Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere | ಹಿಂದುತ್ವದ ಮೋಡಿಗೆ ಸಮುದಾಯಗಳು ಬಲಿ!
ತಾಜಾ ಸುದ್ದಿ

Davangere | ಹಿಂದುತ್ವದ ಮೋಡಿಗೆ ಸಮುದಾಯಗಳು ಬಲಿ!

Dinamaana Kannada News
Last updated: February 9, 2025 4:53 pm
Dinamaana Kannada News
Share
DAVANAGERE
ಬಿ. ಶ್ರೀನಿವಾಸ್ ಅವರ ಐದು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
SHARE

ದಾವಣಗೆರೆ (Davanagere): ಹಿಂದುತ್ವದ ಮೋಡಿಗೆ ಬಿದ್ದಿರುವ ನಮ್ಮ ಸಣ್ಣ ಸಮುದಾಯಗಳು ನಾಶ ಆಗುತ್ತಿರುವುದು ಗಂಭೀರ ಚಿಂತನೆಗೆ ಎಡೆಮಾಡಿಕೊಡುವ ವಿಚಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.

ನಗರದ ನಿವೃತ್ತ ಪೊಲೀಸ ಅಧಿಕಾರಿಗಳ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿ.ಶ್ರೀನಿವಾಸ್ ಅವರ ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ, ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯಗಳು ಇಂದು ಮೇಲ್ಜಾತಿಗಳ ಪ್ರಭಾವದಿಂದ ತಮ್ಮ ಮೂಲವನ್ನು ಕಳೆದುಕೊಳ್ಳುತ್ತಿವೆ. ನೀವು ಪೂಜಿಸುವ ದೇವರು ರಾಮನ ಕಾಲದಲ್ಲಿ ಕಪಿ ಸೇನೆಯಲ್ಲಿದ್ದ ಎಂದು ಹೇಳುತ್ತಲೇ ಎಲ್ಲವನ್ನೂ ಮರೆಯುವ ಸಮುದಾಯಗಳು ಜೈ ಶ್ರೀರಾಂ ಎಂದು ತಮ್ಮ ತನ ಬಿಡುತ್ತಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಅಲ್ಲ, ಪ್ರಪಂಚದ ಎಲ್ಲೆಡೆ ದೊಡ್ಡ ಜಾತಿಗಳ ಬಲೆಗೆ ಬೀಳುವ ಸಣ್ಣ ಸಮುದಾಯಗಳು ನಾಶ ಆಗುತ್ತಿವೆ ಎಂದರು.

ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ದೇವರನ್ನಾಗಿ ನೋಡುತ್ತೇವೆ. ಆದರೆ, ಅದನ್ನೇ ಕಲುಷಿತ ಮಾಡುತ್ತಿದ್ದೇವೆ. ಗಂಗೆಯನ್ನು ದೇವರಿಗೆ ಹೋಲಿಸುವ ನಾವು ಇದೇ ಗಂಗೆಯನ್ನು ಸಂಪೂರ್ಣ ಕಲುಷಿತ ಮಾಡಿದ್ದೇವೆ. ಪ್ರಕೃತಿಯ ಪ್ರತಿ ಮರದಲ್ಲಿ ದೇವರ ಕಾಣುವ ನಾವು ಪ್ರತಿ ಮರ ನಾಶ ಆದಾಗಲೂ ಕನಿಷ್ಠ ಕಾಳಜಿ ತೋರುತ್ತಿದ್ದೇವೆ. ಅಂಕಿ ಅಂಶಗಳ ಆಧಾರದಲ್ಲಿ ಕಾಡು ಉಳಿಸಿದ್ದಾಗಿ ಹೇಳುತ್ತೇವೆ. ಆದರೆ, ಅಂಕಿ ಅಂಶದಿಂದ ಕಾಡು ಉಳಿಯಲ್ಲ. ಈ ವಿಷಯದಲ್ಲಿ ನ್ಯಾಯಪೀಠಗಳು ಜವಾಬ್ದಾರಿ ಮರೆತಿವೆ ಎಂದು ಅವರು ಬೇಸರಿಸಿದರು.

ನಮ್ಮ ಪ್ರಭುತ್ವಗಳು ಇಂದು ದೊಡ್ಡಮಟ್ಟದ ಹಿಡಿತ ಸಾಧಿಸಿವೆ. ಎಲ್ಲಾ ಮಾಹಿತಿಯನ್ನು ಹಿಡಿದಿಟ್ಟುಕೊಳ್ಳುವಷ್ಟು ತಾಕತ್ತು ಗಳಿಸಿವೆ. ಇದಕ್ಕೆ ಉತ್ತಮ ಉದಾಹರಣೆ ಕುಂಭ ಮೇಳದಲ್ಲಿ ಸತ್ತವರು ಎಷ್ಟು ಎಂಬುದನ್ನು ನಿಖರವಾಗಿ ತಿಳಿಯಲು ಯಾವುದೇ ಮಾಧ್ಯಮ ನೋಡಿದರೂ, ಪತ್ರಿಕೆ ಓದಿದರೂ ತಿಳಿಯದು ಎಂದು ಬೇಸರಿಸಿದರು.

ಶ್ರೀನಿವಾಸ್ ಅವರು ಸಾಮಾಜಿಕ ವ್ಯವಸ್ಥೆಯನ್ನು ಪಕ್ವವಾಗಿ ಅರಿತು, ನಿರ್ಭಯವಾಗಿ ಸಾಹಿತ್ಯ ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಅಂಕಣಕಾರ ಶಿವಸುಂದರ್ ಮಾತನಾಡಿ, ದೇಶದಲ್ಲಿ ಇಂದು ಸಂವಿಧಾನ ಆಧಾರಿತ ಸರ್ಕಾರ ಆಗಲಿ, ನ್ಯಾಯಾಲಯ ಆಗಲಿ ಇಲ್ಲ. ಎಲ್ಲವೂ ಪ್ರಭುತ್ವದ ಹಿಡಿತದಲ್ಲಿರುವ ಅಂಗಗಳಾಗಿವೆ. ಒಂದು ಕಾಲದಲ್ಲಿ ನ್ಯಾಯಾಂಗ ಕಾರ್ಯಾಂಗ ಮಧ್ಯೆ ಶ್ರೇಷ್ಠತೆಯ ಸಮರ ನಡೆದಿತ್ತು. ಕಾರ್ಯಾಂಗ ತಾನೂ ಶ್ರೇಷ್ಠ ಎಂದು ತೋರಿಸುವ ಸಲುವಾಗಿ ಅಂದಿನ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆ ತಳೆದು ಭೂಮಿ ಹಂಚಿಕೆ ವಿಷಯದಲ್ಲಿ ಹಿರಿತನ ತೋರಿಸಲು ಹೋದರು. ಆಗ ಸುಪ್ರೀಂ ಕೋರ್ಟ್ ನೀವು ಮಾಡಿದ್ದೇ ಕಾನೂನು ಅಲ್ಲ, ನಾವು ಒಪ್ಪಿದರೆ ಮಾತ್ರ ಅದು ಕಾನೂನು ಎಂದು ಪೈಪೋಟಿಗೆ ಬಿದ್ದರು. ಅಂದಿನಿಂದಲೂ ನ್ಯಾಯಾಂಗ ಪ್ರಭುತ್ವದ ಅಡಿಯಲ್ಲಿಯೇ ಇದೆ. ಇದು ಕೇವಲ ಭಾರತದಲ್ಲಿ ಮಾತ್ರ ಅಲ್ಲ, ಅಮೇರಿಕಾದಲ್ಲೂ ಸಹ ಇದೇ ಸ್ಥಿತಿ ಇದೆ ಎಂದ ಅವರು ಇಂದು ಜಾತಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನ್ಯಾಯಾಧೀಶರು ತಾವು ಸಂವಿಧಾನತ್ಮಕವಾಗಿ ರಚನೆ ಆದ ನ್ಯಾಯಪೀಠಗಳ ಮುಖ್ಯಸ್ಥರು ಎಂಬುದ ಮರೆತು ಧರ್ಮದ ತಳಹದಿಯಲ್ಲಿ ಸಂವಿಧಾನ ನಿರ್ಮಾಣ ಆಗಿದೆ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಆರ್.ಜಿ. ಹಳ್ಳಿ ನಾಗರಾಜ, ಸತೀಶ್ ಕುಲಕರ್ಣಿ, ಬಸವರಾಜ ಸೂಳಿಭಾವಿ, ಹಸೀನಾ, ಘನಿ ತಾಹಿರ್ ವೇದಿಕೆಯಲ್ಲಿದ್ದರು.

