Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾ ದೇವಸ್ಥಾನ, ಕಳಶಾರೋಹಣ  ಉದ್ಘಾಟನೆ
ತಾಜಾ ಸುದ್ದಿ

ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾ ದೇವಸ್ಥಾನ, ಕಳಶಾರೋಹಣ  ಉದ್ಘಾಟನೆ

Dinamaana Kannada News
Last updated: May 5, 2025 12:19 pm
Dinamaana Kannada News
Share
Davanagere
Davanagere
SHARE

ದಾವಣಗೆರೆ (Davanagere): ನೂತನವಾಗಿ ನಿರ್ಮಿಸಿರುವ ಶ್ರೀಕ್ಷೇತ್ರ ಶಿಬಾರ ಮೈಲಾರಲಿಂಗೇಶ್ವರ ನೂತನ ಶಿಲಾ ದೇವಸ್ಥಾನವು ದೇವತಾ ಪ್ರತಿಷ್ಠಾಪನೆ‌ ಹಾಗೂ ಕಳಶಾರೋಹಣದೊಂದಿಗೆ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಲ್ಲೇಶ್ ಖಂಡ್ರಳ್ಳಿ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, “ದೇವಸ್ಥಾನದ ಶ್ರೀಮೈಲಾರಲಿಂಗೇಶ್ವರ ಶ್ರೀ ಗಂಗಮಾಳಮ್ಮ ಶ್ರೀ ಸಂಪಿಗೆ ಸಿದ್ದೇಶ್ವರ ದೇವರುಗಳ ನೂತನ ಮೂರ್ತಿಗಳ ಮೆರವಣಿಗೆ ಭಾನುವಾರ ನಗರದ ರಾಜಬೀದಿಗಳಲ್ಲಿ ಮೆರವಣಿಗೆಯಾಗಿದೆ. ಧಾರ್ಮಿಕ ಕಾರ್ಯಗಳು ಮೇ7 ರಂದು ಬೆಳಿಗ್ಗೆ ಬುಧವಾರ ಬೆಳಗ್ಗೆ 8 ಕ್ಕೆ ಶುರುವಾಗಲಿದ್ದು ಮೇ 11 ರ ಭಾನುವಾರ ಬೆಳಿಗ್ಗೆ ವರೆಗೂ ಗಣಪತಿ ಹೋಮ, ಗುರುಪ್ರಾರ್ಥನೆ, ನವಗ್ರಹ ಪೂಜೆ , ನವಗ್ರಹಹೋಮ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಮುಂದುವರಿಯಲಿವೆ ಹಾಗೂ ಸಾರ್ವಜನಿಕರಿಗೆ ಪ್ರತಿದಿನ ಕೂಡ ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ಕಾರ್ಯಕ್ರಮ  ಏರ್ಪಡಿಸಲಾಗಿದೆ. ಮೇ 9 ರಂದು ಶುಕ್ರವಾರ ಬೆಳಗ್ಗೆ ಏಳು ಗಂಟೆಗೆ ದೇವತೆಗಳ ಪ್ರತಿಷ್ಠಾಪನೆ ಮೇ 10 ರ ಶನಿವಾರ ಬೆಳಗ್ಗೆ 8 ಗಂಟೆಗೆ ಕಳಶ ಪ್ರತಿಷ್ಠಾಪನೆ ನಡೆಯಲಿದೆ” ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಎಚ್ .ಜೆ ವೀರಪ್ಪ ಮಾತನಾಡಿ, “ಸುಮಾರು ಐದಾರು ತಲೆಮಾರುಗಳಿಂದಲೂ ಈ ದೇವಸ್ಥಾನವು ಸೀಬಾರವೆಂದು ಪ್ರಖ್ಯಾತಿಯನ್ನು ಹೊಂದಿದ್ದು,  ಇತ್ತೀಚಿಗೆ ತಾನೇ ಇದರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದ್ದೆವು. ಸೀಬಾರ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ ನಿರ್ಮಾಣಕ್ಕೆ ಯಾವುದೇ ಜಾತಿ, ಮತ ಭೇದಗಳಿಲ್ಲದೆ ಸಾರ್ವಜನಿಕರು ಕೈಜೋಡಿಸಿ ದೇಣಿಗೆ ನೀಡಿದ್ದಾರೆ. ಎಲ್ಲಾ ಜಾತಿಯವರು ಕೂಡ ಭಕ್ತರಿದ್ದು,  ಭಕ್ತಿಕಾಣಿಕೆ ಸಮರ್ಪಿಸಿದ್ದಾರೆ. ಮುಸ್ಲಿಂ ಧರ್ಮದ ಕೆಲ ಬಾಂಧವರು ಕೂಡ ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಸಹಕರಿಸಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

Read also : Political analysis | ಯೋಗಿಯ ಯೋಗ ನೀರಿನಿಂದ  ನೀರಾ ತನಕ

ಟ್ರಸ್ಟಿನ ಖಜಾಂಚಿ ಜಯಪ್ಪ ಬಳ್ಳಾರಿ ಮಾತನಾಡಿ, “ಹಿರಿಯ ಶಾಸಕರು, ಮುಖಂಡರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಮುಖಂಡರು, ಜನಸಾಮಾನ್ಯರು ಭಕ್ತಿ ಸಮರ್ಪಿಸಿದ್ದಾರೆ.‌ ಮೇ 7ರಿಂದ ಪ್ರತಿ ದಿನ ಪ್ರಸಾದ ವಿನಿಯೋಗ ನಡೆಯಲಿದೆ. ಅಕ್ಕ ಪಕ್ಕದ ಜಿಲ್ಲೆಗಳ, ದಾವಣಗೆರೆ ಜಿಲ್ಲೆಯ ಎಲ್ಲಾ ಭಕ್ತರು, ಸಾರ್ವಜನಿಕರು ಆಹ್ವಾನ ಸ್ವೀಕರಿಸಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು” ಎಂದು ಆಹ್ವಾನ ನೀಡಿದರು.

