Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಡಾ.ಫ.ಗು. ಹಳಕಟ್ಟಿ : ವಚನ ಸಾಹಿತ್ಯ ಸಂರಕ್ಷಣಾ ದಿನ
Blog

ಡಾ.ಫ.ಗು. ಹಳಕಟ್ಟಿ : ವಚನ ಸಾಹಿತ್ಯ ಸಂರಕ್ಷಣಾ ದಿನ

Dinamaana Kannada News
Last updated: July 2, 2024 12:22 pm
Dinamaana Kannada News
Share
davanagere
ಶ್ರೀ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು
SHARE

ಹುಟ್ಟು ಸಾವು ನಮ್ಮದಲ್ಲ , ಬದುಕು ಮಾತ್ರ ನಮ್ಮದು , ನಮ್ಮ ಬದುಕು ದೀಪವಾದರೂ ಇಲ್ಲವೇ ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ನೀಡುತ್ತದೆ ಇನ್ನೊಂದು ಪ್ರತಿಬಿಂಬವಾಗುತ್ತದೆ.

ಬಸವಾದಿ ಶರಣರ ವಚನ ಸಾಹಿತ್ಯ ಸಂಗ್ರಹ

ಇಂತಹ ಬದುಕಿನ ಸಾರ್ಥಕತೆಯನ್ನು ಕಂಡುಂಡವರು ಶ್ರೀ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು. 12 ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಬೆಳಕಿಗೆ ತಂದು ಪುನರ್ ಚೇತನ ನೀಡಿ, ಒಂದು ವಿಶ್ವವಿದ್ಯಾಲಯ ಸಾಧಿಸುವಷ್ಟು ಕೆಲಸವನ್ನು ಏಕಾಂಗಿಯಾಗಿ ಸಾಧಿಸಿ ಒಬ್ಬ ವ್ಯಕ್ತಿಯಾಗದೆ ಒಂದು ಶಕ್ತಿಯಾಗಿ, ಸಮಾಜಕ್ಕೆ ಬೆಳಕಾಗಿ ಆದರ್ಶ ಬದುಕಿನ ಪ್ರತಿಬಿಂಬವಾಗಿ ಬದುಕಿ ಬಾಳಿದ ಇತಿಹಾಸ ಪುರುಷ.

ವಚನ ಗುಮ್ಮಟ ನೋಡಬೇಕು…

ಒಮ್ಮೆ ನಮ್ಮ ಕನ್ನಡದ ಕಣ್ವ ಬಿ.ಎಂ ಶ್ರೀಯವರು ಬಿಜಾಪುರಕ್ಕೆ ಹೋದಾಗ ಅಲ್ಲಿ ಕೆಲವರು ಪ್ರಶ್ನಿಸಿದರು. ಇತಿಹಾಸ ಪ್ರಸಿದ್ಧ ಗೋಳಗುಮ್ಮಟ ನೋಡುವಿರಾ? ಅದಕ್ಕೆ ಶ್ರೀಯವರು ನಕ್ಕು ಅದನ್ನು ನೋಡಿಲ್ಲ ಕೇಳಿದ್ದೇನೆ, ಅದಕ್ಕಿಂತಲು ಮೊದಲು ವಚನ ಗುಮ್ಮಟವನ್ನು ನೋಡಬೇಕಾಗಿದೆ ಎಂದರು.

ಆ ವಚನ ಗುಮ್ಮಟವೇ ಶ್ರೀ ಫ ಗು ಹಳಕಟ್ಟಿಯವರು. ಆಚಾರ್ಯ ಬಿ ಎಂ ಶ್ರೀಯವರು ಶ್ರೀಯುತರ ಬದುಕಿನ ಮೇರು ಸಾಧನೆಗೆ ಇವರನ್ನು ವಚನ ಪಿತಾಮಹ ಎಂದು, 64ನೇ ಪುರಾತನರು ಎಂದು ಕರೆದರು. ಶ್ರೀ ಫ. ಗು ಹಳಕಟ್ಟಿಯವರು ಜುಲೈ 2 1880 ರಂದು ತಾಯಿ ದಾನಮ್ಮ ತಂದೆ ಗುರುಬಸಪ್ಪನವರ ಪುತ್ರರಾಗಿ ಧಾರವಾಡದಲ್ಲಿ ಜನಿಸಿದರು.

