ಚನ್ನಗಿರಿ (Davanagere) : ರಾಷ್ಟ್ರ ನಾಯಕ ಡಾ. ಬಿ.ಆರ್.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ವ್ಯಕ್ತಿ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರವೇ ಅಧ್ಯಕ್ಷ ಮಲ್ಲನಾಯಕ್ ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ರಾಜಸ್ಥಾನ ಮೂಲದ ಸುರೇಶ್ ಡಾ. ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಅವನನ್ನು ಬಂಧಿಸದೇ ಇನ್ನು ಬಿಟ್ಟಿದ್ದಾರೆ. ಕೂಡಲೇ ತಕ್ಷಣ ಬಂಧಿಸಬೇಕು. ಕಠಿಣವಾದ ಶಿಕ್ಷೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
Read also : ಸಚಿವ ಜಮೀರ್ ಅಹಮ್ಮದ್ ಅವರಿಂದ ಮದುವೆಗೆ 5 ಲಕ್ಷ ರೂ. ವೈಯಕ್ತಿಕ ಧನಸಹಾಯ
ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್ ಮಾತನಾಡಿ,ದಲಿತ ಸಂಘರ್ಷ ಸಮಿತಿ ಯವರು ಟೀ ಕುಡಿಯಲು ಹೋದಾಗ ಅಂಬೇಡ್ಕರ್ ಅವರು ನಿಂದನೆ ಮಾಡಿದ್ದಾನೆ.ರಾಷ್ಟ್ರನಾಯಕರಿಗೆ ಅವಮಾನ ಮಾಡಿರುವ ಈ ವ್ಯಕ್ತಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು. ಹೋಟೆಲ್ಗೆ ಬರುವಂತಹ ಜನರಿಗೆ ರಾಷ್ಟ್ರ ನಾಯಕರುಗಳಿಗೆ ಹಾಗೂ ದಲಿತರಿಗೆ ಪರೋಕ್ಷವಾಗಿ ತಪ್ಪು ಮಾಹಿತಿ ನೀಡುವ ಮೂಲಕ ಅವಮಾನ ಮಾಡುತ್ತಿದ್ದಾನೆ. ಕೂಡಲೇ ಪುರಸಭೆ ಈ ವ್ಯಕ್ತಿಗೆ ನೀಡಿರುವ ಮಳಿಗೆ ವಾಪಾಸ್ಸ ಪಡೆಬೇಕು. ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದರು.
ಪ್ರಕಾಶ್ ಹಿರೇಕೋಗಲೂರು, ಮಲ್ಲನಾಯ್ಕ್, ಮಧು, ರುದ್ರಪ್ಪ, ಮಂಜಪ್ಪ, ಬೆಳ್ಳಿಗೇನೊಡು ಮಧು, ಪ್ರಭಾಕರ್, ಎಚ್ ಎನ್ ಮೂರ್ತಿ, ರಂಗಸ್ವಾಮಿ, ಹಾಗೂ ಉಪಸ್ಥಿತರು ಹಾಜರಿದ್ದರು.