ದಾವಣಗೆರೆ (DAVANAGERE) : ತಾಲೂಕಿನ ಕುರ್ಕಿ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆಗೆ ಹೋದ ಇಬ್ಬರು ನೀರು ಪಾಲಾದ ಘಟನೆ ಶುಕ್ರವಾರ ನಡೆದಿದೆ.
ಆಂಧ್ರಪ್ರದೇಶ ಅನಂತಪುರದ ಕೆ.ರಾಮಕೃಷ್ಣ (34), ಹಿಮೇಶ್ (21) ನೀರು ಪಾಲಾದವರು.
Read also : ಮೇ 6 ರಂದು ಚಂದನವಾಹಿನಿಯಲ್ಲಿ ಡಾ. ರಾಘವೇಂದ್ರ ಗುರೂಜಿ ನೇರ ಸಂದರ್ಶನ
ದಾವಣಗೆರೆ ಪತ್ನಿಯ ತವರಾದ ದಾವಣಗೆರೆ ತಾಲೂಕಿನ ಹದಡಿ ಗ್ರಾಮಕ್ಕೆ ಬಂದಿದ್ದ ಕೆ. ರಾಮಕೃಷ್ಣ. ಜೊತೆಗೆ ಅಕ್ಕನ ಮಗ ಹಿಮೇಶ್ ಜೊತೆಗೆ ಇನ್ನೊಬ್ಬ ಯುವಕನ ರಕ್ಷಣೆಗೆ ಹೋಗಿ ಈ ಅವಘಡ ನಡೆದಿದೆ.
ಹಿಮೇಶ್ ಶವ ಪತ್ತೆ. ಕೆ. ರಾಮಕೃಷ್ಣ ಶವಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಹದಡಿ ಪೆÇಲೀಸ್ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.