ತಾನು ಮೂರು ವರ್ಷದವನಿದ್ದಾಗ ತಾಯಿಯನ್ನು ಕಳೆದುಕೊಂಡರು. ತಂದೆ ಶಿಕ್ಷಕರು ಮತ್ತು ಸಾಹಿತ್ಯ ವಿದ್ವಾಂಸರಾಗಿದ್ದರಿಂದ ಏನನ್ನಾದರು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವನ್ನು ಪಡೆದುಕೊಂಡರು. ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಪ್ರಾರಂಭಿಸಿ 1897 ರಲ್ಲಿ ಮೆಟ್ರಿಕ್ಯೂಲೇಶನ್ ಪಾಸಾಗಿ ಉನ್ನತ ಶಿಕ್ಷಣವನ್ನು ಮುಂಬೈಯಲ್ಲಿ, ಸೇಂಟ್ ಝೇವಿಯರ್ ಕಾಲೇಜಿನಲ್ಲಿ ಪಡೆದರು.

ಕನ್ನಡಕ್ಕಾಗಿ ದುಡಿಯುವ ಸಂಕಲ್ಪ…

ಅಲ್ಲಿ ಕನ್ನಡದ ಪುರೋಹಿತ ಆಲೂರು ವೆಂಕಟರಾಯರು ಸಹಪಾಠಿಯಾಗಿದ್ದರು, ಅಲ್ಲ್ಲಿನ ಕನ್ನಡ ನಿರಾಭಿಮಾನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಭಾಷೆ -ಸಂಸ್ಕ್ರತಿ ಉದ್ದಾರÀವಾಗದೆಂದು, ಕನ್ನಡಕ್ಕಾಗಿ ದುಡಿಯುವ ಸಂಕಲ್ಪ ಮಾಡಿದರು.

1897 ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣನವರ ಮಗಳು ಭಾಗೀರಥಿಯವರ ಜೊತೆಗೆ ವಿವಾಹವಾಯಿತು. 1901 ರಲ್ಲಿ ಬಿ ಎ ಪದವಿ, 1904ರಲ್ಲಿ ಕಾನೂನು ಪದವಿ ಪಡೆದು ಬೆಳಗಾವಿಯಲ್ಲಿ ಪ್ರಥಮವಾಗಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿ, ಕಾರಣಾಂತರಗಳಿಂದ ತಮ್ಮ ವಕೀಲಿ ವೃತ್ತಿಯನ್ನು ಬಿಜಾಪುರಕ್ಕೆ ವರ್ಗಾಯಿಸಿಕೊಂಡರು. ನಂತರ ಸರ್ಕಾರ ಇವರ ಕೌಶಲ್ಯ, ಪಾವೀಣ್ಯತೆಯನ್ನು ಪರಿಗಣಿಸಿ ಸರ್ಕಾರಿ ವಕೀಲರನ್ನಾಗಿ ನೇಮಿಸಿತು.

ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಪ್ರಜ್ವಲವಾಗಿತ್ತು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಶರಣರು ಕಲ್ಯಾಣ ಬಿಟ್ಟು ಹೋಗುವಾಗ ತಮ್ಮೊಂದಿಗೆ ತಾಡೋಲೆಗಳಲ್ಲಿ ಬರೆಯಲಾದ ವಚನ ಸಾಹಿತ್ಯವನ್ನು ಕಟ್ಟಿಕೊಂಡು ಹೋಗಿ ದಾರಿಯಲ್ಲಿ ಸಿಕ್ಕ ಮಠ, ಮನೆಗಳಿಗೆ ಕೊಟ್ಟು ಈ ಪವಿತ್ರ ಗ್ರಂಥಗಳನ್ನು ಪೂಜ್ಯ ಭಾವನೆಯಿಂದ ಜೋಪಾನ ಮಾಡಿ ಎಂದು ಹೇಳಿ ಹೋದಾಗ ಜನರು ಅವುಗಳನ್ನು ಅರಿವೆಯಲ್ಲಿ ಸುತ್ತಿಟ್ಟು ಪೂಜಿಸಿದರೆ ವಿನಃ ಓದಲಿಲ್ಲಿ. ಧಾರವಾಡದಲ್ಲಿ ಪ್ಲೇಗ್ ತೀವ್ರವಾಗಿದ್ದರಿಂದ ಶ್ರೀ ಹಳಕಟ್ಟ್ಟಿಯವರು ಬನಹಟ್ಟಿಯಲ್ಲಿರಬೇಕಾಯಿತು. ಆಗ ಮಾವನವರಿಂದ ತಾಡೋಲೆಗಳ ಮಹತ್ವ ತಿಳಿಯಿತು.

ಬನಹಟ್ಟಿಯ ಶಿವಲಿಂಗಪ್ಪ, ಪಂಚಾಳ ಮನೆಯಲ್ಲಿ ಷಟ್ಸ್ಥಳ ತಿಲಕ ಮತ್ತು ವಚನ ತಾಡೋಲೆಗಳು, ಗೋರೆ ಗ್ರಾಮದ ವೀರಭದ್ರಪ್ಪನವರಿಂದ ಅಮೂಲ್ಯ ಗ್ರಂಥ ಭಾಷ್ಯರತ್ನಮಾಲೆ ಓದಲು ದೊರೆತವು ಇವು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದವು. ನಂತರ ಬಸವಾದಿ ಶರಣರ ವಚನ ಸಾಹಿತ್ಯ ಸಂಶೋಧsÀನೆಯಲ್ಲಿ ತೊಡಗಿದರು.

1923 ರಲ್ಲಿ ವಚನಶಾಸ್ತ್ರ ಸಾರ ಎಂಬ ಬೃಹತ್ ಗ್ರಂಥ ಹೊರತಂದರು

ರಬಕವಿ , ಬನ್ನಟ್ಟಿ, ಶ್ರೀ ಶೈಲ, ಮುದನೂರು, ಮಂಗಳವಾಡ, ಮುದಗಲ್ಲು , ಮುರುಗೋಡು, ಪೊಟಿಲಕೆರೆ- ಹೀಗೆ ಅನೇಕ ಊರುಗಳನ್ನು ಸುತ್ತಾಡಿ ತಾಡೋಲೆಗಳನ್ನು ಸಂಗ್ರಹಿಸಿದರು. ತಮ್ಮ ಬದುಕನ್ನು ವಚನ ಸಾಹಿತ್ಯ ಸಂಗ್ರಹ, ಅಧÀ್ಯಯನ, ವಿಶ್ಲೇಷಣೆ, ಪ್ರಕಟಣೆ ಮತ್ತು ಪ್ರಚಾರಕ್ಕೇ ತ್ಯಾಗ ಮಾಡಿದರು. ಹುಡುಕಾಟದ ಊರುಗಳಿಲ್ಲಿ ತಡುಕಾಡದ ಕೇರಿಗಳಿಲ್ಲಿ ಅನ್ವೇಷಣೆಗೈಯದ ಸ್ಥಳಗಳಿಲ್ಲ ಸಂಶೋಧನೆಗೈಯದ ಆಲಯಗಳಿಲ್ಲ ಎಂದು ತಾವೇ ಹೇಳಿಕೊಂಡಿದ್ದಾರೆ. ಉರಿಯುಂಡ ಕರ್ಪೂರವಾಗಿ ತನ್ನ ತಾ ಸುಟ್ಟುಕೊಂಡು, ವಕೀಲ ವೃತ್ತಿ ತ್ಯಜಿಸಿ 1923 ರಲ್ಲಿ ವಚನಶಾಸ್ತ್ರ ಸಾರ ಎಂಬ ಬೃಹತ್ ಗ್ರಂಥವನ್ನು ಹೊರತಂದರು.
ವಚನಗಳನ್ನು ಪ್ರಚಾರ ಮಾಡಲು ತಮ್ಮ ಮನೆಯನ್ನು ಮಾರಿ 1925 ರಲ್ಲಿ ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ ಸ್ಥಾಪಿಸಿದರು. 1926 ರಲ್ಲಿ ಶಿವಾನುಭವ ತ್ರೈಮಾಸಿಕ ಪತ್ರಿಕೆ, 1927 ರಲ್ಲಿ ನವ ಕರ್ನಾಟಕ ಪತ್ರಿಕೆ ಪ್ರಾರಂಭಿಸಿ ಇವುಗಳ ಮೂಲಕ ವಚನ ಸಾಹಿತ್ಯ ಪ್ರಚಾರ ಮಾಡುತ್ತ ಪತ್ರಿಕೆಗಳನ್ನು ಸೈಕಲ್ ಮೇಲೆ ಹೊತ್ತು ಮನೆ ಮನೆಗೆ ತಲುಪಿಸಿದರು.

ಸ್ತ್ರೀ ಸುಧಾರಣೆಗೆ ಅಕ್ಕನ ಬಳಗ..

ಶಿವಾನುಭವ ತತ್ವ ಅನುಷ್ಠಾನಕ್ಕೆ ಸಂಘಟನೆ ಮೂಲಕ ಸ್ತ್ರೀ ಸುಧಾರಣೆಯಾಗಬೇಕೆಂದು ಅಕ್ಕನ ಬಳಗ ಸ್ಥಾಪಿಸಿದರು. ವಚನಗಳನ್ನು ಇಂಗ್ಲೀಷ್‍ನಲ್ಲಿ ಭಾಷಾಂತರಿಸಿ ಇಂಡಿಯನ್ ಆಂಟಿಕ್ವರಿಯಲ್ಲಿ ಪ್ರಕಟಿಸಿದ್ದಾರೆ. ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಯಶಸ್ಸು ಇವರದು.
ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದ ಕೀರ್ತಿ ಇವರದು. ಇವರ ಸ್ವತಂತ್ರ ಕೃತಿಗಳ ಜೊತೆಗೆ ಸಂಪಾದಿಸಿದ ವಚನ ಸಾಹಿತ್ಯ ಕೃತಿಗಳು 175 ಕ್ಕೂ ಹೆಚ್ಚು. ಶೂನ್ಯ ಸಂಪಾದನೆ, ಶಿವಾನುಭವ, ಕೃಷಿ ವಿಜ್ಞಾನ, ಹರಿಹರನ ರಗಳೆ, ಪ್ರಭುದೇವರ ವಚನಗಳು, ಶಬ್ದಕೋಶ, ಆದಿಶೆಟ್ಟಿ ಪುರಾಣ, ಮುಂತಾದವುಗಳು ಪ್ರಮುಖ ಕೃತಿಗಳು. ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ, ಶಿಕ್ಷಣ ಇತ್ಯಾದಿ ಹೀಗೆ ಎಲ್ಲದರಲ್ಲೂ ತೊಡಗಿಸಿಕೊಂಡರು.

ಬಿ.ಎಲ್,ಡಿ.ಇ ಸಂಸ್ಥೆ ಸ್ಥಾಪನೆ

1910 ರಲ್ಲಿ ಬಿ.ಎಲ್,ಡಿ.ಇ ಸಂಸ್ಥೆ ಸ್ಥಾಪಿಸಿ ಶಿಕ್ಷಣಕ್ಕೆ ಮೈಲಿಗಲ್ಲಾದರು. 1912 ರಲ್ಲಿ ಸಿದ್ದೇಶ್ವರ ಸಂಸ್ಥೆ, 1913 ರಲ್ಲಿ ಸಿದ್ದೇಶ್ವರ ಸಹಕಾರಿ ಪತ್ತಿನ ಸಂಘ, 1914 ರಲ್ಲಿ ಸಿದ್ದೇಶ್ವರ ಹೈಸ್ಕೂಲ್, ಕೃಷಿ ಸಹಕಾರ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು, ಭೂತನಾಳ ಕೆರೆಯ ನಿರ್ಮಾಣ ಹೀಗೆ ಸಮಾಜದ ಅಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿತ್ವ. 1920 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಯಲ್ಲಿ ಇವರ ಪಾತ್ರ ಪ್ರಮುಖವಾದುದು.

