Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 51 : ನೀವು ಊರು ಬಿಟ್ಟು ಯಾಕೆ ಹೋಗುತ್ತಿದ್ದೀರಿ ಎಂದು ಅವರನ್ನು  ಕೇಳುವುದಾದರೂ ಹೇಗೆ?
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 51 : ನೀವು ಊರು ಬಿಟ್ಟು ಯಾಕೆ ಹೋಗುತ್ತಿದ್ದೀರಿ ಎಂದು ಅವರನ್ನು  ಕೇಳುವುದಾದರೂ ಹೇಗೆ?

Dinamaana Kannada News
Last updated: June 11, 2024 3:30 am
Dinamaana Kannada News
Share
davanagere sanduru stories
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 11-06-2024

“ಮಣ್ಣು ತೂರುವ ಆಟ” (Sanduru Stories)

ಇಲ್ಲಿ ಮಣ್ಣೆಂಬುದು ಮಾಯೆಯೋ..ಮೋಹವೋ ಒಂದೂ ಅರ್ಥವಾಗದ ಸ್ಥಿತಿಯಲ್ಲಿ ಊರ ಜನರಿದ್ದಾರೆ. ಮಣ್ಣೆಂಬುದು ಹೊನ್ನಾಗಿ ಕೆಲವರಿಗೆ ಕಂಡರೆ,ಇನ್ನು ಕೆಲವರಿಗೆ ಮಣ್ಣು ಬೈಗುಳದ ವಸ್ತುವಾಗಿ ಹೋಗಿದೆ.

ತುಂಬಿದ ಮನೆಯ ಸದಸ್ಯರನ್ನು ಕಳೆದುಕೊಂಡ ಹೆಂಗಸೊಬ್ಬಳು ಮಣ್ಣನ್ನು ಆಕಾಶಕ್ಕೆ ತೂರಿ ಅದ್ಯಾರನ್ನು ಬೈಯ್ಯುತ್ತಿದ್ದಾಳೋ..?.ಆದರೆ ಹುಡುಗರು ಮಾತ್ರ ಇದಾವುದರ ಪರಿವೆಯೂ ಇಲ್ಲದೆ ಮೈಮೇಲೆ ಕೆಂಪುಧೂಳು ತೂರಿಕೊಂಡು “ಮಣ್ಣು ತೂರುವ ಆಟ” ಆಡಿಕೊಂಡಿದ್ದಾರೆ.

ಬದುಕು ‘ನಾರ್ಮಲ್’ ಬಂದಿಲ್ಲ (Sanduru Stories)

ಹೌದು,ಆಡುವ ಆಟಿಕೆಗಳನ್ನು ಕೊಡಿಸುವರಾರು?ಕೊಡಿಸೋಣವೆಂದರೂ ಬಣ್ಣ ಬಣ್ಣದ ಜಾತ್ರೆಗಳು ಮಾಯವಾಗಿವೆ. ಬದುಕು ‘ನಾರ್ಮಲ್’ ಎನ್ನುವ ಸ್ಥಿತಿಗೆ ಬಂದಿಲ್ಲವಾದರೂ ಜನರು ಬದುಕಿನ ದಾರಿಗಳನ್ನು ಹುಡುಕಿ ಎಲ್ಲಿಗೋ ಹೊರಟಿರುವಂತಿದೆ.

ಚುಮು ಚುಮು ನಸುಕಿನಲ್ಲಿ ಎದುರು ಸಿಕ್ಕವರು ಕೇಳುತ್ತಿದ್ದ “ಬದುಕೀಗೆ ಹೊಂಟೇನವ್ವಾ..?” “ಹ್ಞೂ..ಮಾವ” “ಏನವ್ವಾ ನಿನ ಗಂಡ ಆಗಲೇ ಹೊಲಕ್ಕೋದ್ನನು?” “ಹ್ಞೂ ಸಣಪಾ” ಸಂಭಾಷಣೆಗಳ ನುಂಗಿದ ಗಾಳಿ ಕೆಂಧೂಳು ಹೊತ್ತು ಎಲ್ಲಿಯೋ ತಾಣ ಹುಡುಕುತ್ತ ಸಾಗಿದೆ.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 37: ಮಣ್ಣು ಸೇರಿದ ಜೀವ

ಎಲ್ಲವೂ ಮಾಯ! (Sanduru Stories)

ಎತ್ತು, ಆಕಳು, ಎಮ್ಮೆ, ಕುರಿ ,  ಮೇಕೆ,ಕೋಳಿ,ಹಾಕಿದ ಸಗಣಿ ಗಂಜಲದ ರಸ್ತೆಗಳು.ಕೋಣ ಹ್ಞೂಂಕರಿಸಿದ್ದಕ್ಕೆ ಮಲಗಿದ್ದ ಕೂಸು ಮೆಟ್ಟಿಬಿದ್ದ ರಸ್ತೆಗಳು. ಅಷ್ಟೇ ಅಲ್ಲ,ಮಾವ,ಸಣ್ಣಪ್ಪ,ದೊಡ್ಡಪ್ಪ,ಅಜ್ಜ,ಅಜ್ಜಿ,ಅಣ್ಣ,ತಂಗಿ,ಅಕ್ಕ,ಅಳಿಯ….ನಾನು,ಎಲ್ಲವೂ ಮಾಯ!

