ದಾವಣಗೆರೆ (Davanagere): ಮೈಸೂರು ನಗರದಲ್ಲಿ ಇತ್ತೀಚಿಗೆ ನಡೆದ 13ನೇ ರಾಜ್ಯ ಮಟ್ಟದ ಆರ್ಮ್ ರಜ್ಲಿಂಗ್ ( ಪಂಜ ಕುಸ್ತಿ ) ಸ್ಪರ್ದೆಗಳಲ್ಲಿ ಹರಿಹರ ಬ್ರದರ್ಸ್ ಜಿಮ್ ನಿಂದ ಒಟ್ಟು 37.ಜನ ಪುರುಷ ಹಾಗು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿ, ಲೆಫ್ಟ್ ಹ್ಯಾಂಡ್. ಅಂಡ್ ರೈಟ್ ಹ್ಯಾಂಡ್ ಸ್ಪರ್ದೆಗಳಲ್ಲಿ 29 ಚಿನ್ನದ ಪದಕ. 10 ಬೆಳ್ಳಿಯ ಪದಕ. 04 ಕಂಚಿನ ಪದಕ ಒಟ್ಟು 43 ಪದಕಗಳನ್ನು ಗೆಲ್ಲುವುದರೊಂದಿಗೆ ರಾಜ್ಯ ಮಟ್ಟದ ಪ್ರಶಸ್ತಿಗಳಾದ ಮಹಿಳೆಯರಲ್ಲಿ “ಕರ್ನಾಟಕ ನವತಾರೆ-2025″ ಪ್ರಶಸ್ತಿಯನ್ನು” ಚೆಲುವಿ ” ಕರ್ನಾಟಕ ಅಶಾಕಿರಣ- 2025 ಸಾಧಿಕ್ ಉಲ್ಲಾ ಗೆದ್ದಿದ್ದಾರೆ. ಕರ್ನಾಟಕ ಭೀಷ್ಮ-2025 ಈ ಪ್ರಶಸ್ತಿಯನ್ನು ಅಕ್ರಂಬಾಷ ಗೆದ್ದಿದ್ದಾರೆ.
ಬ್ರದರ್ಸ್ ಜಿಮ್ ಸತತವಾಗಿ 13ನೇ ವರ್ಷದ ರಾಜ್ಯ ತಂಡ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ. ಮೈಸೂರು ಮಂಡ್ಯ, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ- ಧಾರವಾಡ, ಬೆಂಗಳೂರು, ಬಳ್ಳಾರಿ ಸೇರಿದಂತೆ ಒಟ್ಟು 10 ಜಿಲ್ಲೆಗಳಿಂದ ಸುಮಾರು 265 ಜನ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.
Read also : Political analysis | ಗಡ್ಕರಿ, ಸಿಂಗ್ ಬಿಜೆಪಿಯ ಹೊಸ ವಿಂಗ್
ಕ್ರೀಡಾಪಟುಗಳಿಗೆ ಹರಿಹರ ನಗರದ ಶಾಸಕ ಬಿ.ಪಿ. ಹರೀಶ್ ರವರು. ಹರಿಹರ ನಗರಸಭೆ ಸದಸ್ಯ ಅಂಜುಮನ್ ಅಧ್ಯಕ್ಷ ಅರ್. ಸಿ. ಜಾವಿದ್, ಬ್ರದರ್ಸ್ ಜಿಮ್ ಸಂಚಾಲಕ ಅಕ್ರಂಬಾಷ, ತರಬೇತುದಾರರಾದ ಮಹಮ್ಮದ್ ರಫೀಕ್, ಬ್ರದರ್ಸ್ ಜಿಮ್ ನ ಎಲ್ಲಾ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.