Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 55 :  ಅಂತಿಮವಾಗಿ…..ಸೊಂಡೂರು!
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 55 :  ಅಂತಿಮವಾಗಿ…..ಸೊಂಡೂರು!

Dinamaana Kannada News
Last updated: June 15, 2024 4:11 am
Dinamaana Kannada News
Share
sunduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 15-06-2024

ಮನುಷ್ಯರ ಅವನತಿ (Sanduru Stories)

ಈ ಊರಿನ ದುರಂತ ಇಡೀ ಪ್ರಪಂಚವನ್ನೆ ಪ್ರತಿನಿಧಿಸುವುದರ ಸಂಕೇತ. ಗಣಿಗಾರಿಕೆ ಆರಂಭವಾದಾಗಲೇ ಮನುಷ್ಯರ ಅವನತಿ ಆರಂಭವಾಯಿತು.

ಎಗ್ಗಿಲ್ಲದೆ ನಡೆದ ಅಕ್ರಮ ಮೈನಿಂಗ್ ಹಾವಳಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಪ್ರತಿ ಊರಿಗೂ ಇರುವಂತೆ ಈ ಊರಿಗೂ ಸಂಸ್ಕೃತಿ ಎಂಬುದೊಂದಿತ್ತು. ಸಂಸ್ಕೃತಿ ಎಂದರೆ ಅದೊಂದು ಜನಸಮುದಾಯವು ಬದುಕುವ ರೀತಿಯಾಗಿತ್ತು.ಈ ಮೊದಲು ಇದ್ದ ಕಂಪೆನಿಗಳು ಸುತ್ತಲಿನ ಸುಬ್ರಾಯನಹಳ್ಳಿ , ದೇವಗಿರಿ, ಕುಮಾರಸ್ವಾಮಿ ಬೆಟ್ಟಗಳ ತಪ್ಪಲಿನಲ್ಲಿ ಕಾರ್ಮಿಕರಿಗಾಗಿಯೆ ಇಂತಹ ಪುಟ್ಟ ಊರುಗಳನ್ನು ನಿರ್ಮಾಣ ಮಾಡಿದ್ದವು.

ಮನೆಗಳೆಂದರೆ  ಹದಿನೈದು×ಇಪ್ಪತ್ತು ಅಡಿ ವಿಸ್ತೀರ್ಣದವಾಗಿದ್ದವು. ಆ ಪುಟ್ಟ ಮನೆಗಳಲ್ಲಿಯೇ ಇಡೀ ಸಂಸಾರವಂದಿಗರೆಲ್ಲರೂ ಕೂಡಿ ಕಾಲ ಕಳೆಯಬೇಕಾಗಿತ್ತು. ಹೀಗೆ ಗಣಿ ಕೂಲಿಗಾಗಿ ದುಡಿಯುವವರಿಗೆ ಖಾಕಿ ಯುನಿಫಾರ್ಮ್ ಕೊಡಲಾಗಿತ್ತು. ಸಂಬಳ ಅಂತೇನು ಇರಲಿಲ್ಲ. ಗೌರವಧನ ಎಂದು ತಿಂಗಳಿಗೆ ಆರುನೂರು ರೂಪಾಯಿಗಳಂತೆ ನೀಡುತ್ತಿದ್ದರು.ರೇಷನ್ನು ಕೊಡುತ್ತಿದ್ದರು.ಬರಪೀಡಿತ ಹೊಲಗಳನ್ನು ನೆಚ್ಚಿಕೊಂಡು ತೀವ್ರ ಬಡತನವನ್ನು ಅನುಭವಿಸುವ ಬ್ಯಾಸಾಯಕ್ಕಿಂತ ಇದೇ ವಾಸಿಯೆಂದು ಸುಮ್ಮನೆ ಕೆಲಸ ಮಾಡುತ್ತಿದ್ದರು.

ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು  (Sanduru Stories)

ತಮ್ಮ ಅಜ್ಜ ಮುತ್ತಜ್ಜರ ಕಾಲದಿಂದಲೂ ಇದ್ದ ಜಂತಿನ ತೊಲೆ ಕಂಬಗಳ ಮನೆಯ ನೆನಪುಗಳೆಲ್ಲ ಅಳಿಸಿಹೋದವು. ಅನಿಯಮಿತ,ಅನಿಯಂತ್ರಿತ ,ಅಕ್ರಮ ಗಣಿಗಾರಿಕೆ ಆರಂಭವಾದ ನಂತರವಂತೂ ಜನರ ಬದುಕು ಮತ್ತಷ್ಟು ದುಸ್ತರಗೊಂಡಿತು.  ಹೊಲವಿಲ್ಲ, ಮನೆಯಿಲ್ಲ, ಆರೋಗ್ಯವಾಗಿದ್ದರೂ, ಸಂಬಂಧಿಕರಿಲ್ಲದ , ಹಬ್ಬ ಹರಿದಿನಗಳಿಲ್ಲದ ಯಂತ್ರಗಳ ಜೊತೆಗೆ ಮನುಷ್ಯರೂ ಸಹ ಭಾವರಹಿತ  ಯಂತ್ರಗಳೇ ಆಗಿಹೋದರು.ಅಕ್ಷರಶ “ಮ್ಯೂಜಿಯಮ್ಮಿನಲ್ಲಿಟ್ಟ ವಸ್ತು”ಗಳಾಗಿ ಹೋದರು.

ಗಾಯಗೊಂಡ ಸಾಂಸ್ಕೃತಿಕ ಶರೀರ  (Sanduru Stories)

ಹೌದು, ನವಯಾಂತ್ರಿಕ ವ್ಯವಸ್ಥೆಯೊಂದು ಜನಸಮುದಾಯಗಳ ಬದುಕುವ ರೀತಿಯನ್ನೆ ಬದಲಾಯಿಸಿ ಬಿಟ್ಟಿತು.ರೋಗಪೀಡಿತ ಜೀವನಕ್ರಮ,ದಿನನಿತ್ಯದ ಬದುಕುವ ಜಗತ್ತಾಗಿಹೋಯಿತು. ನೆಲ ಸಂಸ್ಕೃತಿಗಳು ನೆಲಕಚ್ಚಿದರೂ ಬಿಡದೆ, ಟಿಪ್ಪರುಗಳಲ್ಲಿ ದೇಶವಿದೇಶಗಳಿಗೆ ಅದಿರಿನೊಂದಿಗೆ ರಫ್ತಾದವು. ಸೊಂಡೂರು ಸುತ್ತಮುತ್ತಲಿನ ಸಾಂಸ್ಕೃತಿಕ ಶರೀರ ಗಾಯಗೊಂಡಿತು.

ಮನುಷ್ಯರ  ನೈತಿಕ ವ್ಯವಸ್ಥೆಯೇ ಕುಸಿದುಹೋದ ಅಥವಾ ಇಲ್ಲವಾಗಿ ಹೋದ ಇಂತಹ ಊರುಗಳಲ್ಲಿ ಬಹುಸಂಕೀರ್ಣವಾದ ಅನಿಶ್ಚಿತತೆಯಲ್ಲಿ ಬದುಕುತ್ತಿರುವ ಜೀವಗಳ ಮರುಶೋಧನೆಗಿಳಿಯಬೇಕಿದೆ.

ಸಂತ್ರಸ್ಥರಿಗೆ ಸಮಾಧಾನವಿಲ್ಲ (Sanduru Stories)

ಎರಡನೇ ಜಾಗತಿಕ ಮಹಾಯುದ್ಧದ ಬಾಂಬು ದಾಳಿಯ ಪರಿಣಾಮದಿಂದಾಗಿ ಹಿರೋಶಿಮಾ -ನಾಗಸಾಕಿ ನಗರಗಳು ಅಳಿದುಳಿದ ಜನರನ್ನು, ಸಾಮ್ರಾಜ್ಯಶಾಹಿ ಒಂದೆಡೆ ಸೇರಿಸಿ ಹೊಸ ಊರೊಂದನ್ನು ನಿರ್ಮಾಣ ಮಾಡಿ ಇರಿಸಿತು.ಮಿರಿಮಿರಿ ಮಿಂಚುವ ರಸ್ತೆಗಳು, ಪ್ರತಿಯೊಬ್ಬರಿಗೂ ಮನೆ, ನೀರು, ಆಹಾರ, ಉದ್ಯೋಗ ಎಲ್ಲವನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಆದರೆ ಆ ಸಂತ್ರಸ್ಥರಿಗೆ ಸಮಾಧಾನವಿರಲಿಲ್ಲ.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 38 : ಎದೆ ಕಲಕುವ ಆ ನೋಟಗಳು! 

