ಹರಿಹರ (Harihara): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ವ್ಯಾಪ್ತಿಯ ಕಾಳಿದಾಸ ನಗರ ಬ್ರಾಂಚ್ ಸಮಿತಿ ವತಿಯಿಂದ ನಗರಸಭೆ ಆಯುಕ್ತರನ್ನು ಭೇಟಿಯಾಗಿ ಅಂಜುಮನ್ ಶಾದಿ ಮಹಲ್ ಕಾಳಿದಾಸ ನಗರ 3ನೇ ಮುಖ್ಯರಸ್ತೆಯಲ್ಲಿ ಅಪೂರ್ಣವಾದ ಸಿಸಿ ಪೂರ್ಣಗೊಳಿಸಿ ಜನರ ಸಂಕಷ್ಟಕ್ಕೆ ಅಂತ್ಯ ಹಾಡಲು ಆಗ್ರಹಿಸಲಾಯಿತು.
ಅಂಜುಮನ್ ಶಾದಿ ಮಹಲ್ ಕಾಳಿದಾಸ ನಗರ 3ನೇ ಮುಖ್ಯ ರಸ್ತೆ ಬಳಿ ಈ ಹಿಂದೆ ಸಿಸಿ ಚರಂಡಿಯನ್ನು ಅಪೂರ್ಣವಾಗಿ ನಿರ್ಮಿಸಲಾಗಿದೆ, ಏಕೆಂದರೆ ಆ ರಸ್ತೆಯಲ್ಲಿ, ಪ್ರಭಾವಿ ವ್ಯಕ್ತಿಗಳು ರಸ್ತೆಯ ಜಾಗವನ್ನು ಆಕ್ರಮಿಸಿಕೊಂಡು ಮನೆಯನ್ನು ನಿರ್ಮಿಸಿರುವ ಕಾರಣ, ಅ ಸಿಸಿ ಚರಂಡಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರುವುದಿಲ್ಲ, ಆದ್ದರಿಂದ ಚರಂಡಿಯ ನೀರು ಸರಾಗವಾಗಿ ಹರಿಯದೆ ಅಲ್ಲೇ ನಿಂತುಕೊಂಡು, ರಸ್ತೆಯು ಕೆರೆಯಂತೆ ಆಗುತ್ತದೆ, ಆದರೆ ಈಗ ಹಲವಾರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ನಿವಾಸಿಗಳಿಗೆ ದಿಕ್ಕೆ ತೋಚದಂತಾಗಿದೆ.
ಮನೆಯಿಂದ ಹೊರಬರಲು ಮತ್ತು ಒಳ ಹೋಗಲು ಸಂಕಷ್ಟಪಡುವ ಸನ್ನಿವೇಶ ಎದುರಾಗಿದೆ, ಈ ವಿಚಾರವನ್ನು ಹಲವಾರು ಬಾರಿ ನಗರಸಭೆ ಸದಸ್ಯರ ಸಮೇತ ಅಲ್ಲಿನ ಸ್ಥಳೀಯರು ನಗರಸಭೆಗೆ ಬಂದು ಅಹವಾಲು ಸಲ್ಲಿಸಿ ಗಮನಕ್ಕೆ ತಂದರು ಸಮಸ್ಯೆ ಪರಿಹಾರ ಆಗಿರುವುದಿಲ್ಲ, ಆದ್ದರಿಂದ ತಾವು ಈ ಕೂಡಲೇ ತುರ್ತಾಗಿ ಮಧ್ಯಪ್ರವೇಶಿಸಿ ಪರಿಹರಿಸುವ ಮೂಲಕ ಜನರ ಈ ಸಮಸ್ಯೆಗೆ ಅಂತ್ಯ ಹಾಡಬೇಕು ಎಂದು ಈ ಮೂಲಕ ಆಗ್ರಹಿಸಲಾಯಿತು.
Read also : Davanagere | ಅವಕಾಶಗಳ ನೀವೇ ಸೃಷ್ಟಿಸಿಕೊಳ್ಳಿ : ಜಿ. ಬಿ. ವಿನಯ್ ಕುಮಾರ್
ಈ ಸಂದರ್ಭದಲ್ಲಿ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಮಿಉಲ್ಲಾ ಮುಲ್ಲಾ, ಉಪಾಧ್ಯಕ್ಷರಾದ ಫಯಾಜ್ ಬೇಗ್, ಕಾರ್ಯದರ್ಶಿ ಸಮಿಉಲ್ಲಾ ಮುಜಾವರ್, ಕಾಳಿದಾಸ ನಗರ ಬ್ರಾಂಚ್ ಸಮಿತಿ ಅಧ್ಯಕ್ಷರಾದ ಶೇರಾಲಿ ಮುಲ್ಲಾ, ಹಾಗೂ ಕಾರ್ಯಕರ್ತರಾದ ಅಶ್ರಫ್ ಬೇಗ್ ಹಾಗೂ ಸ್ಥಳೀಯರಾದ ರೋಹಿದ್ ಮತ್ತು ಸುಹೇಲ್ ರವರು ಉಪಸ್ಥಿತರಿದ್ದರು.