Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere | ಬಿರುಕು ಬಿಟ್ಟ ಜಿಲ್ಲಾಸ್ಪತ್ರೆ ಕಟ್ಟಡ : ರೋಗಿಗಳಿಗೆ ಜೀವ ಭಯ!
ತಾಜಾ ಸುದ್ದಿ

Davanagere | ಬಿರುಕು ಬಿಟ್ಟ ಜಿಲ್ಲಾಸ್ಪತ್ರೆ ಕಟ್ಟಡ : ರೋಗಿಗಳಿಗೆ ಜೀವ ಭಯ!

Dinamaana Kannada News
Last updated: December 18, 2024 3:36 pm
Dinamaana Kannada News
Share
DAVANAGERE C J HOSPITAL
DAVANAGERE C J HOSPITAL
SHARE

ದಾವಣಗೆರೆ (Davanagere): ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಸರ್ಕಾರಿ ಚಿಗಟೇರಿ ಜಿಲ್ಲಾಸ್ಪತ್ರೆಯ ಕಟ್ಟಡ ಬಹುತೇಕ ಬಿರುಕು ಬಿಟ್ಟಿದ್ದು, ಆಸ್ಪತ್ರೆಗಳಿಗೆ ಜೀವ ಭಯ ಉಂಟಾಗಿದೆ.!

ಮಂಗಳವಾರ ಆಸ್ಪತ್ರೆಯ ಹಿಂಭಾಗದ ತುರ್ತು ಚಿಕಿತ್ಸಾ ಘಟಕದ ಮುಂಭಾಗದ ಮುಖ್ಯ ಕಟ್ಟಡದ ಮೇಲ್ಚಾವಣಿಯ ಪದರ ಕುಸಿದು ಬಿದ್ದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಕಾವೇರಿ ((36), ಪ್ರೇಮಕ್ಕ (46) ಹಾಗೂ ಎರಡೂವರೆ ವರ್ಷದ ನೇತ್ರಾ ಎಂಬ ಮಗುವಿಗೆ ಗಾಯವಾಗಿದೆ.

ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು ಜೀವ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಮೇಲ್ಚಾವಣಿಯ ಪದರು ಕಳಚಿ ಬಿದ್ದ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಈಗ ಮತ್ತೆ ಅದೇ ಘಟನೆ ಪುನಾರವರ್ತನೆಯಾಗಿದೆ. ಇಷ್ಟಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸರ್ಕಾರ ಇತ್ತ ಗಮನ ಹರಿಸದಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮರ‍್ನಾಲ್ಕು ಜಿಲ್ಲೆಗಳ ಕೊಂಡಿಯಾಗಿರುವ ದಾವಣಗೆರೆ ಜಿಲ್ಲಾಸ್ಪತ್ರೆಗೆ ನೂರಾರು ರೋಗಿಗಳು ಹೊರ ಮತ್ತು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆಯ ಒಪಿಡಿಗಳಲ್ಲಿ ಜನಜಂಗುಳಿ ಸೇರಿರುತ್ತಾರೆ. ಅಲ್ಲದೇ, ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಗಾಗ ಆಸ್ಪತ್ರೆಯ ಮೇಲ್ಚಾವಣಿಯ ಪದರುಬಕುಸಿದು ಬೀಳುವುದರಿಂದ ರೋಗಿಗಳ ಗಂಭೀರ ಗಾಯಗೊಂಡು ಹೆಚ್ಚಿನ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಪ್ರಶ್ನೆಯಾಗಿದೆ.

ಆಸ್ಪತ್ರೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ವಾರ್ಡ್ಗಳನ್ನು ಇಣುಕಿ ನೋಡಿದರೆ ಅಲ್ಲಲ್ಲಿ ಕಬ್ಬಿಣದ ಗೋಡೆಗಳಿಗೆ ಹಾಕಿದ್ದ ಸೀಮೆಂಟ್ ಕಳಚಿ ಬಿದ್ದು ಸರಳುಗಳು ಗೋಚರಿಸುತ್ತಿವೆ. ಕಿಟಿಕಿಗಳು ಕಿತ್ತು ಹೋಗಿವೆ. ಆಸ್ಪತ್ರೆಯ ಒಳಗಿನ ಆವರಣದ ಗೋಡೆಗಳನ್ನು ನೋಡಿದರೆ ಅಸ್ಥಿಪಂಜರದಂತೆ ಕಾಣುತ್ತದೆ. ಕೂಡಲೇ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

