ದಾವಣಗೆರೆ (Davanagere): ಬೀ ಕಲ್ಟರ್ ಪ್ರಕಾಶನ-ಬೆಂಗಳೂರು ವತಿಯಿಂದ ಡಾ. ಬಿ.ಎಂ. ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಅಂಗವಾಗಿ ನೇತ್ರತಜ್ಞ ಡಾ ಬಿ ಎಂ ತಿಪ್ಪೇಸ್ವಾಮಿ ಅವರ ಬದುಕಿನ ಕುರಿತು ಲೇಖಕಿ ಬಿ.ಟಿ. ಜಾಹ್ನವಿ ಅವರ ಸಂಪಾದಿತ ಕೃತಿ ‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜೂ.14 ರಂದು ಬೆಳಿಗ್ಗೆ 11 ಕ್ಕೆ ನಗರದ ಲಲಿತಕಲಾ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ನೇತ್ರ ತಜ್ಞರು ಹಾಗೂ ಸಿದ್ಧಕೃಷಿ ಪ್ರಚಾರಕರಾದ ಡಾ.ಆರ್.ರಂಗನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಚಿಂತಕ ದಿನೇಶ್ ಅಮೀನಮಟ್ಟು ಕೃತಿ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಳ್ಳಲಿದ್ದಾರೆ.
Read also : Crime News | ಮನೆ ಕಳ್ಳತನ ಪ್ರಕರಣ : ಆರೋಪಿ ಸೆರೆ
ಲೇಖಕರು ಮತ್ತು ಸಾಮಾಜಿಕ ಹೋರಾಟಗಾರಾದ ವಿ.ಎಲ್. ನರಸಿಂಹಮೂರ್ತಿ ಮತ್ತು ಹಿರಿಯ ಪತ್ರಕರ್ತೆ ಪ್ರೀತಿ ನಾಗರಾಜ್ ಕೃತಿ ಪರಿಚಯಿಸಲಿದ್ದು,ಬಿ.ಟಿ. ಜಾಹ್ನವಿ, ಎಸ್ ವಿಷ್ಣುಕುಮಾರ್ ಉಪಸ್ಥಿತರಿರುವರು.`