Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬಸವ ಸಂಸ್ಕøತಿ ಅಭಿಯಾನ : ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರ
ತಾಜಾ ಸುದ್ದಿ

ಬಸವ ಸಂಸ್ಕøತಿ ಅಭಿಯಾನ : ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರ

Dinamaana Kannada News
Last updated: September 10, 2025 4:25 am
Dinamaana Kannada News
Share
Davanagere
SHARE

ಹರಿಹರ : ವೈದಿಕ ಪರಂಪರೆಯ ಕೆಲವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ಮೂಢ ನಂಬಿಕೆಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಾ ಅನಾವಶ್ಯಕ ಆರ್ಥಿಕ ಭಾರವನ್ನು ಹೇರುತ್ತಿರುವ ಬಗ್ಗೆ ಸಮುದಾಯ ಎಚ್ಚರಗೊಳ್ಳಬೇಕೆಂದು ಬಸವ ಸಂಸ್ಕøತಿ ಅಭಿಯಾನದ ದಾವಣಗೆರೆ ಜಿಲ್ಲಾ ಸಂಚಾಲಕ ಆವರಗೆರೆ ರುದ್ರಮುನಿ ಹೇಳಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಆರಂಭಿಸಿರುವ ಬಸವ ಸಂಸ್ಕøತಿ ಅಭಿಯಾನ ನಗರಕ್ಕೆ ಆಗಮಿಸಿದಾಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ, ಅಧ್ಯಾತ್ಮ ಮತ್ತು ಮೂಢ ನಂಬಿಕೆಗಳ ನಡುವಿನ ಅಂತರದೊಡ್ಡದಿದೆ, ಆದರೆ ಮೂಢನಂಬಿಕೆಗಳಿಗೂ ಧರ್ಮದ ವಸ್ತ್ರವನ್ನು ತೊಡಗಿಸಲಾಗಿದೆ. ಧರ್ಮವನ್ನು ಪಾಲನೆ ಮಾಡಲು ಯಾವುದೆ ಹಣಖರ್ಚು ಮಾಡಬೇಕಿಲ್ಲ, ಆದರೆ ಹಣವನ್ನು ಗಳಿಸುವ ಧಾವಂತದಲ್ಲಿ ಕೆಲವು ವೈದಿಕ ಪರಂಪರೆಯ ವ್ಯಕ್ತಿಗಳು ಜನ ಸಾಮಾನ್ಯರಿಗೆ ಆರ್ಥಿಕ ಭಾರವನ್ನು ಹೇರುತ್ತಿರುವುದು ಖಂಡನೀಯ ಎಂದರು.

ವಿಶ್ವಗುರು, ಜಗತ್ತಿನ ಜ್ಯೋತಿಎಂದು ಕರೆಯಲ್ಪಡುವ ಬಸವಣ್ಣನವರು ಧರ್ಮ ಮತ್ತು ಅಧ್ಯಾತ್ಮದ ಹೆಸರಲ್ಲಿ ನಡೆಯುತ್ತಿದ್ದ ಜನ ಸಾಮಾನ್ಯರ ಶೋಷಣೆ ವಿರುದ್ಧ ದೊಡ್ಡಧ್ವನಿ ಎತ್ತಿದರು, ಆಗ ಆಗಿನ ವೈದಿಕ ಪರಂಪರೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೆ ಹೊಟ್ಟೆ ನೋವು ಆರಂಭವಾಯಿತೆಂದರು.

ಆಧುನಿಕ ಯುಗವಾದರೂ ಈಗಲೂ ತಮ್ಮ ಮಕ್ಕಳ ಶಿಕ್ಷಣಕ್ಕೆ, ಆರೋಗ್ಯ ಸಂವರ್ಧನೆಗೆ ಗಮನ ನೀಡಲಾಗದ ಆರ್ಥಿಕ ದುಸ್ಥಿತಿಯಲ್ಲಿರುವ ಬಡಜನರು ಸಾಲ ಮಾಡಿ ಧರ್ಮದ ಹೆಸರಲ್ಲಿ ಆಚರಣೆಗಳನ್ನು ಪಾಲನೆ ಮಾಡುತ್ತಿರುವುದು ವಿಪರ್ಯಾಸ ಎಂದರು.

