Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere | ಆರೋಗ್ಯ ಭಾಗ್ಯವನ್ನು ಕೊಡುವವನು ಧನ್ವಂತರಿ : ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್
ತಾಜಾ ಸುದ್ದಿ

Davangere | ಆರೋಗ್ಯ ಭಾಗ್ಯವನ್ನು ಕೊಡುವವನು ಧನ್ವಂತರಿ : ವೇದಬ್ರಹ್ಮ ಗೋಪಾಲ ಆಚಾರ್ ಮಣ್ಣೂರ್

Dinamaana Kannada News
Last updated: November 3, 2024 5:01 am
Dinamaana Kannada News
Share
DAVANAGERE
DAVANAGERE
SHARE

ದಾವಣಗೆರೆ  (Davangere) :  ‘ಧನ್ವಂ ತರತೀ ಇತೀ ಧನ್ವಂತರಿ’ – ಅಂದರೆ ಪಾಪವನ್ನು ಕಳೆಯುವವನು, ದೋಷವನ್ನು ದೂರ ಮಾಡುವವನು, ಅನಾರೋಗ್ಯವನ್ನು ಕಳೆಯುವವನು, ಆರೋಗ್ಯ ಭಾಗ್ಯವನ್ನು ಕೊಡುವವನು ಶ್ರೀ ಧನ್ವಂತರಿ ದೇವರು ಎಂದು ಹಿರಿಯ ಪ್ರವಚನಕಾರ ವೇದಬ್ರಹ್ಮ ಪೂಜ್ಯ ಶ್ರೀ ಗೋಪಾಲ ಆಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸು ಬಡಾವಣೆ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ  ಧನ್ವಂತರಿ ಜಯಂತಿ ಪ್ರಯುಕ್ತ ಆಯೋಜಿಸಲಾಗಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ‘ಧನ್ವಂತರಿ ಜಯಂತಿ ಮಹತ್ವ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಮುನಿಶ್ರೇಷ್ಠ ದೂರ್ವಾಸರ ಶಾಪದಿಂದ ದೇವತೆಗಳೆಲ್ಲರೂ ಸ್ವರ್ಗವನ್ನು ತ್ಯಜಿಸಬೇಕಾದ ಸಂದರ್ಭದಲ್ಲಿ ಅಮರತ್ವವನ್ನು ಪಡೆಯಲು ದೇವತೆಗಳು ಮತ್ತು ರಾಕ್ಷಸರು ಸೇರಿ ಕ್ಷೀರಸಾಗರದಲ್ಲಿ ಸಮುದ್ರ ಮಂಥನ ಮಾಡುವ ಕಾಲದಲ್ಲಿ ಅಮೃತ ಕಲಶವನ್ನು ಹೊತ್ತು ಧರೆಗಿಳಿದ ಮಹಾವಿಷ್ಣುವಿನ ರೂಪವೇ ಶ್ರೀ ಧನ್ವಂತರಿ ದೇವರು ಎಂದು ತಿಳಿಸುತ್ತಾ ಈ ದಿನದ ವಿಶೇಷತೆ, ವೈಶಿಷ್ಠ್ಯತೆಗಳನ್ನು ತಿಳಿಸುತ್ತಾ, ಆರೋಗ್ಯಭಾಗ್ಯವನ್ನು ಪಡೆಯಲು ಪ್ರತಿನಿತ್ಯ ಒಂದು ಕಳಶದ ತುಂಬ ನೀರನ್ನು ತುಂಬಿ ತುಳಸಿ ಎಲೆಯನ್ನು ಹಾಕಿ ಎರಡೂ ಕೈ ಹಸ್ತವನ್ನು ಕಳಶದ ಮೇಲಿಟ್ಟು ಸಂಕಲ್ಪ ಮಾಡಿ ‘ಓಂ ಶ್ರೀ ಧನ್ವಂತರಿಯೇ ನಮಃ’ ಎಂಬ ಮತ್ರವನ್ನು ಕನಿಷ್ಠ 12 ರಿಂದ ಗರಿಷ್ಠ 108 ಬಾರಿ ಜಪಿಸುವುದು. ಇದರಿಂದ ನಮ್ಮ ಇಷ್ಟಾರ್ಥಗಳು ನೆರವೇರುವುದು ಎಂದು ಸರಳ ಪೂಜಾ ವಿಧಾನವನ್ನು ತಿಳಿಸಿಕೊಟ್ಟರು.

