ಹರಿಹರ: ತಾಲ್ಲೂಕಿನ ಕಡ್ಲೆಗೊಂದಿ ಗ್ರಾಮದ ಸೂರಿಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮಂಗಳವಾರ ಹೊರವಲಯದ ಪ್ರೊ.ಬಿ.ಕೃಷ್ಣಪ್ಪರ ಸಮಾಧಿ ಸ್ಥಳದಿಂದ ತಾಲ್ಲೂಕು ಕಚೇರಿವರೆಗೆ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನೂರಾರು ನಿರ್ವಸತಿಕರು ಪಾದಯಾತ್ರೆ ಮೂಲಕ ಆಗಮಿಸಿ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ಗಾಂಧಿ ಸರ್ಕಲ್ನಲ್ಲಿ ಮಾನವ ಸರಪಳಿ ರಚಿಸಿದರು, ನಂತರ ತಾಲ್ಲೂಕು ಕಚೇರಿಗೆ ಆಗಮಿಸಿದರು.
ಕದಸಂಸಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ ಮಾತನಾಡಿ, ಕಡ್ಲೆಗೊಂದಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಬಡಕುಟುಂಬಗಳು ಅತ್ಯಂತ ಚಿಕ್ಕಗುಡಿಸಲು, ನೆರಿಕೆ ಮನೆಗಳಲ್ಲಿ ಅನಾರೋಗ್ಯಕರ, ಕಲುಷಿತ ವಾತಾವರಣದಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸಿ ಬಡಜನರಿಗೆ ವಿತರಿಸಲು ನಮ್ಮ ಸಂಘಟನೆ ಕಳೆದ ಹಲವು ವರ್ಷಗಳಿಂದ ವಿವಿಧರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ತಾಲ್ಲೂಕು ಮತ್ತು ಜಿಲ್ಲಾಡಳಿತ ಸಮಸ್ಯೆ ನಿವಾರಣೆ ಮಾಡಿಲ್ಲ. ಗ್ರಾಮದ ಸರ್ವೆ ನಂ.37ರಲ್ಲಿನ 10 ಎಕರೆ ಸರ್ಕಾರಿ ಜಮೀನಿನಲ್ಲಿ ವಿವಿಧ ಯೋಜನೆಗಳಿಗೆ ನೀಡಿದ ನಂತರ ಇನ್ನೂ 5 ಎಕರೆ 35 ಗುಂಟೆ ಜಮೀನು ಉಳಿದಿದ್ದು ಅದರಲ್ಲಿ ಕೂಡಲೆ ವಸತಿ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.
ಕದಸಂಸತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಈ ಹಿಂದೆಯೂ ವಸತಿ ಯೋಜನೆಗಾಗಿ ಪಾದಯಾತ್ರೆ, ರಸ್ತೆತಡೆ, 60 ದಿನ ತಾಲ್ಲೂಕು ಕಚೇರಿಎದುರು ಧರಣಿ ಸತ್ಯಾಗ್ರಹ ಸೇರಿದಂತೆ ಹಲವು ರೀತಿಯ ಪ್ರತಿಭಟನೆಯನ್ನು ಮಾಡಿದ್ದರೂ ತಾಲ್ಲೂಕು ಆಡಳಿತದವರು ಭೂ ನ್ಯಾಯ ಮಂಡಳಿ ರಚಿನೆಯಾಗಬೇಕೆಂದು ಕಾರಣ ಹೇಳಿತ್ತು ಈಗ ಮಂಡಳಿ ರಚನೆಯಾಗಿದ್ದು ಸಮಸ್ಯೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
Read also : ಸೆ.3 ರಿಂದ 14ರ ವರೆಗೆ ‘ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್’ ಶೀರ್ಷಿಕೆಯಡಿ ಸೀರತ್ ಅಭಿಯಾನ-2025
ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಾತಂಗೆಮ್ಮತಿಮ್ಮಣ್ಣ, ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನಗಿರಿ ಚಿತ್ರಲಿಂಗಪ್ಪ, ನ್ಯಾಮತಿ ತಾಲ್ಲೂಕು ಸಂಚಾಲಕ ಚಂದ್ರಪ್ಪ, ಹೊನ್ನಾಳಿ ತಾಲ್ಲೂಕು ಸಂಚಾಲಕ ಪರಮೇಶ್ ಬೆನಕನಾಳ್, ಜಗಳೂರು ತಾಲ್ಲೂಕು ಸಂಚಾಲಕ ಕುಬೇರಪ್ಪ, ಪದಾಧಿಕಾರಿಗಳಾದ ನಾಗರಾಜ್ ಚಿತ್ತನಹಳ್ಳಿ, ಶಿವಶಂಕರ್ ಎಸ್.ಎಂ., ಪ್ರದೀಪ್ಕೆಟಿಜಿ ನಗೆರ, ಮಂಜುನಾಥಎಲೆಕ್ಟ್ರಿಕಲ್, ಉಮೇಶ್ ಹಿರೇಬಿದರಿ, ಸಂಜೀವಪ್ಪ, ಭಾನುವಳ್ಳಿ ಚೌಡಪ್ಪ ಸಿ., ರಂಗಪ್ಪ, ಕೊಟ್ರಪ್ಪ, ಬಸವರಾಜ್, ರಾಜಪ್ಪ, ನಾಗರಾಜ್, ಹನುಮಂತಪ್ಪ ನಂದಿಗಾವಿ, ಹನುಮಂತಪ್ಪಕೆ.ಎಚ್., ಸಣ್ಣ ನಿಂಗಪ್ಪ, ಹಾಲಪ್ಪ, ಜ್ಯೋತಿ, ಚಂದ್ರಶೇಖರ್, ನಾಗರತ್ನ, ಅಣ್ಣಪ್ಪ ಶೈಲೂ, ಶಿವರಾಜ್ ವೈ., ರಘು, ಮಲ್ಕಾಬಿ, ಮುಬೀನಾ, ಫಾತೀಮಾ, ನಾಗಮ್ಮ, ಟಿಪ್ಪುಸಾಬ್ ಹಾಗೂ ಇತರರಿದ್ದರು.