Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸೂರ್ಯನಿಂದಲೇ ಆಮ್ಲಜನಕ ಉತ್ಪತ್ತಿ : ವೆ|| ಪಂ|| ಗೋಪಾಲಾಚಾರ್ ಮಣ್ಣೂರ್
ತಾಜಾ ಸುದ್ದಿ

ಸೂರ್ಯನಿಂದಲೇ ಆಮ್ಲಜನಕ ಉತ್ಪತ್ತಿ : ವೆ|| ಪಂ|| ಗೋಪಾಲಾಚಾರ್ ಮಣ್ಣೂರ್

Dinamaana Kannada News
Last updated: February 17, 2025 12:45 pm
Dinamaana Kannada News
Share
Adarsh __Yoga Foundation (RI), Davangere
Adarsh __Yoga Foundation (RI), Davangere
SHARE

ದಾವಣಗೆರೆ (Davanagere): ಸೂರ್ಯದೇವನು ನಮಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ಇವತ್ತು ನಾವು ಬದುಕಿದ್ದೇವೆ ಎಂದರೆ ಕಾರಣ ಸೂರ್ಯದೇವ. ಏಕೆಂದರೆ ಸೂರ್ಯನಿಂದಲೇ ನಮಗೆ ಬೆಳಕು, ಅವನಿಂದಲೇ ಉಸಿರಾಟಕ್ಕೆ ಬೇಕಾಗುವ ಆಮ್ಲಜನಕ ಉತ್ಪತ್ತಿಯಾಗುವುದು. ಮಳೆ, ಬೆಳೆ, ಆಹಾರದ ಉತ್ಪಾದನೆ, ಮರಗಿಡಗಳು, ಹಣ್ಣು ಕಾಯಿ, ದವಸ ಧಾನ್ಯ ಮುಂತಾದವುಗಳು, ಆರೋಗ್ಯ, ಶಾಂತಿ, ಚಟುವಟಿಕೆ ಇತ್ಯಾದಿ ಅಲ್ಲದೇ ನಮ್ಮ ಇರುವಿಕೆಗೆ ಸೂರ್ಯನೇ ಮೂಲ ಕಾರಣವಾಗಿದ್ದಾನೆ ಎಂದು ಹಿರಿಯ ಪ್ರವಚನಕಾರರಾದ ವೇ|| ಪಂ|| ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಅಭಿಪ್ರಾಯಪಟ್ಟರು.

ನಗರದ ದೇವರಾಜ ಅರಸ್ ಲೇಔಟ್ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ, ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ಇಲ್ಲಿ ಏರ್ಪಡಿಸಲಾಗಿದ್ದ ರಥಸಪ್ತಮಿ ಹಾಗೂ ಮಹಾಕುಂಭಮೇಳದ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದ ಅಮೃತ ತೀರ್ಥ ಪ್ರಸಾದ ವಿನಿಯೋಗ ವಿತರಣಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಉಪನ್ಯಾಸ ನೀಡಿದರು.

ಭಾರತ ದೇಶದಲ್ಲಿ ಆಚರಿಸುವ ಅನೇಕ ಹಬ್ಬಗಳಲ್ಲಿ ರಥಸಪ್ತಮಿಯು ಸಹ ವಿಶೇಷವಾದ ಆಚರಣೆಯಾಗಿದೆ. ಇದನ್ನು ಸೂರ್ಯ ಜಯಂತಿ ಎಂದು ಸಹ ಹೇಳುತ್ತಾರೆ. ಆ ದಿನದಂದು ಸೂರ್ಯನು ಅರುಣ ಎಂಬ ಸಾರಥಿಯೊಂದಿಗೆ ತನ್ನ ಏಳು ಕುದುರೆಗಳುಳ್ಳ ವಿಶೇಷ ರಥದಲ್ಲಿ ಕುಳಿತು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರಪಂಚದ ಪರ್ಯಟನೆಯನ್ನು ಪ್ರಾರಂಭಿಸುತ್ತಾನೆ. ಆ ದಿನ ಸೂರ್ಯನು ಭೂಮಿಗೆ ಸ್ವಲ್ಪ ಹತ್ತಿರ ಬರುವನು ಎಂಬ ನಂಬಿಕೆಯು ಇದೆ. ಆದ್ದರಿಂದ ರಥಸಪ್ತಮಿ ಎಂಬ ಹೆಸರು ಪ್ರತೀತವಾಯಿತು. ಒಂದು ವೇಳೆ 15 ದಿವಸ ಸುರ್ಯೋದಯ ಆಗದಿದ್ದಲ್ಲಿ ನಾವುಗಳು ಯಾರೂ ಬದುಕಿರಲು ಸಾಧ್ಯವಿಲ್ಲ.