ಎಲ್ಲಾ ಜಾತಿ, ಧರ್ಮಗಳಲ್ಲಿರುವ ಯುವಜನರು, ಪ್ರಜ್ಞಾವಂತರು, ವಿದ್ಯಾವಂತರು ತಮ್ಮ ಕುಟುಂಬ, ಸುತ್ತ, ಮುತ್ತಲಿನ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು.ಮೂಢ ನಂಬಿಕೆ ಮತ್ತು ಧರ್ಮದ ನಡುವಿನ ಅಂತರವನ್ನು ತಿಳಿಯಪಡಿಸಬೇಕೆಂದರು.

Read also : ದಾವಣಗೆರೆ : ನವೋದ್ಯಮ ಪ್ರಾರಂಭಿಸಲು ಉತ್ತೇಜನ ನೀಡಲು ಅರ್ಜಿ ಆಹ್ವಾನ

ಮಲೆಬೆನ್ನೂರು ಬಸವ ಮಂಟಪದ ಅಧ್ಯಕ್ಷರಾದ ನಾರೇಶಪ್ಪ ಮಾತನಾಡಿ, ಅರಿವನ್ನೆ ಗುರುವನ್ನಾಗಿ, ಆಚಾರವನ್ನೆ ಲಿಂಗವನ್ನಾಗಿ, ಪ್ರಮಾಣಿಕತೆ, ದಯೆ, ಕಾಯಕ ಶ್ರದ್ಧೆ, ಏಕದೇವ ನಿಷ್ಠೆ, ದಾಸೋಗ ಪ್ರಜ್ಞೆ, ಸತ್ಯ, ನೀತಿಯೆ ಬಸವ ಪಥವಾಗಿದೆ. ಈ ಕುರಿತುಜಾಗೃತಿ ಮೂಡಿಸಲುಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸೆ.1 ರಿಂದ ಬಸವನ ಬಾಗೇವಾಡಿಯಿಂದ ಈ ಅಭಿಯಾನವನು ಆರಂಭಿಸಿದ್ದು ಅ.5 ರಂದು ಬೆಂಗಳೂರಿನಲ್ಲಿ ಸಮಾರೋಪದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಬಿ.ಮಗ್ದುಮ್ ಮಾತನಾಡಿ, ಕುಲ ಕಸಬನ್ನು ಆಧರಿಸಿ ಜಾತೀಯತೆಯನ್ನು ಆಚರಿಸುತ್ತಿದ್ದವರನ್ನು ವಿರೋಧಿಸಿದ ಬಸವಣ್ಣನವರ ತತ್ವಗಳು ಎಲ್ಲಾ ಧರ್ಮಿಯರಿಗೆ ಮಾದರಿಯಾಗಿವೆ ಎಂದರು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಘಟಕ ಅಧ್ಯಕ್ಷ ರಮೇಶ್ ಮಾನೆ ಮಾತನಾಡಿ, ಆಗಿನ ಕಾಲದ ಹತ್ತಾರು ಶೋಷಿತ ಸಮುದಾದವರಿಗೆ ಲಿಂಗಧಾರಣೆ ಮಾಡಿಸಿ ವೈಚಾರಿಕ ಕ್ರಾಂತಿಯನ್ನು ಸೃಷ್ಟಿಸಿದ ಬಸವಣ್ಣನವರ ತತ್ವ 800 ವರ್ಷಗಳ ನಂತರವೂ ಪ್ರಸ್ತುತವಾಗಿದೆ ಎಂದರು.