ಮೌನಿಯಾದರು! (Sanduru Stories)

ದಿನವಿಡೀ ಯಾರೊಂದಿಗೂ ಮಾತನಾಡದೆ ಮೌನಿಯಾದರು!ಊಟವನ್ನೂ ಕಡಿಮೆ ಮಾಡತೊಡಗಿದರು.ತಮ್ಮ ಸಂಪ್ರದಾಯಗಳು,ಆಚರಣೆಗಳಿಲ್ಲದ,ಹಿರೀಕರಿಲ್ಲದ,ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು ಬಾಂಬು ದಾಳಿಗೆ ನರಳಿ ಸತ್ತ ನೆನಪುಗಳ ಹೊತ್ತ ಅವರಿಗೆ, ಹೊತ್ತು ದೀರ್ಘವೆನಿಸತೊಡಗಿತು.ಆ ಮನುಷ್ಯರಿಗೆ ತಮಗೆ ತಾವೇ ಎಲ್ಲಿಂದಲೋ ತಂದಿಟ್ಟ ಮ್ಯೂಜಿಯಮ್ಮಿನ ವಸ್ತುಗಳು ತಾವು ಎಂಬ ಭಾವನೆ ಬಲವಾಗಿಬಿಟ್ಟಿತು.

ಇಂಥ ಊರುಗಳಲ್ಲಿನ ಮನುಷ್ಯರನ್ನು ಯಾವುದೋ ಜಗತ್ತಿನಿಂದ ತಂದ ಪ್ರಾಣಿಗಳಹಾಗೆ,ವಸ್ತುಗಳ ಹಾಗೆ ಚಿತ್ರಿಸುವ ನಿರ್ಭಾವುಕ ಸಮಾಜ ಈ ಜನರ ಮುಂದೆ ಕುಬ್ಜ ವಾಗಿದ್ದು ಸತ್ಯ ಚೈತನ್ಯ ಶೀಲ, ಸಂವೇದನಾಶೀಲ ಸಮಾಜ ಮಾತ್ರವೇ ಮನುಷ್ಯನಿಗಿರುವ ಅಗಾಧ ಸಾಧ್ಯತೆಗಳನ್ನು ರೂಪಿಸಬಲ್ಲುದು.

ಎಷ್ಟೋ ಜನರು ತಮ್ಮ ಹಳೆಯ ಜನಪದ ಹಾಡುಗಳನ್ನು,ಕತೆಗಳನ್ನು,ನೆನಪಿಗೆ ತಂದುಕೊಂಡು ತಮ್ಮಷ್ಟಕ್ಕೆ ತಾವೇ ಗುನುಗಲು ಶುರುವಿಟ್ಟುಕೊಂಡರಂತೆ.ಕೆಲವರಿಗಂತೂ ನೆನಪುಗಳೂ ಬರದೆ, ಹೊಂದಿಕೊಳ್ಳದೆ ಬದುಕುವುದು ಕಷ್ಟವಾಗತೊಡಗಿತು.

ಎಷ್ಟೋ ಜನ ಆತ್ಮಹತ್ಯೆಗೂ ಶರಣಾದರು (Sanduru Stories)

ಇಂತಹದೊಂದು ವಿಚಿತ್ರ ಸನ್ನಿವೇಶದಲ್ಲಿ ಎಷ್ಟೋ ಮನುಷ್ಯರು ಹುಚ್ಚರಾಗಿಬಿಟ್ಟರಂತೆ. ಎಷ್ಟೋ ಜನ ಆತ್ಮಹತ್ಯೆಗೂ ಶರಣಾದರಂತೆ.ಇನ್ನು ಕೆಲವರಿಗೆ ಇಂತಹ ಸ್ಥಿತಿಗೆ ತಮ್ಮನ್ನು ತಂದಿಟ್ಟ ಪ್ರಭುತ್ವದ ವಿರುದ್ಧ ಪ್ರತಿರೋಧಿಸಲೂ ಆಗದೆ,ಬದುಕಲಿಕ್ಕೂ ಆಗದೆ ಸಾಯಲೂ ಆಗದಂತಹ ಸ್ಥಿತಿಯಲ್ಲಿ ಅವರಿದ್ದರು.