ಆದ್ದರಿಂದ ಅವಶ್ಯಕವಾಗಿ ನಾವೆಲ್ಲರೂ ಪ್ರತಿನಿತ್ಯವೂ ಕೃತಜ್ಞತಾ ಭಾವದಿಂದ ಸೂರ್ಯ ನಮಸ್ಕಾರ, ಸೂರ್ಯಮಂತ್ರ, ಸ್ತೋತ್ರ, ಜಪವನ್ನು ಮಾಡಿ ಪೂಜಿಸಿ ವಂದಿಸಬೇಕು. ಇಂಗ್ಲೀಷ್‍ನಲ್ಲಿ ಹೇಳುವುದಾದರೆ We must have a sence of gratitude towards lord sun ಇದರಿಂದ ನಮಗೆ ಆರೋಗ್ಯ, ಆಯುಷ್ಯ, ಶಾಂತಿ, ಸಮಾಧಾನ, ಸುಖಃ, ಸಂತೋಷ ದೊರೆಯುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸೂರ್ಯನಿಂದ ವೈಜ್ಞಾನಿಕವಾಗಿ, ಆಧ್ಯಾತ್ಮಕವಾಗಿ ನಮಗೆ ಸಿಗುವ ಲಾಭಗಳನ್ನು ತಿಳಿಸಿ ಕೊಡುತ್ತಾ ರಥ ಸಪ್ತಮಿಯಂದು ಸಾರ್ವತ್ರಿಕವಾಗಿ ನಮ್ಮ ನಮ್ಮ ಮನೆಗಳಲ್ಲಿ ಯಾವ ರೀತಿ ಬೆಳಿಗ್ಗೆ ಎದ್ದು ಮಾಡುವ ಸ್ನಾನದ ವಿಧಿ ವಿಧಾನಗಳು ಸೂರ್ಯನಿಗೆ ನೈವೇದ್ಯ ಅರ್ಥಾತ್ ಆಘ್ರ್ಯವನ್ನು ಕೊಡುವ ಸರಳ ವಿಧಾನವನ್ನು ತಿಳಿಸಿಕೊಟ್ಟರು.

ಪ್ರಾರಂಭದಲ್ಲಿ ಸೂರ್ಯದೇವನಿಗೆ ಅಗ್ನಿಹೋತ್ರ ಹೋಮವನ್ನು ಪ್ರತಿಷ್ಠಾನದ ಯೋಗಗುರು ಡಾ|| ರಾಘವೇಂದ್ರ ಗುರೂಜಿ ಮಾಡುವುದರೊಂದಿಗೆ ಮಂತ್ರಾಭ್ಯಾಸವನ್ನು ಹೇಳಿಕೊಟ್ಟರು.

ನಂತರ ಯೋಗ ಸಾಧಕರು ಸೂರ್ಯಾಷ್ಟೋತ್ತರ ಶತಮಾನಾವಳಿ ಗಳೊಂದಿಗೆ 108 ಸುತ್ತಿನ ಸೂರ್ಯ ನಮಸ್ಕಾರ ಯೋಗ ಪದ್ಧತಿಯನ್ನು ಮಕ್ಕಳಾದಿಯಾಗಿ ವಯೋವೃದ್ಧರು ಕ್ರಮಬದ್ಧವಾಗಿ ತುಂಬಾ ಶ್ರದ್ಧಾ ಭಕ್ತಿಯಿಂದ ಪೂರ್ಣಗೊಳಿಸಿದರು.

ಸರ್ವಪೂಜಾ ವಿಧಿ ವಿಧಾನಗಳನ್ನು ಪೂಜ್ಯ ಶ್ರೀ ಗೋಪಾಲಾಚಾರ್ ಮಣ್ಣೂರ್ ಅವರ ಮಾರ್ಗದರ್ಶನದಲ್ಲಿ ಅಜ್ಜಂಪುರ ತಾಲ್ಲೂಕು, ಚಿಕ್ಕಾನಮಂಗಲ ಗ್ರಾಮ ಪಂಚಾಯಿತಿ ಪಿ.ಡಿ.ಓ. ಆಗಿ ಸೇವೆ ಸಲ್ಲಿಸುತ್ತಿರುವ ಹರ್ಷ ಕೆ.ಎಸ್. ಹಾಗೂ ಶ್ರೀಮತಿ ಮೇಘ ಆರ್. ದಂಪತಿಗಳು ನೆರವೇರಿಸಿದರು.

ಗುರೂಜಿಯವರ ಜೊತೆಯಲ್ಲಿ ಪ್ರಯಾಗ್‍ರಾಜ್ ಕುಂಭಮೇಳದಲ್ಲಿ ಭಾಗವಹಿಸಿದ ಯೋಗ ಗುರುಗಳಾದ ಸುನೀಲ್‍ಕುಮಾರ್ ಎನ್.ವಿ. ಮತ್ತು ವೀರಭದ್ರಸ್ವಾಮಿ ತಮ್ಮ ಅವಿಸ್ಮರಣೀಯ ಅನುಭವವನ್ನು ಹಂಚಿಕೊಂಡರು.