ಓ ಕೆಂಧೂಳಿಯೇ ಎಲ್ಲಿಗೆ ಕರೆದುಕೊಂಡು ಹೋದಿ? ಯಾರದೋ ಜೇಬಿನಲ್ಲಿ ರೊಕ್ಕ ತುಂಬಲು ನನ್ನವರ ಬದುಕನ್ನು ಯಾಕೆ ಬಲಿತೆಗೆದುಕೊಂಡೆ?ಕೊರಳಪಟ್ಟಿ ಹಿಡಿದು ಕೇಳಬೇಕೆನಿಸುತ್ತದೆ.

ಸುಡುಗಾಡು ಮೌನದ ಊರಿನಲ್ಲಿ ಬದುಕುವುದಾದರೂ ಹೇಗೆ? (Sanduru Stories)

ಇಂಥದೊಂದು ಊರಿನಲ್ಲಿ ಹೀಗೀಗೆ ಆಯ್ತು, ಕೆಂಧೂಳಿನಲ್ಲಿ ಎಲ್ಲಾ ಹರಕೊಂಡು ಹೋಯಿತು.  ಈಗ ಸದ್ದಿಲ್ಲ ಪದ್ದಿಲ್ಲ, ಸುಡುಗಾಡು ಮೌನದ ಊರಿನಲ್ಲಿ ಬದುಕುವುದಾದರೂ ಹೇಗೆ? ಧೂಳು ಮೆತ್ತಿ ನಿಂತ ನೆರಿಕೆಯಲ್ಲಿ ಅಂಗಾತ ಮಲಗಿದಾತನ ತಲೆಯ ಬದಿ ಉರಿವ ದೀಪದ ಬೆಳಕಿನಲ್ಲಿ ಆಕೆ ಅಳುತ್ತಿರುವಾಗ, ಸಂತೆ ಮುಗಿಯಿತೆಂದು ಸಾಮಾನುಗಳನ್ನು ಲಗುಬಗೆಯಿಂದ ಕಟ್ಟುತ್ತಿರುವ ಜನರನ್ನು ಊರು ಯಾಕೆ ಬಿಟ್ಟು ಹೋಗುತ್ತಿದ್ದೀರಿ?ಎಂದು  ಅವರನ್ನು ಕೇಳುವುದಾದರೂ ಹೇಗೆ ?

       ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere ss ಎಸ್ ಎಸ್ -94 :ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ : ಯುವಕರಿಗೆ ಶಾಮನೂರು ಶಿವಶಂಕರಪ್ಪ ಆದರ್ಶ: ದಿನೇಶ್ ಕೆ ಶೆಟ್ಟಿ
Next Article Davanagere ಪಾರ್ಕ್ ನಲ್ಲಿ ಕಸ ವಿಲೇವಾರಿ ಘಟಕ : ಪ್ರತಿಭಟನೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಧಾರಾಕಾರ ಮಳೆ : ತುಂಬಿ ಹರಿಯುತ್ತಿರುವ ಜಲಾಶಯ

ಹೊನ್ನಾಳಿ :  ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅದರಲ್ಲೂ ತೀರ್ಥಹಳ್ಳಿ ಯಲ್ಲಿ ಕಳೆದ ಒಂದು ವಾರದಿಂದ ಧಾರಾಕಾರವಾಗಿ ಸುರಿದ ಮಳೆಯಿಂದ…

By Dinamaana Kannada News

ಗೀತಾ ಮಂಜುರವರ ಕಿರು ಬೆಳಕಿನ ಸೂಜಿ” ಕೃತಿಗೆ 2024ರ “ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ”

"ಕಿರು ಬೆಳಕಿನ ಸೂಜಿ" ಕೃತಿಗೆ 2024ರ "ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ" ಸಂದಿದೆ. ದಿನಾಂಕ 30.05.2025 ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ…

By Dinamaana Kannada News

Harihara | ಪೌರ ಕಾರ್ಮಿಕರು ನಗರದ ಜೀವನಾಡಿ : ಶಾಸಕ ಬಿ.ಪಿ.ಹರೀಶ್

ಹರಿಹರ (Harihara ) : ಪೌರ ಕಾರ್ಮಿಕರು ನಗರದ ಜೀವನಾಡಿಗಳಾಗಿದ್ದಾರೆ, ಅಂತಹ ಸೇವಾ ನಿರತ ಪೌರ ಕಾರ್ಮಿಕರ ದಿನಾಚರಣೆಯನ್ನು ಸರಕಾರದ…

By Dinamaana Kannada News

You Might Also Like

Davanagere
Blog

ಬಾಲಕಾರ್ಮಿಕ ಪದ್ದತಿ ವಿರುದ್ದ ಅರಿವು ಮೂಡಿಸಲು ಜಾಥಾ ಆಂದೋಲನಕ್ಕೆ ಚಾಲನೆ

By Dinamaana Kannada News
Davanagere
Blog

Harihar | ನೀರಿನ ಪೂರೈಕೆಯಲ್ಲಿ ವ್ಯತ್ಯಯ

By Dinamaana Kannada News
Davanagere
Blog

Davanagere | ನಗರ ಸಚ್ಚತೆಗೆ ಸಹಕರಿಸಿ, ಉಲ್ಲಂಘನೆಯಾದಲ್ಲಿ ದಂಡ ಪಾವತಿಸಿ : ಡಿಸಿ

By Dinamaana Kannada News
Davanagere
Blog

ನಾಗರಿಕ ರಕ್ಷಣಾ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?