ವೇದಬ್ರಹ್ಮ ಪೂಜ್ಯ ಶ್ರೀ ಗೋಪಾಲ ಆಚಾರ್ ಮಣ್ಣೂರ್ ಇವರ ಮಾರ್ಗದರ್ಶನದಲ್ಲಿ ಸರ್ವ ಪೂಜಾ ಕಾರ್ಯಕ್ರಮವನ್ನು ದಂಪತಿಗಳಾದ ಭರತ್ ವಾಧೋನೆ ಮತ್ತು ಶ್ರೀಮತಿ ಸುಮಾ ವಾಧೋನೆ, ಚಿ|| ಶ್ರೀಯನ್ ಇವರುಗಳು ಶ್ರದ್ಧಾಭಕ್ತಿಯಿಂದ ನಡೆಸಿಕೊಟ್ಟರು.

ಹೂವಿನ ಅಲಂಕಾರ ಸೇವೆಯನ್ನು ಗಣೇಶ್ ವಾಧೋನೆ ಕುಟುಂಬದವರು ಅರ್ಪಿಸಿದರು. ಶ್ರೀಮತಿ ಪೂರ್ಣಿಮಾ ವರದರಾಜ್ ಭಕ್ತಿ ಸಮರ್ಪಿಸಿದರು. ಶಂಕರ್ ಎಲ್.ಎ. ಕುಟುಂಬದವರು ಸರ್ವರಿಗೂ ಪ್ರಸಾದ ಸೇವೆಯನ್ನು ಮಾಡಿದರು.

ಕಾರ್ಯಕ್ರಮದಲ್ಲಿ ರಂಗೋಲಿ ಗೌರಮ್ಮ, ರೇಖಾ ಕಲ್ಲೇಶ್, ಶಾಂತಮ್ಮ, ಸಾವಿತ್ರಮ್ಮ, ಸಂಧ್ಯಾ, ಜ್ಯೋತಿಲಕ್ಷ್ಮೀ, ಸಂತೋಷ್ ಹೆಚ್., ಯೋಗ ವಿಜ್ಞಾನ ವಿಭಾಗದ ರಾಹುಲ್ ವಿ.ಕೆ., ಬೇಬಿ ಗುರುಪ್ರಿಯಾ ಆರ್.ಜಿ., ಪೂಜಾ ಕಾರ್ಯದ ಯಶಸ್ಸಿಗೆ ಸಹಕರಿಸಿದರು.

Read also : Davanagere | ನಾಡು, ನುಡಿ, ಸಂಸ್ಕೃತಿ ಉಳಿಸಲು ಸಂಘಟಿತರಾಗಿ ಹೋರಾಡೋಣ : ಮೊಹಮ್ಮದ್ ಜಿಕ್ರಿಯಾ

ಕಡೂರಿನ ಎಂ. ನಾಗೇಂದ್ರರಾವ್ ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜೀವನ್ ಎನ್. ಪವಾರ್, ಅಂಚೆ ಇಲಾಖೆಯ ವೇದಾವತಿ ಡಿ.ಹೆಚ್.ಎಂ., ಮೀಸಲು ಪಡೆಯ ಚಂದ್ರ ಎಸ್., ಯೋಗಸಾಧಕ ಮಹಾಂತೇಶ್ ಇವರುಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