ಶ್ರೀನಿವಾಸ್ ಅವರು ಸೊಂಡೂರಿನ ಕತೆಗಳು, ಎಲ್.ಜಿ. ಹಾವನೂರು ಸೇರಿದಂತೆ 5 ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

–ಕೋಟ್–
ಅಂಬೇಡ್ಕರ್ ಅಂಬೇಡ್ಕರ್ ಎಂದು ಜಪ ಮಾಡುವ ಬದಲು ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗ ಸಿಗುತ್ತಿತ್ತು ಎಂದವರಿಗೆ ನಾನು ಹೇಳಬಯಸುವೆ. ನಮ್ಮ ಹಲವು ತಲೆಮಾರು ಇದೇ ದೇವರ ಜಪ ಮಾಡಿಕೊಂಡು ಬಂದಿತ್ತು. ಸ್ವರ್ಗ ಇರಲಿ ಕನಿಷ್ಠ ನಾವು ಮನುಷ್ಯರು ಎಂಬುದನ್ನು ಆ ದೇವರು ಹೇಳಲಿಲ್ಲ. 70 ವರ್ಷದಲ್ಲಿ ಅಂಬೇಡ್ಕರ್ ನಾವು ಯಾರು, ನಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಹೀಗಾಗಿ ನಾವು ಅಂಬೇಡ್ಕರ್ ಜಪ ಮಾಡ್ತೇವೆ.

-ಬಿ.ಎಂ.ಹನುಮಂತಪ್ಪ, ಹಿರಿಯ ವಕೀಲರು.

Read also : ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
Next Article Davanagere Political analysis | ಬೊಮ್ನಾಯಿ,ನಿರಾಣಿ  ರೇಸಿನಲ್ಲಿ ಕಾಣಿಸಿಕೊಂಡರು

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸಿ : ಡಿಎಸ್‍ಎಸ್ ಆಗ್ರಹ

ಹರಿಹರ (Harihara): ಅಪಾಯದ ಅಂಚಿನಲ್ಲಿರುವ ತುಂಗಭದ್ರ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸುವುದು ಹಾಗೂ ನದಿ ಖರಾಬ್ ಜಮೀನನ್ನು…

By Dinamaana Kannada News

JOB NEWS | ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ  (Davanagere): ಬ್ಯಾಂಕ್ ಆಫ್ ಬರೋಡ(Bank of Baroda) ದಲ್ಲಿ ಮಾಜಿ ಸೈನಿಕರಿಗಾಗಿ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಮಾಜಿ ಸೈನಿಕರಿಂದ…

By Dinamaana Kannada News

Davanagere | ಶಿಕ್ಷಣ ಕ್ರಾಂತಿಯಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ : ಡಾ. ವಸಂತ್ ಶೆಟ್ಟಿ

ದಾವಣಗೆರೆ (Davanagere) :  ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಸಧೃಡಗೊಳ್ಳವ ಕಡೆಗೆ ಗಮನಹರಿಸಬೇಕೆ ಹೊರತು ಪ್ರತಿ ಸ್ಪರ್ಧಿಯನ್ನು ಸೋಲಿಸುವ ತಂತ್ರದಕಡೆಗಲ್ಲ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು,…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

By Dinamaana Kannada News
Political analysis
ರಾಜಕೀಯ

Political analysis | ವಿಜಯೇಂದ್ರ ಅವರಿಗೆ ಲಾಸ್ಟ್ ಚಾನ್ಸು?

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?