ಹನಗವಾಡಿ ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಅಮರಾವತಿ ಪರಮೇಶ್ವರಪ್ಪ, ಕರವೇ ನಗರಘಟಕ ಅಧ್ಯಕ್ಷ ಪ್ರೀತಮ್ ಬಾಬು, ಕಡ್ಲೆಬಾಳು ಪ್ರಕಾಶ್, ವಿ.ಟಿ.ಮಂಜುನಾಥ್, ಕುಂದೂರು ಬಸವರಾಜ್, ಮಲೆಬೆನ್ನೂರು ಬಸವರಾಜ್, ಕಲಕೋಟಿಶಿವಬಸಮ್ಮ, ಕುಂಬಳೂರು ಸದಾಶಿವ, ಮಲೆಬೆನ್ನೂರು ಬಸವರಾಜ್ ಇತರರು ಉಪಸ್ಥಿತರಿದ್ದರು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited ದಾವಣಗೆರೆ : ನವೋದ್ಯಮ ಪ್ರಾರಂಭಿಸಲು ಉತ್ತೇಜನ ನೀಡಲು ಅರ್ಜಿ ಆಹ್ವಾನ
Next Article Davangere Rangayana ದಾವಣಗೆರೆ ರಂಗಾಯಣದಿಂದ ಕಲಾವಿದರ ಆಯ್ಕೆಗೆ ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere news | ಆಟೋದಲ್ಲಿ ಮರೆತು ಹೋಗಿದ್ದ ಅಭರಣ ಹಿಂದಿರುಗಿಸಿದ ಪೊಲೀಸರು

ದಾವಣಗೆರೆ  (Davanagere) : ಆಟೋದಲ್ಲಿ  ಕಳೆದುಕೊಂಡಿದ್ದ ಬಂಗಾರ & ಬೆಳ್ಳಿಯ ಆಭರಣಗಳನ್ನು ಪತ್ತೆ ಮಾಡುವಲ್ಲಿ ಬಸವನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರಿಹರದ ನವೀನತಾಜ್…

By Dinamaana Kannada News

ಹೊಸ ಪಡಿತರ ಚೀಟಿಯೂ ಇಲ್ಲ.. ಗೃಹಲಕ್ಷ್ಮಿ ಹಣವೂ ಇಲ್ಲ!

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. 3,22,000 ಕುಟುಂಬಗಳು ರೇಷನ್‌ ಕಾರ್ಡ್‌ಗಾಗಿ ಕಾದು ಕುಳಿತಿವೆ.…

By Dinamaana Kannada News

ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ, ಜನವರಿ 05: ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು…

By Dinamaana Kannada News

You Might Also Like

CEO Gitte Madhava Vitthal Rao
ತಾಜಾ ಸುದ್ದಿ

ಕುಷ್ಠರೋಗ ನಿವಾರಣೆಗೆ ಅರಿವು ಮೂಡಿಸಿ : ಸಿಇಓ ಗಿತ್ತೆ ಮಾಧವ ವಿಠಲ ರಾವ್

By Dinamaana Kannada News
Davanagere
ತಾಜಾ ಸುದ್ದಿ

ಮೈಕ್ರೋ ಫೈನಾನ್ಸ್ ನವರು ಕಿರುಕುಳ ನೀಡಿದರೆ ದೂರು ನೀಡಿ : ಎಸ್ಪಿ

By Dinamaana Kannada News
vinaykumara G B
ತಾಜಾ ಸುದ್ದಿ

ಯಾರೂ ಕರೆದು ಅವಕಾಶ ಕೊಡಲ್ಲ, ನಾವೇ ಸೃಷ್ಟಿಸಿಕೊಳ್ಳಬೇಕು: ವಿನಯ್ ಕುಮಾರ್  

By Dinamaana Kannada News
Davanagere
ತಾಜಾ ಸುದ್ದಿ

ಭ್ರಷ್ಟಾಚಾರ ಪ್ರಜಾಪ್ರಭುತ್ವದ ಶತ್ರು: ಜಿಲ್ಲಾ ನ್ಯಾ.ಡಿ.ಕೆ.ವೇಲಾ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?