ದಾವಣಗೆರೆ (Davanagere) ನಗರದಲ್ಲಿ ಜಲಸಿರಿ ಯೋಜನೆ ಅನುಷ್ಟಾನದ ಹೊಣೆ ಹೊತ್ತಿರುವ ಸುಯೆಜ್ ಕಂಪನಿಯ ವತಿಯಿಂದ ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನಾಚರಣೆಯ ಅಂಗವಾಗಿ ನಗರದ ಕುಂದುವಾಡ ಜಲ ಶುದ್ಧೀಕರಣ ಘಟಕದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸುಯೆಜ್ ನ ಯೋಜನಾ ವ್ಯವಸ್ಥಾಪಕ ಪ್ರಶಾಂತ್ ವಿ.ಕೆ , ಸುಯೆಜ್ ಕಂಪನಿಯ ವತಿಯಿಂದ ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ ದಿನಾಚರಣೆಯ ಕಾರ್ಯಕ್ರಮವನ್ನು ಜೈವಿಕ ವೈವಿಧ್ಯತೆಯನ್ನು ಭವಿಷ್ಯದ ಪೀಳಿಗೆಗೆ ಅವಶ್ಯಕವಾಗಿ ಕಾಪಾಡಿಕೊಂಡು ಹೋಗುವ ಪ್ರಕ್ರಿಯೆಯಾಗಿದ್ದು ಪರಿಸರದಲ್ಲಿ ವಾಸಿಸುವ ಪ್ರತಿಯೊಂದು ಪ್ರಾಣಿ,ಪಕ್ಷಿ, ಗಿಡ-ಮರ ಹಾಗೂ ನದಿಗಳಿಗೆ ಮಾನವಂತೆ ಸಮಾನ ಹಕ್ಕಿದೆ ಆದರೆ ಆಧುನಿಕತೆಯ ಭರಾಟೆಯಲ್ಲಿ ಕೆಲವು ಮಾನವ ಚಟುವಟಿಕೆಗಳಿಂದ ಜಾತಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಸುಯೆಜ್ ಕಂಪನಿಯು ಸದರಿ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಅವಶ್ಯಕ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕುಂದುವಾಡ ಜಲ ಶುದ್ಧೀಕರಣ ನಿರ್ವಹಣಾ ಘಟಕದ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಯೆಜ್ ಕಂಪನಿಯ ಇಂಜಿನೀಯರಗಳ ತಂಡವು ಶ್ರಮದಾನದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದು ಶ್ಲಾಘನೀಯ ಎಂದರು.
Read also : ಮಾದಕ ವ್ಯಸನಿಗಳು ಸಮಾಜಘಾತುಕ ವ್ಯಕ್ತಿಗಳು : ಮಹಾವೀರ ಮ.ಕರೆಣ್ಣವರ
ಸುಯೆಜ್ ಕಂಪನಿಯ ಹಿರಿಯ ಅಧಿಕಾರಿಗಳಾದ ವಿಷ್ಣು ಭಟ್ಟ, ಸೋಮಶೇಖರ್, ವಿಧ್ಯಾಧರ ಬೆಟಗೇರಿ, ಕಿರಣ್, ರಾಜೇಶ್ ಎ, ಇನ್ನಿತರ ಅಧಿಕಾರಿಗಳಾದ, ಸತೀಶ್, ಚಂದ್ರಶೇಖರ್, ರೇಖಾ, ರವಿಚಂದ್ರ, ಮನೋಜ್, ಗ಼ಣೇಶ್, ಅನಿಲ್, ನಾಗೇಶ್, ತಿರುಪತಿ, ಸಚಿನ್, ಶಿವರಾಜ್, ಶ್ರೇಯಸ್, ರವಿಕುಮಾರ್ ಕೆ.ಎಂ ಹಾಗೂ ರಾಜೇಶ್ ಚಾಗಂಟಿ ಮುಂತಾದವರು ಉಪಸ್ಥಿತರಿದ್ದರು.
ನಿರೂಪಣೆಯನ್ನು ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿ.ಕೆ ಎನ್.ಮೂರ್ತಿ ನೆರವೇರಿಸಿದರು.