ಇದೇ ವರ್ಷದಲ್ಲಿ ಮುಂಬೈ ವಿಧಾನ ಪರಿಷತ್ ಸದಸ್ಯರಾಗಿ, 1926 ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928 ರಲ್ಲಿ ಕರ್ನಾಟಕ ಏಕೀಕರಣ ಪರಿಷತ್‍ನ ಅಧ್ಯಕ್ಷತೆ, 1930 ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, 1933 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಯ ಅಧ್ಯಕ್ಷತೆ, ಬಿಜಾಪುರ ನಗರ ಸಭೆಯ ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯಾಗಿ ಹೀಗೆ ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

 
ಆಪತ್ತು ವಿಪತ್ತುಗಳನ್ನು ಧೈರ್ಯದಿಂದ ಎದುರಿಸಿದರು...

ಮುಂಬೈ ಕರ್ನಾಟಕದಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕನ್ನಡದ ವಾತಾವರಣವನ್ನು ನಿರ್ಮಿಸಿದ್ದಾರೆ. ಇವರ ಸಾಮಾಜಿಕ ಮತ್ತು ಸಾಂಸ್ಕøತಿಕ ಸೇವೆಗೆ ಸರ್ಕಾರ ರಾವ್ ಸಾಹೇಬ್ ಮತ್ತು ರಾವ್ ಬಹದ್ದೂರ್ ಬಿರುದನ್ನು ನೀಡಿ ಗೌರವಿಸಿದೆ. ಸಾಧಕ ಹಳಕಟ್ಟಿಯವರು ಕಿತ್ತು ತಿನ್ನುವ ಬಡತನ, ಅನಾರೋಗ್ಯ, ಅಕಾಲಿಕ ಹಿರಿಯ ಮಗನ ಸಾವು, ಬಂದ ಎಲ್ಲಾ ಆಪತ್ತು ವಿಪತ್ತುಗಳನ್ನು ಧೈರ್ಯದಿಂದ ಎದುರಿಸಿದರು.

ಜಗಕ್ಕೆ ವಚನ ಭಂಡಾರ…

ವಚನ ಸಾಹಿತ್ಯಕ್ಕಾಗಿ ತಮಗೆ ಬಂದ ಪ್ರಶಸ್ತಿ, ಹಣ, ಬಹುಮಾನ ಹಣವನ್ನು ಸಮರ್ಪಿಸಿದರು. ತನ್ನದೆಲ್ಲವನ್ನೂ ಸಕಲ ಜೀವಾತ್ಮರ ಲೇಸಿಗಾಗಿ ಅರ್ಪಿಸಿದ ಮಹಾನುಭಾವ. ಈಶ್ವರ ಸಣ್ಣಕಲ್ಲ್ಲ ಅವರು “ಏನು ಇಲ್ಲದ ಘನ ಫಕ್ಕೀರಾ ಸೂರೆಗೈದೆಯಾ ಜಗಕ್ಕೆ ವಚನ ಭಂಡಾರ” ಎಂದು ಹಾಡಿಹೊಗಳಿದ್ದಾರೆ.
1956ರಲ್ಲಿ ಧಾರವಾಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲು ಹೋದಾಗ ಕುಲಪತಿಗಳಾಗಿದ್ದ ಪ್ರೊ. ಪಾವಟೆ ಇದೇನು ಹರಿದ ಕೋಟಿನಲ್ಲಿ ಬಂದಿದ್ದೀರಲ್ಲಾ ಅಂದಾಗ ಕುಲಪತಿಗಳೆ ಕೋಟು ಹರಿದಿರಬಹುದು, ಆದರೆ ಶುಭ್ರವಾಗಿದೆ ಎಂದಾಗ ಪಾವಟೆಯವರ ಕಣ್ಣಲ್ಲಿ ನೀರು ಸುರಿಯಲಾರಂಭಿಸಿದವು.