ಈ ವೇಳೆ ಶ್ರೀಕ್ಷೇತ್ರ ಶಿಬಾರ ಮೈಲಾರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ಉಪಾಧ್ಯಕ್ಷ ಪರಮೇಶ್ವರಪ್ಪ, ಸಹಕಾರ್ಯದರ್ಶಿ ಶ್ರೀ ಗೋಪಾಲರಾವ್ ಸಾವಂತ್, ಹಾಗೂ ಸದಸ್ಯರಾದ ಎಚ್ ಎಸ್ ಜಗದೀಶ್, ಜಿಕೆ ಪಂಚಾಣ್ಣ, ಮಾಲತೇಶರಾವ್ ಜಾದವ್, ಕೆ ಬಿ ಶಂಕರ್ ನಾರಾಯಣ್, ವೈ ಮಲ್ಲೇಶ್, ಜಯಪ್ರಕಾಶ್  ಭಾಗವಹಿಸಿದ್ದರು.

TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article ಮಾಜಿ ಸಚಿವ ಸಿ.ಪಿ Political analysis | ಯೋಗಿಯ ಯೋಗ ನೀರಿನಿಂದ  ನೀರಾ ತನಕ
Next Article Davanagere ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ, ನೋಂದಣಿ ಅವಧಿ ಮೇ 31 ರವರೆಗೆ ವಿಸ್ತರಣೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಜ.25-26 ರಂದು ಡಿಎಸ್‍ಎಸ್‍ನಿಂದ ರಾಜ್ಯಮಟ್ಟದ ತರಬೇತಿ ಕಾರ್ಯಗಾರ

ದಾವಣಗೆರೆ (Davanagere): ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜ.25 ಹಾಗೂ 26ರಂದು ಬೆಳಗ್ಗೆ 10ಕ್ಕೆ ಹರಿಹರ ಹೊರವಲಯದ ಬಿ.ಕೃಷ್ಣಪ್ಪನವರ…

By Dinamaana Kannada News

ಏಕಬಳಕೆ ಪ್ಲಾಸ್ಟಿಕ್‍ ಸಂಪೂರ್ಣವಾಗಿ ನಿಷೇಧಿಸಲು ಹಂತ ಹಂತವಾಗಿ ಕ್ರಮ : ಡಿಸಿ

ದಾವಣಗೆರೆ : ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಲು ಮತ್ತು ಏಕಬಳಕೆ ಪ್ಲಾಸ್ಟಿಕ್‍ನ್ನು ಸಂಪೂರ್ಣವಾಗಿ ನಿಷೇಧಿಸಲು ಹಂತ…

By Dinamaana Kannada News

ವಿದ್ಯುತ್‌ ಶಾರ್ಟ್‌ ಸರ್ಕಿಟ್‌ : ಡಿಡಿಪಿಐ ಕಚೇರಿ ಕಡತ ಹಾಗೂ ಕಂಪ್ಯೂಟರ್‌ ಭಸ್ಮ

ದಾವಣಗೆರೆ (Davanagere): ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ  (ಡಿಡಿಪಿಐ) ಕಚೇರಿಗೆ  ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಬುಧವಾರ ರಾತ್ರಿ ಬೆಂಕಿ ಬಿದ್ದಿದ್ದು,…

By Dinamaana Kannada News

You Might Also Like

Bhadra Achukattu
ತಾಜಾ ಸುದ್ದಿ

ಮುಂಗಾರು ಬೆಳೆಗೆ ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ನೀರು : ಕಾಲುವೆ ಪಾತ್ರಗಳಲ್ಲಿ ಸಾರ್ವಜನಿಕರಿಗೆ ನಿಷೇಧ

By Dinamaana Kannada News
MP Dr. Prabha
ತಾಜಾ ಸುದ್ದಿ

ದಾವಣಗೆರೆ ಜಿಲ್ಲೆಗೆ ಯೂರಿಯಾ ರಸಗೊಬ್ಬರ ಸಮರ್ಪಕ ಪೂರೈಕೆಗೆ ಸಂಸದೆ ಡಾ.ಪ್ರಭಾ ಮನವಿ

By Dinamaana Kannada News
A lesson for children in a breathtaking place Davanagere
ತಾಜಾ ಸುದ್ದಿ

ಉಸಿರು ಕಟ್ಟುವ ಸ್ಥಳದಲ್ಲಿ ಮಕ್ಕಳಿಗೆ ಪಾಠ ! ಮಂಡಕ್ಕಿ ಭಟ್ಟಿ ಲೇಔಟ್ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ

By Dinamaana Kannada News
Applications invited
ತಾಜಾ ಸುದ್ದಿ

ದಾವಣಗೆರೆ | ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?