ದಾವಣಗೆರೆ: ಕುರುಬ ಸಮುದಾಯದಿಂದ ಆಯೋಜಿಸಿದ್ದ ಕನಕ ಜಯಂತಿ ಉತ್ಸವಕೆ ಭಾನುವಾರ ನಗರದಲ್ಲಿ ಅದ್ದೂರಿ ಚಾಲನೆ ದೊರೆಯಿತು. ಮಾಜಿ ಮೇಯರ್ ಎಚ್.ಬಿ.ಗೊಣೆಪ ಮೆರೆವಣಿಗೆ ಚಾಲನೆ ನೀಡಿದರು. ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಶ್ರೀ ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿಪಾಲ್ಗೊಂಡು ಮೆರುಗು ನೀಡಿದವು. ನಲ್ಕುದುರೆ ಅಣ್ಣಪ್ಪ ಅವರ ವಿನಾಯಕ ಕಹಳೆ ತಂಡ ಆಕರ್ಷಣೆಯವಾಗಿತ್ತು.
ಮಹಾನಗರ ಪಾಲಿಕೆ ಸದಸ್ಯರಾದ ಜೆ.ಎನ್.ಶ್ರೀನಿವಾಸ್ ದಂಪತಿ, ಅಹಲ್ಯಾ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷರಾದ ಪುಷ್ಪಾ ಆನಂದ್, ಎಚ್.ಜಿ.ಗಣೇಶಪ್ಪ, ಸುಧಾ ಇಟ್ಟುಗುಡಿ ಮಂಜುನಾಥ್, ಆಶಾ ಉಮೇಶ್, ಮುಖಂಡರಾದ ಪುಟ್ಟಪ್ಪ, ರಾಜಣ್ಣ, ಹದಡಿ ಬಸವರಾಜಪ್ಪ, ಹಾಲೇಕಲ್ಲು ಎಸ್,ಟಿ.ಅರವಿಂದ್. ಎಸ್.ಎಸ್.ಗಿರೀಶ್. ಎಸ್.ಟಿ.ರಾಜೇಶ್, ಬಿ.ಲಿಂಗರಾಜು, ಶಿವಣ್ಣ ಮಾಸ್ಟರ್, ಇಟ್ಟಿ ಗುಡಿ ಮಂಜುನಾಥ್, ಜಯಣ್ಣ.ಕೊಗ್ಗನೂರು ಮಂಜುನಾಥ್ ಇತರರು ಭಾಗವಹಿಸಿದ್ದರು. ಹೈಸ್ಕೂಲ್ ಮೈದಾನದವರೆಗೆ ಅದ್ದೂಇಯಾಗಿ ಮೆರವಣಿಗೆ ನಡೆಯಿತು