 
ಬಜೆಟ್ ಹಣ ಮೀಸಲಿಟ್ಟರೆ ಸಾಲದು..
ರಾಜ್ಯದ ಜಿಲ್ಲಾಸ್ಪತ್ರೆಗಳಿಗೆ ಬಜೆಟ್‌ನಲ್ಲಿ ಕೋಟ್ಯಂತರ ಅನುದಾನ ಮೀಸಲಿಡಲಾಗುತ್ತದೆ. ಆದರೆ ಅನುದಾನ ಬಿಡುಗಡೆಯಾದರೆ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಬಹುದು. ಅನುದಾನ ಬಿಡುಗಡೆ ಮಾಡದೇ ಕೇವಲ ದಾಖಲೆಗಳಲ್ಲಿ ತೋರಿಸಲಾಗುತ್ತದೆ. ಬಡವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅಸಾಧ್ಯವಾಗಿದೆ.

ಮರ‍್ನಾಲ್ಕು ಜಿಲ್ಲೆಗಳಿಂದ ಬರುವ ರೋಗಗಿಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆ ಸಂಜೀವಿನಿಯಾಗಿದೆ. ಆದರೆ ಶಿಥಿಲಗೊಂಡು ಆಸ್ಪತ್ರೆಯ ಕಟ್ಟಡ ಆಸ್ಥಿಪಂಜರದಂತೆ
ಕಾಣುತ್ತಿದ್ದರೂ ಜನರಿಂದ ಆಯ್ಕೆಯಾಗಿ ಹೋಗುವ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಹರಿಸುತ್ತಿಲ್ಲ ಹಾವೇರಿ ಜಿಲ್ಲೆಯ ರೋಗಿಯ ಸಂಬಂಧಿ ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

Read also :Davanagere | 5ನೇ ಅಖಿಲ ಭಾರತ ಜಿಆರ್‌ಪಿ ಮುಖ್ಯಸ್ಥರ ಸಮ್ಮೇಳನ

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | 5ನೇ ಅಖಿಲ ಭಾರತ ಜಿಆರ್‌ಪಿ ಮುಖ್ಯಸ್ಥರ ಸಮ್ಮೇಳನ
Next Article ಕೆಲವು ಸಂಬಂಧಗಳೇ ಹಾಗೆ: ಗೀತಾ ಭರಮಸಾಗರ ಅವರ‌ ಬರಹ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಯುಪಿಎಸ್ಸಿ ಪರೀಕ್ಷೆಯಲ್ಲಿ 101 ನೇ ರ್‍ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠಗೆ ಸನ್ಮಾನ

ದಾವಣಗೆರೆ ಏ.17 :   ದ್ವಿತೀಯ ಪಿ.ಯು.ಸಿ ವರೆಗೆ ದಾವಣಗೆರೆಯಲ್ಲಿ ವ್ಯಾಸಂಗ ಮಾಡಿ ಬಿಎಸ್ಸಿ ಕೃಷಿಯೊಂದಿಗೆ ಯುಪಿಎಸ್ಸಿ ನಡೆಸುವ ಯುಪಿಎಸ್ಸಿ ಪರೀಕ್ಷೆಯಲ್ಲಿ…

By Dinamaana Kannada News

ಡಾ.ಬಿ.ಆರ್. ಅಂಬೇಡ್ಕರ್‌ಗೆ ಅವಮಾನ : ಡಿಎಸ್‌ಎಸ್ –ಜನಶಕ್ತಿ ಪ್ರತಿಭಟನೆ

ದಾವಣಗೆರೆ (Davanagere):  ಗೃಹಮಂತ್ರಿ ಅಮಿತ್ ಷಾ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವ ಬದಲು ದೇವರನ್ನು ಸ್ಮರಿಸಿದ್ದರೆ 7 ಜನ್ಮದಲ್ಲೂ…

By Dinamaana Kannada News

A short story | ಮೊದಲಡುಗೆ (ಎರಡು ರೊಟ್ಟಿಗಳು)

Kannada News | Dinamaana.com |   ಅಡುಗೆ,  ಕೆಲವರಿಗೆ ಮಾಡಲು ಇಷ್ಟ ಇನ್ನು ಕೆಲವರಿಗೆ ಕಷ್ಟ. ಅಡುಗೆಯಲ್ಲಿ ತರಹೇವಾರಿ ಐಟಂಗಳಿವೆಯಾದರೂ,…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?