ಮಹಾಮಂಗಳಾರತಿ, ತೀರ್ಥ ಪ್ರಸಾದ ಫಲ ಹಾಗೂ ದೇಶಿ ಪಾನೀಯ ಸೇವನೆಯೊಂದಿಗೆ ಧನ್ವಂತರಿ ಜಯಂತಿ ಪೂಜಾ ಕಾರ್ಯವು ಸಂಪನ್ನಗೊಂಡಿತು.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ನಾಡು, ನುಡಿ, ಸಂಸ್ಕೃತಿ ಉಳಿಸಲು ಸಂಘಟಿತರಾಗಿ ಹೋರಾಡೋಣ : ಮೊಹಮ್ಮದ್ ಜಿಕ್ರಿಯಾ
Next Article DAVANAGERE Davanagere | ಕನ್ನಡ ಭಾಷೆ ಬಳಕೆಯಿಂದ  ಸೌಹಾರ್ಧತೆ ಹೆಚ್ಚಳ : ಮೇಯರ್‌ ಚಮನ್ ಸಾಬ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಚಿಕ್ಕಜಾಜೂರು |ವಿದ್ಯುತ್ ಅವಘಡ: ಮೂವರ ದುರ್ಮರಣ

ಚಿಕ್ಕಜಾಜೂರು (ಚಿತ್ರದುರ್ಗ ಜಿಲ್ಲೆ): ಅಡಿಕೆ ಶೆಡ್ ನಿರ್ಮಿಸಲು ಕಬ್ಬಿಣದ ಕಂಬಿಯನ್ನು ಹಾಕುತ್ತಿರುವಾಗ ವಿದ್ಯುತ್ ಲೈನ್‌ಗೆ ಕಬ್ಬಿಣದ ಕಂಬಿ ತಗುಲಿ ಕಂಬಿಯನ್ನು…

By Dinamaana Kannada News

ನ.14 ರಂದು ಜವಾಹರ್ ಬಾಲ್ ಮಂಚ್ ನಿಂದ ಮಕ್ಕಳ ದಿನಾಚರಣೆ

ದಾವಣಗೆರೆ.ನ.೧೧ (Davanagere):  ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನದ ಅಂಗವಾಗಿ ರಾಜ್ಯಮಟ್ಟದಲ್ಲಿ ಮಕ್ಕಳ ದಿನಾಚರಣೆಯನ್ನು…

By Dinamaana Kannada News

Harihara | ಮಾನವರೆಲ್ಲರೂ ಪರಸ್ಪರ ಸಹೋದರರು ಅಕ್ಬರ್ ಅಲಿ ಉಡುಪಿ

ಹರಿಹರ (Harihara): ವಿಭಿನ್ನ ಧರ್ಮ, ಜಾತಿ, ಪಂಥ, ವರ್ಣಾದಿಗಳಿದ್ದರೂ ಜಗತ್ತಿನ ಮಾನವರೆಲ್ಲರೂ ಪರಸ್ಪರ ಸಹೋದರರೆಂದು ಇಸ್ಲಾಂಧರ್ಮ ಬೋಧಿಸುತ್ತದೆ ಎಂದು ಜಮಾತೆ…

By Dinamaana Kannada News

You Might Also Like

Applications invited
ತಾಜಾ ಸುದ್ದಿ

ದಾವಣಗೆರೆ | ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅರ್ಜಿ ಆಹ್ವಾನ

By Dinamaana Kannada News
10 Permanent Driver Posts: Applications invited from ex-servicemen
ತಾಜಾ ಸುದ್ದಿ

ದಾವಣಗೆರೆ |10 ಖಾಯಂ ಚಾಲಕ ಹುದ್ದೆ : ಮಾಜಿ ಸೈನಿಕರಿಂದ ಅರ್ಜಿ ಆಹ್ವಾನ

By Dinamaana Kannada News
Vinaykumara G B
ತಾಜಾ ಸುದ್ದಿ

ದೇಗುಲ ಕಟ್ಟುವ ಒಗ್ಗಟ್ಟಿನಂತೆ ಸುಸಜ್ಜಿತ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ಅಗತ್ಯ: ಜಿ. ಬಿ. ವಿನಯ್ ಕುಮಾರ್

By Dinamaana Kannada News
MP Dr. Prabha Mallikarjun
ತಾಜಾ ಸುದ್ದಿ

ಇಎಸ್‌ಐ ಅರ್ಹತಾ ಮಿತಿಯನ್ನು ಪರಿಷ್ಕರಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ 

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?