ದಾವಣಗೆರೆ : ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥವಾಗಿ ಕಾಲೇಜು ಸಭಾಂಗಣದಲ್ಲಿ ಜೈನ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರ್ಸ್ ಡೇ 2025 ಕಾರ್ಯಕ್ರಮವನ್ನು ಆಚರಿಸಲಾಯಿತು.
ವಿಭಾಗದ ಮುಖ್ಯಸ್ಥ ಡಾ.ರಾಹುಲ್ ಪಾಟೀಲ್ ಸರ್ ಎಂ.ವಿ. ಅವರ ನಿಖರ ಸಮಯ ಪಾಲನೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಡಾ. ಪ್ರಕಾಶ್ ಕೆ. ಬಿ., ಅಕಾಡೆಮಿಕ್ ಡೀನ್ ಮಾತನಾಡಿ, ಸರ್ ಎಂ.ವಿ. ಅವರ ದೇಶ ನಿರ್ಮಾಣಕ್ಕೆ ನೀಡಿದ ಅಮೂಲ್ಯ ಕೊಡುಗೆಗಳನ್ನು ವಿವರಿಸಿ, ಮೈಸೂರಿನ ಅನೇಕ ಮನೆಗಳಲ್ಲಿ ಇಂದಿಗೂ ಅವರ ಚಿತ್ರವನ್ನು ಪೂಜಾ ಕೊಠಡಿಯಲ್ಲಿ ಪೂಜಿಸುತ್ತಾರೆ ಎಂಬುದನ್ನು ಹಂಚಿಕೊಂಡರು..
ನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನೀಯರ್ ಅಭಿಷೇಕ್ ಕೆ. ಆರ್., ಸರ ಎಂ.ವಿ. ಅವರ ಸಮಯ ಪಾಲನೆಗೆ ಸಂಬಂಧಿಸಿದ ಹಲವು ಉದಾಹರಣೆಗಳನ್ನು ನೀಡಿದರು. ಕೆಲಸದ ಅಪ್ರತಿಮ ನಿಷ್ಠೆಯನ್ನು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಹೇಳಿದರು.
ಡಾ. ಮಂಜಪ್ಪ ಸಾರಥಿ ಸರ್ ಎಂ.ವಿ. ಅವರು ನೀರಾವರಿ, ಅಣೆಕಟ್ಟುಗಳು ಮತ್ತು ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿ, ಅವರ ಕಾಲನಿಷ್ಠೆಯ ಮಹತ್ವವನ್ನು ಒತ್ತಿ ಹೇಳಿದರು.
ಪ್ರಾಂಶುಪಾಲ ಡಾ. ಗಣೇಶ್ ಡಿ. ಬಿ., ಸರ್ ಎಂ.ವಿ. ಅವರ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಅವರು ಜೀವನದಲ್ಲಿ ಅನುಸರಿಸಬೇಕಾದ ಮಾದರಿ ವ್ಯಕ್ತಿತ್ವವಾಗಿದ್ದಾರೆಂದು ಹೇಳಿದರು.
Read also : ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂಯೋಜಕ ಭರತ್ ಎಚ್. ಎಂ. ಅವರು ಕೃತಜ್ಞತಾ ಭಾಷಣ ಮಾಡುತ್ತಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲಾ ಗಣ್ಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದರು.