Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

Dinamaana Kannada News
Last updated: June 24, 2025 8:11 am
Dinamaana Kannada News
Share
Davanagere
Davanagere
SHARE

ಮೈಸೂರು : ಮಾನವನಿಗೆ ಪ್ರಕೃತಿದತ್ತವಾದ ಎರಡು ಗುಣಗಳಿವೆ. ಮಾನವನ ಎಲ್ಲಾ ಪ್ರಗತಿಗಳು ಇವೆರಡರ ಆಧಾರದ ಮೇಲೆ ಆಗಿರುವುದು. ಒಬ್ಬ ಶಿಕ್ಷಕ ಬಯಸಿದ್ದಂತೆ ರೂಪಿಸಿಕೊಳ್ಳಬಲ್ಲ, ಬಯಸಿದಂತೆ ಅನ್ಯರನ್ನು ರೂಪಿಸಬಲ್ಲ. ಇದರರ್ಥ ಒಬ್ಬ ಶಿಕ್ಷಕನಾಗಿ ತಾನಾಗಬಲ್ಲ, ಆ ಶಿಕ್ಷಕನಲ್ಲಿರುವ ಗುಣಧರ್ಮವನ್ನು ಇನ್ನೊಬ್ಬರಿಗೆ ಧಾರೆಎರೆದು ತಾನಾಗಿಸಬಲ್ಲ. ಇದು ಶಿಕ್ಷಕನಲ್ಲಿರುವ ಅಪೂರ್ವವಾದ ಗುಣಧರ್ಮವಾಗಿದೆ ಎಂದು ದಾವಣಗೆರೆಯ ಆದರ್ಶ ಯೋಗ ಪ್ರತಿಷ್ಠಾನ (ರಿ), ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ  ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಯೋಗತಜ್ಞರು ಆದ ಡಾ. ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು.

11ನೇ ಅಂತಾರಾಷ್ಟ್ರೀಯ ವಿಶ್ವಯೋಗ ದಿನಾಚರಣೆಯ ನಿಮಿತ್ತ ಪರಮಹಂಸ ಯೋಗ ಮಹಾವಿದ್ಯಾಲಯ, ಇಂಟರ್‍ನ್ಯಾಷನಲ್ ಯೋಗ ಸ್ಕೂಲ್, ರಾಮಕೃಷ್ಣನಗರ, ಮೈಸೂರು ಇಲ್ಲಿ 15ನೇ ಇಂಟರ್‍ನ್ಯಾಷನಲ್ ಯೋಗ ಟೀಚರ್ ಟ್ರೈನಿಂಗ್ ಕೋರ್ಸ್‍ನ್ನು ಪಡೆಯತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ‘ಶಿಕ್ಷಕನ ಗುಣಧರ್ಮ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಯಾವುದೇ ಕ್ಷೇತ್ರದಲ್ಲಿ ಉತ್ತಮ ಶಿಕ್ಷಕರಾಗಲು ಮೂರು ಉದ್ದೇಶವನ್ನು ಹೊತ್ತು ತಾನು ಏತಕ್ಕಾಗಿ ಶಿಕ್ಷಕನಾಗಬೇಕು ಎನ್ನುವ ಅಂಶವನ್ನು ತಿಳಿಯಬೇಕಾಗಿದೆ. (1) ವಿದ್ಯೆಗಾಗಿ (2) ಇನ್ನೊಬ್ಬರ ನೋವು ನಿವಾರಣೆ ಮಾಡುವುದಕ್ಕಾಗಿ ಅಥವಾ ಪರರ ಹಿತಕ್ಕಾಗಿ (3) ಹಣಕ್ಕಾಗಿ ಈ ಮೂರು ಉದ್ದೇಶಗಳಲ್ಲಿ ಹಣಕ್ಕಾಗಿ ಮಾಡುವವರು ಎಂದೂ ಪ್ರಗತಿಯ ತುತ್ತತುದಿಯನ್ನು ಮುಟ್ಟಲಾರರು.

Read also : Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

ಪ್ರತಿನಿತ್ಯವೂ ಸ್ವಾಧ್ಯಾಯವನ್ನು ಮಾಡುತ್ತಾ, ತಾನು ಇನ್ನೂ ಕಲಿಯುತ್ತಿರುವ ವಿದ್ಯಾರ್ಥಿ ಎಂಬ ಭಾವನೆಯಿಂದ, ಪರರ ಹಿತಕ್ಕಾಗಿ ಬದುಕುವನು ವಿದ್ಯೆಯ ಆಳವನ್ನು ತಲುಪಿ ಒಬ್ಬ ಪ್ರಬುದ್ಧ ಶಿಕ್ಷಕನಾಗಿ ಉತ್ತಮವಾದ ಗುರುವಿನ ಸ್ಥಾನವನ್ನು ಹೊಂದಬಲ್ಲ. ಇದಕ್ಕೆ ನಿರಂತರ ಅಧ್ಯಯನ, ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆ, ಶಿಸ್ತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾದ ಅಂಶಗಳು ಎಂದು ತಿಳಿಸುತ್ತಾ ಒಂದು ಉತ್ತಮ ಸಮಾಜವನ್ನು ಕಟ್ಟಲು ಬಹುಮುಖ್ಯವಾಗಿ ಶಿಕ್ಷಕನ ಪಾತ್ರ ಹೇಗಿರಬೇಕು. ಅವನ ನಿತ್ಯದ ದಿನಚರಿ ಹೇಗಿರಬೇಕು ಮತ್ತು ಅವನ ಜವಾಬ್ದಾರಿಗಳೇನು? ಹೀಗೆ ಶಿಕ್ಷಕ ಮತ್ತು ಶಿಕ್ಷಣ ಇವೆರಡರಲ್ಲಿ ನಾವು ಸಮಾಜಕ್ಕೆ ಕೊಡುವ ಕೊಡುಗೆ ಏನು? ಎಂಬಿತ್ಯಾದಿ ವಿಷಯಗಳ ಮೇಲೆ ಡಾ|| ರಾಘವೇಂದ್ರ ಗುರೂಜಿಯವರು ಸವಿಸ್ತಾರವಾಗಿ ಶಿಕ್ಷಕನ ಗುಣಧರ್ಮಗಳ ಮೇಲೆ ಬೆಳಕು ಚೆಲ್ಲಿದರು.