ಕರ್ನಾಟಕ ಇತಿಹಾಸದಲ್ಲಿ 1964 ಜೂನ್ 29 ರ ಸಂಜೆ ಅಂಗವೊಂದು ಲಿಂಗದೊಳಗೆ ಬೆರೆತು, ಆತ್ಮ ಪರಮಾತ್ಮನೊಂದಿಗೆ ಸೇರಿಕೊಂಡ ಪುಣ್ಯಗಳಿಗೆಯದು. ಕನ್ನಡಮಾತೆಯ ಮುಡಿಗೆ ಸಾವಿಲ್ಲದೆ , ಕೇಡಿಲ್ಲದೆ ಎಣೆಯಿಲ್ಲ್ಲದೆ ಕೃತಿ ಕುಸುಮಗಳನ್ನರ್ಪಿಸಿದ ಶರಣ ಫ.ಗು. ಹಳಕಟಿ ್ಟ ಮರಣವನ್ನಪಿದ ಮಹಾನವಮಿ ಅದು.
ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿದ ಪುಣ್ಯಪುರುಷ ಶ್ರೀ ಹಳಕಟ್ಟಿ ಸ್ಮರಣಾರ್ಥ ಬಿ.ಎಲ್.ಡಿ.ಇ ಸಂಸ್ಥೆಯು ಅವರ ಸಮಗ್ರ ಸಾಹಿತ್ಯವನ್ನು 15 ಬೃಹತ್ ಗ್ರಂಥಗಳನ್ನಾಗಿ ಮರು ಮುದ್ರಣಗೊಳಿಸಿ ಓದುಗರಿಗೆ ಒದಗಿಸಿದೆ. ಕರ್ನಾಟಕ ರಾಜ್ಯ ಸರ್ಕಾರ ಶ್ರೀಯುತರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ಪ್ರಶಂಸನಾರ್ಹ.

ಈ ಹಿನ್ನೆಲೆಯಲ್ಲಿ ಸತ್ಯ ನಮ್ಮ ನಡೆ ನುಡಿಯಾಗಬೇಕು. ಕಾಯಕ ಮತ್ತು ದಾಸೋಹ ನಮ್ಮ ಜೀವನ ಪದ್ಧತಿಯಾದಾಗ ಮಾತ್ರ ಇಂತಹ ಮಹನೀಯರಿಗೆಕೃತಜ್ಞತೆ ಸಲ್ಲಿಸಿದಂತಾಗುತ್ತದೆ.

ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ
ದಾವಣಗೆರೆ

TAGGED:Davanagere districtDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ದಿನಮಾನದ ಹೆಮ್ಮೆ : ದಿನ ಬಿಟ್ಟು ದಿನ ನೆನಪಾಗುವ ಕಾಟ್ರಹಳ್ಳಿ
Next Article Davanagere ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

L G HAVANUR | ಅರಸು ಕಣ್ಣಿಗೆ ಬಿದ್ದ ಹಾವನೂರು

Kannada News | Dinamaana.com | 25-08-2024 ಕರ್ನಾಟಕದಲ್ಲಿ , ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲವದು.  ದಾವಣಗೆರೆಯ…

By Dinamaana Kannada News

ರೈತರಿಗೆ ಸಿಹಿ ಸುದ್ದಿ: ಕೆಎಂಎಫ್ ನಿಂದ ಮೆಕ್ಕೆಜೋಳ ಖರೀದಿ ಆರಂಭ

ದಾವಣಗೆರೆ: ಜಿಲ್ಲೆಯ ಅನ್ನದಾತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೆಕ್ಕೆಜೋಳ ಮಾರಾಟಕ್ಕೆ ಜಿಲ್ಲೆಯ ರೈತರ ಅಲೆಯುವಂತಿಲ್ಲ. ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್…

By Dinamaana Kannada News

ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಶಂಕುಸ್ಥಾಪನೆ ಗಡುವು

ದಾವಣಗೆರೆ:  ಜು.31ರ ಒಳಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸದಿದ್ದರೆ ಜಿಲ್ಲಾ ಕೇಂದ್ರ ಬಂದ್ ಮಾಡುವ ಜೊತೆಗೆ ಜನ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?