ಸೂರ್ಯನಮಸ್ಕಾರ ಯೋಗ ಯಜ್ಞದಲ್ಲಿ ವಿಶ್ವೇಶ್ವರಯ್ಯ ಪಾರ್ಕ್‍ನಲ್ಲಿ ಅಭ್ಯಾಸ ಮಾಡುವ ಸಾಧಕರು, ಕರುಣಾಜೀವ ಟ್ರಸ್ಟ್ನ ನ ಯೋಗ ಶಿಕ್ಷಕ ಪ್ರಭುಸ್ವಾಮಿ ಹಿರೇಮಠ್, ಬಾಬಾರಾಮ್‍ದೇವ್ ಅವರ ಅನುಯಾಯಿಗಳಾದ ಯೋಗ ಶಿಕ್ಷಕಿ ಶ್ರೀಮತಿ ಅಂಜಲಿದೇವಿ, ಕೆ.ಇ.ಬಿ.ಯ ನರಸಿಂಹಮೂರ್ತಿ ದಂಪತಿಗಳು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

ಸರ್ವಾಲಂಕಾರ ಪೂಜಾ ಸೇವೆಯನ್ನು ಅಂಚೆ ಇಲಾಖೆಯ ಶ್ರೀಮತಿ ವೇದಾವತಿ ಡಿ.ಹೆಚ್.ಎಂ. ಉಪಾಹಾರ ಸೇವೆ ಜಿಲ್ಲಾ ಕಛೇರಿಯ ಉದ್ಯೋಗಿ ಸಂತೋಷ್ ಹೆಚ್. ಅರ್ಪಿಸಿದರು. ಶ್ರೀಮತಿ ರೇಖಾ ಕಲ್ಲೇಶ್, ಶ್ರೀಮತಿ ಶಾಂತಮ್ಮ ಗಾಣಿಗೇರ್, ಶ್ರೀಮತಿ ಜ್ಯೋತಿ ಲಕ್ಷ್ಮೀ ವಾಸುದೇವ್ ಅಂದವಾಗಿ ರಂಗೋಲಿ ಸೇವೆ ಮಾಡಿದರು.

ಯೋಗ ಅಧ್ಯಯನ ವಿಭಾಗದ ರಾಹುಲ್ ವಿ.ಕೆ., ಚೇತನ್, ಸಂವೇದಿತಾ, ಕಾವ್ಯ, ಮುಖೇಶ್ ದೇವ್ ಇನ್ನಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಚಲನಚಿತ್ರ ಹಿನ್ನೆಲೆ ಗಾಯಕಿ ಕು|| ಸಂವೇದಿತಾ ಸುಭಾಷ್ ಕುಶಾಲನಗರ ಇವರು ಸುಶ್ರಾವ್ಯವಾಗಿ ಭಕ್ತಿ ಗೀತೆಗಳನ್ನು ಹಾಡಿದರು.

ಮಹಾಮಂಗಳಾರತಿ ನಂತರ ತ್ರಿವೇಣಿ ಸಂಗಮದಿಂದ ತರಲಾಗಿದ್ದ ಅಮೃತ

Adarsh __Yoga Foundation (RI), Davangere 2
Adarsh __Yoga Foundation (RI), Davangere 2

ತೀರ್ಥ ಪ್ರಸಾದವನ್ನು ಸಾರ್ವತ್ರಿಕವಾಗಿ ನೂರಾ ಇಪ್ಪತ್ತಕ್ಕೂ ಹೆಚ್ಚು ಭಕ್ತಾದಿಗಳಿಗೆ ವಿತರಿಸಲಾಯಿತು.

Read also : Crime news | ಪೂಜೆ ಸೋಗಿನಲ್ಲಿ ಚಿನ್ನ ದೋಚಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article crime news Crime news | ಪೂಜೆ ಸೋಗಿನಲ್ಲಿ ಚಿನ್ನ ದೋಚಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Next Article CEIME NEWS Crime news | ವೃದ್ಧ ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿತನ ಬಂಧನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಬಾನಂಗಳಲ್ಲಿ ಮತದಾನ ಅಭಿಯಾನ 

ದಾವಣಗೆರೆ; ಏ.24 :   ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮೂಲಕ ಗುಣಾತ್ಮಕ ಪ್ರತಿನಿಧಿ ಆಯ್ಕೆಯಾಗಬೇಕೆಂದು ಸ್ವೀಪ್ ಸಮಿತಿ ನಿರಂತರ…

By Dinamaana Kannada News

Davanagere JOB news | ಸೆ.21 ರಂದು ಉದ್ಯೋಗ ಮೇಳ

ದಾವಣಗೆರೆ,ಸೆ.19 (Davanagere) :  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಸೆ.21 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ…

By Dinamaana Kannada News

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯಿಂದ ಅಕ್ರಮ ಮಾದಕ ವಸ್ತುಗಳು ವಶಕ್ಕೆ

ದಾವಣಗೆರೆ (Davanagere) : "ಆಪರೇಷನ್ ನಾರ್ಕೋಸ್” ಎಂಬ ವಿಶೇಷ ಕಾರ್ಯಚರಣೆಯ ಅಡಿಯಲ್ಲಿ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ರಕ್ಷಣಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Davanagere
ತಾಜಾ ಸುದ್ದಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ | ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?