ಪರಮಹಂಸ ಯೋಗ ಮಹಾವಿದ್ಯಾಲಯದ ಸಂಸ್ಥಾಪಕ ಯೋಗ ಪ್ರವೀಣ ಶ್ರೀ ಶಿವಪ್ರಕಾಶ್ ಗುರೂಜಿ ಮಾತನಾಡಿ, ಯೋಗ ಒಂದು ನಿತ್ಯಾನುಷ್ಠಾನದ ಕಲೆ, ದೇಶ-ವಿದೇಶಗಳಲ್ಲಿ ಇಂದು ಅಪಾರ ಸಂಖ್ಯೆಯಲ್ಲಿ ಯೋಗವನ್ನು ಅಭ್ಯಾಸ ಮಾಡುತ್ತಿರುವುದು ಒಂದು ಉತ್ತಮವಾದ ಬೆಳವಣಿಗೆ, ಯೋಗವನ್ನು ಕಲಿತು ಇತರರಿಗೂ ಕಲಿಸುವ ಉದ್ದೇಶವನ್ನು ಬೆಳಸಿಕೊಂಡಲ್ಲಿ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಯೋಗ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಾರಂಭದಲ್ಲಿ ಹಿನ್ನೆಲೆ ಗಾಯಕಿ ಕು|| ಸಂವೇದಿತಾ ಸುಭಾಷ್ ಕುಶಾಲನಗರ ಇವರು ಗಜಾನನ ಸ್ತುತಿಯನ್ನು ಹಾಡಿದರು. ಸಾಫ್ವವೇರ್ ಉದ್ಯೋಗಿ ಬಿ. ಭರತ್ ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕ ಮರಿಸ್ವಾಮಿ ಪಿ. ಭಾಗವಹಿಸಿದ್ದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದ ಕಾರ್ಯಕ್ರಮದಲ್ಲಿ ಯೋಗ ಗುರು ಡಾ|| ರಾಘವೇಂದ್ರ ಗುರೂಜಿಯವರಿಗೆ ಪರಮಹಂಸ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಣೆ ಮಾಡಿದ ಸಂದರ್ಭದಲ್ಲಿ ಬೋಗಾದಿಯ ಗೋ ಸಾಯಿ ಟ್ರಸ್ಟ್‍ನ ಅಧ್ಯಕ್ಷರು, ಯೋಗ ಶಿಕ್ಷಕರೂ ಆದ ನಾಗರಾಜಪ್ಪ, ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಮಾಸ್ಟರ್ ಆಫ್ ಯೋಗಿಕ್ ಸೈನ್ಸ್ ಅಧ್ಯಯನ ವಿಭಾಗದ ರಾಹುಲ್ ವಿ.ಕೆ., ಚೇತನ್ ಇನ್ನಿತರರು ಉಪಸ್ಥಿತರಿದ್ದರು.

TAGGED:Davanagere NewsDinamana.comKannada Newsದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ
Next Article Davanagere Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ(Davanagere) : ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವತಿಯಿಂದ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ…

By Dinamaana Kannada News

DAVANAGERE NEWS : ಕ್ರೀಡಾಪಟುಗಳ ಹಾಸ್ಟೆಲಿಗೆ ದಿನೇಶ್ ಕೆ ಶೆಟ್ಟಿ ಭೇಟಿ

ದಾವಣಗೆರೆ (DAVANAGERE) :   ಕ್ರೀಡಾಪಟುಗಳು ಊಟದ ವಿಷಯವಾಗಿ ಧರಣಿ ನಡೆಸಿದ  ಹಿನ್ನಲೆಯಲ್ಲಿ  ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ  ದಿನೇಶ್ ಕೆ…

By Dinamaana Kannada News

Davanagere news | ಎಸ್ಎಎಸ್ಎಸ್ ಯೋಗ ಕೇಂದ್ರದ ವಿದ್ಯಾರ್ಥಿಗಳು ಸಾಧನೆ

ದಾವಣಗೆರೆ (Davangere District) :  ಇತ್ತೀಚಿಗೆ ಚಿಕ್ಕಮಗಳೂರು (Chikmagalur District) ಜಿಲ್ಲೆ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

Davanagere | ಕಂಪ್ಯೂಟರ್ ಆಧಾರಿತ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಿಮ್ಮೊಂದಿಗೆ ನಾವಿದ್ದೇವೆ ಧೈರ್ಯದಿಂದಿರಿ : ರೈತರಿಗೆ ಸಚಿವರಿಂದ ಅಭಯ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?