ಪ್ರಭುತ್ವಕ್ಕೆ ಹೃದಯವಿರಬೇಕು (Sanduru Stories)

ಕಣ್ಣಿಗೆ ಕಾಣದ ಇಂತಹ ಹಿಂಸೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾದದ್ದು ಸಂವೇದನಾಶೀಲ,ಸೂಕ್ಷ್ಮತೆಗಳ ಅರಿವಿರುವ ಪ್ರಭುತ್ವದ ಜವಾಬ್ದಾರಿ ಎಂಬುದೇನೊ ನಿಜ. ಆದರೆ… ನಿರ್ಭಾವುಕ ವೋಟಿಂಗ್ ಮೇಷೀನುಗಳ ಮೂಲಕವೆ ಆಯ್ಕೆಯಾಗುವ ಪ್ರಭುತ್ವಕ್ಕೆ ಕಣ್ಣು,ಕಿವಿ,ಮೂಗು ಬಾಯಿಗಳಿಗಿಂತಲೂ ,ಹೃದಯವಿರಬೇಕಾದುದು ಅಗತ್ಯ.

ಈಗ ಹೇಳಿ, ಸೊಂಡೂರಿಗೂ ಹಿರೋಶಿಮಾ – ನಾಗಸಾಕಿಯ ಊರುಗಳಿಗೂ ವ್ಯತ್ಯಾಸ ಗಳಿದೆಯಾ?  ನನಗೇನೂ ಹಾಗನ್ನಿಸುವುದಿಲ್ಲ.

                   ಬಿ.ಶ್ರೀನಿವಾಸ

Share This Article
Twitter Email Copy Link Print
Previous Article Davanagere ಮನೆ ಕಟ್ಟಿಕೊಳ್ಳಲು ಅರ್ಜಿ ಆಹ್ವಾನ
Next Article Davangere ಮೌಲ್ಯಯುತ ಶಿಕ್ಷಣದ ಅನಿವಾರ್ಯತೆಯಿದೆ : ಪ್ರಭಾ ಮಲ್ಲಿಕಾರ್ಜುನ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere news | ನಗರ ಸ್ವಚ್ಚಗೆ ನಾಗರಿಕರು ಕೈಜೋಡಿಸಬೇಕು: ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ, ಸೆ.3  (Davanagere ):  ನಾವು ಆರೋಗ್ಯವಾಗಿರಲು ನಮ್ಮ ಮನೆ, ಮನಸ್ಸು ಸದಾ ಸ್ವಚ್ಚವಾಗಿರಬೇಕು. ಅದೇ ರೀತಿ ನಮ್ಮ ಪರಿಸರವು…

By Dinamaana Kannada News

ಪ್ರಸ್ತುತ ದಿನಗಳಲ್ಲಿ ಸಾಂಸ್ಖೃತಿಕ ಉತ್ಸವಗಳ ಅಗತ್ಯವಿದೆ ; ಡಾ.ಕರಿಶೆಟ್ಟಿ ರುದ್ರಪ್ಪ

Kannada News | Dinamaana.com | 23-05-2024 ಹರಿಹರ :  ಪ್ರಸ್ತುತ ದಿನಗಳಲ್ಲಿ ಯುವಜನಾಂಗಕ್ಕೆ ಸಾಂಸ್ಕೃತಿಕ ಉತ್ಸವಗಳು ಅಗತ್ಯವಾಗಿ ಬೇಕಾಗಿವೆ…

By Dinamaana Kannada News

Davanagere | ನಿರಂತರ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ದಾವಣಗೆರೆ ನ.16  (Davanagere)- ಕವಲೆತ್ತು ಗ್ರಾಮದ ಹತ್ತಿರವಿರುವ ಜಾಕ್‍ವೆಲ್‍ನಲ್ಲಿ ಹೊಸದಾಗಿ ವಿದ್ಯುತ್ ಟ್ರಾನ್ಸ್‍ಫಾರಂಗೆ ಕೇಬಲ್ ಅಳವಡಿಸುವ ಕಾಮಗಾರಿ ಪ್ರಯುಕ್ತ ನ.20…

By Dinamaana Kannada News

You Might Also Like

Davanagere
Blogತಾಜಾ ಸುದ್ದಿ

Davanagere | ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
DAVANAGERE
Blog

Bhadra Reservoir | ಭದ್ರಾ ಜಲಾಶಯ ಎಡದಂಡೆ ನಾಲೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಬಿಡುಗಡೆ

By Dinamaana Kannada News
Davanagere
Blog

Davanagere | ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
DAVANAGERE
Blog

ಸಮೀಕ್ಷೆ : ಭೋವಿ/ ವಡ್ಡರ್ ಎಂದೇ ಬರೆಸಲು ವಿನಾಯಕ ಬಿ.ಎನ್. ಮನವಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?