ದಾವಣಗೆರೆ (Davanagere) : ಬಂಡವಾಳ ಶಾಹಿಗಳ ಸಾಮ್ರಾಜ್ಯದಿಂದ ದೂರ ಇದ್ದಂತಹ ದಲಿತ, ಶೋಷಿತ ವ್ಯಕ್ತಿಗಳು ತಮ್ಮ ಅಂತರಂಗದ ಅರಿವಿನ ಮೂಲಕ ತಾಯಿ ನುಡಿಯ ಭಾಷೆಯಿಂದ ಹೊರಹಾಕಿದ ನುಡಿಗಳೇ ಶರಣ ಸಾಹಿತ್ಯ. ಜನಸಾಮಾನ್ಯರ ನೋವು ನಲಿವುಗಳಿಗೆ, ದುಡಿಯುವ ರ್ಗಗಳ ಧ್ವನಿಯಾಗಿ ಅವರ ಅಪೇಕ್ಷೆ, ಅಗತ್ಯತೆಗಳ ದೃಢ ನರ್ಧಾರಕಗಳಿಗೆ ದೃಢ ನರ್ಧಾರವನ್ನು ಈ ಶರಣ ಸಾಹಿತ್ಯ ಒದಗಿಸಿದೆ ಎಂದು ದಾವಣಗೆರೆ ಜಿಲ್ಲಾ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿಅವರು ಅಭಿಪ್ರಾಯಪಟ್ಟರು.
ಶರಣ ಸಾಹಿತ್ಯ ಪರಿಷತ್ ನಗರಘಟಕವು ಧರ್ಮ ಜಾಲಿಮರದ ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕರ್ಯಕ್ರಮದಲ್ಲಿ “ಶರಣ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು” ವಿಷಯದ ಬಗ್ಗೆ ಮಾತನಾಡಿದರು.
ಶರಣ ಸಾಹಿತ್ಯವನ್ನು ಯಾರು ಓದಿ ಅಧ್ಯಯನ ಮಾಡಿ, ಅವಲೋಕನ ಮಾಡಿ, ಆ ನುಡಿಯನ್ನು ತಮ್ಮ ನಡೆಯಲ್ಲಿ ಅಳವಡಿಸಿಕೊಳ್ಳುತ್ತಾರೆ . ಆ ವ್ಯಕ್ತಿ ಮೃಗತ್ವದಿಂದ, ಮನುಷ್ಯತ್ವ ಮತ್ತು ದೈವತ್ವದ ಕಡೆಗೆ ಕೊಂಡೊಯ್ಯುವ ಶಕ್ತಿಯೇ ಶರಣ ಸಾಹಿತ್ಯದ ಮೌಲ್ಯ ಎಂದರು.
ಅಧ್ಯಕ್ಷ ತೆಯನ್ನು ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷರಾದ ಶರಣ ಎಂ. ಪರಮೇಶ್ವರಪ್ಪ ಸಿರಿಗೆರೆ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಶರಣೆ ರೇಖಾ ಓಂಕಾರಪ್ಪ ಅವರು ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿ ವಿದ್ಯರ್ಥಿಗಳು ಪ್ರತಿದಿನ ವಚನಗಳನ್ನು ಅಭ್ಯಾಸ ಮಾಡಬೇಕೆಂದು ಕರೆಯಿತ್ತರು.
ಶರಣತತ್ವ ಪ್ರತಿಪಾದಕ ಶಿವಕುಮಾರ್ ಚಿತ್ರಿಕಿ ಅವರು ವಚನಗಾಯನದ ಮೂಲಕ ಸಭಿಕರನ್ನು ರಂಜಿಸಿದರು.
ಲಿಂ|| ಗೌರಮ್ಮ ಮತ್ತು ವೀರಭದ್ರಯ್ಯ ಹಂಜಗಿಮಠ ದತ್ತಿಯ ಕುಟುಂಬ ಶ್ರೀಮತಿ ಶಾಂಭವಿಯವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ನಗರಘಟಕದ ಗೌರವಾಧ್ಯಕ್ಷ .ಎಸ್. ನಾಗರಾಜಪ್ಪ, ಉಪಾಧ್ಯಕ್ಷ ಶರಣ ಬುಳ್ಳಾಪುರದ ಮಲ್ಲಿಕರ್ಜುನಪ್ಪ, ಕೋಶಾಧಿಕಾರಿ ಶರಣೆ ಶೈಲಜಾ ಪಾಲಾಕ್ಷಪ್ಪ , ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಎನ್.ಎಸ್. ರಾಜು, ಗೌರವ ಸಲಹೆಗಾರರಾದ ಶರಣ ಆರ್. ಯೋಗೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಕಾರ್ಯದರ್ಶಿ ಶ್ರೀಕುಮಾರ್ ಆನೆಕೊಂಡ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಬಿ.ಜಿ. ಲೀಲಾವತಿ ಶೇಖರಪ್ಪ ವಂದಿಸಿದರು. ಶಿಕ್ಷಕ ಪಂಪಾಪತಿ ಕಾರ್ಯಕ್ರಮ ನಿರೂಪಿಸಿದರು.
Read also : Davanagere | ಸುಲಭ ಮತ್ತು ಕೈಗೆಟುಕುವ ದರಗಳಲ್ಲಿ ಮರಳು : ಸಚಿವ ಎಸ್.ಎಸ್. ಮಲ್ಲಿಕಾರ್ಜುನ್