧಿಸದೆ ಬಿಟ್ಟು ಹೋದರು?  ಎಂಬಂಥ ನಾನಾ ಪ್ರಶ್ನೆಗಳಿವೆ.

ಊರಿನ ಕತೆಗಳು ಒಂದಾ..ಎರಡಾ..? (Sanduru Stories)

ವಯಸ್ಸಿದ್ದಾಗ ಉರಿದಾಡಿ, ಜಿಗಿದಾಡಿ ಮೆರೆದ ಕಟ್ಟುಮಸ್ತಾದ ಆಳೊಬ್ಬ ವಯಸ್ಸಾಗಿ ಗಾಯಗೊಂಡ ತನ್ನ ಕೈಕಾಲುಗಳಿಗೆ ಉಗುಳು ಹಚ್ಚಿ ಸವರಿಕೊಳ್ಳುತ್ತ ನಿಟ್ಟುಸಿರು ಬಿಡುತ್ತಿದ್ದಾನೆ.ಯುದ್ಧ ಮುಗಿದ ನಂತರದ ಸ್ಥಿತಿಯ ಊರಿನ ಕತೆಗಳು ಒಂದಾ..ಎರಡಾ..?

      ಬಿ.ಶ್ರೀನಿವಾಸ

Share This Article
Twitter Email Copy Link Print
Previous Article Davanagere ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜನರ ಸಹಕಾರ ಅವಶ್ಯ : ಡಿಸಿ
Next Article davanagere cmc ದಾವಣಗೆರೆ ಮಹಾನಗರಪಾಲಿಕೆ ಆಸ್ತಿ ತೆರಿಗೆ ಪಾವತಿಸಿ : ಶೇ 5 ರಷ್ಟು ರಿಯಾಯಿತಿ ಪಡೆಯಿರಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮೆಟ್ರಿಕ್ ನಂತರದ  ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಜು.08  :  ಪ್ರಸಕ್ತ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ  ವಿದ್ಯಾರ್ಥಿ ನಿಲಯಗಳಿಗೆ (ಪಿ.ಯು.ಸಿ ಮತ್ತು ಪಿ.ಯು.ಸಿ…

By Dinamaana Kannada News

DAVANAGERE YOGA SPORTS COMPETITION : ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ: ನೇರವಾಗಿ ಭಾಗವಹಿಸಲು ಅವಕಾಶ

ದಾವಣಗೆರೆ (DAVANAGERE DISTRICT): ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯು…

By Dinamaana Kannada News

Davanagere | ಈಶ್ವರಮ್ಮ ಶಾಲೆಗೆ ರಾಜ್ಯ ಮಟ್ಟದ ಶಿಕ್ಷಣ ಚೈತನ್ಯ ಪ್ರಶಸ್ತಿ

ದಾವಣಗೆರೆ (Davanagere):  ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ನಗರದ ಪಿ.ಜೆ.ಬಡಾವಣೆಯಲ್ಲಿರುವ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ರಾಜ್ಯ…

By Dinamaana Kannada News

You Might Also Like

Davanagere
Blogತಾಜಾ ಸುದ್ದಿ

Davanagere | ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
DAVANAGERE
Blog

Bhadra Reservoir | ಭದ್ರಾ ಜಲಾಶಯ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ

By Dinamaana Kannada News
Davanagere
Blog

Davanagere | ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
DAVANAGERE
Blog

ಸಮೀಕ್ಷೆ : ಭೋವಿ/ ವಡ್ಡರ್ ಎಂದೇ ಬರೆಸಲು ವಿನಾಯಕ ಬಿ.ಎನ್. ಮನವಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?